• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಲಿವ್ ಇನ್ ಜೋಡಿಗೆ ರಕ್ಷಣೆ ನೀಡಲು ಪಂಜಾಬ್ ಹೈಕೋರ್ಟ್ ನಿರಾಕರಣೆ: ಸಾಮಾಜಿಕ ನೈತಿಕತೆ ಕಾರಣ ನೀಡಿದ ಕೋರ್ಟ್!

ಫಾತಿಮಾ by ಫಾತಿಮಾ
May 20, 2021
in ದೇಶ
0
ಲಿವ್ ಇನ್ ಜೋಡಿಗೆ ರಕ್ಷಣೆ ನೀಡಲು ಪಂಜಾಬ್ ಹೈಕೋರ್ಟ್ ನಿರಾಕರಣೆ: ಸಾಮಾಜಿಕ ನೈತಿಕತೆ ಕಾರಣ ನೀಡಿದ ಕೋರ್ಟ್!
Share on WhatsAppShare on FacebookShare on Telegram

ADVERTISEMENT

ಲಿವ್ಇನ್ ಸಂಬಂಧಗಳು ಸಾಮಾಜಿಕವಾಗಿ ಮತ್ತು ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತಮ್ಮ ಜೀವ ರಕ್ಷಣೆ ಕೋರಿದ ದಂಪತಿಗಳಿಗೆ ರಕ್ಷಣೆ ನೀಡಲು ನಿರಾಕರಿಸಿ ತೀರ್ಪು ನೀಡಿದೆ.

ಉತ್ತರ ಪ್ರದೇಶದ 19 ವರ್ಷದ ಮಹಿಳೆ ಮತ್ತು ಪಂಜಾಬ್‌ನ 22 ವರ್ಷದ ಪುರುಷ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮಹಿಳೆಯ ಕುಟುಂಬದಿಂದ ತಮ್ಮ ಜೀವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಪಂಜಾಬ್ ಪೊಲೀಸರಿಗೆ ನಿರ್ದೇಶನ ಕೋರಬೇಕೆಂದು ಹೈಕೋರ್ಟ್‌‌ನ ಮೊರೆ ಹೋಗಿದ್ದರು.

ನ್ಯಾಯಮೂರ್ತಿ ಹೆಚ್.ಎಸ್. ಮದನ್ ಅವರ ನೇತೃತ್ವದ ನ್ಯಾಯಪೀಠ, ಈ ವಿಷಯವನ್ನು ಆಲಿಸಿದ ನಂತರ “ ಪ್ರಸ್ತುತ ಅರ್ಜಿ ಸಲ್ಲಿಸಿದ ಅರ್ಜಿದಾರರು ತಮ್ಮ ಲಿವ್ಇನ್ ಸಂಬಂಧದ ಬಗ್ಗೆ ಅನುಮೋದನೆಯ ಮುದ್ರೆಯನ್ನು ಕೋರಿದ್ದಾರೆ, ಆದರೆ ಇದು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ. ಆದ್ದರಿಂದ ಅರ್ಜಿಯಲ್ಲಿ ಯಾವುದೇ ರಕ್ಷಣಾ ಆದೇಶವನ್ನು ರವಾನಿಸದೆ  ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ತೀರ್ಪು ನೀಡಿದೆ.

ಆದರೆ ಕೌಟುಂಬಿಕ ಕಾಯ್ದೆ 2005  ‘ ಇಬ್ಬರು ವಯಸ್ಕರು ಯಾವುದೇ ಸಮಯದಲ್ಲಿ ಒಂದು ಮನೆಯಲ್ಲಿ ವಾಸಿಸುತ್ತಿದ್ದರೆ, ಅವರ ಮಧ್ಯೆ ಸಹಭಾಗಿತ್ವ ಇದ್ದರೆ, ಅವರು ಮದುವೆಯಾಗಿದ್ದರೆ, ಅವರ ಮಧ್ಯೆ ಮದುವೆಯಂತಹ ಸಂಬಂಧ ಇದ್ದರೆ, ದತ್ತು ಪಡೆದಿದ್ದರೆ ಅಥವಾ ಅವಿಭಕ್ತ ಕುಟುಂಬದಂತೆ ಬದುಕುತ್ತಿದ್ದರೆ’ ಅದು ‘ಕುಟುಂಬ ಸಂಬಂಧ’ವಾಗಿರುತ್ತದೆ ಎಂದು ವ್ಯಾಖ್ಯಾನಿಸುತ್ತದೆ. ಅಂದಿನಿಂದಲೂ ವೈವಾಹಿಕವಲ್ಲದ ಆದರೆ ವಿವಾಹದ ಸ್ವರೂಪದಲ್ಲಿನ ಸಂಬಂಧಗಳಲ್ಲಿ ಕೌಟುಂಬಿಕ ಹಿಂಸಾಚಾರದ ವಿಚಾರಣೆಗೆ ನ್ಯಾಯಾಲಯಗಳು ಈ ಕಾಯ್ದೆಯನ್ನು ಆಧಾರವಾಗಿ ಇಟ್ಟುಕೊಳ್ಳುತ್ತಿದೆ. ಅಂದರೆ ಸುಪ್ರೀಂ ಕೋರ್ಟೂ ಲಿವ್ ಇನ್ ರಿಲೇಶನ್‌ಶಿಪ್‌ಗಳನ್ನು ಕಾನೂನಾತ್ಮಕ ಎಂದೇ ಪರಿಗಣಿಸುತ್ತದೆ.

2020ರಲ್ಲಿ ಕಾಮಿನಿ ದೇವಿ vs ಉತ್ತರ ಪ್ರದೇಶ ಪ್ರಕರಣದಲ್ಲೂ ಅಲಹಾಬಾದ್ ಹೈಕೋರ್ಟ್ ಲಿವ್‌ಇನ್ ಸಂಬಂಧದಲ್ಲಿರುವ ಜೋಡಿಗೆ ರಕ್ಷಣೆ ನೀಡಿತ್ತು. ಭಾರತೀಯ ಸಂವಿಧಾನದ 21ನೇ ಪರಿಚ್ಛೇದವು ಬದುಕುವ ಹಕ್ಕನ್ನು ಮೂಲಭೂತ ಹಕ್ಕು ಎಂದು‌ ಪರಿಗಣಿಸುವುದರಿಂದ ವಯಸ್ಕರ ನಡುವೆ ಪರಸ್ಪರ ಒಪ್ಪಿಗೆ ಇದ್ದರೆ ಅವರ ಶಾಂತಿಯುತ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ ಎಂದು ಇತ್ಯರ್ಥ ಪಡಿಸಿತ್ತು. “ಮಹಿಳೆ ಮತ್ತು ಪುರುಷರಿಬ್ಬರೂ ವಯಸ್ಕರಾಗಿರುವುದರಿಂದ ಅವರ ಇಚ್ಛೆಯಂತೆ ಒಟ್ಟಿಗೆ ಬದುಕುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಪೋಷಕರೂ ಸೇರಿದಂತೆ ಯಾರಿಗೂ ಅಧಿಕಾರವಿಲ್ಲ” ಎಂದು ಸ್ಪಷ್ಟವಾಗಿ ತೀರ್ಪು ನೀಡಿತ್ತು.

2006ರ ಲತಾ ಸಿಂಗ್ vs ಉತ್ತರ ಪ್ರದೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟೂ “ಒಬ್ಬ ಮಹಿಳೆ ವಯಸ್ಕಳಾಗಿದ್ದರೆ ತನ್ನ ಇಚ್ಛೆಯಂತೆ ಯಾರನ್ನು ಬೇಕಾದರೂ ಮದುವೆಯಾಗಬಹುದು ಅಥವಾ ಯಾರೊಂದಿಗೆ ಬೇಕಾದರೂ ವಾಸಿಸಬಹುದು” ಎಂದು ತೀರ್ಪು ನೀಡಿತ್ತು.

ವಿಚಿತ್ರ ಅಂದರೆ ಕಳೆದ ವರ್ಷ ಇದೇ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟೇ ತನ್ನ ಮುಂದೆ ಬಂದಿದ್ದ ಲಿವ್-ಇನ್ ರಿಲೇಶನ್ ಪ್ರಕರಣದ ವಿಚಾರಣೆ ನಡೆಸಿ “ಪೋಷಕರು ತಮ್ಮ ಮಕ್ಕಳು ತಮ್ಮ ಇಚ್ಛೆಯಂತೆಯೇ ಬದುಕಬೇಕು ಎಂದು ಬಯಸುವಂತಿಲ್ಲ” ಎಂದು ತೀರ್ಪು‌ ನೀಡಿತ್ತು.

ಆದರೆ ಈಗ ಅದೇ ಹೈಕೋರ್ಟ್ ಲಿವ್ ಇನ್ ಜೋಡಿಗೆ ರಕ್ಷಣೆ ಒದಗಿಸಲಾಗುವುದಿಲ್ಲ ಎನ್ನುವ  ಮೂಲಕ  ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸಿರುವುದಲ್ಲದೆ ಸಾಮಾನ್ಯರಲ್ಲಿ ಅಚ್ಚರಿ ಉಂಟು ಮಾಡಿದೆ. ಈ ಆದೇಶವು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೇರಿದಂತೆ ಭಾರತೀಯ ನ್ಯಾಯಾಂಗವು ಇತ್ತೀಚಿಗೆ ನೀಡುತ್ತಿರುವ ಪ್ರಗತಿಪರ ನಿಲುವಿನಿಂದ ಒಂದು ಹೆಜ್ಜೆ ಹಿಂದಕ್ಕೆ ಸರಿದಂತೆ ಭಾಸವಾಗುತ್ತದೆ ಎಂದರೆ ತಪ್ಪಾಗದು‌.

Tags: Live-in relationship morally
Previous Post

ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯನ ಲಂಚಾವತಾರ ಸ್ಟಿಂಗ್ಆಪರೇಷನ್ನಲ್ಲಿ ಬಯಲು: ವೈದ್ಯನನ್ನು ಅಮಾನತ್ತು ಮಾಡಿದ ಜಿಲ್ಲಾಧಿಕಾರಿ

Next Post

ಕರೋನಾ ಕಷ್ಟಕಾಲದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಮೋದಿ‌ ಸರ್ಕಾರ: ಮೇ ತಿಂಗಳಲ್ಲಿಯೇ 10 ಬಾರಿ ದರ ಏರಿಕೆ

Related Posts

Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
0

ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆಸರಕಾರದ ಖಾತೆಗೆ ಹಣ ಬಂದಾಗಲೇ ಖಾತರಿ “ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ....

Read moreDetails

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025

Gujarath: ಗುಜರಾತ್‌ನಲ್ಲಿ ಮತ್ತೊಮ್ಮೆ ನದಿಗೆ ಬಿದ್ದ ವಾಹನಗಳು..

July 9, 2025
Next Post
ಕರೋನಾ ಕಷ್ಟಕಾಲದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಮೋದಿ‌ ಸರ್ಕಾರ: ಮೇ ತಿಂಗಳಲ್ಲಿಯೇ 10 ಬಾರಿ ದರ ಏರಿಕೆ

ಕರೋನಾ ಕಷ್ಟಕಾಲದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಮೋದಿ‌ ಸರ್ಕಾರ: ಮೇ ತಿಂಗಳಲ್ಲಿಯೇ 10 ಬಾರಿ ದರ ಏರಿಕೆ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada