ಮಾಜಿ ಸಿಎಂ ಕುಮಾರಸ್ವಾಮಿ (HD kumaraswamy) ಕಾಂಗ್ರೆಸ್ನ ಗ್ಯಾರಂಟಿಗಳನ್ನ ಟೀಕಿಸುವ ಭರದಲ್ಲಿ ಆಡಿದ್ದ ಅದೊಂದು ಮಾತು ಕಾಂಗ್ರೆಸ್ (congress) ಕಾರ್ಯಕರ್ತರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕಾಂಗ್ರೇಸ್ ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಮಹಿಳೆಯರು ದಾರಿ ತಪ್ಪದ್ದಾರೆ ಎಂದು ನೀಡಿದ ಹೇಳಿಕೆಗೆ ಭಾರಿ ಬೆಲೆ ತೆರಬೇಕಾಗಿ ಬಂದಿದೆ.. ಸ್ವತಃ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ರೂ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರ ಸಿಟ್ಟು ತಣ್ಣಗಾಗ್ತಿಲ್ಲ.. ಎಲ್ಲಾ ಕಡೆ ಕೈ ನಾರಿಯರ ಆಕ್ರೋಶ ಭುಗಿಲೆದ್ದಿದೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ‘ದಾರಿ ತಪ್ಪಿದ’ ಹೇಳಿಕೆಗೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಆಕ್ರೋಶ ಮುಂದುವರಿದಿದೆ. ನಿನ್ನೆ ತುಮಕೂರು (tumkur) ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ (V somanna) ಪರ ದೇವೇಗೌಡರು ಪ್ರಚಾರ ನಡೆಸ್ತಿದ್ದರು.. ಸಮಾವೇಶದಲ್ಲಿ ವಿ.ಸೋಮಣ್ಣ ಮಾತನಾಡುವ ವೇಳೆ ಸುಮ್ಮನಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು, ದೇವೇಗೌಡರು (Devegowdra)ಮಾತನಾಡುವಾಗಲೇ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗುತ್ತಾ ಗಲಾಟೆ ಎಬ್ಬಿಸಿದ್ರು. ಕೂಡಲೇ ಬಿಜೆಪಿ, ಜೆಡಿಎಸ್ (Bjp.jds) ಮಹಿಳಾ ಕಾರ್ಯಕರ್ತರು ಅವರನ್ನು ಹೊರಗೆ ಕಳುಹಿಸುವ ಯತ್ನ ನಡೆಸಿದ್ರು.
ಈ ವೇಳೆ ತಳ್ಳಾಟ-ನೂಕಾಟ ನಡೀತು. ಬಳಿಕ ಅಲ್ಲಿಯೇ ಇದ್ದ ಪೊಲೀಸರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ವಶಕ್ಕೆ ಪಡೆದ್ರು. ಇನ್ನು ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ, ಹೀಗಿದ್ದರೂ ಉದ್ದೇಶಪೂರ್ವಕವಾಗಿ ಗಲಾಟೆ ನಡೆಸ್ತಿದ್ದಾರೆ.. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಿಡಿಕಾರಿದ್ದಾರೆ..
ಕಾಂಗ್ರೆಸ್ ನಾಯಕರು ಜನರ ಮನಸ್ಸನ್ನು ಡೈವರ್ಟ್ (Divert) ಮಾಡುವ ಯತ್ನ ನಡೆಸ್ತಿದ್ದಾರೆ. ಹತಾಶರಾಗಿ ಈ ರೀತಿ ಮಾಡ್ತಿದ್ದಾರೆ ಅಂತ ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್ (Mila Jyothi ganesh) ಕಿಡಿಕಾರಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ನಡೆಸಿದ ಹೈಡ್ರಾಮಾ ಮಾಜಿ ಪ್ರಧಾನಿ ದೇವೇಗೌಡರಿಗೂ ಮುಜುಗರ ತರಿಸಿದಂತಾಗಿದೆ.. ಚುನಾವಣೆ ಹೊತ್ತಲ್ಲಿ ‘ದಾರಿ ತಪ್ಪಿದ’ ಮಾತಿನ ಕದನ ಎಲ್ಲಿಗೆ ತಲುಪಲಿದೆ ಅನ್ನೋದನ್ನು ಕಾದು ನೋಡಬೇಕಿದೆ.