• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕನ್ನಡ ಚಿತ್ರರಂಗದ ಚಿತ್ರಗಳಟ್ರಿಣ್ ಟ್ರಿಣ್ ಟ್ರಿಣ್ ನಿರ್ದೇಶಕ ಫಣಿ ರಾಮಚಂದ್ರ

ಪ್ರತಿಧ್ವನಿ by ಪ್ರತಿಧ್ವನಿ
July 15, 2025
in Top Story, ಕರ್ನಾಟಕ, ಸಿನಿಮಾ
0
ಕನ್ನಡ ಚಿತ್ರರಂಗದ ಚಿತ್ರಗಳಟ್ರಿಣ್ ಟ್ರಿಣ್ ಟ್ರಿಣ್ ನಿರ್ದೇಶಕ ಫಣಿ ರಾಮಚಂದ್ರ
Share on WhatsAppShare on FacebookShare on Telegram

ಫಣಿ ರಾಮಚಂದ್ರ ರವರು ಕನ್ನಡ ಚಿತ್ರರಂಗ ಕಂಡ ವಿಡಂಬನಾತ್ಮಕ ಚಿತ್ರಗಳ ನಿರ್ದೇಶಕರು ಆಗಿದ್ದಾರೆ. ತಮ್ಮ ಚಿತ್ರಗಳಲ್ಲಿ ಸಮಾಜದಲ್ಲಿನ ಬದುಕಿನ ದೈನಂದಿನ ಸಮಸ್ಯೆಗಳನ್ನು ತಮ್ಮದೇ ಆದ ಹಾಸ್ಯ ಶೈಲಿಯಲ್ಲಿ ರೂಪಿಸುವಲ್ಲಿ ಪರಿಣಿತರೂ ಆಗಿದ್ದು ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಅಲ್ಪವಾದರೂ ಗುಣಮಟ್ಟದಲ್ಲಿ ಯಾವುದೇ ದೋಷವಿಲ್ಲ. ಇವರ ನಿರ್ದೇಶನದಲ್ಲಿ ಮೂಡಿ ಬಂದ ಪ್ರತಿ ಚಿತ್ರವು ಹತ್ತು ಚಿತ್ರಗಳಿಗೆ ಸಮವಾಗಿದೆ. ಈ ಒಂದು ವಾಕ್ಯವು ನಿಮಗೆ ಗೊಂದಲ ಮೂಡಿಸಬಹುದು. ಇದಕ್ಕೆ ಉತ್ತರವು ನನ್ನ ಬಳಿಯಿದೆ. ಇದುವರೆಗೂ ಚಿತ್ರ ನಟರ ಮತ್ತು ಚಿತ್ರ ರಂಗಕ್ಕೆ ಸಂಬಂಧಿಸಿದ ಕೆಲವು ಸಿನಿಮಾ ಧಾರಾವಾಹಿಗಳು ನೋಡಿದ ನೆನಪು ಇವರ ನಿರ್ದೇಶನದ ಚಿತ್ರಗಳ ಮಹತ್ವ ತಿಳಿಯಿತು. 1991 ರಲ್ಲಿ ತೆರೆ ಕಂಡ ಇವರದೇ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಗೌರಿ ಗಣೇಶ ಒಂದು ಉತ್ತಮ ಉದಾಹರಣೆ ಕೂಡ ಆಗಿದೆ. ಈ ಚಿತ್ರದ ಕಥೆಯು ಸ್ವಾರಸ್ಯಕರವಾಗಿದ್ದು ಲಂಬೋದರ ಪಾತ್ರವೇ ಪ್ರಮುಖ ಆಕರ್ಷಣೆಯಾಗಿದೆ. ಲಂಬೋದರನ ಪಾತ್ರವನ್ನು ನಿರ್ವಹಿಸಿದ ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿರುವ ಸಪ್ತ ಭಾಷೆಗಳ ನಟ ಮೂಲತಃ ಕನ್ನಡಿಗರು ಆಗಿರುವ ಅನಂತನಾಗ್ ಕುರಿತು ತಿಳಿಯದವರು ಇದ್ದಾರೆಯೇ? ಇವರ ನಟನೆಯ ಕುರಿತು ವರ್ಣಿಸಲು ಪದಗಳು ಕೂಡ ಸಾಲುವುದಿಲ್ಲ.

ADVERTISEMENT

ನಿರ್ವಹಿಸಲು ಕೆಲಸವು ಇರದ, ಕೈಯಲ್ಲಿ ಹಣವೂ ಇರದ ಒಬ್ಬ ನಿರುದ್ಯೋಗಿಯು ತನ್ನ ಬುದ್ಧಿವಂತಿಕೆಯಿಂದ ಜನರ ದೌರ್ಬಲ್ಯವನ್ನು ಅಸ್ತ್ರವಾಗಿ ಬಳಸಿಕೊಂಡು ಹಣವನ್ನು ಗಳಿಸಿ ಶ್ರೀಮಂತನಾಗುತ್ತಾನೆ. ಇದೇ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಸಮಾಜದಲ್ಲಿ ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂದು ಹೇಳುವ ಸಂದೇಶವು ಪ್ರತಿಯೊಬ್ಬ ಪ್ರಜೆಗೂ ಎಚ್ಚರಿಕೆಯ ಗಂಟೆಯಾಗಿದೆ. ಮೇಲಾಗಿ ಇಂತಹ ಕಥೆಗಳನ್ನು ಚಿತ್ರ ಮಾಡುವುದು ಒಂದು ಸವಾಲಿನ ಕೆಲಸ ಕೂಡ. ಮುಖ್ಯವಾಗಿ ಚಿತ್ರದಲ್ಲಿ ಬರುವ ಪಾತ್ರಗಳಲ್ಲಿ, ಘಟನೆಗಳಲ್ಲಿ ಯಾವ ಅತಿರೇಕವು ಇಲ್ಲ, ತೀರ ನೈಜವಾಗಿ ಮೂಡಿಬಂದಿದೆ. ಇಂತಹ ಪಾತ್ರಗಳನ್ನು ಮೇಧಾವಿ ನಟರು ಮಾತ್ರ ನಿರ್ವಹಿಸಲು ಸಾಧ್ಯವಾಗುತ್ತದೆ.

B Sureshgowda : ಹೆಗ್ಗೆರೆ ಪಿಡಿಓ ಅಸಾಧ್ಯ ವ್ಯಕ್ತಿ ಪರಮೇಶ್ವರ್, ಸುರೇಶ್ ಗೌಡ ಆಕ್ರೋ #pratidhvani


1992 ರಲ್ಲಿ ತೆರೆ ಕಂಡ ಇವರದೇ ನಿರ್ದೇಶನದಲ್ಲಿ ಮೂಡಿ ಬಂದ ಒಂದು ಸಿನಿಮಾ ಕಥೆ ಚಿತ್ರವು ಅಷ್ಟೇ ವೈವಿಧ್ಯತೆಯನ್ನು ಹೊಂದಿದೆ. ಸಪ್ತ ಭಾಷೆ ನಟ ಅನಂತನಾಗ್ ಈ ಚಿತ್ರದಲ್ಲಿ ಕಥೆಗಾರನ ಪಾತ್ರವನ್ನು ನಿರ್ವಹಿಸಿದ್ದು ಒಬ್ಬ ಕಥೆಗಾರನ ಆಲೋಚನೆ ಯಾವ ಯಾವ ರೀತಿ ಇರುತ್ತದೆ ಎನ್ನುವುದನ್ನು ತುಂಬ ಅದ್ಭುತವಾಗಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ (ಕಥೆಗಾರ) ಒಬ್ಬ ವೇಶ್ಯೆಯ ನೈಜ ಘಟನೆಯಾಧರಿತ ಕಥೆಯನ್ನು ಬರೆಯಲು ನಿರ್ಧರಿಸಿ ವೇಷಧಾರಿಯಾಗಿ ಒಬ್ಬ ವೇಶ್ಯೆಯ ಮನೆಗೆ ಹೋದಾಗ ಅಲ್ಲಿ ಕಾಣುವ ಅಸಹ್ಯ ವಾತಾವರಣ,ಆ ವೇಶ್ಯಾವಾಟಿಕೆಗೆ ಜಾಲದಲ್ಲಿ ಸಿಲುಕಿದ್ದ ಅಮಾಯಕ ಹೆಣ್ಣಿನ ಭೇಟಿ,ಅವಳ ದುಃಖದ ಕಥೆಯನ್ನು ತಿಳಿದುಕೊಂಡು ಬರೆಯಲು ಆರಂಭಿಸಿದಾಗ,ಆ ವೇಶ್ಯಾವಾಟಿಕೆಗೆ ಜಾಲದಿಂದ ತಪ್ಪಿಸಿಕೊಂಡು ಬಂದ ಆ ಅಮಾಯಕ ಹೆಣ್ಣಿಗೆ ತನ್ನ ಮನೆಯಲ್ಲಿ ಆಶ್ರಯವನ್ನು ನೀಡಿದ ಬಳಿಕ ಆ ಕಥೆಗಾರನ ಸಂಸಾರದಲ್ಲಿ ಬೀಸುವ ಬಿರುಗಾಳಿ, ಆಗುವ ಕಲಹ, ಅನುಮಾನ,

ಇನ್ನೇನು ಸಂಸಾರವೇ ಛಿದ್ರಗೊಂಡಿತು ಎನ್ನುವಷ್ಟರಲ್ಲಿ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಯಾರೂ ಊಹಿಸಲಾಗದ ಅನಿರೀಕ್ಷಿತ ತಿರುವು ಆ ಅಮಾಯಕ ಹೆಣ್ಣಿನ ದುಸ್ಥಿತಿಗೆ ಕಾರಣನಾಗಿದ್ದವನು ತನ್ನ ಹೆಂಡತಿಯ ತಮ್ಮ ಎಂದು ತಿಳಿದಾಗ ಕಥಾ ನಾಯಕನಿಗೆ, ಹೆಂಡತಿಗೆ, ಆಕೆಯ ಕುಟುಂಬಕ್ಕೆ ಆಗುವ ಆಘಾತ, ಈ ರೀತಿಯಾಗಿ ಕಥೆಯಲ್ಲಿ ಅನಿರೀಕ್ಷಿತ ತಿರುವು ಕೊಡುವ ಚಾಣಾಕ್ಷತನ ಎಲ್ಲ ನಿರ್ದೇಶಕರಿಗೆ ಬರುವುದಿಲ್ಲ. ಮುಖ್ಯವಾಗಿ ಈ ಚಿತ್ರದಲ್ಲಿ ಅರ್ಥರಹಿತ ಅನುಮಾನ ಎಂದಿಗೂ ಒಳ್ಳೆಯದಲ್ಲ, ಎನ್ನುವ ಸಂದೇಶವಿದ್ದು ಅದರಿಂದ ಆಗುವ ಅನಾಹುತಗಳನ್ನು ಈ ಚಿತ್ರದಲ್ಲಿ ನೈಜವಾಗಿ ತೋರಿಸಲಾಗಿದೆ. ಅಲ್ಲದೇ ಇವರ ಮತ್ತು ಸಪ್ತ ಭಾಷೆ ನಟ ಅನಂತನಾಗ್ ಕಾಂಬಿನೇಷನಲ್ಲಿ ಮೂಡಿ ಬಂದ ಗಣೇಶನ ಮದುವೆ, ಗೌರಿ ಗಣೇಶ, ಗಣೇಶ ಸುಬ್ರಹ್ಮಣ್ಯ, ಗಣೇಶ ಐ ಲವ್ ಯು ಚಿತ್ರಗಳು ಕೂಡ ಜನಪ್ರಿಯತೆಯನ್ನು ಪಡೆದಿವೆ. ಇವರ ನಿರ್ದೇಶನದಲ್ಲಿ ಮೂಡಿ ಬಂದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ನಟನೆಯ ಡಾ.ಕೃಷ್ಣ, ನಾನೆಂದು ನಿಮ್ಮವನೇ,

ಅಷ್ಟು ಮಾತ್ರವಲ್ಲ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ನಟಿಸಿದ ಅಮ್ಮಾವ್ರ ಗಂಡ ಎಂಬ ಹಾಸ್ಯ ಪ್ರಧಾನ ಚಿತ್ರ, ಮತ್ತು ತ್ರೀಪಾತ್ರದಲ್ಲಿ ನಟಿಸಿದ ಅಣ್ಣಾವ್ರ ಮಕ್ಕಳು ಎಂಬ ಸಾಹಸ ಪ್ರಧಾನ ಚಿತ್ರ ವನ್ನು ನಿರ್ದೇಶಿಸಿದ್ದಾರೆ. ಆದರೆ ಇವರ ಪ್ರತಿಭೆ ಕೇವಲ ಬೆಳ್ಳಿತೆರೆಗೆ ಸೀಮಿತವಾಗಿರಲಿಲ್ಲ, ಕಿರುತೆರೆಯವರೆಗೂ ವ್ಯಾಪಿಸಿತು. ಸಾಹಸ ಲಕ್ಷ್ಮಿಯರು, ಪ್ರೇಮ ಪಿಶಾಚಿಗಳು, ದಂಡ ಪಿಂಡಗಳು, ಟ್ರಿಣ್ ಟ್ರಿಣ್ ಟ್ರಿಣ್ , ಮದುವೆ ಮದುವೆ ಮದುವೆ, ದುಡ್ಡು ದುಡ್ಡು ದುಡ್ಡು ಎಂಬ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇಲ್ಲಿಯೂ ಕೂಡ ತಮ್ಮ ಮೂಲ ಕಂಟೆಂಟ್ ಹಾಸ್ಯವನ್ನು ಬಿಟ್ಟಿಲ್ಲ, ಇವರ ನಿರ್ದೇಶನದ ಧಾರಾವಾಹಿಗಳಲ್ಲಿ ಹಾಸ್ಯವೇ ಪ್ರಧಾನವಾಗಿದೆ. ಅದರಲ್ಲೂ ಇವರ ನಿರ್ದೇಶನದಲ್ಲಿ ಮೂಡಿ ಬಂದ ಟ್ರಿಣ್ ಟ್ರಿಣ್ ಟ್ರಿಣ್ ಧಾರಾವಾಹಿ‌ಯ ಕಥೆಯೇ ಕುತೂಹಲಕಾರಿಯಾಗಿದೆ. ಆ1990 ರ ದಶಕದ ಸಮಯದಲ್ಲಿ ಲ್ಯಾಂಡ್ ಪೋನ್ ಬಳಕೆ ಕೂಡ ಬಹಳಷ್ಟು ಇತ್ತು. ಈ ಧಾರಾವಾಹಿಯಲ್ಲಿ ಕೆಲವು ಚಿಕ್ಕ ಮಕ್ಕಳು ತಮ್ಮ ಮನೆಗೆ ಹೊಸದಾಗಿ ಬಂದ ಲ್ಯಾಂಡ್ ಪೋನ್ ನಿಂದ ಗೊತ್ತಿಲ್ಲದ ನಂಬರ್ ಗಳನ್ನು ಡಯಲ್ ಮಾಡಿ ಸುಳ್ಳು ಹೇಳುವುದು, ಹೆದರಿಸುವುದು, ಆದರೆ ಇವರು ಡಯಲ್ ಮಾಡಿದ ನಂಬರ್ ಒಬ್ಬ ಅಪರಾಧಿಗೆ ಕನೆಕ್ಟ್ ಆದಾಗ ಇವರ ಮಾತು ಕೇಳಿ ಭಯ ಪಡುವುದು. ಪರಿಣಾಮ ಈ ಚಿಕ್ಕ ಮಕ್ಕಳ ಹುಡುಗಾಟಿಕೆ ತಮ್ಮಲ್ಲಿಯ ಒಬ್ಬ ಬಾಲಕನ ಸಾವಿಗೆ ಕಾರಣವಾಗುತ್ತದೆ. ಪೋಲೀಸರು ಚಿಕ್ಕ ಬಾಲಕನ ಸಾವಿನ ತನಿಖೆಯ ಜಾಡನ್ನು ಬೆನ್ನು ಹತ್ತಿದಾಗ ಮೊದಲೇ ಬೇಕಾಗಿದ್ದ ಪ್ರಮುಖ ಅಫರಾಧಿಯೇ ಈ ಬಾಲಕನ ಸಾವಿಗೆ ಕಾರಣ,

ಈ ರೀತಿಯಾಗಿ ಕಥೆಯಲ್ಲಿ ವಿಚಿತ್ರ ತಿರುವುಗಳನ್ನು ಕೊಡುವುದರಲ್ಲಿ ನಿರ್ದೇಶಕ ಫಣಿ ರಾಮಚಂದ್ರರಿಗೆ ಯಾರೂ ಸಾಟಿಯಿಲ್ಲ. ಇವರ ನಿರ್ದೇಶನದಲ್ಲಿ ಮೂಡಿ ಬಂದ ಮತ್ತೊಂದು ಜನಪ್ರಿಯ ಧಾರಾವಾಹಿ ದಂಡ ಪಿಂಡಗಳು. ಡಿಗ್ರಿ ಪಡೆದ ಮೂವರು ನಿರುದ್ಯೋಗಿಗಳ ಕಥೆ, ಕೆಲಸವಿಲ್ಲದೆ ಪಡುವ ಕಷ್ಟ, ಎದುರಿಸುವ ಸಮಸ್ಯೆಗಳನ್ನು ಹಾಸ್ಯದ ರೂಪದಲ್ಲಿ ತೋರಿಸಿದ್ದಾರೆ. ಈ ಧಾರಾವಾಹಿಯ ಟೈಟಲ್ ಸಾಂಗ್ ದಂಡ ಪಿಂಡಗಳು ಈಗಲೂ ಸೆನ್ಸೇಷನಲ್ ಟ್ರೆಂಡ್ ನ್ನು ಸೃಷ್ಟಿಸಿದೆ. ನಿರ್ದೇಶನದ ದುಡ್ಡು ದುಡ್ಡು ದುಡ್ಡು, ಮದುವೆ ಮದುವೆ ಮದುವೆ, ಪ್ರೇಮ ಪಿಶಾಚಿಗಳು ಧಾರಾವಾಹಿಗಳಲ್ಲಿ ರಸವತ್ತಾದ ಹಾಸ್ಯದ ಹೊಳೆಯನ್ನು ಹರಿಸಿದ್ದಾರೆ. ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ಸದಭಿರುಚಿ ಚಿತ್ರಗಳ ನಿರ್ದೇಶಕರಾದ ಇವರು 2008 ರಲ್ಲಿ ವಿಜಯ ರಾಘವೇಂದ್ರ ನಟಿಸಿದ ಗಣೇಶ ಮತ್ತೆ ಬಂದ ಎಂಬ ಚಿತ್ರವನ್ನು ನಿರ್ದೇಶಿಸಿದರು. ಆದರೆ ಈ ಚಿತ್ರವು ತೆರೆ ಕಂಡು ಹತ್ತು ವರ್ಷಗಳಿಗೂ ಅಧಿಕ ಕಾಲವಾಗಿದ್ದು ನಂತರ ಇವರ ನಿರ್ದೇಶನದಲ್ಲಿ ಯಾವ ಚಿತ್ರವೂ ಬಂದಿಲ್ಲ. ಯಾಕೆ? ಎನ್ನುವುದೇ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಕಾರಣ ಇವರು ಪುನಃ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಬೇಕೆಂಬುದು ಪ್ರತಿಯೊಬ್ಬ ಕನ್ನಡಿಗನ ಮತ್ತು ಪ್ರತಿಯೊಬ್ಬ ಅಭಿಮಾನಿಗಳ ನಿಮ್ಮ ನಿರ್ದೇಶನದಲ್ಲಿ ಈಗಿನ ಯುವ ಪೀಳಿಗೆಗೆ ಮೂಡಿ ಬಂದರೆ ತುಂಬಾ ಚೆನ್ನಾಗಿರುತ್ತದೆ

ನವೀನ ಹೆಚ್ ಎ
ಹನುಮನಹಳ್ಳಿ
ಅಂಕಣಕಾರರು ಲೇಖಕರು ಕೆಆರ್ ನಗರ

Tags: phani ramachandraphani ramachandra filmsphani ramachandra interviewphani ramachandra liferavichandran sri ramachandra songsri ramachandrasri ramachandra film songsri ramachandra film songssri ramachandra kannadasri ramachandra kannada film songssri ramachandra kannada movie songssri ramachandra kannada songsri ramachandra kannada songssri ramachandra movie all songsri ramachandra movie songsri ramachandra songs jukebox
Previous Post

ದೇವನಹಳ್ಳಿ ಭೂ ಸ್ವಾಧೀನ ರದ್ದು ನುಡಿದಂತೆ ನಡೆದ ಸಿಎಂ ಸಿದ್ದರಾಮಯ್ಯ

Next Post

ದೇವನಹಳ್ಳಿಯ ಭೂಸ್ವಾಧೀನ ಅಧಿಸೂಚನೆ ರದ್ದು – ಸಿಎಂ ಘೋಷಣೆ

Related Posts

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ
Top Story

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

by ಪ್ರತಿಧ್ವನಿ
April 30, 2026
0

ದಶಕದ ಹಿಂದೆ ರಾಜ್ಯವನ್ನೇ ಕಂಗೊಳಿಸಿದ್ದ ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಪ್ರಕರಣದ...

Read moreDetails
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
Next Post

ದೇವನಹಳ್ಳಿಯ ಭೂಸ್ವಾಧೀನ ಅಧಿಸೂಚನೆ ರದ್ದು – ಸಿಎಂ ಘೋಷಣೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada