ಸಾಂಕ್ರಾಮಿಕ ರೋಗವು ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಸೆಂಟ್ರಲ್ ವಿಸ್ಟಾ ನಿರ್ಮಾಣ ಯೋಜನೆಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
ನ್ಯಾಯಾಲಯವು ಈ ಪ್ರಕರಣವನ್ನು ಮೇ 17 ರಂದು ವಿಚಾರಣೆಗೆ ನಿಗದಿ ಮಾಡಿತ್ತು.ಕಳೆದ ವಾರ, ಹೈಕೋರ್ಟ್ ಅರ್ಜಿಯನ್ನು ಮುಂದೂಡಿದ್ದನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಗೆ ಹೈಕೋರ್ಟ್ಗೆ ವಿನಂತಿಸುವಂತೆ ಅರ್ಜಿದಾರರಿಗೆ ತಿಳಿಸಿತ್ತು.ಹಿರಿಯ ವಕೀಲ ಸಿದ್ಧಾರ್ಥ್ ಲುಥ್ರಾ ಮೇ 10 ರಂದು ಮುಖ್ಯ ನ್ಯಾಯಾಧೀಶ ಡಿ.ಎನ್ ಪಟೇಲ್ ಮತ್ತು ನ್ಯಾಯಾಧೀಶ ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ಪೀಠದ ಮುಂದೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಿಳಿಸಿದರು.
ಅನುವಾದಕ ಅನ್ಯಾ ಮಲ್ಹೋತ್ರಾ ಮತ್ತು ಇತಿಹಾಸಕಾರ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಸೊಹೈಲ್ ಹಶ್ಮಿ ಅವರು ಸಲ್ಲಿಸಿದ ಅರ್ಜಿಯಲ್ಲಿ ನಿರಂತರವಾಗಿ ಯೋಜನೆ ಮುಂದುವರಿಸುವುದರಿಂದ ಮತ್ತು ಪ್ರತಿದಿನ ಸೋಂಕಿಗೆ ಒಡ್ಡಿಕೊಳ್ಳಬೇಕಾಗುವ ನಿರ್ಮಾಣ ಮತ್ತು ಕಟ್ಟಡ ಕಾರ್ಮಿಕರು ಸೂಪರ್ ಸ್ಪ್ರೆಡರ್ ಆಗುವ ಅಪಾಯದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರ ಪರವಾಗಿ ಹಾಜರಾದ ಲುತ್ರಾ ಅವರು ಕಳೆದ ವಾರ ವಿಭಾಗೀಯ ಪೀಠದ ಮುಂದೆ, ಈ ಯೋಜನೆಯ ಕುರಿತು ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪನ್ನು ಮೀರಿಸಲು ಅವರು ಯಾವುದೇ ರೀತಿಯಲ್ಲಿ ಪ್ರಯತ್ನಿಸುತ್ತಿಲ್ಲ ಮತ್ತು ಸಾಂಕ್ರಾಮಿಕ ರೋಗದ ಗರಿಷ್ಠ ಹಂತದಲ್ಲಿ ನಿರ್ಮಾಣದ ಮಧ್ಯಂತರ ತಡೆಯನ್ನು ಮಾತ್ರ ಕೋರಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
“ಕೆಲವು ಕಾರ್ಯನಿರ್ವಾಹಕ ಕಡ್ಡಾಯ ಗುತ್ತಿಗೆ ಗಡುವನ್ನು ಪೂರೈಸಬೇಕಾಗಿರುವುದರಿಂದ ಯೋಜನೆಯು ಏಕೆ ಅಥವಾ ಹೇಗೆ ‘ಅಗತ್ಯ ಸೇವೆ’ ಎಂದು ಅರ್ಜಿದಾರರು ಪ್ರಶ್ನಿಸುತ್ತಿದ್ದಾರೆ ”ಎಂದು ಕೇಳಲಾಗಿದೆ. ಅಲ್ಲದೆ “ಪ್ರಸ್ತುತ ಸಂದರ್ಭದಲ್ಲಿ, ಈ ಯೋಜನೆಯು ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ‘ಸೇವೆ ‘ ಅಥವಾ ‘ಸೇವೆಯ ವೈಶಿಷ್ಟ್ಯ’ವನ್ನು ಹೊಂದಿಲ್ಲ” ಎಂದೂ ಹೈಕೋರ್ಟ್ಗೆ ತಿಳಿಸಿದ್ದಾರೆ.