ಡಿಕೆ ಬ್ರದರ್ಸ್ (DK brothers) ಭದ್ರಕೋಟೆಯಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ (Amit sha) ಮತಬೇಟೆ ಆಡಲಿದ್ದಾರೆ.. ಬೆಂಗಳೂರು ಗ್ರಾಮಾಂತರದ (Bangalore rural) ಮೂಲಕ ಕರುನಾಡ ಅಖಾಡಕ್ಕೆ ಕಾಲಿಡಲಿರೋ ಅಮಿತ್ ಶಾ, ಡಿಕೆ ಬ್ರದರ್ಸ್ ಕೋಟೆಯನ್ನ ಕಬ್ಬ ಮಾಡಲು ರಣತಂತ್ರ ಹಣೆದಿದ್ದಾರೆ. ರಾಜ್ಯದಲ್ಲಿ ಕಮಲವನ್ನ ಅರಳಿಸಲು ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ.
![](https://pratidhvani.com/wp-content/uploads/2024/03/Prime-Minister-Narendra-Modi-and-BJP-national-president-Amit-Shah-2-1024x576.jpg)
ನಿನ್ನೆ ತಡರಾತ್ರಿಯೇ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದಾರೆ. ಡಿಕೆ ಬ್ರದರ್ಸ್ ಕಟ್ಟಿ ಹಾಕಲು ಮೈತ್ರಿ ನಾಯಕರು ಪಣ ತೊಟ್ಟಿದ್ದು, ಇಂದು ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ (Dr. Manjunath) ಪರ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ದು ಸಂಜೆ 4.40ಕ್ಕೆ ಹೆಲಿಕಾಪ್ಟರ್ ಮೂಲಕ ಚನ್ನಪಟ್ಟಣಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ. ಸಂಜೆ 4.40ರಿಂದ 5.50ರವರೆಗೆ ರೋಡ್ ಶೋನಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ರೋಡ್ ವೇಳೆ ಅಮಿತ್ ಶಾಗೆ ಸಾಥ್ ನೀಡಲಿದ್ದಾರೆ.
![](https://pratidhvani.com/wp-content/uploads/2024/04/IMG_6469.jpeg)
ಮೊದಲ ಪ್ರವಾಸದಲ್ಲೇ 10 ಲೋಕಸಭಾ ಕ್ಷೇತ್ರ ಟಾರ್ಗೆಟ್ ಮಾಡಲಾಗಿದೆ.. 5 ಕ್ಷೇತ್ರಗಳ ಶಕ್ತಿ ಪ್ರಮುಖರ ಸಮ್ಮೇಳನ ಆಯೋಜನೆ ಮಾಡಲಾಗಿದೆ.. ಅಲ್ಲದೇ ಇಂದು ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ಸಹ ನಡೆಯಲಿದೆ.ಈ ಮೂಲಕ ದೇಶ ವಿಭಜನೆಯ ಮಾತನಾಡಿದ್ದ ಡಿ.ಕೆ ಸುರೇಶ್ಗೆ ಠಕ್ಕರ್ ನೀಡಲು ರಣತಂತ್ರ ಹೆಣೆದಿದ್ದಾರೆ. ಟ್ನಲ್ಲಿ ಇಂದು ರಾಜ್ಯದಲ್ಲಿ ಅಮಿತ್ ಶಾ ಮೆನಿಯಾ ಕಳೆಗಟ್ಟಲಿದೆ. ಶತಾಯಗತಾಯವಾಗಿ ಲೋಕಸಭೆ ಚುನಾವಣೆಯಲ್ಲಿ ಡಿಕೆ ಕೋಟೆಯನ್ನು ವಶಪಡಿಸಿಕೊಳ್ಳಲೇಬೇಕೆಂದು ಬಿಜೆಪಿ ಪಣ ತೊಟ್ಟಿದ್ದು ಈ ನಿಟ್ಟಿನಲ್ಲಿ ಅಮಿತ್ ಶಾ ಅಖಾಡಕ್ಕಿಳಿದು ಅಬ್ಬರದ ಪ್ರಚಾರ ನಡೆಸಲಿದ್ದಾರೆ.