![](https://pratidhvani.com/wp-content/uploads/2024/03/chaluvarayaswamy-1685172436-1024x576.jpg)
ಮಂಡ್ಯ ‘ಲೋಕ’ ಅಖಾಡದಲ್ಲಿ ಕುಮಾರಸ್ವಾಮಿ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸಕ್ಕತ್ತಾಗಿಯೇ ಕೌಂಟರ್ ಕೊಟ್ಟಿದ್ದಾರೆ. ಈ ನಡುವೆ
ಚಲುವರಾಯಸ್ವಾಮಿ ವರಾಜೀನಾಮೆ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಸಚಿವ CRS ಮಾತಾಡಿದ್ದಾರೆ.
![](https://pratidhvani.com/wp-content/uploads/2024/04/hdkumaraswamy1-1703161767.jpg)
ಮಂಡ್ಯದಲ್ಲಿ ಮಾತಾಡಿದ ಅವ್ರು,ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು.ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ.
ಕಾಂಗ್ರೆಸ್ ಪಕ್ಷ ರಾಜಿನಾಮೆ ಕೇಳಿದ್ರೆ ಕೊಡ್ತೀನಿ.ಖಂಡಿತ ಈ ಸೋಲಿನಿಂದ ನನಗೆ ಮುಜುಗರ ಆಗಿದೆ.ನಾನು ಸದಾ ಇಲ್ಲೇ ಇರ್ತಾ ಇದ್ದೆ, ಹೀಗಿರುವಾಗ ಮುಜುಗರ ಆಗುತ್ತೆ. ನನ್ನ ವಿಡಿಯೋವನ್ನ ಜೆಡಿಎಸ್ ಕಾರ್ಯಕರ್ತರು ವೈರಲ್ ಮಾಡ್ತಾ ಇದ್ದಾರೆ.ರಾಜೀನಾಮೆ ಕೇಳೋದೇ ಜೆಡಿಎಸ್ ನವರ ಕೆಲಸ, ಬೇರೆ ಏನು ಕೆಲಸ ಇದೆ.ಜೆಡಿಎಸ್ ಕಾರ್ಯಕರ್ತರಿಗೆ ಒಳ್ಳೆಯದು ಆಗಲಿ ಅಂತ ಹೇಳಿದ್ರು.
ಹೆಚ್ಡಿಕೆ ಗೆದ್ದರೇ ಕಾವೇರಿ ಸಮಸ್ಯೆ ಬಗೆಹರಿಸುತ್ತೇವೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ CRS,
ಕುಮಾರಸ್ವಾಮಿ ಇವಾಗ ಕಾವೇರಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿ.ಆ ಕುರಿತು ನಾನು ಇವಾಗ ಮಾತನಾಡಲ್ಲ, ಗೆದ್ದು ಎರಡು ದಿವಸ ಆಗಿದೆ. ಮುಂದೆ ಅವ್ರು ಒಳ್ಳೆ ಕೆಲಸ ಮಾಡಲಿ ಅಂತ ಹೇಳಿದ್ರು.
ಹಿಂದೆ ನಾನು ಲೀಡ್ ಬಗ್ಗೆ ಮಾತನಾಡಲ್ಲ, ನಮಗೆ ಅಭ್ಯಾಸ ಇಲ್ಲ ಎಂದಿದ್ದೆ.ಜೆಡಿಎಸ್ ನವರು ಲೀಡ್ ಬಗ್ಗೆ ಹೇಳಿದ್ರು, ಅದರಂತೆ ಲೀಡ್ ಕೂಡ ಕೊಟ್ಟಿದ್ದಾರೆ.
ಜೆಡಿಎಸ್ ನವರು ಪಿಎಚ್ ಡಿ ಮಾಡಿದ್ದಾರೆ, ನಾವು ಪಿಎಚ್.ಡಿ ಮಾಡಿಲ್ಲ.ನಾವೂ ಇನ್ನೂ ಪ್ರೈಮರಿ ಸ್ಕೂಲ್ ನಲ್ಲಿದ್ದೇವೆ.
ಜನರ ಮೈಂಡ್ ಅನ್ನು ಜೆಡಿಎಸ್ ನವರು ರೀಡ್ ಮಾಡಿದ್ದಾರೆ.
ನಮ್ಮ ಕೈಯಲ್ಲಿ ಜನರನ್ನ ರೀಡ್ ಮಾಡೋಕೆ ಆಗಿಲ್ಲ ಅಂತ CRS ಟಾಂಗ್ ಕೊಟ್ಟರು.