• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ರಾಹುಲ್​ ಗಾಂಧಿ ಮುತ್ತು ಕೊಟ್ಟಿದ್ದು ಸತ್ಯನಾ..? ಉತ್ತರಿಸಲಾಗದೆ ಟ್ರ್ಯಾಪ್​ ಮಾಡಿತಾ..?

ಕೃಷ್ಣ ಮಣಿ by ಕೃಷ್ಣ ಮಣಿ
August 10, 2023
in ಅಂಕಣ, ಅಭಿಮತ
0
ರಾಹುಲ್​ ಗಾಂಧಿ ಮುತ್ತು ಕೊಟ್ಟಿದ್ದು ಸತ್ಯನಾ..? ಉತ್ತರಿಸಲಾಗದೆ ಟ್ರ್ಯಾಪ್​ ಮಾಡಿತಾ..?
Share on WhatsAppShare on FacebookShare on Telegram

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ( Rahul Gandhi ) ಸಂಸತ್​ನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್​ ಕಿಸ್​ ಕೊಟ್ಟಿದ್ರಾ..? ಅಥವಾ ಬಿಜೆಪಿ ( BJP) ನಾಯಕರು ರಾಹುಲ್​ ಗಾಂಧಿ ಆಡಿದ ಮೊನಚಾದ ಮಾತುಗಳನ್ನು ಎದುರಿಸಲು ಸಾಧ್ಯವಾಗದೆ ಈ ರೀತಿಯ ವಿಚಾರವನ್ನು ಮಾಧ್ಯಮಗಳ ( Media ) ಎದುರು ಹರಿಯಬಿಡ್ತಾ..? ಈ ರೀತಿಯ ಒಂದು ಅನುಮಾನ ( Doubt ) ಇಡೀ ದೇಶದ ( Nation ) ಜನರನ್ನು ( People ) ಕಾಡುವುದಕ್ಕೆ ಶುರು ಮಾಡಿದೆ. ಅದರಲ್ಲೂ ಲೋಕಸಭಾ ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್​ ಗಾಂಧಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆಗೆ ನಿಜವಾಗಲೂ ಹಾರುವ ಮುತ್ತು ನೀಡಿದರೇ..!? ಎನ್ನುವಂತೆ ಆಗಿದೆ. ಆದರೆ ಇದೊಂದು ಟ್ರ್ಯಾಪ್​ ಅನ್ನೋದು ಕಾಂಗ್ರೆಸ್​ ನಾಯಕರ ಬಲವಾದ ವಾದ. ಅದಕ್ಕೆ ಕಾರಣವನ್ನೂ ನೀಡಲಾಗಿದೆ.

ADVERTISEMENT

ಸಂಸತ್​ನಲ್ಲಿ ಬುಧವಾರ ರಾಹುಲ್​ ಮಾಡಿದ್ದೇನು..?

ರಾಹುಲ್​ ಗಾಂಧಿ ಸಂಸತ್​ ಸ್ಥಾನ ಅನರ್ಹಗೊಂಡ ಬಳಿಕ ಸಂಸತ್​ನಲ್ಲಿ ಮೊದಲ ಬಾರಿಗೆ ಮಾತನಾಡಿದ್ದರು. ಸುಪ್ರೀಂಕೋರ್ಟ್​ನಿಂದ ಶಿಕ್ಷೆಗೆ ತಡೆಯಾಜ್ಞೆ ತಂದ ಬಳಿಕ ಸಂಸತ್​ ಅಧಿವೇಶನಕ್ಕೆ ಹಾಜರಾಗಿದ್ದ ರಾಹುಲ್​ ಗಾಂಧಿ, ಮಣಿಪುರ ಹಿಂಸಾಚಾರ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ನಡೆದುಕೊಂಡ ರೀತಿ ಹಾಗು ನಡೆದುಕೊಳ್ಳಬೇಕಿದ್ದ ವಿಚಾರಗಳನ್ನು ಹಿಡಿದುಕೊಂಡು ಕಟು ಮಾತುಗಳಲ್ಲಿ ಟೀಕಿಸಿದ್ದರು. ರಾಹುಲ್​ ಗಾಂಧಿ ಭಾಷಣ ಕೇಲಿದ ಪ್ರತಿಯೊಬ್ಬರು ವಾವ್ಹ್.. ಎಷ್ಟೊಂದು ಅದ್ಬುತ ಭಾಷಣ ಎನ್ನುವಂತಿತ್ತು ರಾಹುಲ್​ ಗಾಂಧಿಯ ವಾಕ್​ಚಾತುರ್ಯ. ಆದರೆ ಕೊನೇ ಗಳಿಯಲ್ಲಿ ರಾಹುಲ್​ ಮಾಡಿದ ಸಣ್ಣದೊಂದು ಸನ್ಹೆ ಇಡೀ ಭಾಷಣವನ್ನು ನಡು ನೀರಿನಲ್ಲಿ ತೊಳೆದಂತೆ ಮಾಡಿದೆ. ಅದು ಫ್ಲೈಯಿಂಗ್​ ಕಿಸ್​.

ಲೋಕಸಭಾ ಸ್ಪೀಕರ್​ಗೆ 21 ಮಹಿಳಾ ಸಂಸದರಿಂದ ದೂರು..!

ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಮಾತನಾಡುವಾಗ ಕ್ಯಾಮೆರಾ ರಾಹುಲ್​ ಮೇಲೆಯೇ ಕೇಂದ್ರೀಕೃತವಾಗಿತ್ತು. ಆದರೂ ರಾಹುಲ್​ ಗಾಂಧಿ ಫ್ಲೈಯಿಂಗ್​ ಕಿಸ್​ ಕೊಡುವ ಯಾವುದೇ ವಿಡಿಯೋ ಸಿಕ್ಕಿಲ್ಲ. ಆದರೆ ಮಾತಾಡುವಾಗ ಸಂಸದ ಅಧೀರ್​ ರಂಜನ್ ಚೌಧರಿಯನ್ನು ಕೂರುವಂತೆ ಸನ್ಹೆ ಮಾಡುವ ರಾಹುಲ್​ ಗಾಂಧಿ, ತುಟಿ ಮೇಲೆ ಕೈಯಿಟ್ಟ ಒಂದು ಭಂಗಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಇದನ್ನು ಬಿಜೆಪಿ ಮಹಿಳಾ ಸಂಸದರನ್ನು ಉದ್ದೇಶಿಸಿ ಫ್ಲೈಯಿಂಗ್​ ಕಿಸ್​ ಕೊಟ್ಟರು ಎಂದು ಲೋಕಸಭೆ ಸ್ಪೀಕರ್​​ಗೆ 21 ಮಹಿಳಾ ಸಂಸದರು ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಸಾಕಷ್ಟು ಭಿನ್ನ ವಿಭಿನ್ನ ಚರ್ಚೆಗಳು ಶುರುವಾಗಿವೆ.

ಈ ಸುದ್ದಿಯನ್ನೂ ಓದಿ ; ಭಾರತೀಯರಲ್ಲಿ ಶವಸಂಸ್ಕಾರ: ದೇವದತ್ ಪಟ್ನಾಯಕ್ ಅವರ ಚಿಂತನೆ – ಭಾಗ 2

ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಹೇಳಿದ್ದೇನು..?

ಸ್ತ್ರೀ ದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂತಹ ಉದಾಹರಣೆ ಹಿಂದೆ ಎಂದೂ ಕಂಡಿರಲಿಲ್ಲ. ಇದು ಅವರ ಮಾನಸಿಕತೆ ತೋರಿಸುತ್ತದೆ. ಇದು ಅಶ್ಲೀಲ ಪ್ರಕರಣ ಎಂದಿದ್ದಾರೆ ಸ್ಮೃತಿ ಇರಾನಿ. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಂಸತ್​ ಒಳಗೆ ಫ್ಲೈಯಿಂಗ್​​ ಕಿಸ್​​​ ಇದೇ ಫಸ್ಟ್​ ಟೈಂ.. ರಾಹುಲ್​ ಗಾಂಧಿ ಭಾಷಣ ಮುಗಿಸಿ ಹೋಗುವಾಗ, ಸ್ಮೃತಿ ಇರಾನಿ ಮಾತಾಡಲು ಎದ್ದು ನಿಂತ್ರು. ಆಗ ರಾಹುಲ್​ ಗಾಂಧಿ ಪ್ಲೈಯಿಂಗ್​​ ಕಿಸ್​ ಕೊಟ್ಟಿದ್ದಾರೆ. ಇದು ಮಹಿಳಾ ಸದಸ್ಯರ ಜೊತೆ ನಡೆಸಿದ ಅನುಚಿತ ವರ್ತನೆ ಎಂದು ಟೀಕಿಸಿದ್ದಾರೆ.

ಮಣಿಪುರ ವಿಚಾರ ರಂಗು ಪಡೆಯಬಾರದು ಎಂದೇ ಕೃತ್ಯ..!

ರಾಹುಲ್​ ಗಾಂಧಿ ಮಣಿಪುರ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡು ಕಳಪೆ ನಿರ್ಧಾರಗಳು ಹಾಗು ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರುವ ವಿಚಾದ ಮೇಲೆ ಅಬ್ಬರದ ಮಾತನ್ನಾಡಿದ್ದರು. ಒಂದು ವೇಳೆ ಕಿಸ್​ ವಿಚಾರ ಇಲ್ಲದಿದ್ದರೆ ಇಂದಿನ ಎಲ್ಲಾ ಪತ್ರಿಕೆಗಳು ಹಾಗು ಎಲ್ಲಾ ಟಿವಿ ನ್ಯೂಸ್​ ಚಾನೆಲ್​ಗಳಲ್ಲೂ ರಾಹುಲ್​ ಗಾಂಧಿ ಭಾಷಣವೇ ಪ್ರಮುಖ ವಿಚಾರ ಆಗುತ್ತಿತ್ತು. ಇದನ್ನು ಮನಗಂಡ ಬಿಜೆಪಿ ಈ ರೀತಿ ರಾಹುಲ್​ ಗಾಂಧಿ ಫ್ಲೈಯಿಂಗ್​ ಕಿಸ್​ ಕೊಟ್ಟರು ಎಂದು ಪುಕಾರು ಎಬ್ಬಿಸಿದೆ ಎನ್ನಲಾಗ್ತಿದೆ. ಇನ್ನು ವಿಡಿಯೋದಲ್ಲೂ ರಾಹುಲ್​ ಗಾಂಧಿ ಸ್ಪೀಕರ್​ ಕಡೆಗೆ ತಿರುಗಿ ಮಾತನಾಡುವಾಗ ಬಾಯಿ ಮೇಲೆ ಬೆರಳು ಇಟ್ಟಂತೆ ಕಾಣಿಸುತ್ತದೆ. ಆದರೆ ಸ್ಮೃತಿ ಇರಾನಿ ಸಂಪೂರ್ಣವಾಗಿ ಎಡ ಭಾಗದಲ್ಲಿ ಇದ್ದಾರೆ. ಆಗಿದ್ದ ಮೇಲೆ ಫ್ಲೈಯಿಂಗ್​ ಕಿಸ್​ ಕೊಟ್ಟಿದ್ದು ಯಾರಿಗೆ..? ಸುಳ್ಳು ಹೇಳಲು ಲೆಕ್ಕಾಚಾರ ಬೇಡವೇ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.

ಕೃಷ್ಣಮಣಿ

Tags: BJPCongress PartyRahul GandhiSmriti Irani
Previous Post

ಭಾರತೀಯರಲ್ಲಿ ಶವಸಂಸ್ಕಾರ: ದೇವದತ್ ಪಟ್ನಾಯಕ್ ಅವರ ಚಿಂತನೆ – ಭಾಗ 2

Next Post

ಭಾಷೆ, ಮಾನಸಿಕ ಸ್ಥಿಮಿತತೆ ಬಗ್ಗೆ ಹೇಳಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
Next Post
ಮೈಸೂರು ಎಕ್ಸ್​​ಪ್ರೆಸ್​ ವೇ ಹೆದ್ದಾರಿ ಟೋಲ್​ ಏರಿಕೆ : ರಾಜ್ಯ ಸರ್ಕಾರದ ವಿರುದ್ಧ ಹೆಚ್​ಡಿಕೆ ಗರಂ

ಭಾಷೆ, ಮಾನಸಿಕ ಸ್ಥಿಮಿತತೆ ಬಗ್ಗೆ ಹೇಳಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada