• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಹೊಸ ವರ್ಷಾರಂಭದಿಂದ ಸಿದ್ದಉಡುಪು, ಪಾದರಕ್ಷೆಗಳ ದರ ಏರಿಕೆ

Any Mind by Any Mind
November 21, 2021
in ದೇಶ
0
ಹೊಸ ವರ್ಷಾರಂಭದಿಂದ ಸಿದ್ದಉಡುಪು, ಪಾದರಕ್ಷೆಗಳ ದರ ಏರಿಕೆ
Share on WhatsAppShare on FacebookShare on Telegram

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ತಗ್ಗಿಸಿ ಜನರಿಗೆ ಉಪಕಾರ ಮಾಡಿದ್ದಾಗಿ ಹೇಳಿಕೊಳ್ಳುತ್ತಿರುವ ಮೋದಿ ಸರ್ಕಾರವು ಈಗ ಬಟ್ಟೆಗಳು, ಸಿದ್ದ ಉಡುಪುಗಳು, ಪಾದರಕ್ಷೆಗಳು ಸೇರಿದಂತೆ ಜನಸಾಮಾನ್ಯರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು(ಜಿಎಸ್ಟಿ) ಶೇ.5 ರಿಂದ 12ಕ್ಕೆ  ಏರಿಕೆ ಮಾಡಿದೆ. ಪರಿಷ್ಕೃತ ದರಗಳು ಜನವರಿ 2022 ರಿಂದ ಜಾರಿಗೆ ಬರಲಿವೆ. ಪರೋಕ್ಷ ತೆರಿಗೆ ಮತ್ತು ಸುಂಕಗಳ ಕೇಂದ್ರೀಯ ಮಂಡಳಿಯು ತೆರಿಗೆ ದರ ಏರಿಕೆ ಅಧಿಸೂಚನೆಯನ್ನು ನವೆಂಬರ್ 18ರಂದು ಹೊರಡಿಸಿದೆ. 

ADVERTISEMENT

ಭಾರತೀಯ ಜವಳಿ ಉತ್ಪಾದಕರ ಸಂಘದ(ಸಿಎಂಎಐ) ಅಂದಾಜಿನಂತೆ ತೆರಿಗೆ ದರ ಹೆಚ್ಚಳದ ಹಿನ್ನೆಲೆಯಲ್ಲಿ ಶೇ.15 ರಿಂದ 20ರಷ್ಟು ದರ ಏರಿಕೆ ಆಗುವ ನಿರೀಕ್ಷೆ ಇದೆ. ಬಟ್ಟೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಶೇ.5ರಂದು 12ಕ್ಕೆ ಏರಿಕೆ ಮಾಡಲಾಗಿದೆ. ಸಿದ್ದ ಉಡುಪುಗಳ ಮೇಲಿನ ತೆರಿಗೆ ದರವನ್ನು ಎಲ್ಲಾ ಮೌಲ್ಯದ ಸರಕುಗಳಿಗೂ ಶೇ.5 ರಿಂದ 12ಕ್ಕೆ ಏರಿಸಲಾಗಿದೆ. ಇದುವರೆಗೆ 1000 ರುಪಾಯಿ ಮಾರಾಟ ದರ ಮೇಲ್ಪಟ್ಟ ವಸ್ತುಗಳಿಗೆ ಮಾತ್ರ ಶೇ.12ರಷ್ಟು ತೆರಿಗೆ ಇತ್ತು. 1000 ರುಪಾಯಿ ಮಾರಾಟ ದರಕ್ಕಿಂತ ಕಡಮೆ ಇದ್ದ ವಸ್ತುಗಳ ಮೇಲಿನ ತೆರಿಗೆಯು ಶೇ.5ರಷ್ಟು ಮಾತ್ರ ಇತ್ತು.

ಸಿಎಂಎಐ ಅಂದಾಜಿನ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ವಹಿವಾಟಾಗುವ ಸಿದ್ದ ಉಡುಪುಗಳ ಪೈಕಿ ಶೇ.80ರಷ್ಟು 1000 ರುಪಾಯಿಗಿಂತ ಕಡಮೆ ಮಾರುಕಟ್ಟೆ ದರ ಇರುವಂತಹವು. ಅಂದರೆ, ಕೇಂದ್ರ ಸರ್ಕಾರ ತೆರಿಗೆ ಪರಿಷ್ಕರಿಸಿರುವುದರಿಂದ ಅದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲಾಗಲಿದೆ. 

ನೇಯ್ದ ಬಟ್ಟೆಗಳು, ಸಿಂಥೆಟಿಕ್ ನೂಲು, ಪೈಲ್ ಬಟ್ಟೆಗಳು, ಹೊದಿಕೆಗಳು, ಡೇರೆಗಳು, ಮೇಜುಅಲಂಕರಣ ಬಟ್ಟೆ ಪರಿಕರಗಳು, ರಗ್ಗುಗಳು ಮತ್ತಿತರ ವಸ್ತ್ರಗಳು ಸೇರಿದಂತೆ ಎಲ್ಲಾ ಬಟ್ಟೆಗಳ ಮೇಲಿನ ತೆರಿಗೆಯನ್ನು ಶೇ.5ರಿಂದ 12ಕ್ಕೆ ಏರಿಸಲಾಗಿದೆ. ಹಾಗೆಯೇ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ.5ರಿಂದ 12ಕ್ಕೆ ಏರಿಸಲಾಗಿದೆ. 1000 ರುಪಾಯಿಗಿಂತ ಕಡಮೆ ಮಾರಾಟದರ ಇದ್ದ ಪಾದರಕ್ಷೆಗಳಿಗೆ ಇದುವರೆಗೆ ಶೇ.5ರಷ್ಟು ಮಾತ್ರ ತೆರಿಗೆ ಇದೆ.

ತೆರಿಗೆದರವನ್ನು ಏರಿಸುವ ಕೇಂದ್ರ ಸರ್ಕಾರದ ಕ್ರಮದಿಂದ ನಮಗೆ ಅತೀವ ನಿರಾಶೆಯಾಗಿದೆ ಎಂದು ಭಾರತೀಯ ಜವಳಿ ಉತ್ಪಾದಕರ ಸಂಘವು ಅಸಮಾಧಾನ ವ್ಯಕ್ತಪಡಿಸಿದೆ. ಸಿಎಂಎಐ ಅಲ್ಲದೇ ಉದ್ಯಮದ ಇತರ ಸಂಘಟನೆಗಳೊಂದಿಗೆ ಸೇರಿ ಸರ್ಕಾರ ಮತ್ತು ಜಿಎಸ್ಟಿ ಮಂಡಳಿಗೆ ತೆರಿಗೆ ದರ ಪರಿಷ್ಕರಿಸದಂತೆ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರವಾಗಲೀ, ಜಿಎಸ್ಟಿ ಮಂಡಳಿಯಾಗಲೀ ನಮ್ಮ ಮನವಿಯನ್ನು ಆಲಿಸಿಲ್ಲ ಎಂದು ಸಿಎಂಎಐ ಅಧ್ಯಕ್ಷ ರಾಜೇಶ್ ಮಸಂದ್ ಹೇಳಿದ್ದಾರೆ. 

ಕಚ್ಚಾವಸ್ತುಗಳ ದರ, ಸಾಗಣೆ ಮತ್ತು ವಿತರಣೆ ದರ ಸೇರಿದಂತೆ ಎಲ್ಲಾ ವಿಧದ ಉತ್ಪಾದನಾ ವೆಚ್ಚಗಳು ಹೆಚ್ಚಿವೆ. ಈ ಕಾರಣದಿಂದಾಗಿ ತೆರಿಗೆ ಪರಿಷ್ಕರಿಸುವ ಮುಂಚಿತವಾಗಿಯೇ ಸಿದ್ದ ಉಡುಪುಗಳು ಸೇರಿದಂತೆ ವಿವಿಧ ಬಟ್ಟೆಗಳ ಮೇಲಿನ ದರಗಳು ಶೇ.15-20ರಷ್ಟು ದರ ಏರಿಕೆ ನಿರೀಕ್ಷಿಸಲಾಗಿದೆ. 1000 ರುಪಾಯಿಗಿಂತ ಕೆಳಪಟ್ಟ ದರದ ಸರಕುಗಳ ಮೇಲೂ ತೆರಿಗೆ ಹೇರುವ ನಿರ್ಧಾರದಿಂದ ಜನಸಾಮಾನ್ಯರಿಗೆ ಹೊರೆಯಾಗವುದಷ್ಟೇ ಅಲ್ಲ ಒಟ್ಟಾರೆ ಉದ್ಯಮಕ್ಕೆ ಹಿನ್ನಡೆಯಾಗಲಿದೆ ಎಂದು ಸಿಎಂಎಐ ತಿಳಿಸಿದೆ.

ಜವಳಿ ಉದ್ಯಮದಲ್ಲಿರುವ ತಿರುಗುಮುರುಗಾದ ಸುಂಕ ರಚನೆಯನ್ನು ಸರಿಪಡಿಸುವ ಉತ್ಸಾಹದಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಾಸ್ತವವಾಗಿ ತಿರುಗುಮುರುಗು ಸುಂಕ ರಚನೆಯು ಉದ್ಯಮದ ಶೇ.15ರಷ್ಟು ಮಾತ್ರ ಇದೆ. ಇದನ್ನು ಸೂಕ್ತ ರೀತಿಯಲ್ಲಿ ಸರಿಪಡಿಸದೇ ನೇರವಾಗಿ ಶೇ.85ರಷ್ಟು ಉದ್ಯಮಕ್ಕೆ ಮಾರಕವಾಗುವ ರೀತಿಯಲ್ಲಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದು ಸರಿಯಾದ ಕ್ರಮವಲ್ಲ ಎಂದು ಸಿಎಂಎಐ ಹೇಳಿದೆ. ಪ್ರಾಥಮಿಕ ಹಂತದ ತೆರಿಗೆಗಳಿಗಿಂತ ಅಂತಿಮ ಸಿದ್ದ ಉತ್ಪನ್ನದ ಮೇಲಿನ ತೆರಿಗೆಗಳು ಕಡಮೆಯಾದ ತಿರುವುಮುರುವಾದ ಸುಂಕ ರಚನೆ ಉದ್ಭವಿಸುತ್ತದೆ.

Tags: BJPCovid 19PriceHikeಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಮುನ್ನೆಲೆಗೆ ಬಂತು 1993ರ ಮುಂಬೈ ಸ್ಪೋಟ ಪ್ರಕರಣ; ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದ್ರಾ ಸಚಿವ ಮಲ್ಲಿಕ್?

Next Post

ಉಪಚುನಾವಣೆಯಲ್ಲಿ ಜೆಡಿಎಸ್ ಸೋಲು : ದಿಢೀರ್ ಮೌನವಾದ ಎಚ್‌ಡಿಕೆ ; ಕಾರಣಗಳೇನು?

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
Next Post
ಸಿದ್ದರಾಮಯ್ಯ ಕುಲಗೆಟ್ಟ ರಾಜಕೀಯ ಮಾಡುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ಉಪಚುನಾವಣೆಯಲ್ಲಿ ಜೆಡಿಎಸ್ ಸೋಲು : ದಿಢೀರ್ ಮೌನವಾದ ಎಚ್‌ಡಿಕೆ ; ಕಾರಣಗಳೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada