ಹ್ಯಾಕರ್ಗಳ ವಂಚನೆಯಿಂದ ಸೌದಿಯ ರಿಯಾದ್ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಚಂದ್ರಶೇಖರ್ ಎನ್ನುವ ಅನಿವಾಸಿ ಭಾರತೀಯನಿಗೆ ಬಿಡುಗಡೆ ಭಾಗ್ಯ ಒದಗಿ ಬರುವ ಸಂಭವ ಶೀಘ್ರದಲ್ಲೇ ಇದೆ ಎನ್ನಲಾಗಿದೆ
ಈ ಸಂಬಂಧ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕೇಂದ್ರ ಸರಕಾರದ ಮೂಲಕ ಸೌದಿ ರಾಯಭಾರಿ ಕಚೇರಿಗೆ ವಿವರಣೆ ನೀಡಿ ಪತ್ರ ಬರೆದಿದ್ದು ಇದೀಗ ಪತ್ರಕ್ಕೆ ಸ್ಪಂದನೆ ದೊರಕಿದೆ ಎನ್ನಲಾಗಿದೆ.
ಈ ಸುದ್ದಿಯನ್ನು ಓದಿದ್ದೀರಾ ? ; ಯುವ ಕಾಂಗ್ರೆಸ್ ಅಧ್ಯಕ್ಷನ ನಿರ್ಮಾಣ ಹಂತದ ಮನೆಯನ್ನ ಕೆಡವಿದ ದುಷ್ಕರ್ಮಿಗಳು
ಸಂಸದ ನಳೀನ್ ಕುಮಾರ್ರ ದೆಹಲಿ ಕಚೇರಿಗೆ ಸೌದಿ ಅರೇಬಿಯಾದ ರಿಯಾದ್ ಜೈಲಿನಿಂದಲೇ ಇ-ಮೇಲ್ ಬಂದಿದ್ದು ಹಲವಾರು ವಿವರಣೆಗಳನ್ನು ಒದಗಿಸಿದೆ.
ಒಂದು ಕಡೆಯಿಂದ ಚಂದ್ರಶೇಖರ್ ಅವರ ಸ್ನೇಹಿತರು ಬಿಡುಗಡೆಗೆ ಸತತ ಪ್ರಯತ್ನ ಪಡುತ್ತಿದ್ದು ಇತ್ತ ಸಂಸದರ ಮೂಲಕ ಭಾರತ ಸರಕಾರವು ಶ್ರಮಿಸುತ್ತಿರುವುದರಿಂದ ಶೀಘ್ರ ಬಿಡುಗಡೆಯಾಗುವ ಆಶಾಬಾವನೆ ಇದೆ. ಈ ಸಂಬಂದ ನಿರಂತರ ಕಾಳಜಿ ವಹಿಸಿ ಸಾಮಾಜಿಕ ಜಾಲತಾಣದಲ್ಲಿ ,ಪೇಸ್ಬಿಕ್ ಖಾತೆಯಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.