• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಿಖಿಲ್, ಪ್ರಜ್ವಲ್ ನೇತೃತ್ವದಲ್ಲಿ ಮುಂದಿನ ಚುನಾವಣೆ; ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು JDSನಿಂದ ಸರ್ವೇ

Any Mind by Any Mind
October 3, 2021
in ಕರ್ನಾಟಕ
0
ನಿಖಿಲ್, ಪ್ರಜ್ವಲ್ ನೇತೃತ್ವದಲ್ಲಿ ಮುಂದಿನ ಚುನಾವಣೆ; ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು JDSನಿಂದ ಸರ್ವೇ
Share on WhatsAppShare on FacebookShare on Telegram

2023 ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ವರಿಷ್ಠರು ಭಾರೀ ರಣತಂತ್ರ ರೂಪಿಸಿದ್ದಾರೆ. ಶತಾಯಗತಾಯ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಹೆಚ್ಚು ಸೀಟು ಗೆಲ್ಲುವ ಮೂಲಕ ಅಧಿಕಾರ ಹಿಡಿಯಲೇಬೇಕು ಎಂದು ಕಾರ್ಯಗಾರದ ಮೊರೆ ಹೋಗಿದ್ದಾರೆ. ಕಾರ್ಯಗಾರದಲ್ಲಿ ಆಗಲೇ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದಾಯ್ತು. ಇವರಿ ಪರೀಕ್ಷೆಯೂ ಕೊಟ್ಟಾಯ್ತು. ಈಗ ಫಲಿತಾಂಶ ಬರುವ ಸಮಯ. ಹೀಗಿರುವಾಗ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಜೆಡಿಎಸ್ ನಿರ್ಧರಿಸಿದೆ.

ADVERTISEMENT

ಜೆಡಿಎಸ್ ಅಭ್ಯರ್ಥಿಗಳಿಗೆ ನಾಲ್ಕು ದಿನಗಳ ಕಾಲ ಪಾಠ, ಪ್ರವಚನ ಜೋರಾಗಿಯೇ ಇತ್ತು. ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಕಾರ್ಯಗಾರ ಯುವ ಜೆಡಿಎಸ್ ನಾಯಕರ ಸಮಾಗಮಕ್ಕೆ ವೇದಿಕೆಯಾಗಿತ್ತು. ಮುಂದಿನ ಚುನಾವಣೆಯಲ್ಲಿ ಪಾರುಪತ್ಯ ಮೆರೆಯೋಕೆ ಯುವನಾಯಕರಿಗೆ ತಂತ್ರ, ರಣತಂತ್ರಗಳ ಉಪದೇಶಗಳು ನಡೆಯಿತು.

4 ದಿನಗಳ ಕಾರ್ಯಗಾರದ ಕೊನೆ ದಿನ ರಾಜ್ಯ ಯುವ ಘಟಕದ ನಾಯಕರಿಗೆ ತರಬೇತಿ ನೀಡಲಾಯ್ತು. ಯುವ ಮತದಾರರನ್ನ ಸೆಳೆಯುವನಿಟ್ಟಿನಲ್ಲಿ ಜೆಡಿಎಸ್ ತಂತ್ರ ಹೇಗಿರಬೇಕು? ಯುವಕರನ್ನ ಸೆಳೆಯಲು ಯಾವ ವಿಧಾನ ಅನುಸರಿಸಬೇಕು? ಯುವ ಘಟಕದ ಕಾರ್ಯೋದ್ದೇಶಗಳೇನು ಎಂಬ ತರಬೇತಿಯನ್ನ ಯುವ ಜೆಡಿಎಸ್ ನಾಯಕರಿಗೆ ನೀಡಲಾಯ್ತು.

ಇನ್ನು, ಕಾರ್ಯಾಗಾರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ರು. ಈ ವೇಳೆ ಇಬ್ಬರೂ ನಾಯಕರು ತಮ್ಮ ಪಕ್ಷದ ಯುವ ನಾಯಕರಿಗೆ ಪಕ್ಷದ ರೀತಿ ರಿವಾಜುಗಳು, ಚುನಾವಣಾ ತಂತ್ರಗಾರಿಗಳ ಪಾಠ ಮಾಡಿದ್ರು. ಇದೇ ವೇಳೆ ಪ್ರಜ್ವಲ್, ನಿಖಿಲ್ ಜಂಟಿ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ರು.

2023ರ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್ ಸಕಲ ಸಿದ್ಧತೆ ನಡೆಸಿರುವ ಜೆಡಿಎಸ್, ಅಭ್ಯರ್ಥಿಗಳ ಆಯ್ಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳ ಹಿಂದೆ ಜೆಡಿಎಸ್ ವರಿಷ್ಠರು ಸ್ಪೈ ಹಾಕಿದ್ದಾರೆ. ಈ ಗೂಢಾಚಾರಿಗಳು ನೀಡುವ ರಿಪೋರ್ಟ್ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.

ಗೂಢಾಚಾರಿಗಳು ನೀಡುವ ವರದಿಯಲ್ಲಿ ಅಭ್ಯರ್ಥಿ ಎದುರಾಳಿ ಎದುರು ಗೆಲ್ಲುವ ಸ್ಪರ್ಧಿಯಾಗಿರಬೇಕು. ವಿಪಕ್ಷಗಳ ಜೊತೆಗೆ ಯಾವುದೇ ರೀತಿಯ ಹೊಂದಾಣಿಕೆ ಇರಬಾರದು. ಜೊತೆಗೆ ಕ್ಷೇತ್ರದ ಜನರ ಸಮಸ್ಯೆಯನ್ನ ಮೊದಲು ಆಲಿಸುವಂತಿರಬೇಕು. ಜೆಡಿಎಸ್ ಕಾರ್ಯಕರ್ತರ ಜೊತೆ ನಿಕಟ ಸಂಪರ್ಕದಲ್ಲಿರಬೇಕು. ಅಲ್ಲದೇ ಜೆಡಿಎಸ್ ಪಕ್ಷಕ್ಕೆ ಬರುವವರನ್ನು ಆಹ್ವಾನವನ್ನೂ ನೀಡಬಹುದು. ಇದೆಲ್ಲದರ ಜೊತೆಗೆ ಹಿರಿಯರು ಇಲ್ಲದಿದ್ದರೂ ಜನರನ್ನು ಸೇರಿಸಿ ಸಮಾವೇಶ ನಡೆಸುವಂತಹ ವರ್ಚಸ್ಸು ಬೆಳೆಸಿಕೊಂಡಿರಬೇಕು. ಈ ಎಲ್ಲಾ ಅಂಶಗಳು ಜೆಡಿಎಸ್ನ ಸ್ಪೈ ರಿಪೋರ್ಟ್ನಲ್ಲಿ ಇರಲಿದೆ.

ಒಟ್ಟಾರೆ, ಜೆಡಿಎಸ್ನ ನಾಲ್ಕು ದಿನದ ಕಾರ್ಯಾಗಾರ ಯುವನಾಯಕರ ಸಮ್ಮಿಲನದೊಂದಿಗೆ ಮುಕ್ತಾಯವಾಗಿದೆ. ಆದ್ರೆ, ಈ ಕಾರ್ಯಾಗಾರದಿಂದ ಜೆಡಿಎಸ್ನಲ್ಲಿ ಅದೆಷ್ಟು ಗೆಲ್ಲೋ ಕುದುರೆಗಳು ಹುಟ್ಟಿಕೊಳ್ಳಲಿವೆ. ಚುನಾವಣಾ ರೇಸ್ನಲ್ಲಿ ಹೇಗೆ ತಮ್ಮ ಪೈಪೋಟಿ ನೀಡಲಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Tags: BJPCovid 19JDS KarnatakaNikhil KumaraswamyPrajwal Revannaಎಚ್ ಡಿ ಕುಮಾರಸ್ವಾಮಿಕೋವಿಡ್-19ಬಿಜೆಪಿ
Previous Post

ಮೋದಿ ಆಡಳಿತದಲ್ಲಿ ಆರ್ಥಿಕತೆ ಕುಸಿದಿದೆ ಹೊರತು, ಕಾಂಗ್ರೆಸ್ ಆಡಳಿತದಲ್ಲಿ ಅಲ್ಲ: DKShivakumar

Next Post

ಸಿಂದಗಿ, ಹಾನಗಲ್‌ನಲ್ಲಿ JDS ಮುಸ್ಲಿಂ ಅಭ್ಯರ್ಥಿ – ರಾಜಕಾರಣದಲ್ಲಿ ಮುಸ್ಲಿಂ ಜನಪ್ರಾತಿನಿಧ್ಯ ಕುಸಿಯುತ್ತಿರುವುದೇಕೆ?

Related Posts

ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!
Top Story

ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!

by ಪ್ರತಿಧ್ವನಿ
August 14, 2026
0

ಬೆಂಗಳೂರು : ಪಂಜಾಬಿನ ಶಿರೋಮಣಿ ಅಕಾಳಿದಳದ ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರ ಮೇಲೆ ನಡೆದಿದ್ದ ಗುಂಡಿನ ದಾಳಿಯ ಬಗ್ಗೆ ಹಲವು ರೀತಿಯ ಅನುಮಾನಗಳು ಸೃಷ್ಟಿಯಾಗಿವೆ. ಪಂಜಾಬ್‌ನಿಂದ...

Read moreDetails
‘ಟಾಕ್ಸಿಕ್’ ಶೂಟಿಂಗ್‌ ವೇಳೆ ಗರ್ಭಿಣಿ ಕಿಯಾರಾಗೆ ಯಶ್‌-ಗೀತು ಬಾಡಿಗಾರ್ಡ್ ಆಗಿದ್ದರಂತೆ!

‘ಟಾಕ್ಸಿಕ್’ ಶೂಟಿಂಗ್‌ ವೇಳೆ ಗರ್ಭಿಣಿ ಕಿಯಾರಾಗೆ ಯಶ್‌-ಗೀತು ಬಾಡಿಗಾರ್ಡ್ ಆಗಿದ್ದರಂತೆ!

August 14, 2026
80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

August 14, 2026
ಪಿಎಸ್‌ಐಗೆ ಕಪಾಳಮೋಕ್ಷ: ಮಗಳ ಪರವಾಗಿ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

ಪಿಎಸ್‌ಐಗೆ ಕಪಾಳಮೋಕ್ಷ: ಮಗಳ ಪರವಾಗಿ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

August 14, 2026
ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

August 14, 2026
Next Post
ಸಿಂದಗಿ, ಹಾನಗಲ್‌ನಲ್ಲಿ JDS ಮುಸ್ಲಿಂ ಅಭ್ಯರ್ಥಿ – ರಾಜಕಾರಣದಲ್ಲಿ ಮುಸ್ಲಿಂ ಜನಪ್ರಾತಿನಿಧ್ಯ ಕುಸಿಯುತ್ತಿರುವುದೇಕೆ?

ಸಿಂದಗಿ, ಹಾನಗಲ್‌ನಲ್ಲಿ JDS ಮುಸ್ಲಿಂ ಅಭ್ಯರ್ಥಿ - ರಾಜಕಾರಣದಲ್ಲಿ ಮುಸ್ಲಿಂ ಜನಪ್ರಾತಿನಿಧ್ಯ ಕುಸಿಯುತ್ತಿರುವುದೇಕೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada