ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ದಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.
ಒಮ್ಮೆ ಅವರ ಹೆಸರು ವರುಣಾ, ಬಾದಾಮಿ, ಚಾಮರಾಜಪೇಟೆ, ಕೋಲಾರ, ದಕ್ಷಿಣ ಕನ್ನಡದಿಂದ ಸ್ಪರ್ದಿಸುತ್ತಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ ಮತ್ತು ತಮ್ಮ ಸ್ಪರ್ದೆ ಕುರಿತು ಸ್ವತಃ ಸಿದ್ದರಾಮ್ಯಯ್ಯ ಎಲ್ಲು ಕೂಡ ತುಟಿ ಬಿಚ್ಚಿಲ್ಲ.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ದಿಸುವುದು ದಟ್ಟವಾಗಿದ್ದು ಅದಕ್ಕೆ ಪೂರಕವೆಂಬಂತೆ ಜನವರಿ 9ರಂದು ಕೋಲರಾದಲ್ಲಿ ಸಮಾವೇಶ ನಡೆಯಲಿದ್ದು ಮುಂಚಿತವಾಗಿ ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಮನೆಗೆ ಭೇಟಿ ನೀಡಿ ಸಿದ್ದು ಮಾತುಕತೆ ನಡೆಸಿರುವುದು ಹಲವು ವಿಚಾರಗಳಿಗೆ ಪುಷ್ಠಿ ನೀಡಿದೆ.

ಇನ್ನು ಜಿಲ್ಲೆಯಲ್ಲಿ ಎರಡು ಬಣಗಳಾಗಿದ್ದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಘೂ ಮುನಿಯಪ್ಪ ನಡುವಿನ ಮುಸುಕಿನ ಗುದ್ದಾಟ ಜೋರಾಗಿ ನಡೆಯುತ್ತಿದೆ ಇನ್ನು ಈ ಮಧ್ಯೆ ಸಿದ್ದು ಮುನಿಯಪ್ಪರನ್ನು ಭೇಟಿ ಮಾಡಿ ಸಭೆಗೆ ಆಹ್ವನಿಸಿರುವುದು ಕೋರಾದಲ್ಲಿ ಸಿದ್ದರಾಮಯ್ಯ ಸ್ಪರ್ದೆ ಕುರಿತು ಪುಷ್ಟಿ ನೀಡಿದೆ.
ಸಿದ್ದು-ಮುನಿಯಪ್ಪ ಭೇಟಿ ವೇಳೆ ಮಾಜಿ ಸಚಿವ ಎಂ.ಆರ್. ಸೀತಾರಾಂ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ನಾರಾಯಣ ಸ್ವಾಮಿ, ಕೋಲಾರ ವಿಧಾನಸಭೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯಶಂಕರ್ ಉಪಸ್ಥಿತರಿದ್ದರು.






