ಹೊಳೆನರಸೀಪುರ (Hokelnarasipura) ಪೊಲೀಸರಿಂದ ಅರೆಸ್ಟ್ ಆಗಿರೋ ದೇವರಾಜೇಗೌಡ ನ್ಯಾಷನಲ್ ಲೆವೆಲ್ (National leval) ಪ್ಲಾನ್ ಹಾಕಿದ್ರು ಎನ್ನಲಾಗ್ತಿದೆ. ಕರ್ನಾಟಕದಿಂದ (Karnataka) ಪ್ರವಾಸ ಅಂತಾ ಹೊರಟಿದ್ದ ದೇವರಾಜೇಗೌಡರು (devarajegowda) ತಮ್ಮಬಳಿ ಎರಡು ಟ್ರಾಲಿ ಬ್ಯಾಗ್, ಒಂದು ಮೊಬೈಲ್ (mobile) ಹಲವು ದಾಖಲೆಗಳನ್ನ ಹಿಡಿದು ಸಾಗಿದ್ದರು.
ಹೀಗೆ ದಾಖಲೆಗಳು, ಆಡಿಯೋ (Audio), ವಿಡಿಯೋಗಳ (Video) ಸಮೇತ ಹೊರಟಿದ್ದ ದೇವರಾಜೇಗೌಡ, ಹಿರಿಯೂರು -ಪುಣೆ-ದೆಹಲಿ,ದೆಹಲಿಯಲ್ಲಿ (Delhi) ಮಹಾ ನಾಯಕರ ಭೇಟಿ ಮಾಡೋ ಪ್ಲಾನ್ ಮಾಡಿದ್ರು ಅನ್ನೋ ಮಾಹಿತಿ ಲಭ್ಯವಾಗಿದೆ. ಅಲ್ಲದೆ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರ ನೇರ ಭೇಟಿ ಮಾಡಿ ಚರ್ಚಿಸುವ ಪ್ಲಾನ್ನಲ್ಲಿದ್ದರು ಎನ್ನಲಾಗ್ತಿದೆ.
ಆ ನಂತರ ದೊಡ್ಡ ಮಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಎಫೆಕ್ಟ್ ಕೊಡಲು ದೇವರಾಜೇಗೌಡರು ಪ್ಲಾನ್ ಮಾಡಿದ್ರು ಎನ್ನಲಾಗ್ತಿದೆ. ಆದ್ರೆ ಇವೆಲ್ಲಾ ಪ್ಲಾನ್ ಸಕ್ಸಸ್ (Sucess) ಆಗೋಕೂ ಮುನ್ನ ಪೊಲೀಸರು ದೇವರಾಜೇಗೌಡರನ್ನ ಅರೆಸ್ಟ್ ಮಾಡಿ ಪ್ಲಾನ್ ಫ್ಲಾಪ್ ಆಗುವಂತೆ ಮಾಡಿದೆ.