• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಯಚೂರು-ಕೊಪ್ಪಳ ಎಂಎಲ್ಸಿ ಚುನಾವಣೆ: ಬೆಳಗಾವಿಯಿಂದ ಅಭ್ಯರ್ಥಿ ಆಮದು ಮಾಡಿಕೊಂಡ ಬಿಜೆಪಿ!, ಕಾಂಗ್ರೆಸ್ ಗೆಲುವಿಗೆ ಬಿಜೆಪಿ, ಜೆಡಿಎಸ್ ನೆರವು!

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 1, 2021
in ಕರ್ನಾಟಕ, ರಾಜಕೀಯ
0
ರಾಯಚೂರು-ಕೊಪ್ಪಳ ಎಂಎಲ್ಸಿ ಚುನಾವಣೆ: ಬೆಳಗಾವಿಯಿಂದ ಅಭ್ಯರ್ಥಿ ಆಮದು ಮಾಡಿಕೊಂಡ ಬಿಜೆಪಿ!, ಕಾಂಗ್ರೆಸ್ ಗೆಲುವಿಗೆ ಬಿಜೆಪಿ, ಜೆಡಿಎಸ್ ನೆರವು!
Share on WhatsAppShare on FacebookShare on Telegram

ʼಪ್ರತಿಧ್ವನಿʼ ಈ ಮೊದಲು ಬರೆದಂತೆ ಹಾಲಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿಯವರ ನಿರಾಸಕ್ತಿಯ ಕಾರಣಕ್ಕೆ ಕಾಂಗ್ರೆಸ್,  ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಮಗ ಶರಣೇಗೌಡ ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದು, ಅವರು ಭರದಿಂದ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಗಾಗಿ ಪರದಾಡುತ್ತಿದೆ ಎಂದೂ ʼಪ್ರತಿಧ್ವನಿʼ ಬರೆದಿತ್ತು.

ADVERTISEMENT

ಈಗ ಬಿಜೆಪಿ  ದೂರದ ಬೆಳಗಾವಿಯಿಂದ  ಅಭ್ಯರ್ಥಿಯನ್ನು ಆಮದು ಮಾಡಿಕೊಂಡಿದೆ. ಶುಗರ್ ಫ್ಯಾಕ್ಟರಿ ಮಾಲಿಕ ವಿಶ್ವನಾಥ್ ಬನಹಟ್ಟಿ ಈಗ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿ ರೆಡ್ಡಿ ಲಿಂಗಾಯತರಾದರೆ, ಬಿಜೆಪಿ ಅಭ್ಯರ್ಥಿ ಕುರುಬ ಸಮುದಾಯದವರು. ಜಾತಿಯೇನೂ ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಾರದು.

ಹಾಗಂತ ಕೇವಲ ಹಣದಿಂದಲೇ ಚುನಾವಣೆಯನ್ನು ಗೆಲ್ಲಲಾಗದು. ಚುನಾವಣಾ ತಂತ್ರಗಳು, ಒಳ ಒಪ್ಪಂದಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಬೆಂಬಲಿಗ ಸದಸ್ಯರು ಎಷ್ಟಿದ್ದಾರೆ ಎಂಬುದು ಇಲ್ಲಿ ಮುಖ್ಯ.

ಇಲ್ಲಿ ಬಿಜೆಪಿ ಸೋಲಲ್ಲೇಬೇಕು ಎಂದು ಪಣ ತೊಟ್ಟಂತಿದೆ. ಇನ್ನೊಂದು ಕಡೆ ಎಲ್ಲ ಪಕ್ಷದವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಮತ್ತು ರಾಯಚೂರು-ಕೊಪ್ಪಳ ಎರಡೂ ಜಿಲ್ಲೆಗಳಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಕಾಂಗ್ರೆಸ್ನ ಶಾಸಕ ಅಮರೇಗೌಡ ಬಯ್ಯಾಪುರ  ಅವರು ತಮ್ಮ ಅಣ್ಣನ ಮಗ ಶರಣೇಗೌಡರನ್ನು ಮೇಲ್ಮನೆಗೆ ಕರೆದೊಯ್ಯುವುದು ನಿಶ್ಚಿತ ಎಂಬ ವಾತಾವರಣವಿದೆ.

ಕ್ಷೇತ್ರಕ್ಕೆ ಅಪರಿಚಿತರಾದ ವಿಶ್ವನಾಥ್ ಬನಹಟ್ಟಿಯವರಿಗೆ  ಬಿಜೆಪಿ ಟಿಕೆಟ್ ಸಿಗಲು ಯಾರು ಕಾರಣ? ವಿಶ್ವನಾಥ್ ಹೆಸರು ಸೂಚಿಸಿದ್ದು ದೇವದುರ್ಗದ ಶಾಸಕ ಬಿಜೆಪಿಯ ಶಿವನಗೌಡ ನಾಯ್ಕ. ಕಳೆದ ಸಲದ ಎಂಎಲ್ಸಿ ಚುನಾವಣೆಯಲ್ಲಿ    ಬಿಜೆಪಿ ಸೋಲಿಗೆ ಶಿವನಗೌಡರೂ ಕಾರಣ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ  ಉದ್ಯಮಿ ಟಿ.ವಿ ಚಂದ್ರಶೇಖರ್ ನೀಡಿದ ದುಡ್ಡನ್ನು ಗ್ರಾಪಂ ಸದಸ್ಯರಿಗೆ ಶಿವನಗೌಡರು ಹಂಚಲಿಲ್ಲ ಎಂಬ ಆರೋಪಗಳಿವೆ. ಆಗ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ ಇಟಗಿ ಕೂಡ ದೇವದುರ್ಗದವರೇ ಆಗಿದ್ದು, ಅವರು ಸೋತರೆ ಮುಂದೆ ಎಂಎಲ್ಎ ಚುನಾವಣೆಯಲ್ಲಿ ತನಗೇ ತೊಂದರೆ ಎಂದು ಶಿವನಗೌಡ ಆ ರೀತಿ ಆಟ ಆಡಿದ್ದರು.

ಕಾಂಗ್ರೆಸ್ಗೆ ಬಿಜೆಪಿ, ಜೆಡಿಎಸ್ ನಾಯಕರ ಬೆಂಬಲ!

ಮೊದಲೇ ಹೇಳಿದಂತೆ ಅಮರೇಗೌಡ ಬಯ್ಯಾಪುರ ಅವರಿಗೆ ಎಲ್ಲ ಪಕ್ಷಗಳಲ್ಲೂ ಮಿತ್ರರಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರೂ ತೆರೆಮರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನೆರವಾಗುತ್ತಿದ್ದಾರೆ.  ಯಲಬುರ್ಗದ ಬಿಜೆಪಿ ಶಾಸಕ ಮತ್ತು ಸಚಿವ ಹಾಲಪ್ಪ ಆಚಾರ್ ಕೂಡ ರೆಡ್ಡಿ ಲಿಂಗಾಯತ. ಅವರೂ ಕೂಡ ಬಿಜೆಪಿ ಗೆಲುವಿಗೆ ಶ್ರಮ ಹಾಕುತ್ತಿಲ್ಲ.    ಕೊಪ್ಪಳ ಸಂಸದ ಬಿಜೆಪಿಯ ಕರಡಿ ಸಂಗಣ್ಣ ಕೂಡ ಅಮರೇಗೌಡರ ಸ್ನೇಹದ ಕಾರಣಕ್ಕೆ ಬಿಜೆಪಿ ಪ್ರಚಾರದಲ್ಲಿ ಅಷ್ಟಾಗಿ ಆಸಕ್ತಿ ತೋರಿಸಿಲ್ಲ.

ಸಿಂಧನೂರಿನ  ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಕೂಡ ರೆಡ್ಡಿ ಲಿಂಗಾಯತರೇ. ಅವರ ಪಕ್ಷದ ಅಭ್ಯರ್ಥಿ ಇಲ್ಲದ್ದರಿಂದ ಅವರೂ ಪರೋಕ್ಷವಾಗಿ ಕಾಂಗ್ರೆಸ್ಗೆ ನೆರವಾಗುತ್ತಿದ್ದಾರೆ. ಮಾನ್ವಿಯ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯ್ಕ ಕೂಡ ಒಳಗೊಳಗೇ ಕಾಂಗ್ರೆಸ್ಗೆ ನೆರವಾಗುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಬಯ್ಯಾಪುರ ಕುಟುಂಬ ಧಾರಾಳವಾಗಿ ಖರ್ಚು ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಕೂಡ ಹಣದ ಚೀಲ ಕಟ್ಟಿಕೊಂಡೇ ಬಂದಿದ್ದಾರೆ. ಆದರೆ ಅವರು ಹೊರಗಿನವರು ಎಂಬ ಭಾವನೆಯಿದೆ ಮತ್ತು ಬಿಜೆಪಿಯ ನಾಯಕರೇ ಅವರ ಬೆಂಬಲಕ್ಕೆ ಇಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್ ಗೆದ್ದಂತೆಯೇ!

Tags: BJPCongress PartyKoppallegislative councilMLC ElectionRaichurಬಿಜೆಪಿ
Previous Post

ಸಂಸತ್ತಿನಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ 59ನೇ ಕೊಠಡಿ

Next Post

ತೆನೆ ಹೊತ್ತವಳು ಕಮಲ ಮುಡಿದಳೋ, ಕಮಲಾಕ್ಷಿಯೇ ತೆನೆ ಹೊತ್ತಳೋ!

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
Next Post
ತೆನೆ ಹೊತ್ತವಳು ಕಮಲ ಮುಡಿದಳೋ, ಕಮಲಾಕ್ಷಿಯೇ ತೆನೆ ಹೊತ್ತಳೋ!

ತೆನೆ ಹೊತ್ತವಳು ಕಮಲ ಮುಡಿದಳೋ, ಕಮಲಾಕ್ಷಿಯೇ ತೆನೆ ಹೊತ್ತಳೋ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada