ಬೆಂಗಳೂರು: ಪಕ್ಷದ ಕಾರ್ಯಕರ್ತನ ಕೊಲೆ ನಂತರ ಮನೆಯವರಿಗೆ ನಗದು ರೂಪದಲ್ಲಿ ಹಣ ನೀಡಿದ್ದ ಸಚಿವ ಜಮೀರ್ ಅಹಮದ್ ವಿರುದ್ದ ಐಟಿಗೆ ದೂರು ಸಲ್ಲಿಸಲಾಗಿದೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಶೂಟೌಟ್ ನಲ್ಲಿ ಸಾವು ಹಿನ್ನಲೆ ಕುಟುಂಬಸ್ಥರಿಗೆ 25 ಲಕ್ಷ ನಗದು ಹಣವನ್ನು ಪರಿಹಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರೋ ಜಮೀರ್ ಅಹಮದ್ ನೀಡಿದ್ದರು.
ಆದರೆ ಜಮೀರ್ ನಗದು ರೂಪದಲ್ಲಿ ಹಣ ನೀಡಿರುವುದು RBI ನಿಯಮಾವಳಿಗಳ ಪ್ರಕಾರ 2 ಲಕ್ಷಕ್ಕಿಂತ ಹೆಚ್ಚು ನಗದು ಹಣವನ್ನು ಇಟ್ಟುಕೊಳ್ಳುವಂತಿಲ್ಲ. ಈ ನಿಯಮ ಇದ್ದರೂ ಜಮೀರ್ 25 ಲಕ್ಷ ಹಣವನ್ನು ನಗದು ರೂಪದಲ್ಲಿ ನೀಡಿದ್ದು, ಇದು RBI ನಿಯಮಾವಳಿ ಉಲ್ಲಂಘನೆಯಾಗಿದೆ ಎಂದು ಹಿಂದೂಪರ ಕಾರ್ಯಕರ್ತರ ತೇಜಸ್ ಗೌಡ ಐಟಿಗೆ ದೂರು ನೀಡಿದ್ದಾರೆ.









