Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

PSI ನೇಮಕಾತಿ ಅಕ್ರಮಕ್ಕೆ ಸಿಕ್ಕಿದೆ ಮಗದೊಂದು ಸಾಕ್ಷ್ಯ..!? ಸರ್ಕಾರದಿಂದ ಜಾಣನಡೆ..

ಕೃಷ್ಣ ಮಣಿ

ಕೃಷ್ಣ ಮಣಿ

January 26, 2023
Share on FacebookShare on Twitter

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ ಅಕ್ರಮ ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದೆ. ಕಷ್ಟಪಟ್ಟು ಓದಿ ಕೆಲಸ ಗಿಟ್ಟಿಸುವ ಆಲೋಚನೆಯಲ್ಲಿದ್ದ ಆಕಾಂಕ್ಷಿಗಳು ಕಂತೆ ಕಂತೆ ನೋಟುಗಳು ಕೆಲಸ ಗಿಟ್ಟಿಸುತ್ತಿರುವುದನ್ನು ನೋಡಿ ಕೆಲಸಕ್ಕೆ ಸೇರುವ ಹುಮ್ಮಸ್ಸನ್ನು ಕಳೆದುಕೊಂಡಿದ್ದಾರೆ. ಈ ನಡುವೆ 545 ಮಂದಿ ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಅಕ್ರಮಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. CID ಬಂಧನದಲ್ಲಿ ಇರುವ ಆರ್ ಡಿ ಪಾಟೀಲ್ ಅಕೌಂಟ್​ಗೆ ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಆರ್ ಡಿ ಪಾಟೀಲ್ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳೇ ಕೇಸ್​ ಮುಚ್ಚಿ ಹಾಕಲು 3 ಕೋಟಿ ರೂಪಾಯಿ ಕೇಳಿದ್ದಾರೆ ಎನ್ನುವ ಸ್ಫೋಟಕ ವಿಚಾರ ಬಹಿರಂಗ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಕೆಲವು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲೂ ಭಾರೀ ವೈರಲ್​ ಆಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಕಿಂಗ್​ಪಿನ್ ಆಗಿದ್ದ R.D.ಪಾಟೀಲ್ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ ಎನ್ನಲಾಗ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಹಣಕ್ಕೆ ಡಿಮ್ಯಾಂಡ್​ ಮಾಡಿದ್ದು ಯಾವ ಅಧಿಕಾರಿ..!?

ಸಿಐಡಿ ಅಧಿಕಾರಿಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಆರ್ ಡಿ ಪಾಟೀಲ್ ವಿಡಿಯೋ ಹರಿಬಿಟ್ಟಿದ್ದಾನೆ. ಸಿಐಡಿ ಅಧಿಕಾರಿಗಳು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಸಿಐಡಿ ತನಿಖಾಧಿಕಾರಿ ಡಿವೈಎಸ್​ಪಿ ಶಂಕರಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. 3 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ವೀಡಿಯೋ ಪೋಸ್ಟ್​ ಮಾಡಿ ಕೋರ್ಟ್​ಗೆ ಬಂದು ಶರಣಾಗತಿ ಆಗಿದ್ದಾನೆ. 3 ಕೋಟಿ ಡಿಮ್ಯಾಂಡ್‌ಗೆ ಒಪ್ಪಿಕೊಂಡು, ಅದರಲ್ಲಿ ₹76 ಲಕ್ಷ ಕೊಟ್ಟಿದ್ದೀನಿ. ನಮ್ಮ ಅಳಿಯನ ಮೂಲಕ 76 ಲಕ್ಷ ರೂಪಾಯಿ ಹಣ ತಲುಪಿಸಿದ್ದೇನೆ. ನಾನು ಬೇಲ್​ ಮೇಲೆ ಬರುತ್ತಿದ್ದ ಹಾಗೆ ಹಣಕ್ಕಾಗಿ ಸಿಬ್ಬಂದಿಯನ್ನ ಕಳುಹಿಸಿದ್ರು. ಹಣವಿಲ್ಲದಿದ್ರೆ ಬಂಧಿಸುವುದಾಗಿ ಹೇಳಿದ್ರು ಎಂದು ಪಾಟೀಲ್ ಆರೋಪ ಮಾಡಿದ್ದಾನೆ.

ಮೂರು ಆಡಿಯೋದಲ್ಲಿ ಏನಿದೆ ಸಂಭಾಷಣೆ..!?

ಕಿಂಗ್​ಪಿನ್ R.D.ಪಾಟೀಲ್ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿರುವ 3 ಆಡಿಯೋಗಳಲ್ಲಿ DySP ಶಂಕರಗೌಡ ಜೊತೆ ಸಂಭಾಷಣೆ ಮಾಡಿರುವುದು ಎನ್ನಲಾಗ್ತಿದೆ. PSI ಕೇಸಲ್ಲಿ ಸಹಕರಿಸಲು ಹಣದ ಆಫರ್ ನೀಡಿದ್ದ ಆರೋಪಿ, ಚಾರ್ಜ್​ಶೀಟ್ ಬೇಗ ಸಲ್ಲಿಸಲು ಹಣದ ಆಫರ್ ಮಾಡಿದ್ದಾನೆ. ರೊಕ್ಕ ಇಂಪಾರ್ಟೆಂಟ್ ಅಲ್ಲ, ಕೆಲಸ ಇಂಪಾರ್ಟೆಂಟ್ ಎಂದು ಶಂಕರಗೌಡಗೆ ರುದ್ರಗೌಡ ಪಾಟೀಲ್ ಹೇಳಿದ್ದಾನೆ. ನೀವು ಯಾರಿಗೆ ಹೇಳ್ತೀರೋ ಅವರಿಗೆ ದುಡ್ಡು ಕೊಡ್ತೇನೆ. ನಾಳೆ ಅಥವಾ ನಾಡಿದ್ದು ಪೇಮೆಂಟ್ ಕಳಿಸ್ತೇನೆ. ಈಗ 1.50 ಕೋಟಿ ರೂಪಾಯಿ​ ಪೇಮೆಂಟ್ ಮಾಡ್ತೀನಿ. ಇನ್ನೊಂದು ಕೋಟಿ ರೂಪಾಯಿ 16ಕ್ಕೆ ಕಳಿಸ್ತೇನೆ ಎಂದು DySP ಶಂಕರಗೌಡಗೆ ಹೇಳಿದ್ದಾನೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಪಿಎಸ್ಐ ಕೇಸ್​ನಲ್ಲಿ ಆರ್ ಡಿ ಪಾಟೀಲ್ ಬಂಧನ ಆಗಿದೆ. ಆರ್ ಡಿ‌ ಪಾಟೀಲ್ ಕಾಂಗ್ರೆಸ್ ಮುಖಂಡ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ರು ಎಂದಿದ್ದಾರೆ.

ಆರ್​.ಡಿ ಪಾಟೀಲ್​ ಬಗ್ಗೆ ಸಿಎಂ ಹೇಳಿದ್ದೇನು..?

ಆರ್ ಡಿ ಪಾಟೀಲ್ ತನಿಖಾಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿರೋ ವಿಡಿಯೋ ಬಿಡುಗಡೆ ಮಾಡಿರುವ ವಿಚಾರವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಆರೋಪಿ ಎನು ಹೇಳಿದ್ದಾನೆ ಎನ್ನುವುದು ಅಲ್ಲಿಯ ಪೊಲೀಸ್ ತನಿಖಾಧಿಕಾರಿಗಳಿಗೆ ಗೊತ್ತಿದೆ. ತನಿಖೆ ಬಳಿಕ ಅಧಿಕಾರಿಯದ್ದು ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೆವೆ. ಕೋರ್ಟ್ ಆದೇಶದ ಮೂಲಕ ತನಿಖೆ ನಡೆಯುತ್ತಿದೆ. ಮೊದಲು ಆರೋಪದ ಆಡಿಯೋ ಎನಿದೆ ನೋಡೋಣ, ತನಿಖೆ ಆಗುತ್ತೆ ಎಂದಿದ್ದಾರೆ. ಇನ್ನು ಸಿಎಂ ತೆರಳುತ್ತಿದ್ದ ಮಾರ್ಗದ ಉದ್ದಕ್ಕೂ ಆರ್ ಡಿ ಪಾಟೀಲ್ ಕಟೌಟ್, ಬ್ಯಾನರ್ಸ್ ರಾರಾಜಿಸಿವೆ, ಸಿಎಂಗೆ ಸ್ವಾಗತ ಕೋರಿ ಆರ್ ಡಿ ಪಾಟೀಲ್ ಹೆಸರಲ್ಲಿ ಬ್ಯಾನರ್​ ಹಾಕಲಾಗಿತ್ತು. ಆದರೆ ಸಿಎಂಗೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ತೆರವು ಮಾಡಲಾಗಿದೆ.

ಎಲ್ಲಾ ಆರೋಪಿಗಳೂ ರಿಲೀಸ್​, ಆರ್​.ಡಿ ಪಾಟೀಲ್ ಬಂಧನ..!


ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಕಲಬುರಗಿ ಬಿಜೆಪಿ ನಾಯಕಿ ಸೇರಿದಂತೆ ಬಹುತೇಕ ಎಲ್ಲಾ ಆರೋಪಿಗಳು ಜೈಲಿನಿಂದ ಬೇಲ್​ ಮೇಲೆ ಬಿಡುಗಡೆ ಆಗಿದ್ದಾರೆ. ಆದರೆ D R ಪಾಟೀಲ್​ ಜಾಮೀನು ಪಡೆದು ಹೊರಕ್ಕೆ ಬಂದ ಬಳಿಕ ಪೊಲೀಸರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ, ವಿಚಾರಣೆಗೆ ಹಾಜರಾಗಲಿಲ್ಲ ಎನ್ನುವ ಕಾರಣಕ್ಕೆ ಅರೆಸ್ಟ್​ ಮಾಡಲು ನಿರ್ಧಾರ ಮಾಡಿದ್ದರು. ಆದರೆ ತಪ್ಪಿಸಿಕೊಂಡು ಎಸ್ಕೇಪ್​ ಆಗಿದ್ದ ಡಿ.ಆರ್​ ಪಾಟೀಲ್​, ಕೋರ್ಟ್​ ಎದುರು ಶರಣಾಗಿದ್ದಾನೆ. ಆದರೆ 20 ಲಕ್ಷ ರೂಪಾಯಿ ಹಣ ಹಾಕಿರುವುದು, 3 ಕೋಟಿ ಲಂಚ ಕೇಳಿರುವುದು, ಅದರಲ್ಲಿ 76 ಲಕ್ಷ ರೂಪಾಯಿ ಸಂದಾಯ ಮಾಡಿದ್ದೇನೆ ಎನ್ನುವುದು ಸಾಕಷ್ಟು ಅನುಮಾನಗಳನ್ನು ಮೂಡಿಸುತಿದೆ. ಸರ್ಕಾರ ಮಾತ್ರ ಏನೂ ನಡೆದೇ ಇಲ್ಲ ಎನ್ನವ ಹಾಗೆ ಮೌನಕ್ಕೆ ಶರಣಾಗಿದೆ. ಭ್ರಷ್ಟಾಚಾರ ಎಂಬ ರಾಕ್ಷಸನ ಆರ್ಭಟ ರಾಜ್ಯದಲ್ಲಿ ಮಿತಿಮೀರಿದೆ. ಮುಂದೆ ಬರುವ ಸರ್ಕಾರ ಆದರೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಿದ್ರೆ ಉತ್ತಮ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

DK Shivakumar |ನನಗೆ ಧರ್ಮ, ದೇವರು,ಮಠಗಳ ಬಗ್ಗೆ ಗೌರವವಿದೆ. #pratidhvani #dkshivakumar #politics #karnataka
ಇದೀಗ

DK Shivakumar |ನನಗೆ ಧರ್ಮ, ದೇವರು,ಮಠಗಳ ಬಗ್ಗೆ ಗೌರವವಿದೆ. #pratidhvani #dkshivakumar #politics #karnataka

by ಪ್ರತಿಧ್ವನಿ
March 21, 2023
ಲಂಡನ್​​ನಲ್ಲಿ ಭಾರತೀಯ ಹೈಕಮಿಷನ್​ ಕಚೇರಿ ಮೇಲೆ ಖಲಿಸ್ತಾನಿ ಉಗ್ರರ ಅಟ್ಟಹಾಸ : ತ್ರಿವರ್ಣ ಧ್ವಜಕ್ಕೆ ಅವಮಾನ
ವಿದೇಶ

ಲಂಡನ್​​ನಲ್ಲಿ ಭಾರತೀಯ ಹೈಕಮಿಷನ್​ ಕಚೇರಿ ಮೇಲೆ ಖಲಿಸ್ತಾನಿ ಉಗ್ರರ ಅಟ್ಟಹಾಸ : ತ್ರಿವರ್ಣ ಧ್ವಜಕ್ಕೆ ಅವಮಾನ

by ಮಂಜುನಾಥ ಬಿ
March 20, 2023
ದೇಶವನ್ನು ಹಿಂದುಳಿಸುತ್ತಿರುವ ನೆಹರು ದ್ವೇಷ..!
Top Story

ದೇಶವನ್ನು ಹಿಂದುಳಿಸುತ್ತಿರುವ ನೆಹರು ದ್ವೇಷ..!

by ಡಾ | ಜೆ.ಎಸ್ ಪಾಟೀಲ
March 23, 2023
ಸಿ.ಟಿ ರವಿ ಮಾತು ಹಿಡಿತ ತಪ್ಪುತ್ತಿರೋದಕ್ಕೆ ಕಾರಣ ಏನು..?
Top Story

ಸಿ.ಟಿ ರವಿ ಮಾತು ಹಿಡಿತ ತಪ್ಪುತ್ತಿರೋದಕ್ಕೆ ಕಾರಣ ಏನು..?

by ಪ್ರತಿಧ್ವನಿ
March 26, 2023
ಕೊನೆಗೂ ಕಗ್ಗಂಟಾದ ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್..!
Top Story

ಕೊನೆಗೂ ಕಗ್ಗಂಟಾದ ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್..!

by ಪ್ರತಿಧ್ವನಿ
March 25, 2023
Next Post
ಅದಾನಿ ಬೆದರಿಕೆಗೆ ಬಗ್ಗಲ್ಲ, ನಮ್ಮ ವಿರುದ್ಧ ಮೊಕದ್ದಮೆ ಹೂಡಲಿ: ಹಿಂಡೆನ್‌ಬರ್ಗ್ ರಿಸರ್ಚ್ ಸವಾಲು

ಅದಾನಿ ಬೆದರಿಕೆಗೆ ಬಗ್ಗಲ್ಲ, ನಮ್ಮ ವಿರುದ್ಧ ಮೊಕದ್ದಮೆ ಹೂಡಲಿ: ಹಿಂಡೆನ್‌ಬರ್ಗ್ ರಿಸರ್ಚ್ ಸವಾಲು

ನಮ್ಮ ರಾಷ್ಟ್ರೀಯ ಭದ್ರತೆ ಸಾಕ್ಷ್ಯಚಿತ್ರದಿಂದ ಧಕ್ಕೆಯಾಗುವಷ್ಟು ದುರ್ಬಲವಾಗಿದೆಯೇ? ತರೂರ್‌ ಪ್ರಶ್ನೆ

ನಮ್ಮ ರಾಷ್ಟ್ರೀಯ ಭದ್ರತೆ ಸಾಕ್ಷ್ಯಚಿತ್ರದಿಂದ ಧಕ್ಕೆಯಾಗುವಷ್ಟು ದುರ್ಬಲವಾಗಿದೆಯೇ? ತರೂರ್‌ ಪ್ರಶ್ನೆ

ಬಾಲ ಪ್ರಶಸ್ತಿ ಪಡೆದ ಬೆಂಗಳೂರಿನ ಈ ಪೋರನ ಐಕ್ಯೂ ಐನ್‌ಸ್ಟೈನ್‌ಗಿಂತಲೂ ಹೆಚ್ಚು.!

ಬಾಲ ಪ್ರಶಸ್ತಿ ಪಡೆದ ಬೆಂಗಳೂರಿನ ಈ ಪೋರನ ಐಕ್ಯೂ ಐನ್‌ಸ್ಟೈನ್‌ಗಿಂತಲೂ ಹೆಚ್ಚು.!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist