• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಕಾಂಗ್ರೆಸ್​​ ನೇತೃತ್ವದ INDIA ಒಕ್ಕೂಟ 295 ಸ್ಥಾನ ಗೆಲ್ಲುತ್ತೆ, ರಾಹುಲ್​ ವಿಶ್ವಾಸದ ಗುಟ್ಟೇನು..?

ಪ್ರತಿಧ್ವನಿ by ಪ್ರತಿಧ್ವನಿ
June 3, 2024
in ರಾಜಕೀಯ
0
ಕಾಂಗ್ರೆಸ್​​ ನೇತೃತ್ವದ INDIA ಒಕ್ಕೂಟ 295 ಸ್ಥಾನ ಗೆಲ್ಲುತ್ತೆ, ರಾಹುಲ್​ ವಿಶ್ವಾಸದ ಗುಟ್ಟೇನು..?
Share on WhatsAppShare on FacebookShare on Telegram

ಲೋಕಸಭಾ ಚುನಾವಣಾ ಫಲಿತಾಂಶ ಜೂನ್​ 4 ಮಂಗಳವಾರ ಹೊರ ಬೀಳಲಿದೆ. ಆದರೆ ಜೂನ್ 1 ರಂದು ಮತದಾನೋತ್ತರ ಸಮೀಕ್ಷೆಗಳ ಮಾಹಿತಿ ಹೊರ ಬಿದ್ದಿದ್ದು ಬಿಜೆಪಿ ನೇತೃತ್ವದ NDA ಸರ್ಕಾರ 3ನೇ ಬಾರಿ ಅಧಿಕಾರದ ಗದ್ದುಗೆ ಏರೋದು ಕನ್ಪರ್ಮ್ ಎನ್ನುತ್ತಿದೆ. ಬಿಜೆಪಿ ನಾಯಕರ ಮೊಗದಲ್ಲಿ ಮಂದಹಾಸ ಮೂಡಿದ್ರೆ ಕಾಂಗ್ರೆಸ್​​ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ವಿಶ್ವಾಸ ಮಾತ್ರ ಕಡಿಮೆ ಆಗಿಲ್ಲ. ನಾವು 295 ಸ್ಥಾನಗಳನ್ನು ಗೆದ್ದೇ ಗೆಲ್ತೇವೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಈಗ ಬಂದಿರುವುದು ಮೋದಿ ಮೀಡಿಯಾದ Modi Media ಸರ್ವೇ ಎನ್ನುವ ಮೂಲಕ ಅಣಕ ಮಾಡಿದ್ದಾರೆ. ಆದರೆ ಈ ರೀತಿಯ ಅಚಲ ವಿಶ್ವಾಸಕ್ಕೆ ಕಾರಣ ಏನಿರಬಹುದು ಎನ್ನುವ ಪ್ರಶ್ನೆ ಕಾಂಗ್ರೆಸ್​ ಕಾರ್ಯಕರ್ತರನ್ನೇ ಕಾಡುತ್ತಿದೆ.

ADVERTISEMENT

ಇತ್ತೀಚಿಗಿನ ವರ್ಷಗಳಲ್ಲಿ ಬಹುತೇಕ ಸರ್ವೇಗಳು ಮೋದಿ ನೇತೃತ್ವದ ಬಿಜೆಪಿ ಪರವಾಗಿ ಬರುವುದು ಕಂಡು ಬರುತ್ತಿದೆ. ಅದರಲ್ಲಿ ಕೆಲವು ಬಾರಿ ಕಾಂಗ್ರೆಸ್​​ ಕೂಡ ಗೆದ್ದು ಬೀಗಿದೆ. ಅಂದರೆ ಮೋದಿಯನ್ನು ಮೆಚ್ಚಿಸಲು ಟಿವಿ ಮಾಧ್ಯಮದವರು ಬೇಕಾಬಿಟ್ಟಿ ಸರ್ವೇ ಮಾಡುತ್ತಾರೆ ಅನ್ನೋದು ಕಾಂಗ್ರೆಸ್​ನ ನಂಬಿಕೆ. ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಸರ್ವೇಗಳಲ್ಲಿ ಬಿಜೆಪಿಗೆ 95 ಸ್ಥಾನ ನೀಡಿದ್ದವು. ಕಾಂಗ್ರೆಸ್​ ಪಕ್ಷ ಹಾಗು ಬಿಜೆಪಿ ಪಕ್ಷ ಸಮಬಲ ಸಾಧಿಸಲಿವೆ ಎನ್ನಲಾಗಿತ್ತು. ಆದರೆ ಕಾಂಗ್ರೆಸ್​ ಪಕ್ಷ ಮ್ಯಾಜಿಕ್​ ನಂಬರ್​ 113 ಅಂಕಿಯನ್ನು ದಾಟಿ, 135 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಅಂದರೆ ಸರ್ವೇಗಳ ಲೆಕ್ಕಾಚಾರ ಹಳಿ ತಪ್ಪಿದೆ ಎನ್ನುವುದು ಬಟಾಬಯಲಾಗಿತ್ತು.

ಕರ್ನಾಟಕದಲ್ಲಿ ಕಳೆದ ವರ್ಷ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಚುನಾವಣೋತ್ತರ ಸಮೀಕ್ಷೆಗಳನ್ನು ಮೀರಿ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೇ ಕಾರಣದಿಂದ ಲೋಕಸಭಾ ಚುನಾವಣೆ ವೇಳೆ ಮೋದಿ ಮೀಡಿಯಾಗಳ ಫ್ಯಾಂಟಸಿ ಸಮೀಕ್ಷೆ ಎಂದಿದ್ದಾರೆ ರಾಹುಲ್​ ಗಾಂಧಿ. ಚಾರ್‌ಸೋ ಪಾರ್‌‌ ಅನ್ನೋ ಘೋಷಣೆ ಜೊತೆಗೆ ಚುನಾವಣೆ ಮಾಡಿದ್ದ ಬಿಜೆಪಿಯನ್ನು ಮೆಚ್ಚಿಸಲು ಈ ರೀತಿಯ ಸರ್ವೇ ಕೊಡಲಾಗಿದೆ. ಆದರೆ ಈ ಸಲ ಮೋದಿ ಪ್ರಧಾನಿ ಆಗಲ್ಲ, ಇಂಡಿಯಾ ಕೂಟವೇ ಅಧಿಕಾರಕ್ಕೆ ಬರೋದು ನಿಶ್ಚಿತ ಅನ್ನೋ ನಂಬಿಕೆ ಕಾಂಗ್ರೆಸ್‌ ಪಕ್ಷದ್ದು. ಆದ್ರೆ ಎಲ್ಲಾ ಸರ್ವೇಗಳಲ್ಲೂ ಮೋದಿ ಸರ್ಕಾರವೇ ನಿಶ್ಚಿತ ಎನ್ನುತ್ತಿವೆ.

ನ್ಯೂಯಾರ್ಕ್ ಟೈಮ್ಸ್‌, ಅಲ್ ಝಜೀರಾ ಸೇರಿದಂತೆ ಇಂಟರ್​ನ್ಯಾಷನಲ್​ ಮೀಡಿಯಾಗಳಲ್ಲೂ ಮೋದಿಗೆ ಬಹುಪರಾಕ್​ ಎನ್ನುತ್ತಿವೆ. ಆದರೆ ಯಾವುದೇ ರಾಜಕೀಯ ಪಕ್ಷ ಮತದಾನ ನಡೆದ ದಿನ ಮತಗಳ ಎಣಿಕೆ ಜೊತೆಗೆ ಬೂತ್​ ಮಟ್ಟದಲ್ಲಿ ಎಷ್ಟೆಷ್ಟು ಮತಗಳಿಕೆ ಆಗಿದೆ ಅನ್ನೋ ಲೆಕ್ಕಚಾರ ಸಂಗ್ರಹ ಮಾಡುವುದು ರೂಢಿ. ಅದರಂತೆ ಕಾಂಗ್ರೆಸ್​ ಸೇರಿದಂತೆ ಎಲ್ಲರೂ ಮಾಹಿತಿ ಸಂಗ್ರಹ ಮಾಡಿರುತ್ತಾರೆ. ಅದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್​ ನೇತೃತ್ವದ INDIA ಒಕ್ಕೂಟ 295 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುತ್ತಿದೆ. ರಾಹುಲ್​ ಗಾಂಧಿ ಕೂಡ ಇದು ಎಕ್ಸಿಟ್ ಪೋಲ್ ಅಲ್ಲ, ಮೋದಿ ಮೀಡಿಯಾ ಸಮೀಕ್ಷೆ. ಇದು ಮೋದಿಯವರ ಫ್ಯಾಂಟಸಿ ಸಮೀಕ್ಷೆ. ಸಿಧು ಮೂಸೆವಾಲಾರ 295 ಹಾಡು ಕೇಳಿದ್ದೀರಾ..? ಕಾಂಗ್ರೆಸ್‌ಗೆ ಈಸಲ 295 ಸೀಟು ಪಕ್ಕಾ ಎಂದಿದ್ದಾರೆ. ಸರ್ವೇ ಬಹುತೇಕ ಸಮಯದಲ್ಲಿ ಸತ್ಯವಾಗಿರುವುದು ನಿಜ. ಕೆಲವೊಮ್ಮೆ ಸರ್ವೇ ಲೆಕ್ಕಾಚಾರ ಉಲ್ಟಾ ಆಗಿರುವುದೂ ಕೂಡ ಅಷ್ಟೇ ಸತ್ಯ. ಕಾಂಗ್ರೆಸ್​ ವಿಶ್ವಾಸಕ್ಕೆ ಉತ್ತರ ನಾಳೆ ಮಧ್ಯಾಹ್ನದ ವೇಳೆಗೆ ಸಿಗಲಿದೆ.

ಕೃಷ್ಣಮಣಿ

Tags: BJPcongressElectionlokasabha electionModi
Previous Post

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ

Next Post

ಇಂದು ವಿಧಾನ ಪರಿಷತ್ ನ 6 ಕ್ಷೇತ್ರಗಳಿಗೆ ಮತದಾನ

Related Posts

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
Top Story

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

by ಪ್ರತಿಧ್ವನಿ
April 29, 2026
0

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಉತ್ತರ ಪ್ರದೇಶದ ಶಾಸಕಿ ಹಾಗೂ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
Next Post
ನಾನು ಮತ್ತು ವಸಂತ ಬಂಗೇರ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದ್ದೆವು ನಿಷ್ಠುರ,

ಇಂದು ವಿಧಾನ ಪರಿಷತ್ ನ 6 ಕ್ಷೇತ್ರಗಳಿಗೆ ಮತದಾನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada