ಸಂಸದೆ ಸುಮಲತಾರನ್ನ(sumalatha ) ಕಾಂಗ್ರೆಸ್ ನಿರ್ಲಕ್ಷಿಸಿದ್ದೇ ಇದೀಗ ಮಂಡ್ಯದಲ್ಲಿ(Mandya) ಕಾಂಗ್ರೆಸ್ ಗೆ ದುಬಾರಿಯಾಗಿ ಪರಿಣಮಿಸಲಿದ್ಯಾ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣ ಇಂದು ತಮ್ಮ ನಿರ್ಧಾರ ಘೋಷಿಸುವ ಸಂದರ್ಭದಲ್ಲಿ ಸಂಸದೆ ಸುಮಲತಾ ಆಡಿದ ಆ ಮಾತುಗಳು. ಬಿಜೆಪಿ (BJP)ಸೇರ್ಪಡೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಪರೋಕ್ಷವಾಗಿ ಡಿಕೆಶಿ (Dk shivakumar) ಗೆ ಟಕ್ಕರ್ ಕೊಟ್ಟಿದ್ದಾರೆ.
![](https://pratidhvani.com/wp-content/uploads/2024/04/IMG_6571.jpeg)
ಕಾಂಗ್ರೆಸ್ (Congress) ಗೆ ಈ ಹಿಂದೆಯೂ ನನ್ನ ಅವಶ್ಯಕತೆ ಇರಲಿಲ್ಲ, ಈಗಲೂ ಇಲ್ಲ, ಇನ್ಮುಂದೆಯೂ ನನ್ನ ಅವಶ್ಯಕತೆ ಇಲ್ಲ ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಕೊಟ್ಟಿದ್ದಾರೆ. ಸೋ ನನಗೂ ಕಾಂಗ್ರೆಸ್ ನ ಅವಶ್ಯಕತೆ ಇಲ್ಲ . ಹೀಗಾಗಿ ನಾನು ಕಾಂಗ್ರೆಸ್ ಬಗ್ಗೆ ಆಸಕ್ತಿ ಹೊಂದಿಲ್ಲ. ಮೋದಿಯವರ (narendra modi) ಆಡಳಿತ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಮಂಡ್ಯದಲ್ಲಿ ಕಾಂಗ್ರೆಸ್ ಸುಮಲತಾರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ.
![](https://pratidhvani.com/wp-content/uploads/2024/04/IMG_6570.jpeg)
ಕಾಂಗ್ರೆಸ್ ನಾಯಕರು ತಮ್ಮನ ಸರಿಯಾಗಿ ನಡೆಸಿಕೊಂಡಿಲ್ಲ, ಅವಮಾನಿಸುವ ರೀತಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಸುಮಲತಾ, ಬಿಜೆಪಿಯಲ್ಲಿ ಇದ್ದುಕೊಂಡೇ ಮಂಡ್ಯಗಾಗಿ ಕೆಲಸ ಮಾಡ್ತಿನಿ. ಹಾಗಾಗಿ ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡೋದಾಗಿ ಘೋಷಿದ್ದಾರೆ. ಆ ಮೂಲಕ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಿ ಬುದ್ಧಿ ಕಲಿಸಬೇಕೆಂಬ ಲೆಕ್ಕಾಚಾರ ಸುಮಲತಾ ಅವರದ್ದು. ಕಾಂಗ್ರೆಸ್ ಈ ಮೈತ್ರಿಯನ್ನ ಹೇಗೆ ಎದುರಿಸಲಿದೆ. ಇದಕ್ಕೆ ಪ್ರತಿಯಾಗಿ ಡಿಕೆಶಿ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.