Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಹಾವಳಿ : ಫ್ಲೆಕ್ಸ್, ಬ್ಯಾನರ್ ಮಾಫಿಯಾದ ಬೇರಿಗೆ ಕೈ ಹಾಕಿದ ಬಿಬಿಎಂಪಿ!

ಪ್ರತಿಧ್ವನಿ

ಪ್ರತಿಧ್ವನಿ

August 6, 2022
Share on FacebookShare on Twitter

ಅದೆಷ್ಟೇ ಜಾಗೃತಿ ಮೂಡಿಸಿದರೂ, ಎಷ್ಟೇ ಹೇಳಿದರು ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಲೇ ಇರುತ್ತೆ. ಇದಕ್ಕೊಂದು ಕಡಿವಾಣ ಹಾಕೋದಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ಇದುವರೆಗೆ ಸಾಧ್ಯ ಆಗಿರಲಿಲ್ಲ. ಆದ್ರೀಗ ಬಿಬಿಎಂಪಿ ಮಾತಿಗೆ ಬಗ್ಗದವನಿಗೆ ದೊಣ್ಣೆಯ ಏಟು ಎಂಬಂತೆ ಬ್ಯಾನರ್, ಫ್ಲೆಕ್ಸ್ ಹಾವಳಿಯ ಬುಡಕ್ಕೆ ಕೈ ಹಾಕಿದೆ. ಅಷ್ಟಕ್ಕೂ ಈ ಬಾರಿ ಬಿಬಿಎಂಪಿ ಮಾಡಿದ್ದೇನು..? ಅನ್ನೋದೇ ಇಲ್ಲಿನ ಇಂಟ್ರೆಸ್ಟಿಂಗ್ ವಿಚಾರ.

ಹೆಚ್ಚು ಓದಿದ ಸ್ಟೋರಿಗಳು

ಸ್ವಾತಂತ್ರ್ಯ ದೊರೆತು 76 ವರ್ಷಗಳಾದರೂ ಅನೇಕ ಜಾತಿಗಳು ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂಸಾಚಾರ: 60 ಮಂದಿ ಬಂಧನ

ವಂದೇ ಭಾರತ್‌ ರೈಲು ಫುಲ್ ಕ್ಲೀನ್

ಮಾತಿಗೆ ಬಗ್ಗದವರಿಗೆ ದೊಣ್ಣೆ ಏಟು ಎಂಬ ಗಾದೆ ಮಾತು ಹಿಡಿದ ಪಾಲಿಕೆ‌ ಅಧಿಕಾರಿಗಳು

ಬೆಂಗಳೂರಿನ ಅಂದಕ್ಕೆ ಕುತ್ತು ಬರುವಂತೆ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಅನ್ನು ಕಂಡಕಂಡಲ್ಲಿ ಅಳವಡಿಕೆ ಮಾಡುತ್ತಾರೆ. ಈಗಾಗಲೇ ಈ ಬಗ್ಗೆ ಹೈ ಕೋರ್ಟ್ ಕೂಡ ಬಿಬಿಎಂಪಿ ನಿಯಮದ ಅಡಿಯಲ್ಲಿ ಬ್ಯಾನರ್, ಫ್ಲೆಕ್ಸ್, ಕಟೌಟ್ ಗಳನ್ನು ಹಾಕಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಇದು ಬೃಹತ್ ಬೆಂಗಳೂರಿನ ಅಂದವನ್ನು ಕೆಡಿಸುತ್ತದೆ. ಆದರೆ ಈ ಬಗ್ಗೆ ಎಷ್ಟೇ ಹೇಳಿದರೂ ಜನರು ಮಾತ್ರ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳನ್ನು ಹಾಕುತ್ತಲೇ ಇದ್ದರು‌ ಆದರೀಗ ಮತ್ತೊಂದು ಹಂತಕ್ಕೆ ಬಿಬಿಎಂಪಿ ಹಾಗೂ ಫ್ಲೆಕ್ಸ್ ಬ್ಯಾನರ್ ಕಟ್ಟುವವರ ನಡುವಿನ ಸಮರ ಹೋಗಿದೆ. ಮಾತಿಗೆ ಬಗ್ಗದವರಿಗೆ ದೊಣ್ಣೆ ಏಟು ಎಂಬ ಗಾದೆ ಮಾತಿನಂತೆ ಪಾಲಿಕೆ‌ ಅಧಿಕಾರಿಗಳು ಅನಧಿಕೃತ ಪ್ಲೆಕ್ಸ್ ಬ್ಯಾನರ್ ಗಳನ್ನು ಬುಡಸಮೇತ ಕಿತ್ತುಹಾಕಲು ಹೊರಟಿದ್ದಾರೆ.

ಫ್ಲೆಕ್ಸ್, ಬ್ಯಾನರ್ ಅಳವಡಿಸುವವರಲ್ಲ.. ಈ ಬಾರಿ ಬಿಬಿಎಂಪಿ ಅಧಿಕಾರಿಗಳ ಟಾರ್ಗೆಟ್ಟೇ ಬೇರೆ

ಅನಧಿಕೃತ ಫ್ಲೆಕ್ಸ್ ಬ್ಯಾನರ್ ವಿರುದ್ದ ಸಮರ ಸಾರಿದ ಪಾಲಿಕೆ ಅಧಿಕಾರಿಗಳ ಹೊಸ ವರಸೆ ಇದು. ಫ್ಲೆಕ್ಸ್ , ಬ್ಯಾನರ್ ತಯಾರಿಕಾ ಘಟಕಗಳ ಮೇಲೆಯೇ ಪಾಲಿಕೆ ಅಧಿಕಾರಿಗಳು ಈ ಬಾರಿ ಗುರಿಯಿಟ್ಟಿದ್ದಾರೆ. ಒಂದೇ ವಾರದಲ್ಲಿ 2500ಕ್ಕೂ ಹೆಚ್ಚು ಪ್ಲೆಕ್ಸ್, ಬ್ಯಾನರ್ ತೆರವಾಗಿದ್ದಲ್ಲದೆ, 20ಕ್ಕೂ ಹೆಚ್ಚು ದೂರು ದಾಖಲಾಗಿದೆ. ಬೆಂಗಳೂರಲ್ಲಿ ಸಂಪೂರ್ಣವಾಗಿ ಅನಧಿಕೃತ ಪ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆಗೆಂದೇ ಪಾಲಿಕೆ ತಂಡ ರೆಡಿ ಮಾಡಿದೆ. ಪ್ರತಿ ವಾರ್ಡ್ ನಲ್ಲೂ ರೆವಿನ್ಯೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ತಂಡ ನಿತ್ಯ ತೆರವು ಕಾರ್ಯಾಚರಣೆ ಮಾಡಲಿದ್ದು, ಫ್ಲೆಕ್ಸ್, ಬ್ಯಾನರ್ ಮುದ್ರಿಸುವ ಅಂಗಡಿಗಳ ಮೇಲೂ ಕಣ್ಣಿಟ್ಟಿದೆ. ಈಗಾಗಲೇ ನಗರದ ಕಾಟನ್ ಪೇಟೆ, ನ್ಯೂತರಗುಪೇಟೆ, ಚಿಕ್ಕ ಪೇಟೆ ಭಾಗದಲ್ಲಿ ಫ್ಲೆಕ್ಸ್, ಬ್ಯಾನರ್ ಮುದ್ರಣಾಲಯಕ್ಕೆ ಬೀಗ ಹಾಕಲಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನ ಎಲ್ಲಾ ವಲಯಗಳಲ್ಲೂ ಪ್ಲೆಕ್ಸ್ ಪ್ರಿಂಟಿಂಗ್ ಪ್ರೆಸ್ ಮೇಲೆಯೇ ಕಣ್ಣಿಡಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಬಿಬಿಎಂಪಿ ಸ್ಪೆಷಲ್ ಕಮಿಷನರ್ ದೀಪಕ್ ಹೇಳಿದ್ದಾರೆ‌.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿಲ್ಲದ ಅನಧಿಕೃತ ಫ್ಲೆಕ್ಸ್ ಬ್ಯಾನರ್ ಹಾವಳಿ

ಒಟ್ಟಾರೆ ಬೆಂಗಳೂರು ನಗರದಲ್ಲಿ ಹಾಕಲಾಗುವ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳ ಸಂಖ್ಯೆಯೇ ಅಪರಿಮಿತ. ಎಲ್ಲೇ ಕಾಣ್ಣಾಯಿಸಿದರೂ ಬ್ಯಾನರ್ ಗಳೇ ನೇತಾಡುತ್ತಿರುತ್ತವೆ. ಇದನ್ನು ಬಿಬಿಎಂಪಿ ಬ್ಯಾನ್ ಮಾಡಿದ್ದರೂ ಕೂಡ ಜನರು, ರಾಜಕಾರಣಿಗಳು ರಾಜಾರೋಷವಾಗಿ ಹಾಕಿ ತಿರುಗಾಡುತ್ತಾರೆ. ಆದರೀಗ ಇಂಥಾ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳನ್ನು ತಯಾರಿಸಿ ಕೊಡುವ ಪ್ರಿಂಟಿಂಗ್ ಪ್ರೆಸ್ ಗಳ ಮೇಲೆಯೇ ಬಿಬಿಎಂಪಿ ಅಧಿಕಾರಿಗಳ ಕಣ್ಣು ಬಿದ್ದಿದ್ದೆ. ಆದರೆ ಇದು ಎಷ್ಟರ ಮಟ್ಟಿಗೆ ಫ್ಲೆಕ್ಸ್ ಮುಕ್ತ ಬೆಂಗಳೂರು ಎಂಬ ಕನಸನ್ನು ನನಸು ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

RS 500
RS 1500

SCAN HERE

Pratidhvani Youtube

«
Prev
1
/
5600
Next
»
loading
play
Jaipur’s ‘Money Heist’ moment as mask man throws notes in air Ascene #latestnews #viral #viralshorts
play
Shivaraj Tangadagi :ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದೂಗಳು ನೆನಪಾಗ್ತಾರಾ?
«
Prev
1
/
5600
Next
»
loading

don't miss it !

ವಿಮಾನ ಅಪಘಾತದಲ್ಲಿ ಭಾರತದ ಬಿಲಿಯನೇರ್ ಉದ್ಯಮಿ ಹರ್ಪಾಲ್ ರಾಂಧವಾ ಅವರ  ಮಗ ಸಾವು!
Top Story

ವಿಮಾನ ಅಪಘಾತದಲ್ಲಿ ಭಾರತದ ಬಿಲಿಯನೇರ್ ಉದ್ಯಮಿ ಹರ್ಪಾಲ್ ರಾಂಧವಾ ಅವರ ಮಗ ಸಾವು!

by ಪ್ರತಿಧ್ವನಿ
October 3, 2023
ಜೆ.ಎಚ್. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ : ಬಸವರಾಜ ಬೊಮ್ಮಾಯಿ
Top Story

ಜೆ.ಎಚ್. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ : ಬಸವರಾಜ ಬೊಮ್ಮಾಯಿ

by Prathidhvani
October 1, 2023
ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ  ಪಡೆದ ನಟ ರಾಘವೇಂದ್ರ ರಾಜ್ ಕುಮಾರ್
Top Story

ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ  ಪಡೆದ ನಟ ರಾಘವೇಂದ್ರ ರಾಜ್ ಕುಮಾರ್

by ಲಿಖಿತ್‌ ರೈ
October 2, 2023
ಈದ್ ಸ್ವಲಾತ್ ವಾಹನ ಜಾಥಾ ಸೈಲೆನ್ಸರ್, ಹಾರ್ನ್ ಗಳಿಂದ ಸಾರ್ವಜನಿಕರಿಗೆ ಕಿರಿಕಿರಿ
ಇದೀಗ

ಈದ್ ಸ್ವಲಾತ್ ವಾಹನ ಜಾಥಾ ಸೈಲೆನ್ಸರ್, ಹಾರ್ನ್ ಗಳಿಂದ ಸಾರ್ವಜನಿಕರಿಗೆ ಕಿರಿಕಿರಿ

by Prathidhvani
September 30, 2023
ಬಿಜೆಪಿ ಟಿಕೇಟ್ ಸಿಗದಿದ್ದರೆ ಯೋಚಿಸಿ ಮುನ್ನಡೆಯುವೆ ಎಂದ ರಮೇಶ ಕತ್ತಿ..!
ಇದೀಗ

ಬಿಜೆಪಿ ಟಿಕೇಟ್ ಸಿಗದಿದ್ದರೆ ಯೋಚಿಸಿ ಮುನ್ನಡೆಯುವೆ ಎಂದ ರಮೇಶ ಕತ್ತಿ..!

by ಲಿಖಿತ್‌ ರೈ
September 30, 2023
Next Post
ನಮ್ಶ ಶಿವಸೇನೆ ನಾಯಕ ಸಂಜಯ್ ರಾವತ್ ನಿಜವಾದ ಪುಷ್ಪ, ಅವರು ‘ತಲೆ ಬಾಗೋದಿಲ್ಲ’ : ಉದ್ಧವ್ ಠಾಕ್ರೆ

'ಬಿಜೆಪಿ ಇದುವರೆಗೆ ಗುಲಾಬಿ ನೋಡಿದೆ, ಇನ್ನು ಶಿವ ಸೈನಿಕರು ಮುಳ್ಳು ತೋರಿಸಲಿದ್ದಾರೆ' : ಉದ್ಧವ್ ಠಾಕ್ರೆ

ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ

ರಾಮಮಂದಿರಕ್ಕೆ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್‌ ನಾಯಕರಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ : ಅಮಿತ್‌ ಶಾ

ಝೀ ನ್ಯೂಸ್ ಸಂಪಾದಕ ರಜನೀಶ್ ಅಹುಜಾಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್

ಝೀ ನ್ಯೂಸ್ ಸಂಪಾದಕ ರಜನೀಶ್ ಅಹುಜಾಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist