• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಉಪಚುನಾವಣೆಯಲ್ಲಿ ಜೆಡಿಎಸ್ ಸೋಲು : ದಿಢೀರ್ ಮೌನವಾದ ಎಚ್‌ಡಿಕೆ ; ಕಾರಣಗಳೇನು?

ನಚಿಕೇತು by ನಚಿಕೇತು
November 21, 2021
in ಕರ್ನಾಟಕ, ರಾಜಕೀಯ
0
ಸಿದ್ದರಾಮಯ್ಯ ಕುಲಗೆಟ್ಟ ರಾಜಕೀಯ ಮಾಡುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ
Share on WhatsAppShare on FacebookShare on Telegram

ಉಪಸಮರದಲ್ಲಿ ಮಾತಿನ ಕಿಚ್ಚು ಹಚ್ಚಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅದ್ಯಾಕೋ ಮೌನಕ್ಕೆ ಶರಣಾಗಿದ್ದಾರೆ. ಯಾರ ವಿರುದ್ಧವೂ ಮಾತನಾಡಲ್ಲ ಅಂತಿದ್ದಾರೆ. ಟೀಕೆಗಳಿಂದ ಮತ ಸೆಳೆಯಲು ಸಾಧ್ಯವಿಲ್ಲ ಎಂದು ಅರಿತಿರೋ ಕುಮಾರಸ್ವಾಮಿ ಏಕಾಏಕಿ ಮೌನಮುನಿಯಾಗಿದ್ದಾರೆ.

ADVERTISEMENT

ಮಾತು ಮನೆ ಕೆಡಿಸಿದ್ದಾಯ್ತು, ಉಪ ಚುನಾವಣೆಯಲ್ಲಿ ಠೇವಣಿ ಜಪ್ತಿ ಆಗಿದ್ದು ಆಯ್ತು. ಈ ಎಲ್ಲಾ ಪರಿಣಾಮಗಳು ದಳಪತಿಗೆ ಸೋಲಿನ ಪಾಠ ಕಲಿಸಿದೆ. ಕುಮಾರಸ್ವಾಮಿ ಏಕಾಏಕಿ ಮೌನಧಾರಣ ಮಾಡಿದ್ದಾರೆ. ಯಾರ ವಿರುದ್ಧವೂ ಮಾತನಾಡಲ್ಲ ಅಂತ ಸದ್ಯಕ್ಕೆ ಶಪಥ ಮಾಡಿದ್ದಾರೆ.

ಹೌದು, ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು. ಇದು ಕನ್ನಡ ಪ್ರಸಿದ್ಧ ಗಾದೆ. ಸದ್ಯಕ್ಕೆ ಈ ಗಾದೆ ಕುಮಾರಸ್ವಾಮಿಗೆ ಹೇಳಿ ಮಾಡಿಸಿದಂತಿದೆ. ಮಾತಿನ ಸಂಘರ್ಷ ಚುನಾವಣೆಯಲ್ಲಿ ಜೆಡಿಎಸ್ ಅನ್ನು ತಳಕಾಣಿಸಿದೆ. ಎರಡೂ ಕ್ಷೇತ್ರಗಳಲ್ಲಿ ಠೇವಣಿ ಜಪ್ತಿಯಾಗಿ ದಳಪತಿ ಘೋರ ಮುಖಭಂಗ ಅನುಭವಿಸಿದ್ದಾರೆ. ಈ ಅವಮಾನ ದಳಪತಿಯನ್ನು ಮಹಾಮೌನಕ್ಕೆ ಜಾರುವಂತೆ ಮಾಡಿದೆ.

ಉಪ ಚುನಾವಣೆಯ ಸೋಲಿನ ಬಳಿಕ ದಳಪತಿ ಸೈಲೆಂಟ್ ಆಗ್ತಿದ್ದಾರೆ. ಸೋಲಿನಿಂದ ಮಾಜಿ ಸಿಎಂ ಕುಮಾರಸ್ವಾಮಿ ಪಾಠ ಕಲಿತಂತಿದೆ. ಟೀಕೆ ಟಿಪ್ಪಣಿಗಳಿಂದ ಮತ ಸೆಳೆಯಲು ಸಾಧ್ಯವಿಲ್ಲ ಅನ್ನೋದು ದಳಪತಿಗೆ ಅರಿವಾದಂತಿದೆ. ಇದಕ್ಕೆ ಕಾರಣಗಳು ಹೀಗಿವೆ..

ದಳಪತಿಗೆ ಜ್ಞಾನೋದಯ!

ಕಾರಣ 1 : ವ್ಯಕ್ತಿ, ಪಕ್ಷ ಸಂಘಟನೆಗಳ ಬಗ್ಗೆ ಮಾತನಾಡೋದು ಬೇಡ
ಕಾರಣ 2 : ಟೀಕೆಗಳಿಂದ ಸಂಘಟನೆ ಮೇಲೆ ಪ್ರತಿಕೂಲ ಪರಿಣಾಮ
ಕಾರಣ 3 : ಜೆಡಿಎಸ್ನ ಮಹತ್ವಾಕಾಂಕ್ಷಿ ಮಿಷನ್ – 123ಗೆ ಹೊಡೆತ
ಕಾರಣ 4 : ಸಂಘಟನೆ ಬಗ್ಗೆ ಮಾತನಾಡಿದರೆ, ಕಾರ್ಯಕರ್ತರು ದೂರ
ಕಾರಣ 5 : ಟೀಕೆ – ಟಿಪ್ಪಣಿಗಳಿಂದ ಪಕ್ಷಕ್ಕೆ ಯಾವ ಪ್ರಯೋಜನ ಇಲ್ಲ
ಕಾರಣ 6 : ಜನರ ಭಾವನಾತ್ಮಕ ನಂಬಿಕೆಗೆ ಘಾಸಿ ಮಾಡೋದು ಬೇಡ
ಕಾರಣ 7 : ತಮ್ಮ ಟೀಕೆ – ಟಿಪ್ಪಣಿಗಳು ಎದುರಾಳಿಗಳಿಗೆ ಲಾಭ ಆಗ್ತಿದೆ
ಕಾರಣ 8 : ಮತಗಳ ಕ್ರೋಢೀಕರಣಕ್ಕೆ ಮಾತಿನ ಜಗಳ ಮಾರಕವಾಗ್ತಿದೆ

ವ್ಯಕ್ತಿ, ಪಕ್ಷ ಸಂಘಟನೆಗಳ ಬಗ್ಗೆ ಮಾತನಾಡೋದು ಬೇಡ. ಈ ಟೀಕೆಗಳಿಂದ ಸಂಘಟನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ. ಜೆಡಿಎಸ್ನ ಮಹತ್ವಾಕಾಂಕ್ಷಿ ಮಿಷನ್ – 123ಗೆ ಹೊಡೆತ ಬೀಳುತ್ತೆ ಅಂತ ಹೆಚ್ಡಿಕೆಗೆ ಜ್ಞಾನೋದಯವಾಗಿದೆ. ಸಂಘಪರಿವಾರದ ಬಗ್ಗೆ ಮಾತನಾಡಿದರೆ, ಕಾರ್ಯಕರ್ತರು ದೂರವಾಗುವ ಭಯ ಆವರಿಸಿದೆ.

ಇನ್ನು, ಜನರ ಭಾವನಾತ್ಮಕ ನಂಬಿಕೆಗೆ ಘಾಸಿ ಮಾಡೋದು ಬೇಡ, ತಮ್ಮ ಟೀಕೆ – ಟಿಪ್ಪಣಿಗಳು ಎದುರಾಳಿಗಳಿಗೆ ಲಾಭ ಆಗ್ತಿದೆ. ಮತಗಳ ಕ್ರೋಢೀಕರಣಕ್ಕೆ ಮಾತಿನ ಜಗಳ ಮಾರಕವಾಗ್ತಿದೆ ಅಂತ ಹೆಚ್ಡಿಕೆ ಕಡೆಗೂ ಪಾಠ ಕಲಿತಿದ್ದಾರೆ.

ಒಟ್ನಲ್ಲಿ ಎರಡೂ ಬೈ ಎಲೆಕ್ಷನ್ನಲ್ಲಿ ಸುಖಾಸುಮ್ಮನೆ ಮಾತಾಡಿ ಠೇವಣಿ ಕಳೆದುಕೊಂಡ ದಳಪತಿಗೆ ತಾನು ಮಾಡಿದ ತಪ್ಪಿನ ಅರಿವಾದಂತಿದೆ. ಮತ್ತೆ ಅದನ್ನೇ ಮುಂದುವರೆಸಿದ್ರೆ ಮಿಷನ್-123ಗೆ ಭಾರೀ ಪೆಟ್ಟು ಬೀಳುತ್ತೆ ಅನ್ನೋ ಜ್ಞಾನೋದಯವಾಗಿದೆ. ಹೀಗಾಗಿಯೇ ಹೆಚ್ಡಿಕೆ ಯಾರ ವಿರುದ್ಧವೂ ಮಾತನಾಡಲ್ಲ ಅಂತ ಹೇಳೋ ಮೂಲಕ ಮೌನಮುನಿಯಾಗಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿಕರೋನಾಜೆಡಿಎಸ್ ಪಕ್ಷಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಹೊಸ ವರ್ಷಾರಂಭದಿಂದ ಸಿದ್ದಉಡುಪು, ಪಾದರಕ್ಷೆಗಳ ದರ ಏರಿಕೆ

Next Post

ಹೈದರಾಬಾದ್‌ : ಚಂದ್ರಬಾಬು ನಾಯ್ಡು ಘಟನೆ ಕುರಿತು ಜ್ಯೂ.ಎನ್‌ಟಿಆರ್ ಮಾತು

Related Posts

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!
ಕರ್ನಾಟಕ

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

by ಪ್ರತಿಧ್ವನಿ
May 25, 2026
0

ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದ ವೇಳೆ, ಅವರ ಸಂಚಾರ ಮಾರ್ಗದ ಸಮೀಪ ಸ್ಫೋಟಕ ಪತ್ತೆಯಾಗಿದ್ದ...

Read moreDetails
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
Next Post
ಹೈದರಾಬಾದ್‌ :  ಚಂದ್ರಬಾಬು ನಾಯ್ಡು ಘಟನೆ ಕುರಿತು ಜ್ಯೂ.ಎನ್‌ಟಿಆರ್ ಮಾತು

ಹೈದರಾಬಾದ್‌ : ಚಂದ್ರಬಾಬು ನಾಯ್ಡು ಘಟನೆ ಕುರಿತು ಜ್ಯೂ.ಎನ್‌ಟಿಆರ್ ಮಾತು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada