• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಖಾತೆಗಳೇ ಇಲ್ಲದವರ ಅಕೌಂಟ್‌ಗೆ ಕೋಟಿ ಕೋಟಿ ಹಣ : ಗೃಹಲಕ್ಷ್ಮಿ ಯೋಜನೆಯ ಬಗ್ಗೆ CAG ವರದಿ ಬಿಚ್ಚಿಟ್ಟ ಸ್ಫೋಟಕ ಅಂಶಗಳೇನು..?

8,995 ಬ್ಯಾಂಕ್‌ ಖಾತೆಗಳಿಗೆ ಸುಮಾರು 1.80 ಕೋಟಿ ಹಣ ಪುನರಾವರ್ತಿತ ಜಮೆ : ಯೋಜನೆಯ ಸುತ್ತ ಭ್ರಷ್ಟಾಚಾರದ ವಾಸನೆ..

ಪ್ರತಿಧ್ವನಿ by ಪ್ರತಿಧ್ವನಿ
June 23, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಖಾತೆಗಳೇ ಇಲ್ಲದವರ ಅಕೌಂಟ್‌ಗೆ ಕೋಟಿ ಕೋಟಿ ಹಣ : ಗೃಹಲಕ್ಷ್ಮಿ ಯೋಜನೆಯ ಬಗ್ಗೆ CAG ವರದಿ ಬಿಚ್ಚಿಟ್ಟ ಸ್ಫೋಟಕ ಅಂಶಗಳೇನು..?
Share on WhatsAppShare on FacebookShare on Telegram

ಬೆಂಗಳೂರು :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿಯ ಕುರಿತು ಸಿಎಜಿ (ಮಹಾಲೇಖಪಾಲ) ವರದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ವರದಿಯಲ್ಲಿನ ಅಂಶಗಳನ್ನು ಗಮನಿಸಿದಾಗ ತಾಂತ್ರಿಕತೆ, ವಿಶ್ವಾಸಾರ್ಹತೆ ಹಾಗೂ ಡಿಬಿಟಿ ವ್ಯವಸ್ಥೆಯ ಪಾರದರ್ಶಕತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ADVERTISEMENT
Mohan Kumar Danappa KSPCA Podcast : ದೌರ್ಜನ್ಯ ತಡೆಯೋಕೆ ಜನ ಧೈರ್ಯದಿಂದ ಮುಂದೆ ಬರಬೇಕು..#pratidhvani #Police

ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ವಿಪಕ್ಷ ಬಿಜೆಪಿ ಗೃಹ ಲಕ್ಷ್ಮಿ ಯೋಜನೆಯಲ್ಲಿ 5 ಸಾವಿರ ಕೋಟಿಗಳಷ್ಟು ಲೋಪವಾಗಿದ್ದು, ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿಲ್ಲ ಎಂದು ಆರೋಪಿಸಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸಿಎಜಿ ವರದಿಯಲ್ಲಿನ ಅಂಶಗಳು ಯೋಜನೆಯಲ್ಲಿ ಆಗಿರುವ ಕಳ್ಳಾಟಗಳನ್ನು ಬಟಾ ಬಯಲು ಮಾಡಿದೆ.

ವರದಿಯಲ್ಲಿನ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 1.30 ಕೋಟಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದಾರೆ. ಈವರೆಗೆ ಸರ್ಕಾರ ಯೋಜನೆಗೆ 75 ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಪಾವತಿಸಿದೆ. ಸಿಎಜಿ ವರದಿ ಹೇಳಿರುಔಂತೆ, 19,020 ಫಲಾನುಭವಿಗಳು ಒಂದೇ ಬ್ಯಾಂಕ್‌ ಖಾತೆಯನ್ನು ಹೊಂದಿದ್ದಾರೆ, ಇದು ಡಿಬಿಟಿ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಆತಂಕಕಾರಿ ಸಂಗತಿ ಏನೆಂದರೆ 8,995 ಬ್ಯಾಂಕ್‌ ಖಾತೆಗಳಿಗೆ ಸುಮಾರು 1.80 ಕೋಟಿ ಹಣವನ್ನು ಪುನರಾವರ್ತಿತವಾಗಿ (Repeatedly) ಜಮೆ ಮಾಡಲಾಗಿದೆ. ಅಲ್ಲದೆ ಈ ಯೋಜನೆಯಡಿ 10,36,308 ಫಲಾನುಭವಿಗಳು ತಮ್ಮ ಬ್ಯಾಂಕ್‌ ಖಾತೆಗಳನ್ನು ಬದಲಾಯಿಸಿರುವುದು ಸಿಎಜಿ ಪರಿಶೀಲನೆಯಲ್ಲಿ ಪತ್ತೆಯಾಗಿದ್ದು,ಸರ್ಕಾರದಲ್ಲಿ ಆಡಳಿತ ಯಂತ್ರ ಯಾವ ರೀತಿಯಾಗಿ ಕಾರ್ಯ ನಡೆಸುತ್ತಿದೆ ಎಂಬುವುದನ್ನು ಎತ್ತಿ ತೋರಿಸಿದೆ.

ಇದನ್ನೂ ಓದಿ : ದಳಪತಿ-ತ್ರಿಶಾ ನಡುವೆ ಬ್ರೇಕಪ್? ಸಿಎಂ ವಿಜಯ್‌ನ ಅನ್‌ಫಾಲೋ ಮಾಡಿದ ತ್ರಿಶಾ!

ಎಲೆಕ್ಟ್ರಾನಿಕ್ ಡೇಟಾ ಕಂಪ್ಯೂಟರ್ ಸಿಸ್ಟಮ್ಸ್ ನಿಂದ (EDCS) ಫಲಾನುಭವಿಗಳ ಪಟ್ಟಿ ಮತ್ತು ಇತರ ವಿವರಗಳನ್ನು ಒದಗಿಸದಿರುವುದು ಆಡಿಟ್ ಪ್ರಕ್ರಿಯೆಗೆ ಹಿನ್ನಡೆಯನ್ನುಂಟು ಮಾಡಿದೆ. ರದ್ದುಪಡಿಸಲಾದ ಫಲಾನುಭವಿಗಳ ವಿವರಗಳು, ಗುರುತಿನ ಚೀಟಿ, ರದ್ದುಪಡಿಸಿದ ದಿನಾಂಕ ಮತ್ತು ಕಾರಣಗಳನ್ನು ನೀಡಲು ಇಲಾಖೆಯು ವಿಫಲವಾಗಿದೆ ಎಂದು ಸಿಎಜಿ ಅಸಮಾಧಾನ ಹೊರಹಾಕಿದೆ.

ಮುಖ್ಯವಾಗಿ ಸಿಎಜಿ ವರದಿಯಲ್ಲಿನ ಇನ್ನೊಂದು ಆಘಾತಕಾರಿ ಸಂಗತೆಯೆನೆಂದರೆ 23,262 ಫಲಾನುಭವಿಗಳು ಬ್ಯಾಂಕ್‌ ಖಾತೆಗಳನ್ನೆ ಹೊಂದಿಲ್ಲ, ಆದರೂ ಈ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಒಟ್ಟು 46.52 ಕೋಟಿ ಹಣ ಖಾತೆಗಳೇ ಇಲ್ಲದ ಖಾತೆಗಳಿಗೆ ಜಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಿಬಿಟಿ ನೇರ ನಗದು ವರ್ಗಾವಣೆಯ ವ್ಯವಸ್ಥೆಯಲ್ಲಿ ಬ್ಯಾಂಕ್‌ ಖಾತೆ ಕಡ್ಡಾಯವಾಗಿರುವಾಗ ಖಾತೆ ಇಲ್ಲದೆ ಫಲಾನುಭವಿಗಳಿಗೆ ಹಣ ಹೇಗೆ ತಲುಪಿತು ಎಂಬ ಪ್ರಶ್ನೆ ಎದುರಾಗಿದೆ.

Satish Jarakiholi: ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಾ? ಸಚಿವ ಸತೀಶ್ ಹೇಳಿದ್ದೇನು?  #pratidhvani

ಈಗಾಗಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆಸಿದ್ದ ಸಭೆಯಲ್ಲಿ ಈ ಸಿಎಜಿ ವರದಿಯಲ್ಲಿನ ಅಂಶಗಳು ಸದ್ದು ಮಾಡಿದ್ದವು ಎನ್ನಲಾಗಿದೆ, ಇದರಲ್ಲಿನ ಅಂಶಗಳನ್ನು ಆಧರಿಸಿ ಸರ್ಕಾರ ಪರಿಷ್ಕರಣೆಗೆ ಹೆಜ್ಜೆ ಇಟ್ಟಿದೆ. ಅಲ್ಲದೆ ಯೋಜನೆಯ ಲೋಪಗಳನ್ನು ತಕ್ಷಣವೇ ಸರಿಪಡಿಸಿ ಎಂದು ತಾಕೀತು ಮಾಡಿದ್ದರು.

ಇನ್ನೂ ಈ ಯೋಜನೆಯಲ್ಲಿನ ಲೋಪಗಳ ಖುದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಮಹಾಲೇಖಪಾಲರಿಗೆ ಕೈಬಿಟ್ಟ ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಸರ್ಕಾರದ ಮುಖ್ಯಸ್ಥರೇ ಖುದ್ದಾಗಿ ಸೂಚನೆ ಕೊಟ್ಟಿದ್ದರೂ ಇಲಾಖೆಯ ಅಧಿಕಾರಿಗಳು ಮಾತ್ರ ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಕೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಹಗರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಮೇಲೆ ಇನ್ನಷ್ಟು ಅನುಮಾನದ ದೃಷ್ಟಿಯಿಂದ ನೋಡವಂತೆ ಮಾಡಿದೆ.

Tags: CAG ReportChief Secretary Of KarnatakaCM DK Shivakumarcongress guarantee schemeCorruptionGruhalaxmi ScamGruhalaxmi schemeKarnataka Governmentlaxmi hebbalkarPratidhvaniScamsiddaramaiah
Previous Post

ಉಡುಪಿಯಲ್ಲಿ ಅಕ್ರಮ ದತ್ತು ಪ್ರಕರಣ: ವೈದ್ಯ ಸೇರಿ ಇಬ್ಬರ ಬಂಧನ

Next Post

ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

Related Posts

ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕರ್ನಾಟಕದ 5 ಸಾಧಕರು; ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಸಾಧನೆಗೆ ರಾಷ್ಟ್ರದ ನಮನ
ಕರ್ನಾಟಕ

ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕರ್ನಾಟಕದ 5 ಸಾಧಕರು; ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಸಾಧನೆಗೆ ರಾಷ್ಟ್ರದ ನಮನ

by ಪ್ರತಿಧ್ವನಿ
June 24, 2026
0

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ 2026 ರಾಷ್ಟ್ರಪತಿ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ...

Read moreDetails
ಹುಟ್ಟುಹಬ್ಬದಂದೇ ‘ನೀನು ನನ್ನನ್ನು ಬಿಟ್ಟು ಹೋದೆ’ ಪೋಸ್ಟ್;‘ಮಿಸ್ ಯು’ ಪೋಸ್ಟ್ ಹಿಂದಿತ್ತು ಕೊಲೆ ರಹಸ್ಯ

ಹುಟ್ಟುಹಬ್ಬದಂದೇ ‘ನೀನು ನನ್ನನ್ನು ಬಿಟ್ಟು ಹೋದೆ’ ಪೋಸ್ಟ್;‘ಮಿಸ್ ಯು’ ಪೋಸ್ಟ್ ಹಿಂದಿತ್ತು ಕೊಲೆ ರಹಸ್ಯ

June 24, 2026
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ರಾಜಕೀಯದ ಕುಬೇರರು: ದಕ್ಷಿಣ ಭಾರತದ ನಾಯಕರ ಆಸ್ತಿ ಎಷ್ಟು ಗೊತ್ತಾ?

June 23, 2026
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ಫುಡ್ ಡಿಪಾರ್ಟ್ಮೆಂಟ್ ದಾಳಿ: ಶವರ್ಮಾ, ಕಬಾಬ್‌ಗಳಲ್ಲಿ ಆತಂಕಕಾರಿ ಅಂಶ ಬಯಲು

June 23, 2026
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ನೀಟ್ ಮರುಪರೀಕ್ಷೆ ವಿವಾದಕ್ಕೆ ಟ್ವಿಸ್ಟ್‌: ಪೊಲೀಸರ ತನಿಖೆಯಲ್ಲಿ ಹೊರಬಿದ್ದ ಸತ್ಯ

June 23, 2026
Next Post
ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada