ನಂಜನಗೂಡು : ಏ.೦6: ನಂಜನಗೂಡು ನಗರದ ಮೂರನೇ ವಾರ್ಡ್ಗೆ ಸೇರಿದ ಒಕ್ಕಲಗೇರಿಯಲ್ಲಿ ಯುವ ಮುಖಂಡರೊಬ್ಬರು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಬೆಂಬಲಿಸಿದರು. ಒಕ್ಕಲಗೇರಿಯ ಯುವ ಮುಖಂಡ ಸಂತೋಷ್ ಎಂಬುವವರೇ ತಮ್ಮಕುಟುಂಬ ಸಮೇತರಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ದರ್ಶನ್ ಧ್ರುವನಾರಾಯಣ್ ಗೆ ಬೆಂಬಲ ನೀಡಿದರು.
![](https://pratidhvani.com/wp-content/uploads/2023/04/fdfdfssf.jpg)
ಇದೇ ಸಂದರ್ಭದಲ್ಲಿ ಮೂರನೇ ವಾರ್ಡ್ ನ ಒಕ್ಕಲಗೇರಿಯ ಹಲವಾರು ಯುವ ಮುಖಂಡರು ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪಕ್ಷದ ಮುಖಂಡರನ್ನು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಪಕ್ಷದ ಶಲ್ಯ ಹಾಕುವ ಮೂಲಕ ಸ್ವಾಗತಿಸಿದರು. ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವ ಹಾಗೂ ಪಕ್ಷದ ಮುಖಂಡರಿಗೆ ಗ್ರಾಮಸ್ಥರು ಬೃಹತ್ ಹೂಮಾಲೆ ಹಾಕಿ ಶಾಲು ಹೊದಿಸಿ ಅಭಿನಂದಿಸಿದರು.
![](https://pratidhvani.com/wp-content/uploads/2023/04/sfss.jpg)
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಶ್ರೀಧರ್ ಮುಖಂಡರಾದ ರವಿಕುಮಾರ್, ಜಯರಾಂ, ಮಂಜುನಾಥ್, ನಂದಾ, ಶರತ್, ಮಧು, ಆನಂದ, ರವಿ, ಮಹೇಶ್,. ಸುಬ್ಬಣ್ಣ, ಪ್ರೀತಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.