• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, September 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಹರಿಯಾಣ | ನುಹ್‌ ಗಲಭೆ ಶಮನದಲ್ಲಿ ಜೆಸಿಬಿ ದಾಳಿಗೆ ಉರುಳಿದ 20ಕ್ಕೂ ಹೆಚ್ಚು ಔಷಧ ಮಳಿಗೆಗಳು

ಪ್ರತಿಧ್ವನಿ by ಪ್ರತಿಧ್ವನಿ
August 5, 2023
in ಇದೀಗ, ದೇಶ
0
ನುಹ್‌ ಗಲಭೆ
Share on WhatsAppShare on FacebookShare on Telegram

ಹರಿಯಾಣ ರಾಜ್ಯದಲ್ಲಿ ಕೋಮು ದ್ವೇಷದಿಂದ ಉಂಟಾಗಿರುವ ನುಹ್‌ ಗಲಭೆ ಶಮನಕ್ಕೆ ಜೆಸಿಬಿಗಳ ಅಸ್ತ್ರವ್ನು ನುಹ್‌ ಜಿಲ್ಲಾಡಳಿತ ಪ್ರಯೋಗಿಸಿದೆ. ಈಗ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಜೆಸಿಬಿ ದಾಳಿ ಶನಿವಾರ (ಆಗಸ್ಟ್‌ 5) ಮೂರನೇ ದಿನಕ್ಕೆ ಕಾಲಿಟ್ಟಿದೆ.

ADVERTISEMENT

ಜೆಸಿಬಿಗಳ ಕಾರ್ಯಾಚರಣೆಯಲ್ಲಿ ನುಹ್‌ ಜಿಲ್ಲೆಯಲ್ಲಿ ಗುರುತಿಸಿರುವ 60 ಹೆಚ್ಚು ಮಳಿಗೆಗಳು ಧರೆಗೆ ಉರುಳಿವೆ. ಇವುಗಳಲ್ಲಿ 20ಕ್ಕೂ ಹೆಚ್ಚು ಔಷಧ ಮಳಿಗೆಗಳಾಗಿವೆ.

ಜೆಸಿಬಿ ತೆರವು ಕಾರ್ಯಾಚರಣೆ ಗುರುವಾರದಿಂದ (ಆಗಸ್ಟ್‌ 3) ಆರಂಭವಾಗಿದೆ. ಶನಿವಾರವೂ ಕಾರ್ಯಾಚರಣೆ ಮುಂದುವರಿದಿದೆ. ಇದು ನುಹ್‌ ಗಲಭೆ ಸ್ಥಳದಿಂದ 20 ಕಿ.ಮೀ ದೂರದಲ್ಲಿರುವ ವಲಸಿಗರು ಹೆಚ್ಚಿರುವ ತವರು ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.

ಗುರುವಾರ ಸಂಜೆಯಿಂದ ಆರಂಭವಾಗಿರುವ ಈ ಕಾರ್ಯಾಚರಣೆಯು ಮೂರನೇ ದಿನವಾದ ಶನಿವಾರವೂ ಮುಂದುವರಿಯಿತು. ಗಲಭೆ ಪೀಡಿತ ನೂಕ್ನಿಂದ 20 ಕಿ.ಮೀ. ದೂರದಲ್ಲಿರುವ ವಲಸಿಗರೇ ಹೆಚ್ಚು ಇರುವ ತವಡು ಪ್ರದೇಶದಲ್ಲಿ ಇದು ನಡೆದಿದೆ.

ನುಹ್‌ನಲ್ಲಿರುವ ಶಹೀದ್ ಹಸನ್ ಖಾನ್ ಮೆವಾತಿ ಸರ್ಕಾರಿ ವೈದ್ಯಕೀಯ ಕಾಲೇಜು ಆವರಣದ ಎದುರಿನ ಪ್ರದೇಶದಲ್ಲಿ ನಡೆದ ತೆರವು ಕಾರ್ಯಚರಣೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನೆಲಸಮಗೊಂಡ ಮಳಿಗೆಗಳಲ್ಲಿ ಔಷಧ ಅಂಗಡಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಇವುಗಳು ಅಲ್ಲಿ ಬಹಳ ವರ್ಷಗಳಿಂದ ಇದ್ದವು ಎನ್ನಲಾಗಿದೆ. ಸುತ್ತಮುತ್ತಲಿನ ಇತರ ಪ್ರದೇಶಗಳಲ್ಲೂ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ಮುಂದುವರಿಸಿದೆ.

ನುಹ್‌ ಗಲಭೆ ಹಿನ್ನೆಲೆ ಜೆಸಿಬಿ ತೆರವು ಕಾರ್ಯಾಚರಣೆಯಲ್ಲಿ ಸುಮಾರು 50ರಿಂದ 60 ಮಳಿಗೆಗಳನ್ನು ನೆಲಸಮಗೊಳಿಸಲಾಗಿದೆ. ಬಂಧನ ಭೀತಿಯಿಂದ ಹಲವರು ಊರು ತೊರೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಇದ್ದ ಈ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಆದೇಶಿಸಿತ್ತು. ಸ್ಥಳೀಯ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅಫ್ತಾಬ್ ಅಹ್ಮದ್ ಅವರು ಜಿಲ್ಲಾಡಳಿತ ಕ್ರಮವನ್ನು ಖಂಡಿಸಿದ್ದಾರೆ.

#नूंह में ये महज ग़रीबों के मकान ही नहीं ढहाए जा रहे बल्कि आम जन के विश्वास, भरोसे को गिराया जा रहा है। ग्रामीणों ने बताया कि आज महीने पुरानी बैक डेट में नोटिस देकर आज ही मकान दुकान गिरा दिये।
सरकार प्रशासनिक विफलताओं को छुपाने के लिए गलत कारवाई कर रही है, ये दमनकारी नीति है। pic.twitter.com/U7DOLisTUN

— Ch Aftab Ahmed MLA (@Aftabnuh) August 4, 2023

“ತವಡು ಪ್ರದೇಶದಲ್ಲಿ ನಡೆದಿರುವ ತೆರವು ಕಾರ್ಯಾಚರಣೆಯಲ್ಲಿ ಕಟ್ಟಡಗಳು ಮಾತ್ರ ನೆಲಸಮಗೊಂಡಿಲ್ಲ. ಬದಲಿಗೆ ಹಲವು ಕುಟುಂಬಗಳ ಬದುಕೇ ಬೀದಿಗೆ ಬಂದಂತಾಗಿದೆ. ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಈ ಕಾರ್ಯಾಚರಣೆ ನಡೆಸುವ ಕೆಲವೇ ನಿಮಿಷಗಳ ಮೊದಲು ನೀಡಿರುವ ನೋಟಿಸ್ನಲ್ಲಿ ಹಿಂದಿನ ತಿಂಗಳ ದಿನಾಂಕವನ್ನು ನಮೂದಿಸಲಾಗಿದೆ. ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಜಿಲ್ಲಾಡಳಿತವು ತಪ್ಪು ಹೆಜ್ಜೆಗಳನ್ನಿಡುತ್ತಿದೆ. ಇದು ಜನವಿರೋಧಿ ನೀತಿಯಾಗಿದೆ” ಎಂದು ವಿಡಿಯೊ ಸಹಿತ ಅಫ್ತಾಬ್ ಟ್ವೀಟ್ ಮಾಡಿದ್ದಾರೆ.

ನುಹ್ ಗಲಭೆ ಸಂಬಂಧ 102 ಎಫ್ಐಆರ್

“ನುಹ್‌ ಗಲಭೆಯ ಸಂಬಂಧ ಈವರೆಗೂ 202 ಜನರನ್ನು ಬಂಧಿಸಲಾಗಿದೆ. ಕೋಮು ಗಲಭೆ ಪ್ರಕರಣದಲ್ಲಿ ಮುಂಜಾಗ್ರತಾ ಕ್ರಮವಾಗಿ 80 ಜನರನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 102 ಎಫ್ಐಆರ್ ದಾಖಲಾಗಿದೆ” ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸುಮ್ಮನಿರಿ, ಇಲ್ಲವೇ ಇ.ಡಿ ಎದುರಿಸಿ: ಮೀನಾಕ್ಷಿ ಲೇಖಿ ವಿವಾದಾತ್ಮಕ ಹೇಳಿಕೆ

“ನುಹ್ ಗಲಭೆ ನಡೆಯುವ ಹಿಂದೆ ದೊಡ್ಡ ಯೋಜನೆಯೇ ಇದೆ. ಆದರೆ ಪ್ರಕರಣದ ಹಿಂದಿರುವ ವ್ಯಕ್ತಿಯ ಪತ್ತೆ ಈವರೆಗೂ ಆಗಿಲ್ಲ” ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

Tags: Bulldozer actionHaryanaJCB AttackMedical StoresNuh Riotsನುಹ್‌ ಗಲಭೆಬುಲ್ಡೋಜರ್‌ ಕ್ರಮಹರಿಯಾಣ
Previous Post

ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಸಹೋದರಿಯರ ಭೇಟಿ ; ವಿಡಿಯೊ ವೈರಲ್

Next Post

ಗೃಹಜ್ಯೋತಿ ಯೋಜನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Related Posts

ರೋಜ್‌ಗಾರ್ ಮೇಳ : ಪ್ರಧಾನಿ ಮೋದಿಯಿಂದ ಇಂದು 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ
Top Story

ರೋಜ್‌ಗಾರ್ ಮೇಳ : ಪ್ರಧಾನಿ ಮೋದಿಯಿಂದ ಇಂದು 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ

by ಪ್ರತಿಧ್ವನಿ
September 19, 2026
0

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ಹೊಸದಾಗಿ ಆಯ್ಕೆಯಾದ 51,000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನಡೆಯುತ್ತಿರುವ 20ನೇ 'ರೋಜ್‌ಗಾರ್...

Read moreDetails
6 ತಿಂಗಳ ಹಸುಗೂಸಿನ ಮೇಲೆ `ಪಿಟ್ ಬುಲ್’ ನಾಯಿಯ ಭೀಕರ ದಾಳಿ : ಬೆಚ್ಚಿಬೀಳಿಸುವ ದೃಶ್ಯ ವೈರಲ್.!

6 ತಿಂಗಳ ಹಸುಗೂಸಿನ ಮೇಲೆ `ಪಿಟ್ ಬುಲ್’ ನಾಯಿಯ ಭೀಕರ ದಾಳಿ : ಬೆಚ್ಚಿಬೀಳಿಸುವ ದೃಶ್ಯ ವೈರಲ್.!

September 19, 2026
2027ರಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಮೊದಲ ಡೆಂಗ್ಯೂ ಲಸಿಕೆ : ಏನಿದರ ವಿಶೇಷ.?

2027ರಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಮೊದಲ ಡೆಂಗ್ಯೂ ಲಸಿಕೆ : ಏನಿದರ ವಿಶೇಷ.?

September 19, 2026
ಶಾರ್ಜಾದ ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್‌ ಪರಿಶೀಲನೆ..! ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ

ಶಾರ್ಜಾದ ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್‌ ಪರಿಶೀಲನೆ..! ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ

September 17, 2026
ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

September 17, 2026
Next Post
ಗೃಹಜ್ಯೋತಿ ಯೋಜನೆ

ಗೃಹಜ್ಯೋತಿ ಯೋಜನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada