ಮಕ್ಕಳು COVID-19 ಸೋಂಕಿಗೆ ಒಳಗಾಗುವುದಿಲ್ಲ ಎಂಬ ಜನಪ್ರಿಯ ನಂಬಿಕೆಗಳಿಗೆ ವಿರುದ್ಧವಾಗಿ ಸೋಂಕಿಗೊಳಗಾಗುತ್ತಾರೆ. ಆದರೆ ಅವರು ಸಾಮಾನ್ಯವಾಗಿ ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ತೋರಿಸುತ್ತಾರೆ ಎಂದು ಎನ್ಐಟಿಐ (ನೀತಿ) ಆಯೋಗದ ಸದಸ್ಯ – ಡಾ.ವಿ.ಕೆ ಪಾಲ್ ಹೇಳಿದ್ದಾರೆ. ಮಕ್ಕಳು ರೋಗ ಹರಡುವ ಸರಪಳಿಯ ಭಾಗವಾಗದಂತೆ ನೋಡಿಕೊಳ್ಳುವುದು ಈಗ ಸರ್ಕಾರದ ಪ್ರಯತ್ನವಾಗಬೇಕಿದೆ ಎಂದು ಅವರು ಹೇಳಿದರು.
ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಮಕ್ಕಳ ಸಂಖ್ಯೆಯು ಏರಿಕೆಯಾಗಿದೆ. ಮೊದಲೇ ಅಸ್ತಿತ್ವದಲ್ಲಿರುವ ರೋಗದೊಂದಿಗೆ ಮಾರಣಾಂತಿಕ ವೈರಸ್ ಸೋಂಕಿಗೆ ಒಳಗಾದ ಮಕ್ಕಳನ್ನು ನಿಭಾಯಿಸುವ ವಿಧಾನಗಳ ಬಗ್ಗೆ ಒತ್ತು ನೀಡುವಂತೆ ಇದು ದೇಶದ ಆರೋಗ್ಯ ತಜ್ಞರನ್ನು ಎಚ್ಚರಿಸಿದೆ ಎಂದು ANI ವರದಿ ಮಾಡಿದೆ.
“ಮಕ್ಕಳ ವಿಷಯವು ಹೆಚ್ಚು ಮುಖ್ಯವಾಗಿದೆ. ಅವರು ಕೋವಿಡ್ಗೆ ಒಳಗಾಗುತ್ತಾರೆ. ಆದರೆ ರೋಗಲಕ್ಷಣಗಳು ಕಡಿಮೆ. ಅವರು ಹೆಚ್ಚಾಗಿ ಲಕ್ಷಣರಹಿತ ಸೋಂಕಿಗೆ ತುತ್ತಾಗುತ್ತಾರೆ “ಎಂದು ಡಾ ಪಾಲ್ ನಿನ್ನೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಮಕ್ಕಳು ಜನರಲ್ಲಿ ರೋಗ ಹರಡುವ ಸರಪಳಿಯ ಭಾಗವಾಗದಂತೆ ನೋಡಿಕೊಳ್ಳುವ ಕೆಲಸವಾಗಬೇಕು” ಎಂದು ಅವರು ಹೇಳಿದರು.
ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 26 ರಷ್ಟು ಜನಸಂಖ್ಯೆ 14 ವರ್ಷಕ್ಕಿಂತ ಕಡಿಮೆ ಮತ್ತು ಸುಮಾರು ಶೇಕಡಾ ಏಳರಷ್ಟು ಜನಸಂಖ್ಯೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳದ್ದು.
ಈ ಹಿಂದೆ ಮಕ್ಕಳ ಹಕ್ಕುಗಳ ಸಂರಕ್ಷಣಾ ರಾಷ್ಟ್ರೀಯ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಪತ್ರ ಬರೆದು, ಆರೋಗ್ಯ ತಜ್ಞರು ಸೂಚಿಸಿದಂತೆ ಮೂರನೇ COVID-19 ತರಂಗವು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.
ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ನಗರಕ್ಕಿಂತ ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ ಎಂದು ಡಾ. ಪಾಲ್ ತಿಳಿಸಿದರು. ಆದರೆ ಈಗ ಪರಿಸ್ಥಿತಿ ಸ್ಥಿರವಾಗುತ್ತಿದೆ ಎಂದೂ ಅವರು ದೇಶಕ್ಕೆ ಭರವಸೆ ನೀಡಿದರು.
ಭಾರತವು ನಿನ್ನೆ 2.57 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಕೋವಿಡ್ಗೆ ಸಂಬಂಧಿಸಿದ ಸುಮಾರು 4,200 ಸಾವುಗಳು ಸಂಭವಿಸಿವೆ.