
ಬೀದರ್: ತಾಲ್ಲೂಕಿನ ಬೆಳ್ಳೂರು ಸಮೀಪ ಕೈಗೊಂಡಿದ್ದ ಕೆಂಪು ಕಲ್ಲು ಗಣಿಗಾರಿಕೆಯನ್ನು ಗಣಿ ಇಲಾಖೆ ತಡೆದಿದೆ.ಗಣಿಗಾರಿಕೆಗೆ ಬಳಸುತ್ತಿದ್ದ ಟಿಲ್ಲರ್ ಮಶೀನ್ಗಳನ್ನು ಜಪ್ತಿ ಮಾಡಿ, ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೀದರ್: ಜಿಂಕೆ, ಕೃಷ್ಣಮೃಗ ಆವಾಸ ಸ್ಥಾನದಲ್ಲಿ ಗಣಿಗಾರಿಕೆ’ಗಣಿ ಇಲಾಖೆಯ ಅಧಿಕಾರಿಗಳು ಗಣಿಗಾರಿಕೆ ನಿಲ್ಲಿಸಿದ್ದಾರೆ.

‘ಜಿಂಕೆ, ಕೃಷ್ಣಮೃಗ ಆವಾಸ ಸ್ಥಾನದಲ್ಲಿ ಗಣಿಗಾರಿಕೆ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಬುಧವಾರ (ಸೆ. 25) ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆ ಕ್ರಮ ಕೈಗೊಂಡಿವೆ.
ಬೆಳ್ಳೂರು ಗ್ರಾಮವು ಚಿಟ್ಟಾ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯ ಜಿಂಕೆ, ಕೃಷ್ಣಮೃಗಗಳಿವೆ. ಕೆಂಪು ಕಲ್ಲು ಗಣಿಗಾರಿಕೆಯಿಂದ ಅವುಗಳ ಚಲನವಲನದ ಮೇಲೆ ಪರಿಣಾಮ ಬೀರಿತ್ತು. ಆವಾಸಸ್ಥಾನ ನಾಶವಾಗುವ ಆತಂಕ ಮೂಡಿತ್ತು. ಇದಕ್ಕೆ ಪರಿಸರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು.