• Home
  • About Us
  • ಕರ್ನಾಟಕ
Friday, November 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಡ್ರ್ಯಾಗನ್ ಮ್ಯಾನ್: ಹೋಮೋ ಸೆಪಿಯನ್‌ಗಳ‌ ಅತಿ ಹತ್ತಿರದ ಹೊಸ ಮಾನವ ಪ್ರಭೇದ ಪತ್ತೆ

ಫಾತಿಮಾ by ಫಾತಿಮಾ
June 30, 2021
in ದೇಶ
0
ಡ್ರ್ಯಾಗನ್ ಮ್ಯಾನ್: ಹೋಮೋ ಸೆಪಿಯನ್‌ಗಳ‌ ಅತಿ ಹತ್ತಿರದ ಹೊಸ ಮಾನವ ಪ್ರಭೇದ ಪತ್ತೆ
Share on WhatsAppShare on FacebookShare on Telegram

ಈಶಾನ್ಯ ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆಗೆ ವಿಜ್ಞಾನಿಗಳು ‘ಹೋಮೋ ಲಾಂಗಿ’ (homo longi) ಅಥಾವಾ ‘ಡ್ರ್ಯಾಗನ್ ಮ್ಯಾನ್’ ಎಂದು ಹೆಸರಿಸಿದ್ದಾರೆ. ಇದುವರೆಗೆ ‘ನಿಯಾಂಡರ್ತಲ್’ (Neandarthal) ಪ್ರಭೇದವನ್ನು ಆಧುನಿಕ ಮನುಷ್ಯನ ಸಮೀಪದ ಸಂಬಂಧಿ ಎಂದು ಕರೆಯಲಾಗಿತ್ತು. ಆದರೆ ಹೊಸದಾಗಿ ಕಂಡುಹಿಡಿದ ಡ್ರ್ಯಾಗನ್ ಮ್ಯಾನ್ ಅನ್ನು ಇನ್ನು ಮುಂದೆ ಮನುಷ್ಯನ ಸಮೀಪದ ಸಂಬಂಧಿ ಎಂದು ಗುರುತಿಸಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.

ADVERTISEMENT

1930 ರ ದಶಕದಲ್ಲಿ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ಹಾರ್ಬಿನ್ ಕಪಾಲವನ್ನ ಕಂಡುಹಿಡಿಯಲಾಯಿತು, ಆದರೆ ಅದನ್ನು ಜಪಾನಿನ ಸೈನ್ಯದಿಂದ ರಕ್ಷಿಸಲು 85 ವರ್ಷಗಳ ಕಾಲ ಬಾವಿಯಲ್ಲಿ ಅಡಗಿಸಿಡಲಾಗಿತ್ತು ಎಂದು ವರದಿಗಳಿವೆ. ನಂತರ ಅದನ್ನು ಬಾವಿಯಿಂದ ಅಗೆದು 2018 ರಲ್ಲಿ ಹೆಬೀ ಜಿಇಒ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ ಕಿಯಾಂಗ್‌ಗೆ ಹಸ್ತಾಂತರಿಸಲಾಗಿತ್ತು.

 “ನಮ್ಮ ಅಧ್ಯಯನಗಳಲ್ಲಿ, ಹರ್ಬಿನ್ ಗುಂಪು ನಿಯಾಂಡರ್ತಲ್‌ ಗಳಿಗಿಂತ ಹೋಮೋಸೇಪಿಯನ್ನರೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದೆ . ಅಂದರೆ, ನಿಯಾಂಡರ್ತಲ್‌ ಗಳಿಗಿಂತಲೂ  ಇತ್ತೀಚಿನ ಸಾಮಾನ್ಯ ಪೂರ್ವಜರನ್ನು   ಹರ್ಬಿನ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ” ಎಂದು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಸಹ ಲೇಖಕ ಕ್ರಿಸ್ ಸ್ಟ್ರಿಂಗರ್  ಎಎಫ್‌ಪಿಗೆ ತಿಳಿಸಿದ್ದಾರೆ.

 “ಇವುಗಳನ್ನು ವಿಭಿನ್ನ ಜಾತಿ ಎಂದು ಪರಿಗಣಿಸಿದರೂ, ಇದು ನಮ್ಮ ಸಹೋದರಿ (ಹೆಚ್ಚು ನಿಕಟ ಸಂಬಂಧ ಹೊಂದಿರುವ) ಜಾತಿಗಳು” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಆವಿಷ್ಕಾರಗಳನ್ನು ದಿ ಇನ್ನೋವೇಶನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಈ ತಲೆಬುರುಡೆಯು ಕನಿಷ್ಠ 1,46,000 ವರ್ಷಗಳ ಹಿಂದಿನದು. ಇದು ಆಧುನಿಕ ಮಾನವರ ಗಾತ್ರಕ್ಕೆ ಹೋಲಿಸಬಹುದಾದ ಮೆದುಳನ್ನು ಹೊಂದಿದೆ. ಅದರ ಜೊತೆಗೆ ದೊಡ್ಡ ಕಣ್ಣಿನ ಸಾಕೆಟ್‌ಗಳು, ದಪ್ಪ ಹುಬ್ಬು ರೇಖೆಗಳು, ಅಗಲವಾದ ಬಾಯಿ ಮತ್ತು ದೊಡ್ಡ ಗಾತ್ರದ ಹಲ್ಲುಗಳನ್ನು ಹೊಂದಿದೆ.

 “ಇದು ವಿಶಿಷ್ಟವಾದ ಪುರಾತನ ಮಾನವ ಲಕ್ಷಣಗಳನ್ನು ತೋರಿಸುತ್ತದೆಯಾದರೂ, ಹಾರ್ಬಿನ್ ಕಪಾಲವು ಈ ಹಿಂದೆ ಗುರುತಿಸಲಾದ ಎಲ್ಲಾ ಹೋಮೋ ಪ್ರಭೇದಗಳಿಗಿಂತ ಭಿನ್ನವಾಗಿದೆ” ಎಂದು ಅಧ್ಯಯನದ ಸಹ ಲೇಖಕ ಜಿ ಹೇಳಿದ್ದಾರೆ.

ಹೋಮೋ ಲಾಂಗಿ ಎಂಬ ಹೆಸರು ಲಾಂಗ್ ಜಿಯಾಂಗ್‌ನಿಂದ ಬಂದಿದೆ, ಇದರ ಅರ್ಥ “ಡ್ರ್ಯಾಗನ್ ನದಿ” ಎಂದಾಗಿದೆ.

ಕಾಡಿನ ಪ್ರವಾಹ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 50 ವರ್ಷ ವಯಸ್ಸಿನ ಪುರುಷನ ಕ್ರೇನಿಯಂ ಇದಾಗಿದೆ ಎಂದು ವಿಜ್ಞಾನಿಗಳ ತಂಡ ನಂಬಿದೆ.

 “ಭೂಮಿಯ ಮೇಲೆ ವಾಸಿಸುತ್ತಿದ್ದ ಬೇಟೆಗಾರ ಜನಾಂಗ ಇದಾಗಿತ್ತು ” ಎಂದು ಸ್ಟ್ರಿಂಗರ್ ಹೇಳಿದ್ದಾರೆ.  ಹಾರ್ಬಿನ್‌ನಲ್ಲಿ‌ ಈಗಿರುವ ಚಳಿಗಾಲದ ತಾಪಮಾನವನ್ನು ಗಣನೆಗೆ ತೆಗೆದುಕೊಂಡರೆ ಅವರು ನಿಯಾಂಡರ್‌ತಲ್‌ಗಳಿಗಿಂತ ಕಠಿಣವಾದ ಶೀತ ವಾತಾವರಣದಲ್ಲಿ ಬದುಕುತ್ತಿದ್ದರೆಂದು ತೋರುತ್ತಿದೆ” ಎಂದು ಹೇಳುತ್ತಾರೆ.

“ತಲೆಬುರುಡೆ ದೊರೆತ ಸ್ಥಳ ಮತ್ತು ದೊಡ್ಡ ಗಾತ್ರದ ಮನುಷ್ಯನನ್ನು ಗಮನಿಸಿದರೆ, ಹೆಚ್. ಲಾಂಗಿ ಕಠಿಣ ವಾತಾವರಣಕ್ಕೆ ಹೊಂದಿಕೊಂಡಿರಬಹುದು ಮತ್ತು ಏಷ್ಯಾದಾದ್ಯಂತ ಚದುರಿಹೋಗಿದ್ದಿರಬಹುದು” ಎಂದು ವಿಜ್ಞಾನಿಗಳ ತಂಡವು ಊಹಿಸಿದೆ.

 ವಂಶ ವೃಕ್ಷ

 ಸಂಶೋಧಕರು ಮೊದಲು 600 ಕ್ಕೂ ಹೆಚ್ಚು ಗುಣಲಕ್ಷಣಗಳನ್ನು ಬಳಸಿಕೊಂಡು ಕ್ರೇನಿಯಂನ ಬಾಹ್ಯ ರೂಪವಿಜ್ಞಾನವನ್ನು ಅಧ್ಯಯನ ಮಾಡಿ ನಂತರ ಇತರ ಪಳೆಯುಳಿಕೆಗಳಿಗೆ ಸಂಬಂಧಿಸಿದ ವಂಶವೃಕ್ಷವನ್ನು ನಿರ್ಮಿಸಲು ಕಂಪ್ಯೂಟರ್ ಮಾದರಿಯನ್ನು ಬಳಸಿಕೊಂಡು ಲಕ್ಷಾಂತರ ಸಿಮ್ಯುಲೇಶನ್‌ಗಳನ್ನು ರಚಿಸಿದ್ದಾರೆ.

 “ಹಾರ್ಬಿನ್ ಮತ್ತು ಚೀನಾದ ಇತರ ಕೆಲವು ಪಳೆಯುಳಿಕೆಗಳು ನಿಯಾಂಡರ್ತಲ್ ಮತ್ತು ಹೋಮೊ ಸೇಪಿಯನ್ಸ್ ಜೊತೆಗೆ ಮಾನವರ ಮೂರನೇ ವಂಶಾವಳಿಯೂ ಇತ್ತು ಎಂಬುವುದನ್ನು ನಿರೂಪಿಸುತ್ತವೆ” ಎಂದು ಸ್ಟ್ರಿಂಗರ್ ವಿವರಿಸುತ್ತಾರೆ.

ಹೋಮೋ ಲಾಂಗಿ ಇದ್ದ ಸಮಯದಲ್ಲಿ ಹೋಮೋ ಸೇಪಿಯನ್ಸ್ ಪೂರ್ವ ಏಷ್ಯಾವನ್ನು ಪ್ರವೇಶಿಸಿದ್ದರೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಪುರಾತತ್ತ್ವ ಶಾಸ್ತ್ರದ ಅಧ್ಯಯನ ವಸ್ತುಗಳ ಕೊರತೆಯಿಂದಾಗಿ ಹೊಮೋಲಾಂಗಿಗಳ ಸಂಸ್ಕೃತಿ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ಅನೇಕ ಉತ್ತರ ಸಿಗದ ಪ್ರಶ್ನೆಗಳಿವೆ.

Tags: Dragon ManNew Human Species
Previous Post

ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಯ ಕುರಿತು ಎದ್ದಿರುವ ಗೊಂದಲದ ಕುರಿತು ಸರಳವಾಗಿ ವಿವರಿಸಿದ ಮರತಜ್ಞ ವಿಜಯ್‌ ನಿಶಾಂತ್

Next Post

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಹಗರಣ; ಜೆಡಿಎಸ್ ವರಿಷ್ಟರ ಮೇಲೆ ಆರೋಪ ಹೊರಿಸಿದ ಆಡಿಯೊ ನನ್ನದೇ – ಚಲುವನಾರಾಯಣಸ್ವಾಮಿ

Related Posts

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!
Top Story

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!

by ಪ್ರತಿಧ್ವನಿ
November 14, 2025
0

ಬಿ.ಎಸ್.ವಿಶ್ವನಾಥ್ ಅವರ ಆದರ್ಶಗಳನ್ನು ಪಾಲಿಸುವಂತೆ ಹಾಗೂ ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಯುವಜನತೆಗೆ ಕರೆ ನೀಡಿದರು. ಅವರು ಇಂದು...

Read moreDetails
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

November 14, 2025
ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

November 14, 2025
N Chaluvarayaswamy: ಕೃಷಿ ಸಬಲೀಕರಣಕ್ಕೆ ನೆರವಾಗಿ: ಎನ್.ಚಲುವರಾಯಸ್ವಾಮಿ ಕರೆ

N Chaluvarayaswamy: ಕೃಷಿ ಸಬಲೀಕರಣಕ್ಕೆ ನೆರವಾಗಿ: ಎನ್.ಚಲುವರಾಯಸ್ವಾಮಿ ಕರೆ

November 13, 2025
Next Post
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಹಗರಣ; ಜೆಡಿಎಸ್ ವರಿಷ್ಟರ ಮೇಲೆ ಆರೋಪ ಹೊರಿಸಿದ ಆಡಿಯೊ ನನ್ನದೇ – ಚಲುವನಾರಾಯಣಸ್ವಾಮಿ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಹಗರಣ; ಜೆಡಿಎಸ್ ವರಿಷ್ಟರ ಮೇಲೆ ಆರೋಪ ಹೊರಿಸಿದ ಆಡಿಯೊ ನನ್ನದೇ - ಚಲುವನಾರಾಯಣಸ್ವಾಮಿ

Please login to join discussion

Recent News

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!
Top Story

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!

by ಪ್ರತಿಧ್ವನಿ
November 14, 2025
ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ
Top Story

ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

by ಪ್ರತಿಧ್ವನಿ
November 14, 2025
ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ
Top Story

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

by ಪ್ರತಿಧ್ವನಿ
November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ
Top Story

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

by ಪ್ರತಿಧ್ವನಿ
November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌
Top Story

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

by ಪ್ರತಿಧ್ವನಿ
November 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!

November 14, 2025
ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

November 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada