ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯಾದ ಧರ್ಮಸ್ಥಳದ ಸೌಜನ್ಯ (SOUJANYA CASE) ಪರ ಕಾನೂನು ಹೋರಾಟ ನಡೆಸುತ್ತಿರುವ ಹಿಂದೂ ಮುಖಂಡ ಮಹೇಶ್ ತಿಮ್ಮರೋಡಿ (MAHESH THIMARODI) ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.
![](https://pratidhvani.com/wp-content/uploads/2024/01/MAHESH-1024x576.webp)
ಮಹೇಶ್ ತಿಮ್ಮರೋಡಿ (MAHESH THIMARODI) ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಅರ್ಜಿ ವಿಚಾರಣೆಯನ್ನು ಇಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ (HIGH COURT OF KARNATAKA) ನಡೆಸಿತು. ಹೈಕೋರ್ಟ್ ನ್ಯಾ.ದಿನೇಶ್ ಕುಮಾರ್ ಹಾಗೂ ನ್ಯಾ.ಶಿವಶಂಕರೇಗೌಡ ಅವರನ್ನೊಳಗೊಂಡ ವಿಭಾಗೀಯ ಪೀಠದೆದುರು ದೂರುದಾರರ ಪರ ವಕೀಲ ಹಾಗೂ ಮಹೇಶ್ ತಿಮ್ಮರೋಡಿ (MAHESH THIMARODI) ಪರ ವಕೀಲ ಶ್ರೀನಿವಾಸ್ ವಾದ ಮಂಡಿಸಿದರು.
![](https://pratidhvani.com/wp-content/uploads/2024/01/mahesh-1-jpg.webp)
ಇದೊಂದು ಸಿವಿಲ್ ಪ್ರಕರಣವಾಗಿದ್ದು, ಕಾರ್ಯಕ್ರಮವೊಂದಲ್ಲಿ ಮಹೇಶ್ ತಿಮ್ಮರೋಡಿ (MAHESH THIMARODI) ಅವರ ಭಾಷಣದ ದೃಶ್ಯಾವಳಿಗಳನ್ನು ತಿರುಚಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಹೈಕೋರ್ಟ್ ವಿಭಾಗೀಯ ಪೀಠಕ್ಕೆ (HIGH COURT OF KARNATAKA) ವಕೀಲ ಶ್ರೀನಿವಾಸ್ ತಿಳಿಸಿದರು. ಕೋರ್ಟ್ ವಿಚಾರಣೆ ಮುಗಿದ ಬಳಿಕ ಪ್ರತಿಕ್ರಿಯಿಸಿದ ಹಿಂದೂ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಮಹೇಶ್ ತಿಮ್ಮರೋಡಿ (MAHESH THIMARODI) ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಮಗೆ ಗೌರವವಿದೆ. ಹೀಗಾಗಿ ಈ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.