• Home
  • About Us
  • ಕರ್ನಾಟಕ
Wednesday, July 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ತೆನೆ ಹೊತ್ತವಳು ಕಮಲ ಮುಡಿದಳೋ, ಕಮಲಾಕ್ಷಿಯೇ ತೆನೆ ಹೊತ್ತಳೋ!

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 1, 2021
in ಅಭಿಮತ
0
ತೆನೆ ಹೊತ್ತವಳು ಕಮಲ ಮುಡಿದಳೋ, ಕಮಲಾಕ್ಷಿಯೇ ತೆನೆ ಹೊತ್ತಳೋ!
Share on WhatsAppShare on FacebookShare on Telegram

ಫೋಟೊ 1: ತೆರೆದಿದೆ ಮನೆ ಓ ಬಾ ಅತಿಥಿ….

ADVERTISEMENT

ಫೋಟೊ 2: ಕೈ ಹಿಡಿದು ನಡೆಸೆನ್ನನು…

ಫೋಟೊ 3: ಕೂಡಿ ಬಾಳೋಣ, ನಾವು ಎಂದೆಂದೂ ಸೇರಿ ನಲಿಯೋಣ…..

ಇಲ್ಲಿರುವ ಮೂರು ಫೋಟೊಗಳು ʼಅವಕಾಶವಾದಿತನʼ ಎಂಬ ವಿಭಾಗದಲ್ಲಿ ಈ ವರ್ಷದ ಪ್ರಥಮ ಬಹುಮಾನ ಪಡೆಯಲು ಯೋಗ್ಯವಾಗಿವೆ. ದೆಹಲಿಯ ಈ ಅಪೂರ್ವ ಮಿಲನದ ಪೀಠಿಕೆ ಕರ್ನಾಟಕದಲ್ಲಿ ನಾಟಕೀಯವಾಗಿಯೇ ಸಿದ್ಧವಾಗಿತ್ತು. ಅದೀಗ ದೆಹಲಿಯಲ್ಲಿ ಮೂರ್ತ ರೂಪ ಪಡೆದಿದೆ. ಇದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಂದಿನ ದಿನಗಳಲ್ಲಿ ಮೈತ್ರಿ ಮಾಡಿಕೊಳ್ಳುವುದರ ಸಂಕೇತ. ʼಇದೊಂದು ಸೌಹಾರ್ದದ ಭೇಟಿʼ ಎಂಬ ತಥಾಕಥಿತ ಹೇಳಿಕೆ ಇದ್ದೇ ಇರುತ್ತದೆ. ಹಾಲಿ ಪ್ರದಾನಿಯ ಮುಖದಲ್ಲಿ ಅದೇನು ವಿಧೇಯತೆ, ಮಾಜಿ ಪ್ರಧಾನಿಗಳ ಮುಖದಲ್ಲಿ ಅರಳಿದೆ ಮಂದಸ್ಮಿತೆ.

ಸಂಸತ್ ಅಧಿವೇಶನದ ಎರಡನೇ ದಿನದಂದು ಸಂಸತ್ನಲ್ಲಿ ಪ್ರಧಾನಿ ಮೋದಿ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿಯಾಗಿದ್ದು ಸೌಹಾರ್ದ ಭೇಟಿಯೇ ಅಂದುಕೊಳ್ಳೋಣ. ಆದರೆ, ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ತಳ್ಳಿ ಹಾಕುವಂತಿಲ್ಲ ಎರಡೂ ಪಕ್ಷಗಳಿಗೂ ಅದು ಅನಿವಾರ್ಯವಾಗಲಿದೆ.

ಸಮ್ಮಿಶ್ರ ಸರ್ಕಾರ ಉರುಳಿದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವನ್ನು ಟ್ವೀಟ್ಗಳಲ್ಲಿ ಎಷ್ಟೇ ಟೀಕಿಸಿದರೂ, ಕುಮಾರಸ್ವಾಮಿ ಈ ಸರ್ಕಾರಕ್ಕೆ ಹತ್ತಿರವಾಗಿದ್ದಾರೆ. ವಿವಾದಾತ್ಮಕ ಎಪಿಎಂಸಿ ಮಸೂದೆ ಅಂಗೀಕಾರವಾಗಲು ಮಣ್ಣಿನ ಮಕ್ಕಳ ಪಕ್ಷ ನೆರವಾಗಿತ್ತು. ಕುಮಾರಸ್ವಾಮಿ ಬಹಿರಂಗವಾಗಿಯೇ ಎಪಿಎಂಸಿ ಕಾಯ್ದೆ ರೈತರ ಪರವಿದೆ ಎಂದೆಲ್ಲ ಹೊಗಳಿದ್ದರು.

ಇತ್ತೀಚಿನ ಉಪ ಚುನಾವಣೆಗಳ ವಿಷಯಕ್ಕೆ ಬಂದರೆ ಜೆಡಿಎಸ್ ಇತ್ತರ ಕರ್ನಾಟಕದಲ್ಲಿ ಸಂಘಟನೆಯ ಬಲ ಇಲ್ಲದಿದ್ದರೂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್ಗೆ ಹಿನ್ನಡೆ ಮಾಡುವ, ಆ ಮೂಲಕ ಬಿಜೆಪಿ ಗೆಲುವಿಗೆ ನೆರವಾಗುವ ಉದ್ದೇಶ ಹೊಂದಿತ್ತು. ಬಸವಕಲ್ಯಾಣದಲ್ಲಿ ಒಂದು ಮಟ್ಟಿಗೆ ಅದು ಯಶಸ್ವಿಯಾಗಿತು. ಆದರೆ, ಹಾನಗಲ್ ಮತ್ತು ಸಿಂದಗಿಯಲ್ಲಿ ಅದರ ಮುಸ್ಲಿಂ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡರು. ಸಿಂದಗಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರು 15 ದಿನ ಠಿಕಾಣಿ ಹೂಡಿದರೂ ಅವರ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ 4 ಸಾವಿರ ಮತಗಳು ಮಾತ್ರ!

ಮಸ್ಕಿ ಮೀಸಲು ಕ್ಷೇತ್ರವಾಗಿದ್ದರಿಂದ ಅಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಲಿಲ್ಲವಷ್ಟೇ. ಈಗ ಎಂಎಲ್ಸಿ ಚುನಾವಣೆಯಲ್ಲಿ ಜೆಡಿಎಸ್ಗೆ ಮುಸ್ಲಿಂ ಅಭ್ಯರ್ಥಿಗಳು ಸಿಗಲೇ ಇಲ್ಲ!

ವಚನಭ್ರಷ್ಟ, ವಿಶ್ವಾಸದ್ರೋಹಿ!

2007ರ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿ ಇತರ ಪಕ್ಷಗಳ ಶಾಸಕರ ಖರೀದಿಗೆ ಯತ್ನಿಸಿ ವಿಫಲವಾಗಿತು. ಆದರೂ ಭಂಡ ಧೈರ್ಯದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಶ್ವಾಸಮತದ ದಿನ ಆರಂಭದಲ್ಲಿಯೇ ರಾಜಿನಾಮೆ ನೀಡಿದ ಯಡಿಯೂರಪ್ಪ ಅಂದು ಭಾವುಕರಾಗಿ ಮಾತನಾಡುತ್ತ ಜೆಡಿಎಸ್ ಮಾತ್ತು ಕುಮಾರಸ್ವಾಮಿಯನ್ನು ದೂಷಿಸಿದರು. ನೇರವಾಗಿ ಡಿ.ಕೆ. ಶಿವಕುಮಾರ್ ಅವರನ್ನುಸಂಭೋಧಿಸಿ, ʼಶಿವಕುಮಾರ್, ಈ ಜೆಡಿಎಸ್ ನಂಬಬೇಡಿ. ಅವರು ನಿಮ್ಮ ಪಕ್ಷವನ್ನೇ ನಾಶ ಮಾಡುತ್ತಾರೆʼ ಎಂದಿದ್ದರು.

ಅದಾದ ನಂತರ ಕೆಂಗೇರಿ ಮೋರಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಆಪರೇಷನ್ ಕಮಲ ಎಂಬ ಖರೀದಿ ವ್ಯವಹಾರದ ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದುಕೊಂಡ ಬಿಜೆಪಿಯು ಸರ್ಕಾರ ರಚಿಸಿತು.

20-20 ಸರ್ಕಾರದಲ್ಲಿ ಮೊದಲ 20 ತಿಂಗಳು ಸಿಎಂ ಆಗಿದ್ದ ಕುಮಾರಸ್ವಾಮಿ ನಂತರದಲ್ಲಿ ಯಡಿಯೂರಪ್ಪನವರಿಗೆ ಅಧಿಕಾರ ಬಿಡದೇ ಹೋದಾಗ, ಸರ್ಕಾರ ಪತನವಾಗಿತು. ಆದರೆ ರಾಜ್ಯಾದ್ಯಂತ ಸುತ್ತಿದ ಯಡಿಯೂರಪ್ಪ ಕುಮಾರಸ್ವಾಮಿಯವರನ್ನು ವಚನ ಭ್ರಷ್ಟ, ವಿಶ್ವಾಸದ್ರೋಹಿ ಎಂದೆಲ್ಲ ಕರೆಯುತ್ತ ಅನುಕಂಪವನ್ನು ಗಿಟ್ಟಿಸಿ ನಂತರದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರು.

2019ರಲ್ಲಿ ತಮ್ಮ ಸರ್ಕಾರವನ್ನು ಬಿಜೆಪಿ ಕೆಡವಿದಾಗ ಕುಮಾರಸ್ವಾಮಿ ಕೂಡ ಸದನದಲ್ಲಿಯೇ ಯಡಿಯೂರಪ್ಪನವರ ಅನೈತಿಕ ಮಾರ್ಗದ ಕುರಿತು ಟೀಕೆ ಮಾಡಿದ್ದರು.

ಹೀಗೆ ಪರಸ್ಪರ ಬೈದಾಡಿಕೊಂಡವರು ಮತ್ತೆ ಒಂದಾದರೂ ಆಶ್ಚರ್ಯವಿಲ್ಲ. ಸ್ವತಃ ಮೋದಿಯವರು ಜೆಡಿಎಸ್ ಪಕ್ಷವನ್ನು ಚುನಾವಣಾ ಪ್ರಚಾರಗಳಲ್ಲಿ ಹೀನಾಯವಾಗಿ ಟೀಕಿಸಿದ್ದರು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರಲ್ಲ ಎಂಬ ಹಳಸಲು ಮಾತನ್ನು ತೇಲಿ ಬಿಟ್ಟು ಇಂತಹ ಮೈತ್ರಿಗಳಿಗೆ ಮಾನ್ಯತೆ ಕೊಡುತ್ತಿದ್ದೇವೆ. ಮಂಗಳವಾರದ ಅಪೂರ್ವ ಸಂಗಮದ ಚಿತ್ರಗಳು ಮಾತ್ರ ಜನರಲ್ಲಿ ಕುತೂಹಲ ಮೂಡಿಸಿವೆ.

Tags: BJPDeve GowdaJDSಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ರಾಯಚೂರು-ಕೊಪ್ಪಳ ಎಂಎಲ್ಸಿ ಚುನಾವಣೆ: ಬೆಳಗಾವಿಯಿಂದ ಅಭ್ಯರ್ಥಿ ಆಮದು ಮಾಡಿಕೊಂಡ ಬಿಜೆಪಿ!, ಕಾಂಗ್ರೆಸ್ ಗೆಲುವಿಗೆ ಬಿಜೆಪಿ, ಜೆಡಿಎಸ್ ನೆರವು!

Next Post

ಉತ್ತರಪ್ರದೇಶ: ತಂಬಾಕಿನ ಅಮಲಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪ್ರತಿ ಮೂವರಲ್ಲಿ ಒಬ್ಬ ತಂಬಾಕಿನ ದಾಸ, ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಉತ್ತರಪ್ರದೇಶ: ತಂಬಾಕಿನ ಅಮಲಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪ್ರತಿ ಮೂವರಲ್ಲಿ ಒಬ್ಬ ತಂಬಾಕಿನ ದಾಸ, ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ

ಉತ್ತರಪ್ರದೇಶ: ತಂಬಾಕಿನ ಅಮಲಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪ್ರತಿ ಮೂವರಲ್ಲಿ ಒಬ್ಬ ತಂಬಾಕಿನ ದಾಸ, ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ

Please login to join discussion

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ
Top Story

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

by ಪ್ರತಿಧ್ವನಿ
July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 
Top Story

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

by Chetan
July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ
Top Story

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

by Shivakumar A
July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 
Top Story

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

by Chetan
July 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada