ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ಮಧ್ಯೆ ಟಿಎಂಸಿ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಶಾಸಕರನ್ನು ಮಾಜಿ ಸಿಎಂ ಹಾಗೂ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಉಚ್ಚಾಟಿಸಿದ್ದಾರೆ.

ಇಂದು ಟಿಎಂಸಿಯ ಇಬ್ಬರು ಶಾಸಕರಾದ ಸಂದೀಪನ್ ಸಹಾ ಮತ್ತು ಋತಬ್ರತ ಬ್ಯಾನರ್ಜಿ ಅವರ ಮೇಲೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಗೇಟ್ ಪಾಸ್ ನೀಡಲಾಗಿದೆ.
ಇನ್ನೂ ಪ್ರಮುಖವಾಗಿ ಬಂಗಾಳದ ವಿಧಾನಸಭೆಯಲ್ಲಿ ಸ್ಪೀಕರ್ಗೆ ಹಸ್ತಾಂತರಿಸುವ ವಿಪಕ್ಷ ಸ್ಥಾನದ ಆಯ್ಕೆ ಪಟ್ಟಿಯಲ್ಲಿ ‘ನಕಲಿ ಸಹಿ’ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದೂರುಗಳನ್ನು ದಾಖಲಿಸಿರುವ ಬಗ್ಗೆ ಖುದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮಾಹಿತಿ ನೀಡಿದ್ದರು. ರಾಜ್ಯ ವಿಧಾನಸಭೆಯಲ್ಲಿ ಸೋಭಂದೇಬ್ ಚಟ್ಟೋಪಾಧ್ಯಾ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಟಿಎಂಸಿ ಅನುಮೋದಿಸಿದೆ.
ಇದನ್ನೂ ಓದಿ : ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದ ಸುಮಲತಾಗೆ ಚಾನ್ಸ್! : ರಾಜ್ಯಸಭೆ ಅವಕಾಶಕ್ಕೆ ಬಿಜೆಪಿ ಒಲವು..
ಮುಖ್ಯವಾಗಿ ಪಕ್ಷದ ಅಧಿಕೃತ ಸಭೆಗಳಿಗೆ ನೀವು ಹಾಜರಾಗಿಲ್ಲ, ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಿ. ಹೀಗಾಗಿ ಪಕ್ಷದ ಸಕ್ಷಮ ಪ್ರಾಧಿಕಾರದ ಮೂಲಕ ಉಚ್ಚಾಟನೆಯ ಬಗ್ಗ ನಿಮ್ಮ ಗಮನಕ್ಕೆ ತರಲಾಗಿದೆ ಎಂದು ಉಚ್ಚಾಟಿತ ಇಬ್ಬರೂ ಶಾಸಕರಿಗೆ ಟಿಎಂಸಿ ತಿಳಿಸಿದೆ.
ಟಿಎಂಸಿಯ ಹಿತಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ಭಾಗಿಯಾಗಿ, ಹೇಳಿಕೆಗಳನ್ನು ನೀಡಿದ್ದೀರಿ ಎಂದು ಗಮನಿಸಲಾಗಿದೆ. ಹೀಗಾಗಿ ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಉಪಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಸಹಿ ಮಾಡಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.






