ಸ್ಥಳೀಯ ರೈತರನ್ನ ( Farmers ) ಕಡೆಗಣಿಸಿ, ತಮಿಳುನಾಡು ( Tamil Nadu ) ರೈತರ ಹಿತ ಕಾಯಲು ಹೊರಟ ರಾಜ್ಯ ಸರ್ಕಾರ ( State Government ) ಹೊರಟಿದೆ ಎಂದು ಅನ್ನದಾತರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ನಡೆ ವಿರುದ್ಧ ಮಂಡ್ಯ ರೈತರ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟಿಸಿದ್ದಾರೆ ( Protest ) ,. ಏಕಾಏಕಿ ನಾಲೆಗಳಿಗೆ ಬಿಡುತ್ತಿದ್ದ ನೀರು ನಿಲ್ಲಿಸಲಾಗಿದ್ದು, ಕನ್ನಂಬಾಡಿ ( Kannnambabi ) ಭರ್ತಿಗೂ ಮುನ್ನವೇ ತಮಿಳುನಾಡಿಗೆ ಕಾವೇರಿ ( kaveri river ) ನೀರು ಬಿಡುಗಡೆ. ಮಾಡಲಾಗಿದೆ ಎಂದು ರೈತ ವರ್ಗ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಅಂಕಣವನ್ನೂ ಓದಿ ; ಹಿರೋಷಿಮಾ-ನಾಗಸಾಕಿ-ಕಲಿಯಬೇಕಾದ ನೈತಿಕ ಪಾಠಗಳು – ಭಾಗ 2
ಇತ್ತ ಮಳೆಯೂ ಇಲ್ಲ, ಡ್ಯಾಂ ಕೂಡ ಭರ್ತಿಯಾಗಿಲ್ಲ, ರೈತರು ಬೆಳೆದ ಬೆಳೆಗಳು ಒಣಗಲು ಪ್ರಾರಂಭವಾಗಿದೆ. ಹೊಸ ಬೆಳೆ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಮಾಹಿತಿ ನೀಡಿಲ್ಲ, ಇತ್ತ ಬೆಳೆದು ನಿಂತ ಬೆಳೆಯೂ ಕೈ ಸೇರ್ತಿಲ್ಲ, ಹೊಸ ಬೆಳೆ ಹಾಕಲಾಗದೆ ರೈತಾಪಿ ವರ್ಗ ಆತಂಕದಲ್ಲಿದೆ, ಹೀಗಾಗಿ ಇದೀಗ ರಾಜ್ಯ ಸರ್ಕಾರದ ವಿರುದ್ಧ ದಿಢೀರ್ ರಸ್ತೆಗಿಳಿದ ಅನ್ನದಾತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದು ಮಂಡ್ಯದ ಸಂಜಯ ವೃತ್ತದಲ್ಲಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದ್ದು, ಡ್ಯಾಂನಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ 5,308 ಕ್ಯೂಸೆಕ್ ನೀರನ್ನ ಅಧಿಕಾರಿಗಳು ಬಿಟ್ಟಿದ್ದಾರೆ. ನಾಲೆಗಳಿಗೆ ಬಿಡುತ್ತಿದ್ದ ನೀರು ಸ್ಥಗಿತವಾದ ಹಿನ್ನೆಲೆ, ಇದೀಗ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತತ್ತಿದ್ದು, ಒಂದು ವೇಳೆ ನಮ್ಮ ಬೆಳೆಗಳಿಗೆ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ರೈತರು ಆಕ್ರೋಶವನ್ನ ವ್ಯಕ್ತ ಪಡಿಸುತ್ತಿದ್ದಾರೆ