ಮಂಡ್ಯದಿಂದ (Mandya) ಕುಮಾರಸ್ವಾಮಿ (kumara swamy) ಸ್ಪರ್ಧೆ ಮಾಡೋದು ಖಿಚಿತವಾಗ್ತಿದ್ದಂತೆ ಅಸಲಿ ಚುನಾವಣ ರಾಜಕಾರಣ ಶುರುವಾದಂತೆ ಕಾಣಿದೆ. ಹೌದು, ಮತ್ತೊಂದು ಪ್ರಬಲ ರಾಜಕೀಯ ಜಿದ್ದಾಜಿದ್ದಿಗೆ ಮಂಡ್ಯ ಈ ಬಾರಿ ವೇದಿಕೆಯಾಗೋದ್ರಲ್ಲಿ ಡೌಟೇಯಿಲ್ಲ. ಇದಕ್ಕೆ ಕಾರಣ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಚೆಲುವರಾಯಸ್ವಾಮಿ (Minister Cheluvarayaswamy) ನಡುವಿನ ಜಿದ್ದಾ ಜಿದ್ದಿನ ರಾಜಕೀಯ ಶತ್ರುತ್ವ, ಹೀಗೆ ಸ್ವಲ್ಪದಿನ ಮುನ್ನ ಮಾತನಾಡಿದ್ದ ಚೆಲುವರಾಯಸ್ವಾಮಿ, ಖುದ್ದು ಹೆಚ್ಡಿ ಕುಮಾರಸ್ವಾಮಿ ಸ್ಪರ್ಧೆಗೆ ಬಂದ್ರೂ ಎದುರಿಸಲು ನಾವು ಸಿದ್ಧ ಅಂದಿದ್ರು. ಈಗ ಆ ಮಾತು ನಿಜವಾಗಿದೆ.

ಈಗಾಗಲೇ ಸ್ಟಾರ್ ಚಂದ್ರುರನ್ನ (star handru) ತಮ್ಮ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವ ಕಾಂಗ್ರೇಸ್ ನಾಯಕರು, ಅತ್ತ ಸುಮಲತಾ (sumalatha) ಅಭ್ಯರ್ಥಿಯಾದ್ರೂ ok, ಇತ್ತ ಮೈತ್ರಿಯ ಪರಿಣಾಮ ಅಂತ ಜೆಡಿಎಸ್ನಿಂದ ಪುಟ್ಟರಾಜು ಅಥವಾ ಇನ್ನುಳಿದವರು ಯಾರೇ ಅಭ್ಯರ್ಥಿಯಾದ್ರೂ ok, ನಾವೂ ಸಶಕ್ತವಾಗಿ ಎದುರಿಸಲಿದ್ದೇವೆ ಎಂಬ ಮಾತುಗಳನ್ನಾಡಿದ್ರು. ಆದ್ರೆ ಇದೀಗ ಕಾಂಗ್ರೆಸ್ನ ಈ ಆತ್ಮವಿಶ್ವಾಸಕ್ಕೆ ಆಘಾತ ಕೊಟ್ಟಂತೆ ಖುದ್ದು ಕುಮಾರಸ್ವಾಮಿ ಎಂಟ್ರಿ ಕೊಟ್ಟಿರೋದು ಚೆಲುವರಾಯಸ್ವಾಮಿ ಅಂಡ್ ಟೀಂ ಗೆ ಸವಾಲಾಗಿ ಪರಿಣಮಿಸಿದೆ.

ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ ಯಾರೂ ಶಾಶ್ವತ ಮಿತ್ರರೂ ಅಲ್ಲ. ಹೀಗೆ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಕುಮಾರಸ್ವಾಮಿ ಮತ್ತು ಚೆಲುವರಾಯ ಸ್ವಾಮಿ ಇದೀಗ ಬದ್ಧ ವೈರಿಗಳಾಗಿದ್ದಾರೆ. ಜೆಡಿಎಸ್ ತೊರೆದು ಚೆಲುವರಾಯಸ್ವಾಮಿ ಕಾಂಗ್ರೇಸ್ ಸೇರ್ಪಡೆಯಾದ ಮೇಲೆ ನಿರಂತರವಾಗಿ ಜೆಡಿಎಸ್ ನ ಕಟ್ಟಿಹಾಕಿ ಕಾಂಗ್ರೇಸ್ ಪ್ರಾಬಲ್ಯ ಸಾಧಿಸಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಉತ್ತರ ಹೇಳಲು ಸ್ವತಃ ಹೆಚ್ಡಿಕೆ ಅಖಾಡಕ್ಕಿಳಿದಿದ್ದಾರೆ. ಸೋ ಈ ಬಾರಿಯ ಮಂಡ್ಯ ಅಖಾಡ ಕಳೆದ ಲೋಕಸಭಾ ಚುನಾವಣೆಗಿಂತ ರಂಗೇರಿದ್ರೂ ಆಚರಿಯಿಲ್ಲ.






