ದಕ್ಷಿಣ ಕನ್ನಡ ( Dakshina kannada ) ಜಿಲ್ಲೆಯ ಪುತ್ತೂರಿನ ( Putturu ) ಯುವ ಕಾಂಗ್ರೆಸ್ (Youth Congress ) ಅಧ್ಯಕ್ಷನ President ) ನಿರ್ಮಾಣ ಹಂತದ ಮನೆಯನ್ನ ( house ) ದುಷ್ಕರ್ಮಿಗಳು ಕೆಡವಿದ ಘಟನೆ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಬಪ್ಪಳಿಗೆ ಎಂಬಲ್ಲಿ ನಡೆದಿದೆ
ಯುವ ಕಾಂಗ್ರೆಸ್ ನ ಪುತ್ತೂರು ನಗರ ಅಧ್ಯಕ್ಷ ಮೋನು ಬಪ್ಪಳಿಗೆ ಅವರ ನಿರ್ಮಾಣ ಹಂತದ ಮನೆಯನ್ನು ಕೆಡವಲಾಗಿದೆ.ನಿರ್ಮಾಣ ಹಂತದಲ್ಲಿರುವ ಮನೆಯ ಆಯ ಕಲ್ಲುಗಳನ್ನ ಕಿತ್ತು ಬಿಸಾಕಿದ ದುಷ್ಕರ್ಮಿಗಳು,ನಿನ್ನೆ ಮನೆಯ ಕೆಲಸ ಕಾರ್ಯಗಳ ಬಗ್ಗೆ ಕಾಂಟ್ರ್ಯಾಕ್ಟ್ ಅವರಲ್ಲಿ ವಿಚಾರಿಸಲು ಬಂದಿದ್ದರು.ದುಷ್ಕರ್ಮಿಗಳು ಕಲ್ಲುಗಳನ್ನ ಕಿತ್ತಾಕಿರುವ ಸಾಧ್ಯತೆ ಇದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಸುದ್ದಿಯನ್ನು ಓದಿದ್ದೀರಾ ? : ಮೋದಿ ಪದವಿ ಅವಹೇಳನ | ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ತಡೆ ನೀಡಲು ʼಸುಪ್ರೀಂʼ ನಕಾರ
ಇದೀಗ ಈ ಘಟನೆಯ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗ್ತಾ ಇದ್ದು, ಸಂತ್ರಸ್ತ ಮೋನು ಬಪ್ಪಳಿಗೆ ಅವರ ಬಳಿ ಹೆಚ್ಚಿನ ಮಾಹಿತಿ ಪಡೆದಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.