• Home
  • About Us
  • ಕರ್ನಾಟಕ
Thursday, November 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ಕರೋನಾ ವೈರಸ್ಸನ್ನು ಜೈವಿಕ ಅಸ್ತ್ರವಾಗಿ ಬಳಸುವ ಬಗ್ಗೆ ಚೀನಾ ವಿಜ್ಞಾನಿಗಳು ಚರ್ಚಿಸಿದ್ದರೇ..?

ಫಾತಿಮಾ by ಫಾತಿಮಾ
May 11, 2021
in ವಿದೇಶ
0
ಕರೋನಾ ವೈರಸ್ಸನ್ನು ಜೈವಿಕ ಅಸ್ತ್ರವಾಗಿ ಬಳಸುವ ಬಗ್ಗೆ ಚೀನಾ ವಿಜ್ಞಾನಿಗಳು ಚರ್ಚಿಸಿದ್ದರೇ..?
Share on WhatsAppShare on FacebookShare on Telegram

ADVERTISEMENT

ಚೀನಾದ ವಿಜ್ಞಾನಿಗಳು ಮತ್ತು ಆರೋಗ್ಯ ಅಧಿಕಾರಿಗಳು 2015 ರಲ್ಲಿ ಬರೆದ ಒಂದು ಪತ್ರದಲ್ಲಿ “SARS ಕೊರೊನಾ ವೈರಸ್‌ಗಳು ‘ಹೊಸ ಯುಗದ ಜೈವಿಕ ಅಸ್ತ್ರ’ವಾಗಿದ್ದು, ಅದನ್ನು  ‘ಮಾನವ ರೋಗ ವೈರಸ್ ಆಗಿ ಕೃತಕವಾಗಿ ಸೃಷ್ಟಿಸಿ ಶಸ್ತ್ರಾಸ್ತ್ರವಾಗಿ ಉಪಯೋಗಿಸಬಹುದು” ಎಂದು ತಿಳಿಸರುವುದಾಗಿ ‘ವೀಕೆಂಡ್ ಆಸ್ಟ್ರೇಲಿಯನ್’ ವರದಿ ಮಾಡಿದೆ.

‘The Unnatural Origin of SARS and New Species of Man-Made Viruses as Genetic Bioweapons’ ಎಂಬ‌ ಶೀರ್ಷಿಕೆಯ ಪತ್ರವು  ಮೂರನೆಯ ಮಹಾಯುದ್ಧವನ್ನು ಜೈವಿಕ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಬಹುದು ಎಂದು ಸಲಹೆ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಐದು ವರ್ಷಗಳ ಮೊದಲೇ ಚೀನಾದ ಮಿಲಿಟರಿ ವಿಜ್ಞಾನಿಗಳು SARS ಕರೋನವೈರಸ್‌ಗಳ ಶಸ್ತ್ರಾಸ್ತ್ರೀಕರಣದ ಬಗ್ಗೆ ಚರ್ಚಿಸುತ್ತಿದ್ದರು ಎಂಬುವುದನ್ನು ಈ ಡಾಕ್ಯುಮೆಂಟ್ ಬಹಿರಂಗಪಡಿಸಿದೆ.

“ಇದು ಮಹತ್ವದ್ದಾಗಿದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಚೀನಾದ ವಿಜ್ಞಾನಿಗಳು ಕರೋನವೈರಸ್‌ನ ವಿವಿಧ ತಳಿಗಳನ್ನು ಮಿಲಿಟರಿ ಅಪ್ಲಿಕೇಶನ್‌ಗಳಲ್ಲಿ ಹೇಗೆ ಬಳಸಬಹುದು ಎಂದು  ಮತ್ತು ಅದನ್ನು ಹೇಗೆ ನಿಯೋಜಿಸಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಹೇಳುತ್ತಾರೆ ‘Australian strategic policy institute’ ಕಾರ್ಯನಿರ್ವಾಹಕ ನಿರ್ದೇಶಕರಾದ ಪೀಟರ್ ಜೆನ್ನಿಂಗ್ಸ್. ಕೋವಿಡ್ -19 ರ ಮೂಲದ ಬಗ್ಗೆ ವಿದೇಶೀ ತನಿಖೆಗೆ ಚೀನಾ ಏಕೆ ಸಹಕರಿಸಲಿಲ್ಲ ಎನ್ನುವುದು ಸೋರಿಕೆ ಆದ ನಂತರ ಅರ್ಥವಾಗುತ್ತಿದೆ ಎಂದೂ ಅವರು ಹೇಳಿದರು.

‘ದಿ ಆಸ್ಟ್ರೇಲಿಯಾ’ವು ಸೈಬರ್ ಭದ್ರತಾ ತಜ್ಞ ರಾಬರ್ಟ್ ಪಾಟರ್ ಅವರನ್ನು ಈ ಕಾಗದವನ್ನು ಪರಿಶೀಲಿಸಲು ಕೇಳಿಕೊಂಡಾಗ ಅಮೂಲಾಗ್ರವಾಗಿ‌ ಪರಿಶೀಲಿಸಿದ ಅವರು ಖಂಡಿತವಾಗಿಯೂ ಪತ್ರ ನಕಲಿಯಲ್ಲ ಎಂದು‌ ಸ್ಪಷ್ಟ ಪಡಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಇವತ್ತಿನ ವರೆಗೆ ವಿಶ್ವದಾದ್ಯಂತ 157 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು 3.28 ದಶಲಕ್ಷ ಸಾವುಗಳು ಸಂಭವಿಸಿವೆ. ಯುದ್ಧದ ಉದ್ದೇಶದಿಂದ ಮಾನವ ನಿರ್ಮಿತ ವೈರಸ್‌ ಆಗಿದ್ದರೆ ಇಷ್ಟೊಂದು ಪ್ರಮಾಣದ ಸಾವು, ನೋವು, ಆರ್ಥಿಕ ನಷ್ಟಕ್ಕೆ ಯಾರು ಹೊಣೆ ಹೊರಬೇಕು? ಚೀನಾದಿಂದ ಸೃಷ್ಟಿಸಿದ ವೈರಸ್ ಇದು ಎಂದು ಖಚಿತವಾದರೆ ಇಡೀ ಜಗತ್ತು ಅದರಲ್ಲೂ ಚೀನಾದ ಕಡು ವಿರೋಧಿ ಎಂದೇ ಗುರುತಿಸಿಕೊಳ್ಳುತ್ತಿರುವ ಅಮೆರಿಕ ಹೇಗೆ ಪ್ರತಿಕ್ರಿಯಿಸೀತು? ವಿಶ್ವ ಸಂಸ್ಥೆ ಬಲಾಢ್ಯ ದೇಶವಾದ ಚೀನಾದ ಮೇಲೆ ಯಾವ ಕ್ರಮ ಕೈಗೊಳ್ಳಬಹುದು? ಅಥವಾ ಇದು ಮತ್ತೊಂದು ಮಹಾಯುದ್ಧಕ್ಕೆ ಕರಣವಾಗಬಲ್ಲುದೆ ಎಂಬ ಪ್ರಶ್ನೆ, ಆತಂಕಗಳು ಜನಸಾಮಾನ್ಯರನ್ನು‌ ಕಾಡುತ್ತಿದೆ.

Previous Post

ಲಸಿಕೆ ವಿಷಯದಲ್ಲಿ ರಾಜಕೀಯ ಬೇಡ, ಎಲ್ಲ ಅರ್ಹರಿಗೂ ವ್ಯಾಕ್ಸಿನ್ ಹಾಕಿಸಿ- ಸಿದ್ದರಾಮಯ್ಯ ಒತ್ತಾಯ

Next Post

ಬದಲಾವಣೆ ಬಿರುಸು: ಯಡಿಯೂರಪ್ಪಗೆ ಪಾಂಡಿಚೇರಿ ರಾಜ್ಯಪಾಲರ ಹುದ್ದೆ?

Related Posts

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ
Top Story

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

by ಪ್ರತಿಧ್ವನಿ
November 17, 2025
0

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಭುಗಿಲೆದ್ದಿದ್ದ ವಿದ್ಯಾರ್ಥಿ ಚಳುವಳಿಯನ್ನು ಹತ್ತಿಕ್ಕಲು ಆಗಿನ...

Read moreDetails
ಸೌದಿ ಅರೇಬಿಯಾದಲ್ಲಿ ಭೀಕರ ದುರಂತ: 42 ಭಾರತೀಯರು ಸಜೀವ ದಹನ

ಸೌದಿ ಅರೇಬಿಯಾದಲ್ಲಿ ಭೀಕರ ದುರಂತ: 42 ಭಾರತೀಯರು ಸಜೀವ ದಹನ

November 17, 2025

ಅಂಧರ ಕ್ರಿಕೆಟ್ ಟೂರ್ನಿಗೂ ಜಾಗತಿಕ ಮನ್ನಣೆ ಸಿಗುವಂತಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 14, 2025
ಇಂದಿನ ರಾಶಿ ಭವಿಷ್ಯ: ಈ ರಾಶಿಗಳಿಗೆ ಇಂದು ದಿಢೀರ್‌ ಧನ ಲಾಭ..!

ಇಂದಿನ ರಾಶಿ ಭವಿಷ್ಯ: ಈ ರಾಶಿಗಳಿಗೆ ಇಂದು ದಿಢೀರ್‌ ಧನ ಲಾಭ..!

November 12, 2025
ಪಾಕಿಸ್ತಾನದಲ್ಲೂ ನಿಗೂಢ ಸ್ಫೋಟ; 12 ಜನರ ಸಾವು

ಪಾಕಿಸ್ತಾನದಲ್ಲೂ ನಿಗೂಢ ಸ್ಫೋಟ; 12 ಜನರ ಸಾವು

November 11, 2025
Next Post
ಬದಲಾವಣೆ ಬಿರುಸು: ಯಡಿಯೂರಪ್ಪಗೆ ಪಾಂಡಿಚೇರಿ ರಾಜ್ಯಪಾಲರ ಹುದ್ದೆ?

ಬದಲಾವಣೆ ಬಿರುಸು: ಯಡಿಯೂರಪ್ಪಗೆ ಪಾಂಡಿಚೇರಿ ರಾಜ್ಯಪಾಲರ ಹುದ್ದೆ?

Please login to join discussion

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
Top Story

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

by ಪ್ರತಿಧ್ವನಿ
November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು
Top Story

ಮರೆವುದೆಂತು ಆ ಗಟ್ಟಿ ಜನಪರ ದನಿಯನು

by ನಾ ದಿವಾಕರ
November 20, 2025
Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
Top Story

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

by ಪ್ರತಿಧ್ವನಿ
November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ
Top Story

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು

ಮರೆವುದೆಂತು ಆ ಗಟ್ಟಿ ಜನಪರ ದನಿಯನು

November 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada