ರಾಮಚಂದ್ರಪುರ ಮಠಕ್ಕೆ ಆಡಳಿತ ಅಧಿಕಾರಿ ನೇಮಿಸಬೇಕು ಮತ್ತು ರಾಘವೇಶ್ವರ ಭಾರತೀ ಸ್ವಾಮಿಗಳನ್ನು ಪೀಠದಿಂದ ಕೆಳಗಿಳಿಸಿ ಅವರನ್ನು ಕಾನೂನು ವಿಚಾರಣೆಗೆ ಒಳಪಡಿಸಬೇಕು ಎಂಬ ಸಾರ್ವಜನಿಕರ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಗೊಳಿಸಿದೆ.
ರಾಮಚಂದ್ರಪುರ ಮಠದ ಶ್ರೀಗಳು ತಮ್ಮ ಅಧಿಕಾರ ದುರುಪಯೋಗ ಪಡೆದುಕೊಂಡಿದ್ದಾರೆ. ಅವರನ್ನು ಪೀಠಾಧಿಪತಿ ಸ್ಥಾನದಿಂದ ಕೆಳಗೆ ಇಳಿಸಲು ನಿರ್ದೇಶನ ನೀಡಿ ಎಂದು ಈಶ್ವರ್ ಭಟ್, ಏ.ಕೆ ಜಯಕೃಷ್ಣ, ಮಯೂರಿ ಗಜಾನನ ಉಪಾಧ್ಯಾಯ, ಅಶೋಕ್ ಮೂರ್ತಿ, ಜಿ ಶಂಕರ್ ಭಟ್, ಮಹಾಬಲಗಿರಿ ಹೆಗಡೆ ಎಂಬುವರು 2016 ರಲ್ಲಿ ಹೈಕೋರ್ಟಿಗೆ ಅರ್ಜಿ ಹಾಕಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಬಳಿಕ ತೀರ್ಪು ಕಾಯ್ದಿರಿಸಿತ್ತು. ಅರ್ಜಿದಾರರು ಬಾರಿತರಾಗಿದ್ದರಲ್ಲಿ ಸಿವಿಲ್ ಪ್ರೊಸೀಜರ್ ಕೋಡ್ ಕಾಲಮ್ 92 ಅಡಿಯಲ್ಲಿ ಸಿವಿಲ್ ದಾವೆ ಕೂಡಿ ಪರಿಹಾರ ಪಡೆಯಲು ಸ್ವತಂತ್ರರು. ಆದರೆ ಈ ಅರ್ಜಿಯನ್ನು ಪುರಸ್ಕರಿಸಲು ಸಂವಿಧಾನಿಕವಾಗಿ ನಮಗೆ ಯಾವುದೇ ವಿಶೇಷ ಅಧಿಕಾರವಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧ್ಯ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಚೇತ್ ಶೆಟ್ಟಿ ಅವರಿಂದ ವಿಭಾಗೀಯ ಪೀಠ ಆದೇಶ ನೀಡಿದೆ.