• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಐಎಎಸ್ ಅಧಿಕಾರಿಯ ನಾಯಿ ವಾಕಿಂಗ್ ಬಂದರೆ ಅಥ್ಲೀಟ್ ಗಳು ಮೈದಾನದಿಂದ ಹೊರಗೆ!

ಪ್ರತಿಧ್ವನಿ by ಪ್ರತಿಧ್ವನಿ
May 26, 2022
in ದೇಶ
0
ಐಎಎಸ್ ಅಧಿಕಾರಿಯ ನಾಯಿ ವಾಕಿಂಗ್ ಬಂದರೆ ಅಥ್ಲೀಟ್ ಗಳು ಮೈದಾನದಿಂದ ಹೊರಗೆ!
Share on WhatsAppShare on FacebookShare on Telegram

ದೆಹಲಿ ಸರ್ಕಾರದ ಸುಪರ್ದಿಯಲ್ಲಿರುವ ತ್ಯಾಗರಾಜ ಸ್ಟೇಡಿಯಂನಲ್ಲಿ ಕ್ರೀಡಾಪಟುಗಳು ಹಾಗು ತರಬೇತುದಾರರಿಗೆ ಸಂಜೆ 7 ಘಂಟೆಯೊಳಗೆ ತಮ್ಮ ಅಭ್ಯಾಸವನ್ನು ಮುಗಿಸಿಕೊಂಡು ಹೊರಡುವಂತೆ ಸೂಚಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.

ADVERTISEMENT

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಸಂಜೆ ಸುಮಾರು 7:30ರ ಸುಮಾರಿಗೆ ತಮ್ಮ ನಾಯಿ ಸ್ಟೇಡಿಯಂ ಒಳಗೆ ವಾಕಿಂಗ್ ಬರುವುದರಿಂದ ಕ್ರೀಡಾಂಗಣದ ಸಿಬ್ಬಂದಿ ಈ ರೀತಿ ಮಾಡುತ್ತಿದ್ದಾರೆ ಎಂದು ಕ್ರೀಡಾಪಟುಗಳು ಅರೋಪಿಸಿದ್ದಾರೆ.

ಪ್ರತಿನಿತ್ಯ ನಾವು ರಾತ್ರಿ ಸುಮಾರು 8:30ರವರೆಗು ಅಭ್ಯಾಸವನ್ನ ನಡೆಸಿ ಹೊರಡುತ್ತಿದ್ದೇವು ಆದರೆ, ಅಧಿಕಾರಿಯು ತನ್ನ ನಾಯಿಯ ಜೊತೆ ಬರಲು ಶುರು ಮಾಡಿದ ಸಮಯದಿಂದ ನಮ್ಮ ತರಬೇತಿ ಸಮಯ ಬದಲಾಗಿದೆ ಎಂದು ತರಬೇತುದಾರರೊಬ್ಬರು ದೂರಿದ್ದಾರೆ.

ಆದರೆ, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಐಎಎಸ್ ಅಧಿಕಾರಿ ಖಿರ್ವಾರ್ ಈ ವಿಚಾರವನ್ನ ಸಂಪೂರ್ಣವಾಗಿ ಅಲ್ಲಗೆಳೆದಿದ್ದು ಕಲೆವೊಮ್ಮೆ ನಾನು ನನ್ನ ಸಾಕು ಪ್ರಾಣಿಯೊಂದಿಗೆ ಅಲ್ಲಿಗೆ ಹೋಗುತ್ತೇನೆ ಹಾಗೆಂದ ಮಾತ್ರಕ್ಕೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಇದು ಹೇಗೆ ಅಡ್ಡಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ನನ್ನಿಂದ ಹಾಗು ನನ್ನ ಶ್ವಾನ ದಿಂದ ಯಾರಿಗಾದರು ಅಡ್ಡಿಯಾಗಿರುವುದು ಕಂಡು ಬಂದರೆ ನಾನು ಆ ಕ್ಷಣದಿಂದಲ್ಲೇ ಬರುವುದನ್ನು ನಿಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಮಿತ್ರರೊಬ್ಬರು ಸತತ ಏಳು ದಿನಗಳ ಕಾಲ ಕ್ರೀಡಾಂಗಣದಲ್ಲಿ ರಹಸ್ಯ ಕಾರ್ಯಚರಣೆ ನಡೆಸಿದ್ದು, ಪ್ರತಿನಿತ್ಯ ಸರಿಸುಮಾರು 6:30-7:00ರ ಸುಮಾರಿಗೆ ವಾಚ್ಮಾನ್ಗಳು ಅಲ್ಲಿರುವ ಜನರನ್ನು ಹೊರಗೆ ಕಳುಹಿಸಿದರೆ, 7:30ರ ಸುಮಾರಿಗೆ ಅಧಿಕಾರಿ ಬರುವುದನ್ನು ಖಚಿತಪಡಿಸಿದ್ದಾರೆ.

ನಂತರ ಖಿರ್ವಾರ್ ಕ್ರೀಡಾಂಗಣವನ್ನ ತಮ್ಮ ಸಾಕು ನಾಯಿಯೊಂದಿಗೆ ಪ್ರವೇಶಿಸುತ್ತಾರೆ ಮತ್ತು ಅದನ್ನು ಟ್ರ್ಯಾಕ್ ಹಾಗು ಫುಟ್ಬಾಲ್ ಮೈದಾನದ ಸುತ್ತ ತಿರುಗುತ್ತದೆ ಇದನ್ನು ಸೆಕ್ಯೂರಿಟಿ ಗಾರ್ಡ್ಗಳು ನೋಡಿಕೊಂಡು ಕಾಯುತ್ತಿದದ್ದು ಕಂಡು ಬಂದಿತ್ತು.

2010ರಲ್ಲಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದ್ದು ಮುಖ್ಯವಾಗಿ ಅಥ್ಲೆಟಿಕ್ಸ್ ಹಾಗು ಫುಟ್ಬಾಲ್ ಆಟಗಾರರಿಗೆ ಹೆಚ್ಚು ಉಪಯುಕ್ತವಾಗಿದೆ.

ಈ ಕುರಿತು ಮಾತನಾಡಿರುವ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಚೌಧರಿ ಸಾಯಂಕಾಲ 4-6ರ ನಡುವೆ ಕ್ರೀಡಾಂಗಣ ತೆರೆದಿರುತ್ತದೆ ಬಿಸಿಲಿನ ಬೇಗೆ ಜಾಸ್ತಿಯಿರುವ ಕಾರಣ ಸಂಜೆ 7ರವರೆಗೆ ಸಮಯವಾಕಾಶವನ್ನ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಅಧಿಕೃತ ಆದೇಶ ಹೊರಡಿಸಿರುವ ಬಗ್ಗೆ ಯಾವುದೇ ಮಾಹಿತಿಯನ್ನ ಹಂವಿಕೊಳಲಿಲ್ಲ. ಸಂಜೆ 7 ನಂತರ ಯಾವುದೇ ಸರಾಕರಿ ಅಧಿಕಾರಿ ಕ್ರೀಡಾಂಗಣವನ್ನ ಬಳಸಿಕೊಳ್ಳುತ್ತಿರುವ ಬಗ್ಗೆ ನನ್ನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

News reports have brought to our notice that certain sports facilities are being closed early causing inconvenience to sportsmen who wish to play till late nite. CM @ArvindKejriwal has directed that all Delhi Govt sports facilities to stay open for sportsmen till 10pm pic.twitter.com/LG7ucovFbZ

— Manish Sisodia (@msisodia) May 26, 2022

ಮುಂದುವರೆದು ನೀವು ಸರ್ಕಾರಿ ಕಚೇರಿಗಳಲ್ಲಿ ಸಮಯವನ್ನ ನೋಡಿರುತ್ತೀರಿ ಅದೇ ರೀತಿ ಇದು ಸಹ ದೆಹಲಿ ಸರ್ಕಾರದ ಅಡಿಯಲ್ಲಿ ಬರುವ ಕಾರಣ 7ರ ಸುಮಾರಿಗೆ ಮುಚ್ಚಲಾಗುತ್ತದೆ ನಾನು ಆ ನಂತರ ಹೊರಡುತ್ತೇನೆ ಎಂದು ಹೇಳಿದ್ದರು.

ಇನ್ನು ಕ್ರೀಡಾಪಟುಗಳ ಪೋಷಕರು ಈ ವಿಚಾರವಾಗಿ ಹೌಹಾರಿದ್ದು ಸರ್ಕಾರ ಹಾಗು ಅಧಿಕಾರಿಗಳ ನಡೆಗೆ ಶಾಪ ಹಾಕಿದ್ದಾರೆ. ಅಧಿಕಾರ ದುರುಪಯೋಗದಿಂದ ತಮ್ಮ ಮಕ್ಕಳು ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿಲ್ಲ ಎಂದು ಶಪಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕ್ರೀಡಾ ಸಂಕೀರ್ಣವನ್ನು ಅವಧಿಗೂ ಮೊದಲೇ ಮುಚ್ಚಲಾಗುತ್ತಿದೆ ಎಂಬ ದೂರುಗಳು ಸಾಮಾಜಿಕ ಜಾಲತಾಣ ಹಾಗು ಮಾಧ್ಯಮಗಳಲ್ಲಿ ಕಂಡು ಬಂದಿದೆ. ತಡರಾತ್ರಿವರೆಗೆ ಅಭ್ಯಾಸ ನಡೆಸಲು ಇಚ್ಚಿಸುವ ಕ್ರೀಡಾಪಟುಗಳಿಗೆ ರಾತ್ರಿ 10ರವರೆಗೆ ಕ್ರೀಡಾಂಗಣವನ್ನು ತೆರೆದಿರುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದಾರೆ. ಅದಾಗ್ಯೂ ಇನ್ನು ಮುಂದೆ ಇದೇ ರೀತಿ ದುರ್ವತನೆ ಕಂಡು ಬಂದರೆ ಅಂತಹ ಅಧಿಕಾರಿಯ ವಿರುದ್ದ ಕಠಿಣ ಕ್ರಮವನ್ನು ಜಾರಿ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Previous Post

ಪಠ್ಯದಲ್ಲಿ ಹೆಡ್ಗೆವಾರ್ ಬದಲು ಮೊಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ? : K S Eswarappa 

Next Post

ಬೆಂಗಳೂರಿನಲ್ಲಿ ಸ್ಕೂಲ್‌ ಬಸ್‌ ಹರಿದು 16 ವರ್ಷ ಬಾಲಕಿ ಸಾವು

Related Posts

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
Top Story

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

by ಪ್ರತಿಧ್ವನಿ
April 29, 2026
0

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಉತ್ತರ ಪ್ರದೇಶದ ಶಾಸಕಿ ಹಾಗೂ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ಬೆಂಗಳೂರಿನಲ್ಲಿ ಸ್ಕೂಲ್‌ ಬಸ್‌ ಹರಿದು 16 ವರ್ಷ ಬಾಲಕಿ ಸಾವು

ಬೆಂಗಳೂರಿನಲ್ಲಿ ಸ್ಕೂಲ್‌ ಬಸ್‌ ಹರಿದು 16 ವರ್ಷ ಬಾಲಕಿ ಸಾವು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada