• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಈಗಲ್ಟನ್ ರೆಸಾರ್ಟ್ ಎಂಬ ಎಲ್ಲದರ ಆಚೆಗಿನ ರಾಜಕೀಯ ಮೇಲಾಟ!

Any Mind by Any Mind
March 12, 2022
in ಕರ್ನಾಟಕ, ರಾಜಕೀಯ
0
ಈಗಲ್ಟನ್ ರೆಸಾರ್ಟ್ ಎಂಬ ಎಲ್ಲದರ ಆಚೆಗಿನ ರಾಜಕೀಯ ಮೇಲಾಟ!
Share on WhatsAppShare on FacebookShare on Telegram

ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿಗೆ ನಯಾ ಹುಮ್ಮಸ್ಸು ನೀಡಿದೆ. ಅದಾಗಿಯೂ 2018ಕ್ಕೆ ಹೋಲಿಸಿಕೊಂಡರೆ 2022ರಲ್ಲಿ ಭಾಜಪ ಪ್ರದರ್ಶನ ನೀರಸವಾಗಿದೆ. ಈ ಫಲಿತಾಂಶ ಕರ್ನಾಟಕದ ಮೇಲೂ ಪ್ರಭಾವ ಬೀರಲಿದೆ. ಎಲ್ಲಾ ರಾಜ್ಯಗಳ ರಾಜಕೀಯ ನೆಲೆಗಟ್ಟು ಬೇರೆಯದ್ದೇ ಆಗಿದ್ದರೂ ಬಿಜೆಪಿಯ ಚುನಾವಣಾ ತಂತ್ರಗಾರಿಕೆ ಹೆಚ್ಚು ಕಮ್ಮಿ ಏಕರೂಪವಾದದ್ದು. ಹೀಗಾಗಿ ಈಗೀಂದೀಗಲೇ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಬಹಿರಂಗವಾಗಿಯೇ ತಯಾರಿಗಳು ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ ಜನತಾ ದಳ ಮುಂದಿನ ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿದ್ದು, ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ಮತ್ತೆ ಈಗಲ್ಟನ್ ರೆಸಾರ್ಟ್ ಪ್ರಕರಣ ಎತ್ತಿಟ್ಟು ಹರಿಹಾಯ್ದಿದ್ದಾರೆ.

ADVERTISEMENT

ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ತಮ್ಮ ಚೊಚ್ಚಲ ಆಯವ್ಯಯಕ್ಕೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದರು. ಇದನ್ನು ಕೇಂದ್ರವಾಗಿಸಿಕೊಂಡ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಬಿಟ್ಟು ಅದಕ್ಕೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆಗೆ ಮಾತಿನ ಏಣಿ ಹತ್ತಿಸಿದರು‌. ಈ ವೇಳೆ ಸಿದ್ದರಾಮಯ್ಯನನ್ನು ಹೆಣೆಯಲು ಕುಮಾರಸ್ವಾಮಿ ಈಗಲ್ಟನ್ ರೆಸಾರ್ಟ್ ಪ್ರಕರಣವನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಲ್ಲದೆ ಸಿದ್ದರಾಮಯ್ಯರಿಂದ ತಪರಾಕಿ ಹಾಕಿಸಿಕೊಂಡರು.

ಅಸಲಿಗೆ ಏನಿದು ಈಗಲ್ಟನ್ ರೆಸಾರ್ಟ್..? ಈ ಈಗಲ್ಟನ್ ರೆಸಾರ್ಟ್ ಯಾಕಿಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ..? ಕುಮಾರಸ್ವಾಮಿ ಅವರೇಕೆ ಬಜೆಟ್ ಅಧಿವೇಶನದಲ್ಲಿ ಏಕಾಏಕಿ ಈಗಲ್ಟನ್ ರೆಸಾರ್ಟ್ ಹೆಸರು ಪ್ರಸ್ತಾಪಿಸಿದರು..? ಹೀಗೆ ಸದ್ಯ ರಾಜ್ಯ ರಾಜಕಾರಣದಲ್ಲಿ ಈಗಲ್ಟನ್ ರೆಸಾರ್ಟ್ ಪ್ರಕರಣ ಮತ್ತೆ ಚರ್ಚೆಯ ಬಿಂದುವಾಗಿದೆ.

2002ರಲ್ಲಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ ಎಂಬ ಖಾಸಗಿ ಸಂಸ್ಥೆ ಈಗಲ್ಟನ್ ರೆಸಾರ್ಟ್ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿತ್ತು. ಸುಮಾರು‌ 75 ಏಕರೆ ಪೈಕಿ ಅರ್ಧದಷ್ಟು ಜಮೀನು ಸರ್ಕಾರಿ ಜಮೀನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ವೇಳೆ ಸರ್ಕಾರದ ವಿರುದ್ಧ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ ಸಂಸ್ಥೆ ಕೋರ್ಟ್ ಮೆಟ್ಟಿಲೇರಲಾಗಿತ್ತು. ರಾಮನಗರ ಜಿಲ್ಲೆಯ ಬಿಡದಿಗೆ ಸೇರಿದ ಹಳ್ಳಿ ಭಾಗದ ಜಾಗವೊಂದರಲ್ಲಿ ಈ ರೆಸಾರ್ಟ್ ನಿರ್ಮಾಣ ಮಾಡಲಾಗಿತ್ತು. ಆರಂಭದಲ್ಲಿ ಗುರುತರವಾದ ಆರೋಪಗಳು ಇಲ್ಲದೇ ಇದ್ದರೂ ಬಳಿಕ ಜಮೀನಿನ ಮೌಲ್ಯ ಹಾಗೂ ಬೇಡಿಕೆ ಹೆಚ್ಚಾದ ಕಾರಣ ರಾಜಕಾರಣಿಗಳು ಕಣ್ಣು ಈ ರೆಸಾರ್ಟ್ ಮೇಲೆ ಬಿದ್ದಿದೆ. ಈ ಈಗಲ್ಟನ್ ರೆಸಾರ್ಟ್ ಬಗ್ಗೆ ಆಫ್ ದಿ ರೆಕಾರ್ಟ್ ಬಗ್ಗೆ ಮಾತನಾಡಿದ ವ್ಯಕ್ತಿಯೊಬ್ಬರು, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ಈ ಈಗಲ್ಟನ್ ರೆಸಾರ್ಟ್ ಕಾರಣಕ್ಕೆ ದೊಡ್ಡ ಸಂಘರ್ಷವೇ ನಡೆದು ಹೋಗಿದೆ ಎಂದು ಹೇಳಿದ್ದಾರೆ. ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣವನ್ನು ಇತ್ಯರ್ಥ ಮಾಡಲು ನ್ಯಾಯಾಲಯ, 75 ಏಕರೆ ಜಮೀನಿನ ಮಾರುಕಟ್ಟೆ ಮೌಲ್ಯವಾದ 950 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ನೀಡುವಂತೆ ಹೇಳಿ‌ ಕಟ್ಟಪ್ಪಣೆ ಹಾಕಿತ್ತು. ಅದಕ್ಕೂ ಮೊದಲು ತಕ್ಷಣವೇ 15 ಕೋಟಿ ರೂಪಾಯಿ ಪಾವತಿಸುವಂತೆ ಆದೇಶ ನೀಡಿತ್ತು.

ಇದಿಷ್ಟೂ ಒಂದೆಡೆಯಾದರೂ ಇದರಿಂದ ಲಾಭ ಪಡೆಯುವ ಜಿದ್ದು ಹೆಚ್‌ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಲೇ ಇದೆ. ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ಣಪ್ರಮಾಣದ ಸರ್ಕಾರ ರಚಿಸಿದಾಗ ಈಗಲ್ಟನ್ ರೆಸಾರ್ಟ್ ಪ್ರಕರಣದಿಂದ ಈಗಿನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜೇಬು ತುಂಬಿಸಿಕೊಂಡಿದ್ದಾರೆ ಮತ್ತು ಜಮೀನು ಪಡೆಯುವ ಕೆಲಸಕ್ಕೂ ಕೈ ಹಾಕಿದ್ದರು ಎನ್ನಲಾಗಿದೆ. ಇದನ್ನು ಸಹಿಸಿಕೊಳ್ಳದ ಕುಮಾರಸ್ವಾಮಿ ತಮ್ಮ ಪಾಲಿಗೂ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ ಕಂಪೆನಿಗೆ ಕೈ ಚಾಚಿದ್ದರೂ. ಅದಾಗಿಯೂ ಆಗಾಗ್ಗೆ ಇಬ್ಬರನ್ನೂ ಸಂತೃಪ್ತಿ ಪಡಸಿಸುವ ಕೆಲಸವಷ್ಟೇ ನಡೆಯುತ್ತಿತ್ತು.

ನಿಮಗೆ ನೆನಪಿರಬಹುದು. ಗುಜರಾತ್ ಕೈ ಶಾಸಕರನ್ನು ಕರೆತಂದ ಡಿಕೆಶಿ ಆಪರೇಷನ್ ಕಮಲಕ್ಕೆ ಸೆಡ್ಡು ಹೊಡೆದಿದ್ದರು. ಹಾಗೆ ಕರೆತಂದ ಶಾಸಕರನ್ನು ಡಿಕೆಶಿ ಬಚ್ಚಿಟ್ಟು ಮೀಸೆ ತಿರುವುದ್ದೇ ಇದೇ ಈಗಲ್ಟನ್ ರೆಸಾರ್ಟ್ ನಲ್ಲಿ. ಆರಂಭದಲ್ಲಿ ಹೇಗೆ ಎಲ್ಲಿ ಎಂಬ ಮಾಹಿತಿಯೇನು ಇಲ್ಲದೇ ಇದ್ದರೂ ಸಮಯ ಕಳೆದಂತೆ ಹೆಚ್‌ಡಿಡಿ ಶಾಸಕರನ್ನು ಬಚ್ಚಿಟ್ಟ ವಿವರ ಜಗಜ್ಜಾಹಿರು ಮಾಡಿದ್ದರು. ತದನಂತರ ಅಲ್ಲಿಂದ ಡಿಕೆಶಿ ಎಲ್ಲಾ ಶಾಸಕರನ್ನು ಕರಕೊಂಡು ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ಉಂಡು ಹೋದವ ಕೊಂಡು ಹೋಗಲಿಲ್ಲ ಎಂಬಂತೆ ಅಂದು ಡಿಕೆಶಿಗೆ ಮಗ್ಗುಲ ಮುಳ್ಳಾಗಿದ್ದು ಕುಮಾರಸ್ವಾಮಿ. ರಿಪಬ್ಲಿಕ್ ಆಫ್ ರಾಮನಗರ ಮಾಡಲು ಹೊರಟಿರುವ ಕುಮಾರಸ್ವಾಮಿ ಹಾಗೂ ಡಿಕೆಶಿಗೆ ರಾಮನಗರಕ್ಕೆ ಒಬ್ಬನೇ ರಾಜ ಸಾಕು. ಮತ್ತು ಅದು ನಾನಾಗಿರಬೇಕು ಎಂಬ ತವಕ. ಇದರ ನಡುವೆ ಇಬ್ಬರ ಕೈಗೂ ಅಸ್ತ್ರವೆಂಬಂತೆ ಸಿಕ್ಕ ಈಗಲ್ಟನ್ ರೆಸಾರ್ಟ್ ಅಕ್ಷರಶಃ ರಾಜಕೀಯ ದಾಳವಾಗಿ ಮಾರ್ಪಾಡಾಯಿತು. ಇಷ್ಟರ ಮೇಲೂ ಈಗಲ್ಟನ್ ರೆಸಾರ್ಟ್ ನಿರ್ಮಾಣವಾಗಿರುವದೇ ಸರ್ಕಾರದ ಜಮೀನಿನಲ್ಲಿ ಎಂಬುವುದು ವಾಸ್ತವ.

ಆದರೆ ಕಾಂಗ್ರೆಸ್‌ – ದಳ ಮೈತ್ರಿ ಸರ್ಕಾರದ ವೇಳೆ ಇಡೀ ಸರ್ಕಾರದ ಎಲ್ಲಾ ಕಾರ್ಯಚಟುವಟಿಕೆಗಳು ನಡೆದಿದ್ದೇ ಈ ವಿವಾದಿತ ಈಗಲ್ಟನ್ ರೆಸಾರ್ಟ್ ನಲ್ಲಿ.‌ ಮೈತ್ರಿ ಮಾಡಿಕೊಂಡ‌ ಬಳಿಕ ಡಿಕೆಶಿ ಹಾಗೂ ಕುಮಾರಸ್ವಾಮಿ ಎಲ್ಲವನ್ನೂ ಬದಿಗಿಟ್ಟು ಸಂಧಾನಮಾಡಿಕೊಂಡು ಸಮಾನ ಮನಸ್ಕರಂತೆ ಹಂಚಿ ತಿನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಆಪರೇಷನ್ ಕಮಲ ಇವರ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿಬಿಟ್ಟಿತು. ಎಲ್ಲಿಯವರೆಗೆ ಎಂದರೆ ಈಗಲ್ಟನ್ ರೆಸಾರ್ಟ್ ಹೆಸರು ಕುಮಾರಸ್ವಾಮಿ ಪ್ರಸ್ತಾಪಿಸಿದ ಕೂಡಲೇ ಸಿದ್ದರಾಮಯ್ಯ ಎಷ್ಟು ಪರ್ಸಂಟೇಜ್ ಪಡೆದುಕೊಂಡಿದ್ದೀರಿ ಎಂಬ ಪ್ರಶ್ನೆಗೆ ಆರಂಭದಲ್ಲಿ ಕುಮಾರಸ್ವಾಮಿ ತಬ್ಬಿಬ್ಬಾದರೂ, ಮಾನವೀಯತೆಯ ಪರ್ಸಂಟೇಜ್ ಎಂದು ಎದೆ ತಟ್ಟಿದರು.

ಈಗ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೆ ನಿರ್ಮಾಣ ಕೊನೆಯ ಹಂತದಲ್ಲಿದೆ. ರಾಮನಗರದ ಬಿಡದಿ ಇನ್ನೇನು ಕೆಲವೇ ವರ್ಷದಲ್ಲಿ ಬೆಂಗಳೂರು ಸೇರಿಕೊಳ್ಳಲಿದೆ. ಜಮೀನು ಚಿನ್ನಕ್ಕೆ ಸಮನಾದ ಬೆಲೆಗೆ ಬಾಳಲಿದೆ. ಈ ಜಾಗದಲ್ಲಿ ಒಂದಿಷ್ಟು ಏಕರೆ ಸಿಕ್ಕರೆ ಬೇಡ ಎನ್ನಲಾದೀತೆ..? ಮತ್ತು ಕುಮಾರಸ್ವಾಮಿಯವರಿಗೆ ಈಗಲ್ಟನ್ ರೆಸಾರ್ಟ್ ಹೆಸರು ಪ್ರಸ್ತಾಪಿಸಿ ಕಾಂಗ್ರೆಸ್ ಅನ್ನು ಕೆಣಕುವಂತೆ ಕಮಲ‌ ನಾಯಕರ ಕುಮ್ಮಕ್ಕೂ ಇದೆ. ಇದುವೇ ಈಗ ಮತ್ತೆ ಈಗಲ್ಟನ್ ರೆಸಾರ್ಟ್ ಪ್ರಕರಣ ಮುನ್ನಲೆಗೆ ಬರಲಿರುವ ಮತ್ತೊಂದು ಪ್ರಮುಖ ಕಾರಣ ಎಂದು ಹೆಸರು ಹೇಳಲು ಇಚ್ಚಿಸಿದ ಜೆಡಿಎಸ್ ನಾಯಕರೊಬ್ಬರು ಹೇಳುತ್ತಾರೆ.

ಕುಮಾರಸ್ವಾಮಿಯವರು ಈ ಜಮೀನಿನ 25 ಏಕರೆಗೆ ಕಣ್ಣಿಟ್ಟರೆ ಕೊಂಡುಕೊಳ್ಳುವ ರೀತಿಯಲ್ಲಾದರೂ ಇಡೀ ಈಗಲ್ಟನ್ ರೆಸಾರ್ಟ್ ಕೊಂಡುಕೊಳ್ಳುವ ಯೋಚನೆ ಡಿಕೆಶಿಯದ್ದು. ತನಗೆ ಸಿಗದಿದ್ದರೆ ಯಾರಿಗೂ ಸಿಗಬಾರದು ಎಂಬ ಹಠಕ್ಕೆ ಬಿದ್ದಿರುವ ಕುಮಾರಸ್ವಾಮಿಯವರು ಹಳೇ ದೋಸ್ತ್ ಗೆ ಹೊಸ ಅಡ್ಡಗಾಲು ಹಾಕಿ ತಡೆದು ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಿಪ್ಪ ಸಮಯದಲ್ಲೂ ಈಗಲ್ಟನ್ ರೆಸಾರ್ಟ್ ಪ್ರಕರಣ ರಾಜಕಾರಣಿಗಳ ಸ್ವಹಿತಾಸಕ್ತಿಗಾಗಿ ಮಾತ್ರ ಎಂದರೆ ರಾಜಕೀಯ ಒಂದು ದೊಡ್ಡ ವ್ಯವಹಾರವಾಗಿ ಮಾರ್ಪಟ್ಟಿದೆ ಎಂಬುವುದಕ್ಕಿರುವ ನಿದರ್ಶನ. ಮತ್ತು ಈಗಲ್ಟನ್ ರೆಸಾರ್ಟ್ ಇಬ್ಬರು ಪ್ರಭಾವಿಗಳ ಅಸ್ತಿತ್ವದ ಅಳಿವುಳಿನ ವಿಷಯವಾಗಿದೆ ಎಂಬುವುದನ್ನು ಮತ್ತೆ ಒತ್ತಿ ಹೇಳಬೇಕಿಲ್ಲ.

Punjab ಗೆಲುವಿನ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ AAP ಮಾಸ್ಟರ್‌ ಪ್ಲಾನ್: Prithvi Reddyಯವರು ಹೇಳೊದೇನು?
ReplyForward
Tags: BJPCongress PartyCovid 19ಈಗಲ್ಟನ್ ರೆಸಾರ್ಟ್ಎಚ್ ಡಿ ಕುಮಾರಸ್ವಾಮಿಕರೋನಾಕಾಂಗ್ರೆಸ್ಕಾಂಗ್ರೆಸ್ ನಾಯಕರುಕಾಂಗ್ರೆಸ್ ಪಕ್ಷಕೋವಿಡ್-19ಡಿಕೆ ಶಿವಕುಮಾರ್‌ಪಂಚರಾಜ್ಯ ಚುನಾವಣೆಬಸವರಾಜ ಬೊಮ್ಮಾಯಿಬಿ ಎಸ್ ಯಡಿಯೂರಪ್ಪಬಿಜೆಪಿರಾಜಕೀಯ ತಂತ್ರಗಾರಿಕೆರಾಜಕೀಯ ಪಕ್ಷರಾಜಕೀಯ ಪಕ್ಷಗಳುರಾಜಕೀಯ ಬಿಕ್ಕಟ್ಟುರಾಜಕೀಯ ಸಂಕಷ್ಟಸಿದ್ದರಾಮಯ್ಯ
Previous Post

ಪಂಜಾಬ್ : ಅಧಿಕಾರವೆಂಬ ಕಲ್ಲು ಮುಳ್ಳಿನ ಹಾದಿಗೆ ರತ್ನಗಂಬಳಿ ಹಾಸುವರೇ ಕೇಜ್ರಿವಾಲ್?

Next Post

ಕುಮಾರಸ್ವಾಮಿಯವರೇ ಈಗಲ್ಟನ್ ರೆಸಾರ್ಟ್ ಮೇಲಿನ ನಿಮ್ಮ ಕಾಳಜಿ, ಬಡ ರೈತರ ಮೇಲೆ ಏಕಿಲ್ಲ?

Related Posts

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
0

ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಿ: ಸಚಿವ ಸಂತೋಷ್‌ ಲಾಡ್ ಧಾರವಾಡ ಜುಲೈ.1: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು...

Read moreDetails
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣ

July 1, 2025
Next Post
ಕುಮಾರಸ್ವಾಮಿಯವರೇ ಈಗಲ್ಟನ್ ರೆಸಾರ್ಟ್ ಮೇಲಿನ ನಿಮ್ಮ ಕಾಳಜಿ, ಬಡ ರೈತರ ಮೇಲೆ ಏಕಿಲ್ಲ?

ಕುಮಾರಸ್ವಾಮಿಯವರೇ ಈಗಲ್ಟನ್ ರೆಸಾರ್ಟ್ ಮೇಲಿನ ನಿಮ್ಮ ಕಾಳಜಿ, ಬಡ ರೈತರ ಮೇಲೆ ಏಕಿಲ್ಲ?

Please login to join discussion

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Top Story

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada