ಕಲಬುರ್ಗಿ : ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಏಳೂ ಜಿಲ್ಲೆಗಳಲ್ಲಿ KKRDB ವತಿಯಿಂದ 145.51 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 60.05 ಕೋಟಿ ರೂ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಜನರ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಅಭಿವೃದ್ಧಿ ಕಾಮಗಳಿಗೆ ಬಿಡುಗಡೆ ಮಾಡಲಾದ ಮತ್ತು ಬಿಡುಗಡೆ ಮಾಡಿರುವ ಅನುದಾನದ ಕುರಿತು ಮಾಹಿತಿ ಇಲ್ಲಿದೆ.
ಲೋಕೋಪಯೋಗಿ ಇಲಾಖೆ
ಒಟ್ಟು 139.36 ಕೋಟಿ ರೂ ವೆಚ್ಚದ 33 ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಒಟ್ಟು 50.81 ಕೋಟಿ ರೂ ವೆಚ್ಚದ 38 ಕಾಮಗಾರಿಗಳ ಉದ್ಘಾಟನೆ
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ
ಒಟ್ಟು 6.15 ಕೋಟಿ ರೂ ವೆಚ್ಚದ 41 ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಒಟ್ಟು 74 ಲಕ್ಷ ರೂ ವೆಚ್ಚದ 2 ಕಾಮಗಾರಿಗಳ ಉದ್ಘಾಟನೆ
KRIDL
ಒಟ್ಟು 5.03 ಕೋಟಿ ರೂ ವೆಚ್ಚದ 12 ಕಾಮಗಾರಿಗಳ ಉದ್ಘಾಟನೆ
ನಿರ್ಮಿತಿ ಕೇಂದ್ರ
ಒಟ್ಟು 4.47 ಕೋಟಿ ರೂ ವೆಚ್ಚದ 26 ಅಂಗನವಾಡಿ ಕಟ್ಟಡಗಳ ಉದ್ಘಾಟನೆ
ಇನ್ನು, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿ ಜಿಲ್ಲೆಯ 182.93 ಕೋಟಿ, ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 50.77 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಿದ್ದಾರೆ.
ಕಲಬುರಗಿಯ ಕೆ.ಪಿ.ಟಿ.ಸಿ.ಎಲ್ಗೂ ಅನುದಾನ ನೀಡಿರುವ ಸರ್ಕಾರ, ಆಳಂದ ತಾಲೂಕಿನ ಗಣಗಾಪೂರ ಹೊಸದಾಗಿ ಪ್ರಸ್ತಾಪಿಸಲಾದ 2 x 100 ಒಗಿಂ 220/110 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ (ನಿಂಬರಗಾ) : 17,011.50 ಲಕ್ಷ ರೂ ವೆಚ್ಚದ ಅನುದಾನ ನೀಡಿಲಾಗಿದೆ.
ಕಲಬುರಗಿ ತಾಲೂಕಿನ ಉದನೂರ ಹೊಸದಾಗಿ ಪ್ರಸ್ತಾಪಿಸಲಾದ 2 x 10 ಒಗಿಂ 110/11 ಕೆ.ವಿ ವಿದ್ಯುತ್ ಉಪ ಕೇಂದ್ರ ಉದನೂರಗೆ ವೆಚ್ಚ : 1,282.12 ಲಕ್ಷ ರೂ ನೀಡಲಾಗಿದ್ದು, ಇದಕ್ಕೆ ಒಟ್ಟು : 18,293.62 ಲಕ್ಷ ರೂ ತಗುಲಲಿದೆ
ಜೆಸ್ಕಾಂ ಕಲಬುರಗಿಗೆ ಕೂಡ ಅನುದಾನ ನೀಡಲಾಗಿದ್ದು, ಯಡ್ರಾಮಿ ತಾಲೂಕು ಜೆಸ್ಕಾಂ ವತಿಯಿಂದ ಕೈಗೊಂಡ ಕಾರ್ಯ ಮತ್ತು ಪಾಲನೆ ಉಪ ವಿಭಾಗ ಕಛೇರಿಗೆ 57.41 ಲಕ್ಷ ರೂ
ವೆಚ್ಚದ ತಗುಲಿದ್ದುಇದರ ಕಾಮಗಾರಿಯ ಉದ್ಘಾಟನೆ ಮಾಡಲಾಗಿದೆ, ಇದರ ಜೊತೆಗೆ ಇನ್ನು ಹಲವು ಕಾಮಗಾರಿಗೆ ಇದೀಗ ಚಾಲನೆಯನ್ನು ಕೂಡ ಸಿಎಂ ಸಿದ್ದರಾಮಯ್ಯ ಅಗರು ನೀಡಿದ್ದಾರೆ.