ಆಂಧ್ರ ಪ್ರದೇಶದ ಶ್ರೀಕಾಕುಲಂ ಕಡಲ ತೀರದಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿನ್ನದ ರಥ ಒಂದು ತೇಲಿ ಬಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಶ್ನೆಯೊಂದನ್ನ ಹುಟ್ಟುಹಾಕಿತ್ತು.
ಒಂದು ವೇಳೆ ಯಾವುದಾದರು ದೇವಸ್ಥಾನ ನೀರಿನ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ತೇಲಿ ಬಂದಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಸಮುದ್ರದಲ್ಲಿ ತೇಲಿ ಬಂದ ಚಿನ್ನದ ರಥ ನಮ್ಮ ದೇಶದಲ್ಲ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಸಮುದ್ರದಲ್ಲಿ ಕಾಣಿಸಿಕೊಂಡ ದೇವಸ್ಥಾನ ಮಾದರಿಯ ರಥವನ್ನು ದಡಕ್ಕೆ ತಂದು ತಪಾಸಣೆ ಮಾಡಿದ ವೇಳೆ ಈ ರಥ ನಮ್ಮ ದೇಶದಲ್ಲ ಎಂದು ತಿಳಿದು ಬಂದಿದೆ. ರಥದ ಮೇಲೆ ನಮ್ಮ ದೇಶದ ಯಾವುದೇ ಭಾಷೆಯನ್ನು ಬಳಸಲಾಗಿಲ್ಲ ಗೂಗಲ್ ಟ್ರಾನ್ಸಲೇಟರ್ ಬಳಸಿ ಪರಿಶೀಲಿಸಿದಾಗ ಮ್ಯಾನ್ಮರ್ ದೇಶದ್ದು ಎಂದು ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ ಮೊದಲು ನಾವು ಇದು ಚಿನ್ನದ ರಥವಿರಬಹುದು ಎಂಬ ಸಂಶಯವಿತ್ತು ಆ ನಂತರ ಅಧಿಕಾರಿಗಳ ತಂಡ ಪರಿಶೀಲಿಸಿದ ನಂತರ ಮರದ ಕೆತ್ತನೆಗೆ ಚಿನ್ನದ ಲೇಪನವನ್ನ ಮಾಡಿರುವುದು ತಿಳಿದು ಬಂದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.