Tag: NCB

ಬೆಂಗಳೂರು ಏರ್ ಪೋರ್ಟ್ ನಲ್ಲಿ NCB ದಾಳಿ..! 20 ಕೆಜಿ ಡ್ರಗ್ಸ್ ವಶಕ್ಕೆ ! 

ಬೆಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (Bengaluru international airport) ಎನ್ ಸಿ ಬಿ‌ (NCB) ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಥೈಲ್ಯಾಂಡ್ ನಿಂದ (Thailand) ಬೆಂಗಳೂರಿಗೆ ಬರುತ್ತಿದ್ದ ಐದು ಜನರನ್ನ ಎನ್ ...

Read moreDetails

ಡಿಜಿಟಲ್‌ ಬಂಧನಗಳೂ ಸೈಬರ್‌ ವಂಚನೆಯ ಜಾಲವೂ

ತಂತ್ರಜ್ಞಾನದ ಅವಿಷ್ಕಾರಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿರುವ ಡಿಜಿಟಲ್‌ ವಂಚಕ ಜಾಲಗಳು ಕೋವಿಡ್ 19 ವಿಶ್ವದಾದ್ಯಂತ ಜನರ ಬದುಕನ್ನು ಮೂರಾಬಟ್ಟೆ ಮಾಡಿದ ಸಂದರ್ಭದಲ್ಲೇ ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳ ಫಲವಾಗಿ ಜಾಗತಿಕ ...

Read moreDetails

ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ.ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಹೋರಾಟದಲ್ಲಿ ಮಹತ್ವದ ಸಾಧನೆಯೊಂದರಲ್ಲಿ ಭಾರತೀಯ ಅಧಿಕಾರಿಗಳು ಗುಜರಾತ್‌ನಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ಡ್ರಗ್ ಕಾರ್ಟೆಲ್‌ನಿಂದ ಸರಿಸುಮಾರು 700 ಕೆಜಿ ಮೆಥಾಂಫೆಟಮೈನ್ ಔಷಧವನ್ನು ವಶಪಡಿಸಿಕೊಂಡಿದ್ದಾರೆ. ಎನ್‌ಸಿಬಿ, ...

Read moreDetails

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ: ಲಕ್ನೋ ಪೊಲೀಸರಿಗೆ ಶರಣಾಗುತ್ತೇನೆಂದ ಕಿರಣ್‌ ಗೋಸಾವಿ ಪುಣೆ ಪೊಲೀಸ್ ವಶಕ್ಕೆ.!

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾಗುವ ಖಾಸಗಿ ಡಿಟೆಕ್ಟಿವ್‌ ಕಿರಣ್‌ ಗೋಸಾವಿ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಕುತೂಹಲಕಾರಿಯೆಂದರೆ, ಹಲವು ಪ್ರಕರಣಗಳಲ್ಲಿ ಪುಣೆ ಪೊಲೀಸರಿಗೆ ...

Read moreDetails

ಸದ್ಯದಲ್ಲೇ ರಾಜ್ಯ ಪ್ರಮುಖ ಇಬ್ಬರು ರಾಜಕಾರಣಿಗಳ ಮೇಲೆ ಎನ್ಸಿಬಿ, ಇಡಿ ದಾಳಿ; ಯಾಕೆ? ಯಾರವರು?

ಇತ್ತೀಚಿನ ದಿನಗಳಲ್ಲಿ ಎನ್‌ಸಿಬಿ ಮತ್ತು ಇಡಿ ಸಂಸ್ಥೆಗಳು ಸಖತ್ ಆಕ್ಟೀವ್ ಆಗಿ ಕೆಲಸ ಮಾಡುತ್ತಿವೆ. ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳಿಗೆ ಇಡಿ ಚಾಟಿ ಬೀಸುತ್ತಿದೆ. ಇನ್ನೊಂದೆಡೆ  ಮಾದಕ ಜಾಲಗಳನ್ನ ...

Read moreDetails

ಆರ್ಯನ್ ಖಾನ್ ಕೇವಲ ಡ್ರಗ್ಸ್ ಗ್ರಾಹಕರಲ್ಲ, ಅಕ್ರಮ ಡ್ರಗ್ಸ್ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ – ಹೈಕೊರ್ಟ್‌ಗೆ NCB ವರದಿ

ಇದೇ ತಿಂಗಳ ಆರಂಭದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಕೇವಲ ಡ್ರಗ್ಸ್ ಗ್ರಾಹಕರಲ್ಲ ಬದಲಿಗೆ ಅಕ್ರಮ ಮಾದಕವಸ್ತು ...

Read moreDetails

ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಬಂಧಿಸಿದ್ದ ಎನ್ ಸಿ ಬಿ ಅಧಿಕಾರಿ ವಿರುದ್ಧ ತನಿಖೆಗೆ ಆದೇಶ

ಕ್ರೂಸ್‌ ಡ್ರಗ್ಸ್‌ ಪ್ರಕರಣದಲ್ಲಿ 25ಕೋಟಿ ರುಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪದಡಿ ಮುಂಬೈನ ಎನ್‌ ಸಿಬಿ ವಿಭಾಗೀಯ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ವಿಜೆಲೆನ್ಸ್‌ ತನಿಖೆಗೆ ಆದೇಶ ...

Read moreDetails

ಡ್ರಗ್ಸ್ ಕೇಸ್; ಅ.26ಕ್ಕೆ ಮುಂಬೈ ಹೈಕೋರ್ಟ್ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ

ನಟ ಶಾರೂಖ್ ಪುತ್ರ ಆರ್ಯನ್ ಖಾನ್‌ ಜಾಮೀನು ಅರ್ಜಿಯನ್ನ ಮುಂಬೈ ಸೆಷನ್ಸ್  ಕೋರ್ಟ್ ವಜಾ ಮಾಡಿದೆ. ಈ ಮೂಲಕ ಆರ್ಯನ್ ಖಾನ್ ಆರ್ಥರ್ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ...

Read moreDetails

ಆರ್ಯನ್‌ ಖಾನ್‌ ಜಾಮೀನು ತಿರಸ್ಕರಿಸಲ್ಪಟ್ಟಿದ್ದೇಕೆ ಮತ್ತು ಪರಿಹಾರವೇನು

ವಿಲಾಸಿ ಹಡಗಿನಲ್ಲಿ ಮಾದಕ ವಸ್ತುಗಳು ಪತ್ತೆಯಾದ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸಲ್ಲಿಸಿದ್ದ ಜಾಮೀನು ಮನವಿಯನ್ನು ಶುಕ್ರವಾರ ಮುಂಬೈ ನ್ಯಾಯಾಲಯ ...

Read moreDetails

ಡ್ರಗ್ಸ್ ಪ್ರಕರಣ: ಬಿಜೆಪಿ ನಾಯಕನ ಸಂಬಂಧಿಯನ್ನು NCB ಬಿಡುಗಡೆ ಮಾಡಿದೆ- NCP ನಾಯಕ ಮಲಿಕ್

ಶಾರುಖ್ ಖಾನ್ ಪುತ್ರನ ಬಂಧನವಾಗಿರುವ ಡ್ರಗ್ಸ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್ ಸಿ ಬಿ ಅಧಿಕಾರಿಗಳ ವಿರುದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ನಾಯಕ ನವಾಬ್ ಮಲಿಕ್ ಗಂಭೀರವಾದ ಆರೋಪ ಮಾಡಿದ್ದಾರೆ. ಹಡಗಿನಲ್ಲಿ ಪಾರ್ಟಿ ಮಾಡಿಕೊಂಡಿದ್ದವರಲ್ಲಿ ಕೆಲವರನ್ನು NCB ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ, ಇವರಲ್ಲಿ ಬಿಜೆಪಿ ನಾಯಕರ ಸಂಬಂಧಿಕನೂ ಸೇರಿದ್ದಾನೆ ಎಂದು ಆರೋಪಿಸಿದ್ದಾರೆ.  “ದೇಶದ ಡ್ರಗ್ಸ್-ವಿರೋಧಿ ಏಜೆನ್ಸಿಗಳು ಕಳೆದ ಒಂದು ವರ್ಷದಿಂದ ಕೇವಲ ಜನರ ಮುಂದೆ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಸಲುವಾಗಿ ತಮ್ಮದೇ ಆದ ವ್ಯವಸ್ಥಿತ ಜಾಲವನ್ನು ಸೃಷ್ಟಿಸಿಕೊಂಡಿವೆ. ಸಮೀರ್ ವಾಂಖೆಡೆ (ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ) ಹೇಳಿದ ಪ್ರಕಾರ ಅಂದು 8-10 ಜನರನ್ನು ಬಂಧಿಸಲಾಗಿತ್ತು. ನ್ಯಾಯಾಲಯದಲ್ಲಿ ಆರೋಪಿಗಳನ್ನು ಹಾಜರುಪಡಿಸುವಾಗ ಮೊದಲು ಮೂರು ಜನ ನಂತರ ಐದು ಜನರನ್ನು ಹಾಜರುಪಡಿಸಲಾಗಿತ್ತು. ಒಬ್ಬ ತನಿಖಾಧಿಕಾರಿಯಾಗಿ ಬೇಜವಾಬ್ದಾರಿಯುತ ಹೇಳಿಕೆಯನ್ನು ಸಮೀರ್ ನೀಡಿದ್ದಾರೆ. ಬಂಧಿತರು ಎಂಟು ಜನರೋ ಅಥವಾ ಹತ್ತು ಜನರೋ ಎಂಬುದನ್ನು ಸ್ಪಷ್ಟಪಡಿಸುವ ಸೌಜನ್ಯತೆಯನ್ನೂ ಅವರು ತೋರಿಲ್ಲ.” ಎಂದು ಮಲಿಕ್ ಆರೋಪಿಸಿದ್ದಾರೆ.  https://youtu.be/5Q9zs3z9mLc ನನಗಿರುವ ಮಾಹಿತಿಯ ಪ್ರಕಾರ ಅಲ್ಲಿ ಹತ್ತು ಜನರನ್ನು ಬಂಧಿಸಲಾಗಿತ್ತು. ಒಬ್ಬ ವ್ಯಕ್ತಿ NCB ಅಧಿಕಾರಿಗಳಿಗೆ ಮಾಹಿತಿ ನೀಡಿ. ಹಡಗಿಗೆ ಕರೆಸಿಕೊಂಡವನು. ಮತ್ತೊಬ್ಬ ಬಿಜೆಪಿ ನಾಯಕನ ಸಂಬಂಧಿಕ. ಇವರಿಬ್ಬರನ್ನೂ ಆ ನಂತರ ಬಿಡುಗಡೆ ಮಾಡಲಾಗಿದೆ. ಇದರ ಬಗ್ಗೆ ನನ್ನಲ್ಲಿ ಸ್ಪಷ್ಟವಾದ ಸಾಕ್ಷ್ಯಾಧಾರಗಳಿವೆ. ಇವನ್ನು ಜನರ ಮುಂದೆ ಇಡುತ್ತೇನೆ, ಎಂದು ಮಲಿಕ್ ಅವರು NDTVಗೆ ಹೇಳಿಕೆ ನೀಡಿದ್ದಾರೆ.  NCBಯು ರಾಜ್ಯವನ್ನು ದೇಶದೆದುರು ಅಪಮಾನಿಸಲು ಪ್ರಯತ್ನಿಸುತ್ತಿದೆ. ಇಲ್ಲಿ NCP, ಶಿವಸೇನೆ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು NCB ಪ್ರಯತ್ನಿಸುತ್ತಿದೆ. ರಿಯಾ ಚಕ್ರವರ್ತಿ, ದೀಪಿಕಾ ಪಡುಕೋಣೆಯಿಂದ ಹಿಡಿದು ಆರ್ಯನ್ ಖಾನ್ ವರೆಗೆ, ಎಲ್ಲಿ ಪ್ರಚಾರ ಸಿಗುತ್ತದೆಯೋ ಅಂತಹ ಕಡೆ ಮಾತ್ರ NCBಯ ವಿಚಾರಣೆ ನಡೆಯುತ್ತಿದೆ. ಇವುಗಳಲ್ಲಿ ಬಹಳಷ್ಟು ಪ್ರಕರಣಗಳು ನಕಲಿ. ಹಲವು ಕಡೆ ಡ್ರಗ್ಸ್ ಪತ್ತೆಯೇ ಆಗಿಲ್ಲ, ಎಂದು ನೇರ ಆರೋಪ ಮಾಡಿದ್ದಾರೆ.  NCB ಹಡಗಿನಲ್ಲಿ ಡ್ರಗ್ಸ್’ಗಾಗಿ ದಾಳಿ ಮಾಡಿದಾಗ ಅವರೊಂದಿಗಿದ್ದ ಇಬ್ಬರು ಅನ್ಯವ್ಯಕ್ತಿಗಳ ಕುರಿತಾಗಿಯೂ ಮಲಿಕ್ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ಮನೀಷ್ ಭಾನುಶಾಲಿ ಪ್ರಕರಣದ ಸಾಕ್ಷಿಯಾಗಿದ್ದಾರೆ ಎಂದು NCB ಹೇಳಿದೆ.  “ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣದ ಬಳಿಕ ಮುಂಬೈ NCBಯ ನಿರ್ದೇಶಕರನ್ನು ಬದಲಾಯಿಸಲಾಗಿತ್ತು. ಕಳೆದ 35 ವರ್ಷಗಳಲ್ಲಿ ಎಂದಿಗೂ ಪ್ರಚಾರಕ್ಕಾಗಿ ಕೆಲಸ ಮಾಡಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ಈ ಪ್ರಚಾರದ ಹುಚ್ಚು ಆರಂಭವಾಗಿದೆ. ಅವರು ಸರ್ಕಾರ ಮತ್ತು ಬಾಲಿವುಡ್ ಅನ್ನು ಮುಜುಗರಕ್ಕೆ ಸಿಲುಕಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ಮಾಧ್ಯಮಗಳ ದಾರಿ ತಪ್ಪಿಸುವುದು ಕೂಡಾ ಈ ಷಡ್ಯಂತ್ರದ ಭಾಗ,” ಎಂದು ಮಲಿಕ್ ಹೇಳಿದ್ದಾರೆ. 

Read moreDetails

ಡ್ರಗ್ಸ್ ಪ್ರಕರಣ – ಮುಂಬೈ NCB ಅಧಿಕಾರಿಗಳಿಂದ ಶಾರುಖ್ ಖಾನ್ ಪುತ್ರ ಬಂಧನ

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗಿದ್ದು,ಈ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!