• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನೀಟ್ ಮರುಪರೀಕ್ಷೆ ವಿವಾದಕ್ಕೆ ಟ್ವಿಸ್ಟ್‌: ಪೊಲೀಸರ ತನಿಖೆಯಲ್ಲಿ ಹೊರಬಿದ್ದ ಸತ್ಯ

ಪ್ರತಿಧ್ವನಿ by ಪ್ರತಿಧ್ವನಿ
June 23, 2026
in Top Story, ಕರ್ನಾಟಕ
0
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌
Share on WhatsAppShare on FacebookShare on Telegram

ಬೆಂಗಳೂರು: ನೀಟ್‌ ಮರುಪರೀಕ್ಷೆಗೆ ತಡವಾಗಿ ಬಂದು ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳ ಪ್ರಕರಣ ರಾಜಕೀಯ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಬೆಂಗಳೂರು ಪೊಲೀಸರು ಈ ಸಂಬಂಧ ಫ್ಯಾಕ್ಟ್‌ ಚೆಕ್‌ ನಡೆಸಿ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್‌ ಸಮಾವೇಶದಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರ ತಲುಪಲು ತಡವಾಯಿತು ಎಂಬ ಆರೋಪಗಳ ಬೆನ್ನಲ್ಲೇ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ಕುಟುಂಬದವರ ಮಾಹಿತಿಯನ್ನು ಆಧರಿಸಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

 

ಜೂನ್‌ 21ರಂದು ನಡೆದ ನೀಟ್‌ ಮರುಪರೀಕ್ಷೆಯಲ್ಲಿ ಮೂವರು ಅಭ್ಯರ್ಥಿಗಳು ತಡವಾಗಿ ಆಗಮಿಸಿದ್ದರಿಂದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಪರೀಕ್ಷೆ ಬರೆಯಲು ಸಾಧ್ಯವಾಗದೆ ಕಣ್ಣೀರಿಟ್ಟ ವಿದ್ಯಾರ್ಥಿನಿಯರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.ಈ ಪೈಕಿ ಟ್ರಾಫಿಕ್‌ ಸಮಸ್ಯೆಯಿಂದ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯ ಪ್ರಕರಣವನ್ನು ಪೊಲೀಸರು ವಿಶೇಷವಾಗಿ ಪರಿಶೀಲಿಸಿದ್ದಾರೆ. ತನಿಖೆಯಲ್ಲಿ ವಿದ್ಯಾರ್ಥಿನಿ ಮಧ್ಯಾಹ್ನ 12.57ಕ್ಕೆ ಆರ್‌.ಟಿ.ನಗರದ ನಿವಾಸದಿಂದ ಹೊರಟಿದ್ದು, ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ನಿಗದಿಯಾಗಿದ್ದ ಗಡುವು ಮಧ್ಯಾಹ್ನ 1.30 ಆಗಿತ್ತು ಎಂದು ತಿಳಿದುಬಂದಿದೆ. ಆದರೆ ವಿದ್ಯಾರ್ಥಿನಿ 1.33ಕ್ಕೆ ಪರೀಕ್ಷಾ ಕೇಂದ್ರ ತಲುಪಿರುವುದು ದಾಖಲಾಗಿದೆ.

Darshan Case Twist : ರೇಣುಕಾಸ್ವಾಮಿ ಪ್ರಕರಣದಲ್ಲಿ ಹೊಸ ತಿರುವು! #pratidhvani

ಪೊಲೀಸರ ಪ್ರಕಾರ, ವಿದ್ಯಾರ್ಥಿನಿ ಮನೆಯಿಂದ 33 ನಿಮಿಷಗಳ ಮುಂಚಿತವಾಗಿಯೇ ಹೊರಟಿದ್ದರೂ, ಪರೀಕ್ಷಾ ಕೇಂದ್ರ ತಲುಪಲು ಲಭ್ಯವಿದ್ದ ಕಿರುಮಾರ್ಗವನ್ನು ಬಿಟ್ಟು ದೂರದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೆ, ಆ ದಿನ ಸಂಚಾರ ದಟ್ಟಣೆ ಸಹ ಸಾಮಾನ್ಯ ಮಟ್ಟದಲ್ಲೇ ಇತ್ತು. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಟ್ರಾಫಿಕ್‌ ಪೊಲೀಸರನ್ನೂ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

D K Shivakumar : :ಬಿಡದಿ ಪಂಥಾಹ್ವಾನಕ್ಕೆ CM ಡಿಕೆಶಿ ಪ್ರತಿಕ್ರಿಯೆ.! #pratidhvani

ಸಿಸಿಟಿವಿ ದೃಶ್ಯಗಳು, ಕುಟುಂಬ ಸದಸ್ಯರ ಮಾಹಿತಿ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ಸಾರ್ವಜನಿಕ ಸಮಾವೇಶ ಅಥವಾ ಟ್ರಾಫಿಕ್‌ ಜಾಮ್‌ನಿಂದ ವಿದ್ಯಾರ್ಥಿನಿಗೆ ತೊಂದರೆಯಾಗಿಲ್ಲ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ. ವಿದ್ಯಾರ್ಥಿನಿ ತಡವಾಗಿ ತಲುಪಲು ದೂರದ ಮಾರ್ಗದಲ್ಲಿ ಪ್ರಯಾಣ ಮಾಡಿರುವುದೇ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Krishna Byre Gowda : ವಾಹನ ಸವಾರರಿಗೆ ಯಾವ ತೊಂದರೆ ಆಗಲ್ಲ.! #pratidhvani #congress #bjp #gba

ಈ ವಿಚಾರವಾಗಿ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, “ವರದಿ ಪರಿಶೀಲಿಸಿದ ಬಳಿಕವೇ ನಾನು ಮಾತನಾಡುತ್ತಿದ್ದೇನೆ. ಅಭ್ಯರ್ಥಿಗಳು ಯಾವಾಗ ಮನೆಯಿಂದ ಹೊರಟರು, ಯಾವ ಮಾರ್ಗದಲ್ಲಿ ಬಂದರು ಎಂಬುದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಲಭ್ಯವಿವೆ. ಕುಟುಂಬದವರೊಂದಿಗೂ ಮಾತುಕತೆ ನಡೆಸಲಾಗಿದೆ. ಪರೀಕ್ಷೆ ಮಿಸ್‌ ಆಗಿರುವುದಕ್ಕೆ ಸರ್ಕಾರ ಅಥವಾ ಸಾರ್ವಜನಿಕ ಕಾರ್ಯಕ್ರಮ ಕಾರಣ ಎಂಬ ಆರೋಪಗಳಿಗೆ ಯಾವುದೇ ಆಧಾರ ಇಲ್ಲ” ಎಂದು ಹೇಳಿದರು.

ಅಲ್ಲದೆ, “ನಿಗದಿತ ಸಮಯದೊಳಗೆ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಿ ಪರೀಕ್ಷೆ ಬರೆದಿದ್ದಾರೆ. ಕೇವಲ ಮೂರು ಮಂದಿ ಮಾತ್ರ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದನ್ನು ರಾಜಕೀಯ ವಿಷಯವನ್ನಾಗಿ ಮಾಡುವುದು ಸರಿಯಲ್ಲ” ಎಂದು ಖರ್ಗೆ ಟೀಕಿಸಿದರು.

Tags: Breaking NewsCompetitive ExamsEducation Departmenteducation newsEntrance ExamExam IrregularitiesExam RowIndia EducationInvestigation Reportnational newsNEET 2026NEET ControversyNEET ScamNEET Updatepolice investigationPolice ProbeStudent NewsTruth RevealedViral News
Previous Post

ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

Next Post

ಫುಡ್ ಡಿಪಾರ್ಟ್ಮೆಂಟ್ ದಾಳಿ: ಶವರ್ಮಾ, ಕಬಾಬ್‌ಗಳಲ್ಲಿ ಆತಂಕಕಾರಿ ಅಂಶ ಬಯಲು

Related Posts

ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕರ್ನಾಟಕದ 5 ಸಾಧಕರು; ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಸಾಧನೆಗೆ ರಾಷ್ಟ್ರದ ನಮನ
ಕರ್ನಾಟಕ

ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕರ್ನಾಟಕದ 5 ಸಾಧಕರು; ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಸಾಧನೆಗೆ ರಾಷ್ಟ್ರದ ನಮನ

by ಪ್ರತಿಧ್ವನಿ
June 24, 2026
0

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ 2026 ರಾಷ್ಟ್ರಪತಿ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ...

Read moreDetails
ಹುಟ್ಟುಹಬ್ಬದಂದೇ ‘ನೀನು ನನ್ನನ್ನು ಬಿಟ್ಟು ಹೋದೆ’ ಪೋಸ್ಟ್;‘ಮಿಸ್ ಯು’ ಪೋಸ್ಟ್ ಹಿಂದಿತ್ತು ಕೊಲೆ ರಹಸ್ಯ

ಹುಟ್ಟುಹಬ್ಬದಂದೇ ‘ನೀನು ನನ್ನನ್ನು ಬಿಟ್ಟು ಹೋದೆ’ ಪೋಸ್ಟ್;‘ಮಿಸ್ ಯು’ ಪೋಸ್ಟ್ ಹಿಂದಿತ್ತು ಕೊಲೆ ರಹಸ್ಯ

June 24, 2026
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ರಾಜಕೀಯದ ಕುಬೇರರು: ದಕ್ಷಿಣ ಭಾರತದ ನಾಯಕರ ಆಸ್ತಿ ಎಷ್ಟು ಗೊತ್ತಾ?

June 23, 2026
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ಫುಡ್ ಡಿಪಾರ್ಟ್ಮೆಂಟ್ ದಾಳಿ: ಶವರ್ಮಾ, ಕಬಾಬ್‌ಗಳಲ್ಲಿ ಆತಂಕಕಾರಿ ಅಂಶ ಬಯಲು

June 23, 2026
ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

June 23, 2026
Next Post
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ಫುಡ್ ಡಿಪಾರ್ಟ್ಮೆಂಟ್ ದಾಳಿ: ಶವರ್ಮಾ, ಕಬಾಬ್‌ಗಳಲ್ಲಿ ಆತಂಕಕಾರಿ ಅಂಶ ಬಯಲು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada