ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ಕುರಿತಂತೆ ಭಾರತ ತನ್ನ ಹೇಳಿಕೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ದಾಖಲಿಸಿದೆ.
ಎರಡೂ ದೇಶಗಳು ಯತಾಸ್ಥಿತಿಯನ್ನು ಕಾಪಾಡಬೇಕೆಂದು ಒತ್ತಾಯಿಸಿರುವ ಭಾರತ, ಪರಸ್ಪರ ರಾಕೆಟ್ ದಾಳಿಯನ್ನು ಖಂಡಿಸಿದೆ.
ಇಸ್ರೇಲ್ ಮತ್ತು ಫೆಲಸ್ತೀನ್ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನುನ ಶಮನಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ರವಿಮೂರ್ತಿ ಆಗ್ರಹಿಸಿದ್ದಾರೆ.
ಎಲ್ಲಾ ರೀತಿಯ ಹಿಂಸೆಯನ್ನು ಭಾರತ ವಿರೋಧಿಸುತ್ತದೆ. ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ಸುವ್ಯವಸ್ಥೆಯನ್ನು ಹದಗೆಡಿಸುತ್ತಿದೆ. ಗಾಝಾದಿಂದ ನಡೆಯುತ್ತಿರುವ ರಾಕೆಟ್ ದಾಳಿ ಹಾಗೂ ಇಸ್ರೇಲ್ನಿಂದ ನಡೆಯುತ್ತಿರುವ ದಾಳಿಯನ್ನೂ ನಾವು ಖಂಡಿಸುತ್ತೇವೆ. ಇಸ್ರೇಲ್ ಮತ್ತು ಪೆಲೆಸ್ತೀನ್ ಮಾತುಕತೆ ಮುಂದುವರೆಸುತ್ತದೆ. ಭಾರತ ಫೆಲೆಸ್ತೀನ್ನ ನ್ಯಾಯಬದ್ಧ ಉದ್ದೇಶವನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.
ಉದ್ವಿಗ್ನತೆಯ ಶಮನಕ್ಕೆ ಉಭಯಪಕ್ಷಗಳು ಯತ್ನಿಸಬೇಕು ಹಾಗೂಈಗಿರುವ ಯಥಾಸ್ಥಿತಿಯನ್ನು ಕಾಪಾಡಬೇಕು. ಲಕ್ಷಾಂತರ ಭಾರತೀಯರ ಹೃದಯದಲ್ಲಿ ಜೆರುಸಲೆಂಗೆ ವಿಶೇಷ ಸ್ಥಾನವಿದೆ. ಜೆರುಸಲೆಂನಲ್ಲಿ ಶಾಂತಿ ಕಾಪಾಡಬೇಕು ಎಂದು ತಿರುಮೂರ್ತಿ ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ ಈ ಹಿಂಸಾಚಾರದಲ್ಲಿ ಮಡಿದ ಭಾರತೀಯ ಮೂಲದ ಸೌಮ್ಯ ಸಂತೋಷ್ ಸೇರಿದಂತೆ ಉಂಟಾದ ಅನೇಕ ಸಂಕಟಗಳ ಕುರಿತು ಪ್ರಸ್ತಾಪಿಸಿದ ತಿರುಮೂರ್ತಿ, ಎರಡು-ರಾಜ್ಯಗಳ ಪರಿಹಾರಕ್ಕೆ ಭಾರತದ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
“ಈ ಘಟನೆಗಳು ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ನಡುವಿನ ಸಂವಾದವನ್ನು ತಕ್ಷಣ ಪುನರಾರಂಭಿಸುವ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದೆ. ಉಭಯ ಪಕ್ಷಗಳ ನಡುವೆ ನೇರ ಮತ್ತು ಅರ್ಥಪೂರ್ಣವಾದ ಮಾತುಕತೆಗಳ ಅನುಪಸ್ಥಿತಿಯು ಪಕ್ಷಗಳ ನಡುವಿನ ವಿಶ್ವಾಸದ ಕೊರತೆಯನ್ನು ವಿಸ್ತರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
“ವೆಸ್ಟ್ ಬ್ಯಾಂಕ್ ಮತ್ತು ಗಾಜಾದ ಇತರ ಭಾಗಗಳಿಗೆ ಹಿಂಸಾಚಾರ ಹರಡುವ ಬಗ್ಗೆ ನಾವು ಆತಂಕ ವ್ಯಕ್ತಪಡಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ದೀರ್ಘಕಾಲಿನ ಸಂಘರ್ಷದ ಇತಿಹಾಸವಿರುವ ಪ್ಯಾಲೆಸ್ತೇನ್ ನೆಲದಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ.