ಭಾರತ – ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಎಲ್ಲಾ ಕಮಿಷನರೇಟ್ಗಳಲ್ಲಿ ಅಲರ್ಟ್ ಆಗಿರಬೇಕು. ಪ್ರಮುಖ ಸ್ಥಾವರಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು. ಅಕ್ರಮ ದಾಸ್ತಾನು ಮೂಲಕ ಬೆಲೆ ಏರಿಕೆ ಮಾಡುವ ಪ್ರಯತ್ನಗಳನ್ನು ತಪ್ಪಿಸಬೇಕು. ಸುರಕ್ಷತೆ ಕುರಿತಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಸಹ ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಇವತ್ತು ಡಿಸಿಗಳು, ಎಸ್ಪಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರ ಜೊತೆ ಸಭೆ ಮಾಡಲಾಗಿದೆ. ವೀಡಿಯೋ ಕಾನ್ಪೆರೆನ್ಸ್ ಮೂಲಕ ಚರ್ಚೆ ಮಾಡಲಾಗಿದೆ. ಪಾಕಿಸ್ತಾನ ಮತ್ತು ಭಾರತ ಇವೆರಡರ ನಡುವಿನ ವಾರ್, ಭೀತಿಯಿಂದ ರಾಜ್ಯದಲ್ಲಿ ಜಿಲ್ಲೆ ಗಳಲ್ಲಿ ಡಿಸಿಗಳು, ಎಸ್ಪಿಗಳು, ಐಜಿಗಳು, ಸಂಪೂರ್ಣವಾಗಿ ಅಲರ್ಟ್ ಆಗಿರಬೇಕು. ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಗತ್ಯ ವಾದ ಕಡೆಗಳಲ್ಲಿ ಮಾಕ್ ಡ್ರಿಲ್ ಮಾಡಲು ಸೂಚನೆ ಕೊಡಲಾಗಿದೆ. ಕೋರ್ಡಿನೇಷನ್ ಇರಬೇಕು ಕೇಂದ್ರದ ಅಧಿಕಾರಿಗಳು, ಎಸ್ಪಿಗಳು, ಡಿಸಿಗಳ ನಡುವೆ ಪರ್ಫೆಕ್ಟ್ ಕೋರ್ಡಿನೇಷನ್ ಇರಬೇಕು. ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.

ಸುಳ್ಳು ಸುದ್ದಿ ಹರಡಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು. ಮೀಡಿಯಾದವರ ಜೊತೆ ಸಂಪರ್ಕದಲ್ಲಿರಬೇಕು. ಫ್ಯಾಕ್ಟ್ ಫೈಂಡಿಂಗ್ ಕೂಡ ಮಾಡಬೇಕು. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡದಂತೆ ಕಟ್ಟೆಚ್ಚರ ವಹಿಸಬೇಕು. ಸೋಷಿಯಲ್ ಮೀಡಿಯಾದ ಮೇಲೆ ನಿರಂತರ ವಾಗಿ ನಿಗಾ ಇಡಬೇಕು. ಫ್ಯಾಕ್ಟ್ ಚೆಕ್ ನಿರಂತರವಾಗಿ ಮಾಡ್ತಾ ಇರಬೇಕು. ಸುಳ್ಳು ಸುದ್ದಿ ಅಂತಾ ಗೊತ್ತಾದ ಕೂಡಲೇ ಅದಕ್ಕೆ ಸ್ಪಷ್ಟನೆ ಕೊಡಬೇಕು. ನಿಜಾಂಶವನ್ನು ಜನರಿಗೆ ತಿಳಿಸಬೇಕು. ಗುಪ್ತಚರ ವಿಭಾಗವನ್ನು ಬಲಪಡಿಸುವ ಕೆಲಸ ಮಾಡಬೇಕು. ಸಾರ್ವಜನಿಕ ಸೇವೆಗಳ ಜಾಗದಲ್ಲಿ ಭದ್ರತೆ ಜಾಸ್ತಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಆಸ್ಪತ್ರೆಗಳು, ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತೆ ಹೆಚ್ಚು ಮಾಡಬೇಕು. ಪೌರ ರಕ್ಷಣಾ ವ್ಯವಸ್ಥೆ, ಸಿವಿಲ್ ಡಿಫೆನ್ಸ್ ಅದನ್ನು ಬಲಪಡಿಸುವ ಕೆಲಸ ಮಾಡಬೇಕು. ಅವರಿಗೆ ತರಬೇತಿ ಕೊಡುವ ಕೆಲಸವನ್ನು ಮಾಡಬೇಕು. ಅವರನ್ನು ಸೇರಿಸಿಕೊಳ್ಳಬೇಕು ವ್ಯವಸ್ಥೆ ಮಾಡಬೇಕು. ಆನ್ ಲೈನ್ ನಲ್ಲಿ ಹೆಸರು ನೊಂದಾವಣಿ ಮಾಡಿಸಿಕೊಳ್ಳಬೇಕು. ಕೋಮು ಸೌಹಾರ್ದತೆ ಮಾಡೋರ ಮೇಲೆ ಕಠಿಣ ಕ್ರಮ ತಗೊಳ್ಳಬೇಕು. ಗೂಂಡಾಗಳನ್ನು ಪಟ್ಟಿ ಮಾಡಿ ಅವರ ಮೇಲೆ ನಿಗಾ ಇಡಬೇಕು. ವೈದ್ಯಕೀಯ ತುರ್ತು ಪರಿಸ್ಥಿತಿಗೆ ಬೇಕಾದ ವ್ಯವಸ್ಥೆ ಮಾಡಬೇಕು. ಅಗತ್ಯ ವಸ್ತುಗಳು, ಕಾಳ ಸಂತೆಕೋರರ ಮೇಲೆ ನಿಗಾ ವಹಿಸಬೇಕು. ಅಗ್ನಿಶಾಮಕ ದಳ, ಯಾವಾಗಲೂ ಅಲರ್ಟ್ ಆಗಿರಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೆಲ್ಪ್ ಲೈನ್ ಹೆಚ್ಚು ಮಾಡಬೇಕು. 24/7 ಎಲ್ಲಾ ಅಧಿಕಾರಿಗಳು ಕೂಡ ಅಲರ್ಟ್ ಆಗಿರಬೇಕು. ಕರಾವಳಿ ಪ್ರದೇಶ, ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ಯಿಂದ ಇರಲು ಸೂಚನೆ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಅವರು ಕೇಳುವ ಸಹಾಯವನ್ನು ಮಾಡುತ್ತದೆ. ಯುದ್ದದ ಕಾಲದಲ್ಲಿ ಅಧಿಕಾರಿಗಳು ರಜೆ ಹಾಕಬಾರದು ಎಂದಿರುವ ಸಿಎಂ ಸಿದ್ದರಾಮಯ್ಯ, ಕದನ ವಿರಾಮ ಸ್ವಾಗತ ಮಾಡಿದ್ದಾರೆ. ಕದನ ವಿರಾಮದ ಬಗ್ಗೆ ಫಾರಿನ್ ಸೆಕ್ರೆಟರಿ ವಿಕ್ರಮ್ ಮಿಸ್ರಿ ಅಧಿಕೃತವಾಗಿ ಹೇಳಿದ್ದಾರೆ. ಇವಾಗ ಅಧಿಕೃತವಾಗಿ ಬಂದಿದೆ. ಆದರೂ ಕೂಡ ಎಚ್ಚರಿಕೆ ಯಿಂದ ಇರಬೇಕು. ಭಯೋತ್ಪಾದನೆಯನ್ನು ನಾವು ನಿಗ್ರಹ ಮಾಡುವ ಕೆಲಸವನ್ನು ಮಾಡುತ್ತೇವೆ. ಇದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.