• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೇರಳದಲ್ಲಿ ದರ್ಶನ್​ ಕುಟುಂಬದಿಂದ ಶತ್ರು ಸಂಹಾರ ಪೂಜೆ..

ಕೃಷ್ಣ ಮಣಿ by ಕೃಷ್ಣ ಮಣಿ
March 22, 2025
in ಕರ್ನಾಟಕ, ಸಿನಿಮಾ
0
ಕೇರಳದಲ್ಲಿ ದರ್ಶನ್​ ಕುಟುಂಬದಿಂದ ಶತ್ರು ಸಂಹಾರ ಪೂಜೆ..
Share on WhatsAppShare on FacebookShare on Telegram

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಆರೋಪಿ ಆಗಿರುವ ದರ್ಶನ್​, ತನ್ನ ಹಳೇ ಟೀಂ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಕಂಡು ಕಂಡಲ್ಲಿ ಪೂಜೆ ಮಾಡುವಂತಾಗಿದೆ. ಮೈಸೂರಿನ ಚಾಮುಂಡಿ, ಚನ್ನೊಲಟ್ಟಣದ ಗೌಡಗೆರೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಿದ ಬಳಿಕ ಇದೀಗ ಕೇರಳದ ಕಡೆಗೆ ಹೊರಟಿದ್ದಾರೆ.

ADVERTISEMENT

ನಟ ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಕೇರಳದ ಪ್ರಸಿದ್ದ ದೇವಸ್ಥಾನಲ್ಲಿ ಕೊಲೆ ಆರೋಪಿ ಆಗಿರುವ ನಟ ದರ್ಶನ್ ಕಾಣಿಸಿಕೊಂಡಿದ್ದು, ಶತ್ರು ಸಂಹಾರ ಪೂಜೆ ನೆರವೇರಿಸಿದ್ದಾರೆ ಅನ್ನೋ ಮಾಹಿತಿಗಳು ಸಿಕ್ಕಿವೆ. ಶತ್ರು ಸಂಹಾರ ಪೂಜಗೆ ಪ್ರಸಿದ್ದವಾದ ಕೇರಳದ ಭಗವತೀ ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಭೇಟಿ ನೀಡಿದೆ.

ಕೇರಳದ ಕಣ್ಣೂರಿನ ಮಾಡಾಯಿ ಕಾವು ದೇವಸ್ಥಾನಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಮಗ ಹಾಗೂ ನಟ ಧನ್ವೀರ್ ಜೊತೆ ಆಗಮಿಸಿದ್ದಾರೆ. ಮಾಡಾಯಿ ಕಾವು ಶ್ರೀ ಭಗವತೀ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿ ದೇವರ ದರ್ಶನ ಪಡೆದಿದ್ದಾರೆ. ಈ ಹಿಂದೆಯೂ ಹಲವು ರಾಜಕಾರಣಿಗಳು ಭಗವತೀ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ದರು.

DK Shivakumar: ರಾಮನಗರ ಜಿಲ್ಲೆ ಹೆಸರು ಚೇಂಜ್ ಮಾಡೇ ಮಾಡ್ತಿನಿ ಅಂತ HDKಗೆ ಸವಾಲು ಹಾಕಿದ ಡಿಕೆಶಿ..! #hdk

ಕೇರಳದ ಕಣ್ಣೂರು ಜಿಲ್ಲೆಯ ಮಾಡಾಯಿ ಕಾವು ಭಗವತೀ ಕ್ಷೇತ್ರ ಐತಿಹಾಸಿಕ ಸ್ಥಳಗಳಲ್ಲಿ ಒಂದು. ಹಲವು ಪ್ರಾಚೀನ ಹಾಗೂ ಐತಿಹಾಸಿಕ ಪುಣ್ಯಕ್ಷೇತ್ರಗಳಲ್ಲಿ ಮಾಡಾಯಿ ಕಾವು ಭಗವತೀ ಕ್ಷೇತ್ರವೂ ಒಂದು. ದೇವಿಯ ಅವತಾರವಾದ ಭದ್ರಕಾಳಿ ಇಲ್ಲಿನ ಪ್ರಮುಖ ಆರಾಧ್ಯ ದೇವಿ. ಶತ್ರು ಸಂಹಾರ ಪೂಜೆಯು ಇಲ್ಲಿನ ವಿಶೇಷ ಪೂಜೆಗಳಲ್ಲಿ ಒಂದು. ಮೂಶಿಕ ರಾಜವಂಶದವರು ಸ್ಥಾಪಿಸಿರುವ ಕ್ಷೇತ್ರವಾಗಿದ್ದು, ಶತ್ರು ಸಂಹಾರ ಪೂಜೆ, ಮಾಡಾಯಿ ಕಾವು ಕ್ಷೇತ್ರದ ಪ್ರಸಿದ್ಧ ಪೂಜೆ.

ಶತ್ರು ನಾಶ, ಕಷ್ಟ ನಿವಾರಣೆಗೆ ಮಾಡುವ ಶತ್ರು ಸಂಹಾರ ಪೂಜೆ ಇದಾಗಿದ್ದು, ಬೆಳಗ್ಗೆ 8.30, ಸಂಜೆ 5.30ರ ವೇಳೆಗೆ ನಡೆಯುವ ಪೂಜೆ ಇದಾಗಿದೆ. ಈ ನಡುವೆ ಸಂಕಲ್ಪ ಮಾಡಿ ಪ್ರಸಾದ ತೆಗೆದುಕೊಳ್ಳಬಹುದು. ಅಸುರ ಕ್ರಿಯೆಯ ಮೂಲಕ ದೇವಿಗೆ ಎದುರು ಶತ್ರು ಸಂಹಾರ ಪೂಜೆ ನಡೆಯುತ್ತದಷೆ. ಕೇರಳ ಹಾಗೂ ಮಂಗಳೂರು ಭಾಗದ ಭಕ್ತರು ಅತೀ ಹೆಚ್ಚಾಗಿ ಭೇಟಿ ನೀಡುವ ಮಾಡಾಯಿ ಕಾವು ಕ್ಷೇತ್ರದಲ್ಲಿ ದರ್ಶನ್​ ಕುಟುಂಬ ಪೂಜೆ ಸಲ್ಲಿಸಿದೆ.

Tags: challenging star darshan familychallenging star darshan family photosdaily vlogs teluguDarshanDarshan Casedarshan family photosdarshan family videosDarshan fansdarshan herodarshan in jaildarshan newsdarshan sondarshan thugudeep family photosdarshan vijayalakshmi familydarshan wifedboss family videosFamilyfilm star darshanrenukaswamy familyrenukaswamy family situationtamillthoogudeepa srinivas family
Previous Post

71 ಎಕರೆ ಗೋಮಾಳ ಭೂಮಿ ಕಬಳಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ- ಎಸ್.ಆರ್.ಹಿರೇಮಠ

Next Post

ಸಭಾಪತಿ ಹೊರಟ್ಟಿ ಮೇಲೆ ಪೇಪರ್‌ ಎಸೆದ ಬಿಜೆಪಿ ನಾಯಕರು..!

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post

ಸಭಾಪತಿ ಹೊರಟ್ಟಿ ಮೇಲೆ ಪೇಪರ್‌ ಎಸೆದ ಬಿಜೆಪಿ ನಾಯಕರು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada