• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, September 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

2027ರಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಮೊದಲ ಡೆಂಗ್ಯೂ ಲಸಿಕೆ : ಏನಿದರ ವಿಶೇಷ.?

ಪ್ರತಿಧ್ವನಿ by ಪ್ರತಿಧ್ವನಿ
September 19, 2026
in Top Story, ದೇಶ
0
2027ರಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಮೊದಲ ಡೆಂಗ್ಯೂ ಲಸಿಕೆ : ಏನಿದರ ವಿಶೇಷ.?
Share on WhatsAppShare on FacebookShare on Telegram

ನವದೆಹಲಿ : ಭಾರತದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸದಾ ದೊಡ್ಡ ಸವಾಲಾಗಿರುವ ಡೆಂಗ್ಯೂ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯೊಂದು ಇಡಲಾಗಿದ್ದು, ದೇಶದ ಮೊದಲ ಡೆಂಗ್ಯೂ ಲಸಿಕೆಯು 2027ರ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

ADVERTISEMENT
Minister KrishnaByre Gowda : “ಯಾಕೆ? ಯಾಕೆ?” ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಕ್ಲಾಸ್! #MetroWork

ಹೌದು, ಜಪಾನ್ ಮೂಲದ ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆ ಟಕೆಡಾ ಅಭಿವೃದ್ಧಿಪಡಿಸಿರುವ ‘ಕ್ಯೂಡೆಂಗಾ’ (QDENGA) ಲಸಿಕೆಗೆ ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಅಧಿಕೃತ ಮಾರುಕಟ್ಟೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಭಾರತದ ಖಾಸಗಿ ಆರೋಗ್ಯ ಮಾರುಕಟ್ಟೆಯಲ್ಲಿ ವಿತರಿಸಲು ಮತ್ತು ಪ್ರಚಾರ ಮಾಡಲು ಟಕೆಡಾ ಸಂಸ್ಥೆಯು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಜೊತೆ ವಿಶೇಷ ಒಪ್ಪಂದ ಮಾಡಿಕೊಂಡಿದೆ.

D. K. Shivakumar : ಆರ್‌ ಅಶೋಕ್‌ ಹೇಳಿಕೆಗೆ ಸಿಎಂ ಡಿಕೆಶಿ ಸಖತ್‌ ಟಾಂಗ್‌..! #rashoka #dkshivakumar

ಭಾರತದಲ್ಲಿ ಸಿಡಿಎಸ್‌ಸಿಒ ಅನುಮೋದನೆ ಪಡೆದ ಪ್ರಪ್ರಥಮ ಡೆಂಗ್ಯೂ ಲಸಿಕೆ ಇದಾಗಿದ್ದು, 4ರಿಂದ 60 ವರ್ಷ ವಯಸ್ಸಿನ ಮಕ್ಕಳು ಹಾಗೂ ವಯಸ್ಕರಿಗೆ ನೀಡಲು ಅನುಮತಿ ಸಿಕ್ಕಿದೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಸುಮಾರು 11 ಪಟ್ಟು ಹೆಚ್ಚಾಗಿದ್ದು, ಜಾಗತಿಕ ಡೆಂಗ್ಯೂ ಹೊರೆಯಲ್ಲಿ ಭಾರತವೇ ಶೇಕಡಾ ಮೂರನೇ ಒಂದು ಭಾಗವನ್ನು ಹೊತ್ತುಕೊಂಡಿದೆ. ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುವ ಈ ವೈರಲ್ ಸೋಂಕು ತೀವ್ರ ಜ್ವರ, ತಲೆನೋವು, ಕೀಲು ನೋವು ಹಾಗೂ ಕೆಲವೊಮ್ಮೆ ಪ್ರಾಣಾಪಾಯ ತಂದೊಡ್ಡುವ ಸ್ಥಿತಿಗೆ ಕಾರಣವಾಗುವುದರಿಂದ, ಈ ಲಸಿಕೆಯ ಆಗಮನವು ದೇಶದ ಆರೋಗ್ಯ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.

‘ಟಿಎಕೆ-003’ ಎಂದೂ ಕರೆಯಲ್ಪಡುವ ಕ್ಯೂಡೆಂಗಾ ಲಸಿಕೆಯು ಡೆಂಗ್ಯೂ ವೈರಸ್‌ನ ನಾಲ್ಕೂ ರೂಪಾಂತರಗಳ (DENV-1, DENV-2, DENV-3, DENV-4) ವಿರುದ್ಧ ರಕ್ಷಣೆ ಒದಗಿಸುವ ಸಾಮರ್ಥ್ಯ ಹೊಂದಿದೆ. ಮೂರು ತಿಂಗಳ ಅಂತರದಲ್ಲಿ ಈ ಲಸಿಕೆಯ ಒಟ್ಟು ಎರಡು ಡೋಸ್‌ಗಳನ್ನು ನೀಡಲಾಗುತ್ತದೆ. ಈ ಲಸಿಕೆಯ ಪ್ರಮುಖ ವೈಶಿಷ್ಟ್ಯವೆಂದರೆ, ವ್ಯಕ್ತಿಗೆ ಹಿಂದೆ ಡೆಂಗ್ಯೂ ಸೋಂಕು ತಗುಲಿದ್ದರೂ ಅಥವಾ ಇಲ್ಲದಿದ್ದರೂ ಇದನ್ನು ಯಾವುದೇ ಮುಂಚಿತ ಪರೀಕ್ಷೆಗಳಿಲ್ಲದೆ ಸುರಕ್ಷಿತವಾಗಿ ನೀಡಬಹುದಾಗಿದೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಬಳಕೆಗೆ ಅನುಮೋದನೆ ಪಡೆದಿರುವ ಈ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯೂ (WHO) ಮಾನ್ಯತೆ ನೀಡಿದೆ.

DK Shivakumar : ಮಂಗಳೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್‌ ಅಬ್ಬರದ ಮಾತು..! #mangalore #congress

ಈ ಲಸಿಕೆಯು ಲಭ್ಯವಾಗುವುದರಿಂದ ಭಾರತದಲ್ಲಿ ಡೆಂಗ್ಯೂ ತಡೆಗಟ್ಟುವಿಕೆಗೆ ಬಲವಾದ ರಕ್ಷಾಕವಚ ಸಿಕ್ಕಂತಾಗಲಿದೆ. ಆದಾಗ್ಯೂ, ಲಸಿಕೆಯು ಕೇವಲ ಒಂದು ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮವಾಗಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳ ನಾಶ, ಸ್ವಚ್ಛತೆ, ಸಕಾಲಿಕ ತಪಾಸಣೆ ಮತ್ತು ಚಿಕಿತ್ಸೆಯಂತಹ ಸಾಂಪ್ರದಾಯಿಕ ಆರೋಗ್ಯ ಕ್ರಮಗಳನ್ನು ಮುಂದುವರಿಸುವುದು ಅಷ್ಟೇ ಅನಿವಾರ್ಯವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಈ ಲಸಿಕೆಯು ಖಾಸಗಿ ಆಸ್ಪತ್ರೆಗಳು ಹಾಗೂ ಚಿಕಿತ್ಸಾಲಯಗಳಲ್ಲಿ ಲಭ್ಯವಾಗಲಿದೆ.

Tags: approval in IndiaArrive in 2027Central Drugs Standard Control OrganisationDengue VaccineIndiapublic healthQDENGA
Previous Post

ಮಂಗಳೂರು ಬಂದರಿಗೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ಮೀನುಗಾರರೊಂದಿಗೆ ಸಂವಾದ

Next Post

6 ತಿಂಗಳ ಹಸುಗೂಸಿನ ಮೇಲೆ `ಪಿಟ್ ಬುಲ್’ ನಾಯಿಯ ಭೀಕರ ದಾಳಿ : ಬೆಚ್ಚಿಬೀಳಿಸುವ ದೃಶ್ಯ ವೈರಲ್.!

Related Posts

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ತೀರ್ಥಹಳ್ಳಿಯಲ್ಲಿ ರೈತರು, ತಜ್ಞರು, ಜನಪ್ರತಿನಿಧಿಗಳ ಒಕ್ಕೊರಲ ಅಭಿಪ್ರಾಯ
Top Story

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ತೀರ್ಥಹಳ್ಳಿಯಲ್ಲಿ ರೈತರು, ತಜ್ಞರು, ಜನಪ್ರತಿನಿಧಿಗಳ ಒಕ್ಕೊರಲ ಅಭಿಪ್ರಾಯ

by ಪ್ರತಿಧ್ವನಿ
September 19, 2026
0

ಕಸ್ತೂರಿ ರಂಗನ್ ವರದಿ ಜಾರಿ ವಿಚಾರವಾಗಿ ಮಲೆನಾಡಿನ ಜನರ ಆತಂಕ ಹಾಗೂ ಅಭಿಪ್ರಾಯಗಳನ್ನು ಆಲಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಶನಿವಾರ ನಡೆದ ಸಾರ್ವಜನಿಕ...

Read moreDetails
ಮಿನಿಮಮ್ ಬ್ಯಾಲೆನ್ಸ್ ಟೆನ್ಷನ್ ಬೇಡ; ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯವಿಲ್ಲ

ಮಿನಿಮಮ್ ಬ್ಯಾಲೆನ್ಸ್ ಟೆನ್ಷನ್ ಬೇಡ; ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯವಿಲ್ಲ

September 19, 2026
ಪ್ರಧಾನಿ ಮೋದಿ ವಿರುದ್ಧ ಬಿ.ಕೆ. ಹರಿಪ್ರಸಾದ್ ಹೇಳಿಕೆ; ಟ್ರಿಬಲ್ ತಲಾಖ್ ಕುರಿತು ವಿವಾದಾತ್ಮಕ ಟೀಕೆ

ಪ್ರಧಾನಿ ಮೋದಿ ವಿರುದ್ಧ ಬಿ.ಕೆ. ಹರಿಪ್ರಸಾದ್ ಹೇಳಿಕೆ; ಟ್ರಿಬಲ್ ತಲಾಖ್ ಕುರಿತು ವಿವಾದಾತ್ಮಕ ಟೀಕೆ

September 19, 2026
ಬೆಂಗಳೂರಿನಲ್ಲಿ ಮನೆ ಕಟ್ಟುವವರಿಗೆ ಗುಡ್‌ನ್ಯೂಸ್ ಇಲ್ಲಿದೆ

ಬೆಂಗಳೂರಿನಲ್ಲಿ ಮನೆ ಕಟ್ಟುವವರಿಗೆ ಗುಡ್‌ನ್ಯೂಸ್ ಇಲ್ಲಿದೆ

September 19, 2026
ಅರಣ್ಯ ಇಲಾಖೆಯವರು ರೈತರಿಗೆ ಹೊಸ ನೋಟಿಸ್ ನೀಡಬಾರದು : ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಅರಣ್ಯ ಇಲಾಖೆಯವರು ರೈತರಿಗೆ ಹೊಸ ನೋಟಿಸ್ ನೀಡಬಾರದು : ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

September 19, 2026
Next Post
6 ತಿಂಗಳ ಹಸುಗೂಸಿನ ಮೇಲೆ `ಪಿಟ್ ಬುಲ್’ ನಾಯಿಯ ಭೀಕರ ದಾಳಿ : ಬೆಚ್ಚಿಬೀಳಿಸುವ ದೃಶ್ಯ ವೈರಲ್.!

6 ತಿಂಗಳ ಹಸುಗೂಸಿನ ಮೇಲೆ `ಪಿಟ್ ಬುಲ್' ನಾಯಿಯ ಭೀಕರ ದಾಳಿ : ಬೆಚ್ಚಿಬೀಳಿಸುವ ದೃಶ್ಯ ವೈರಲ್.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada