• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಶ್ರಮ ಜಗತ್ತಿನ ಸವಾಲುಗಳೂ ಅಮೃತಕಾಲದ ಆಶಯವೂ- ಭಾಗ 2

ನಾ ದಿವಾಕರ by ನಾ ದಿವಾಕರ
August 11, 2023
in ಅಂಕಣ, ಅಭಿಮತ
0
ಶ್ರಮ ಜಗತ್ತಿನ ಸವಾಲುಗಳೂ ಅಮೃತಕಾಲದ ಆಶಯವೂ- ಭಾಗ 2
Share on WhatsAppShare on FacebookShare on Telegram

ಸ್ವತಂತ್ರ ಭಾರತ 100 ವರ್ಷಗಳನ್ನು ಪೂರೈಸುವ ವೇಳೆಗೆ ಸಮನ್ವಯದ ತಳಪಾಯ ಗಟ್ಟಿಯಾಗಿರಬೇಕು

ADVERTISEMENT

ನಾ ದಿವಾಕರ

ಶ್ರಮ ಮತ್ತು ಬಂಡವಾಳದ ವೈರುಧ್ಯ

ಗುರುಗ್ರಾಮದ ಪಕ್ಕದಲ್ಲೇ ಇರುವ ನೂಹ್‌ ಅಥವಾ ಮೇವಾತ್‌ ಅಂತಹ ಒಂದು ಶ್ರಮಜೀವಿಗಳ ಜಿಲ್ಲೆಯಾಗಿದೆ. ಇಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹೇಳಿದ “ ಭಾರತದಲ್ಲಿ ಕೇವಲ ಶ್ರಮ ವಿಭಜನೆ ಇಲ್ಲ, ಶ್ರಮಿಕರ ವಿಭಜನೆಯೂ ಇದೆ “ ಎಂಬ ದಾರ್ಶನಿಕ ನುಡಿಗಳು ನೆನಪಾಗುತ್ತವೆ. ಈ ಶ್ರಮಶಕ್ತಿಯನ್ನು ಪ್ರತಿನಿಧಿಸುವ ವಲಸೆ ಕಾರ್ಮಿಕರು, ತಳಮಟ್ಟದ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗಗಳು ಗುರುಗ್ರಾಮವನ್ನು ಭಾರತದ ಮಿಲಿನಿಯಮ್‌ ಸಿಟಿ ಆಗಿಸಿದ್ದಾರೆ. ಪ್ರತಿಯೊಂದು ಗಗನ ಚುಂಬಿ ಕಟ್ಟದ ಹಿಂದೆಯೂ ಒಂದು ಕೊಳೆಗೇರಿ ಇರುತ್ತದೆ ಎಂಬ ಚಾರಿತ್ರಿಕ ನಾಣ್ಣುಡಿಯನ್ನು ಪುನರ್‌ ಮನನ ಮಾಡಿಕೊಂಡಾಗ, ಆಧುನಿಕ ಭಾರತದ ಭವ್ಯ ನಗರಗಳ ಹಿಂದೆ, ಝಗಮಗಿಸುವ ರಸ್ತೆಗಳ ಹಿಂದೆ, ಅತ್ಯಾಧುನಿಕ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ, ಮೇಲ್‌ಸೇತುವೆ, ಮೆಟ್ರೋ , ರೈಲು ಮಾರ್ಗಗಳು ಹಾಗೂ ವಿಮಾನ ನಿಲ್ದಾಣಗಳ ಹಿಂದೆ ಇದೇ ರೀತಿಯ ಕೊಳೆಗೇರಿಗಳು ಇಂದಿಗೂ ಉಸಿರುಗಟ್ಟಿ ಬದುಕುತ್ತಿರುವುದನ್ನು ಗಮನಿಸಬಹುದು. ಒಂದು ಸಮೃದ್ಧ ರಾಜ್ಯದ ಹಣಕಾಸು ರಾಜಧಾನಿ-ಮಿಲಿನಿಯಮ್‌ ನಗರದ ಸಮೀಪದಲ್ಲಿಯೇ ದೇಶದ ಅತ್ಯಂತ ಕಡುಬಡತನದ ಜಿಲ್ಲೆಯೂ ಇರುವ ಒಂದು ವಿಡಂಬನೆಯನ್ನು , ಪ್ರಬುದ್ಧ ಸಮಾಜವಾಗಿ ನಾವು ಹೇಗೆ ನೋಡಬೇಕು ?

ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ ಎಂಬ ಕಾರಣಕ್ಕೆ ಅದು ಹಿಂದುಳಿದಿದೆಯೇ ಅಥವಾ ಬೆಳೆಯುತ್ತಿರುವ ಭಾರತದ ಔದ್ಯಮಿಕ ಸಾಮ್ರಾಜ್ಯದ ಕಾಲಾಳುಗಳನ್ನು ಒದಗಿಸುವ ಶೋಷಿತ ದುಡಿಮೆಗಾರರ ಜಿಲ್ಲೆ ಎಂಬ ಕಾರಣಕ್ಕಾಗಿಯೋ ? ಈ ಸಂಕೀರ್ಣ ಪ್ರಶ್ನೆಗೆ ನಾವು ಉತ್ತರ ಶೋಧಿಸಬೇಕಿದೆ. ಇಂತಹ ಒಂದು ಜಿಲ್ಲೆಯಲ್ಲಿ ಬಡತನ, ಹಸಿವೆ, ಅಕ್ಷರ ವಂಚಿತ ನೋವು, ನಾಗರಿಕ ಸೌಲಭ್ಯ ವಂಚಿತ ಯಾತನೆ, ಅವಕಾಶವಂಚಿತ ವೇದನೆ, ಸಾಮಾಜಿಕ ತಾರತಮ್ಯ-ದೌರ್ಜನ್ಯಗಳ ಸುತ್ತ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಜ ಸಂಬಂಧಗಳ ಸುತ್ತ ಒಂದು ಮಾನವ ಪ್ರಜ್ಞೆ ರೂಪುಗೊಳ್ಳಬೇಕಲ್ಲವೇ ? ಸ್ವಾತಂತ್ರ್ಯ ಗಳಿಸಿ 75 ವರ್ಷಗಳು ಕಳೆದರೂ ರಾಜಧಾನಿಗೆ ಸಮೀಪದ ಒಂದು ಜಿಲ್ಲೆ ದೇಶದ ಅತ್ಯಂತ ಕಡುಬಡತನದ-ಹಿಂದುಳಿದ ಜಿಲ್ಲೆಯಾಗಿ ಉಳಿದಿರುವುದು ಒಂದು ಚಾರಿತ್ರಿಕ ದುರಂತವಾದರೆ, ಈ ಜಿಲ್ಲೆ ಆಧುನಿಕ ಭಾರತದ ಮಿಲಿನಿಯಮ್‌ ಸಿಟಿಯ ಸಮೀಪ ಇರುವುದು ಸಮಕಾಲೀನ ಇತಿಹಾಸದ ವಿಡಂಬನೆ ಅಲ್ಲವೇ ?

ನೂಹ್‌ ಮತ್ತು ಗುರುಗ್ರಾಮ್‌ನಲ್ಲಿ ನಡೆಯುತ್ತಿರುವ ಕೋಮು ಗಲಭೆಗಳು ಹಠಾತ್ತನೆ ನಿರ್ವಾತದಲ್ಲಿ ಸೃಷ್ಟಿಯಾದ ವಿದ್ಯಮಾನಗಳಲ್ಲ. ಕಳೆದ ಮೂರು ನಾಲ್ಕು ದಶಕಗಳಿಂದಲೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಬೆಳವಣಿಗೆಗಳನ್ನು ವಿಭಿನ್ನ ಆಯಾಮಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಒಂದು ಧಾರ್ಮಿಕ ಉತ್ಸವ ಅಥವಾ ಮೆರವಣಿಗೆ, ಅದರ ಮೇಲೆ ದಾಳಿ ಮಾಡುವ ಮತ್ತೊಂದು ಗುಂಪು, ಈ ದಾಳಿಗೆ ಪ್ರತೀಕಾರವಾಗಿ ʼ ಧಾರ್ಮಿಕ ʼ ಉತ್ಸವಗಳಲ್ಲಿ ಭಾಗವಹಿಸಿರುವ ಗುಂಪುಗಳಿಂದಲೇ ಪ್ರತಿದಾಳಿ, ಮಾರಕಾಸ್ತ್ರಗಳ ಬಳಕೆ, ಶಸ್ತ್ರಾಸ್ತ್ರಗಳ ಹೇರಳ ಲಭ್ಯತೆ ಮತ್ತು ಅನೇಕ ಸಂದರ್ಭಗಳಲ್ಲಿ ಪೊಲೀಸರ ಮೌನ ಅಥವಾ ನಿಷ್ಕ್ರಿಯತೆ ಇವೆಲ್ಲವೂ ಸ್ವತಂತ್ರ ಭಾರತ ಕಂಡಿರುವ ದುರಂತ ವಾಸ್ತವಗಳು. ಗುರುಗ್ರಾಮದಂತಹ ಆಧುನಿಕ ವಾಣಿಜ್ಯ ನಗರಿಯ ಮಸೀದಿಯಲ್ಲಿ ಇಮಾಮ್‌ ಒಬ್ಬರು ದುಷ್ಕರ್ಮಿಯ ಗುಂಡೇಟಿಗೆ ಬಲಿಯಾಗುವುದು ಏನನ್ನು ಸೂಚಿಸುತ್ತದೆ ?

ನಾವು ಎಡವುತ್ತಿರುವುದು ಇಂತಹ ಘಟನೆಗಳನ್ನು ವಿಶ್ಲೇಷಿಸುವ ವಿಧಾನದಲ್ಲಿ. ಕೊಲ್ಲುವವರ, ಕೊಲ್ಲಲ್ಪಡುವವರ, ದಾಳಿಕೋರರ ಹಾಗೂ ದಾಳಿಗೊಳಗಾದವರ ನಡುವೆ ಮತೀಯ ಅಸ್ಮಿತೆಗಳನ್ನು ಶೋಧಿಸುತ್ತಾ, ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಎಣಿಕೆ ಮಾಡಲಾಗುವ ಶವಗಳ ನಡುವೆಯೂ ಅದೇ ಅಸ್ಮಿತೆಗಳನ್ನು ಶೋಧಿಸಲು ಮುಂದಾಗುತ್ತೇವೆ. ಮೂಲಭೂತವಾದ-ಮತಾಂಧತೆ-ಮತದ್ವೇಷದ ನೆಲೆಗಳು ಆಳಕ್ಕಿಳಿದು ಪ್ರತಿಯೊಂದು ಸುಶಿಕ್ಷಿತ ಮನಸ್ಸಿನಲ್ಲೂ ತಮ್ಮ ಇರುವಿಕೆಯನ್ನು ಘನೀಕೃತಗೊಳಿಸಿರುವ ಹೊತ್ತಿನಲ್ಲಿ ಇಂತಹ ಘಟನೆಗಳು ನಡೆದಾಗ ಸಾಮುದಾಯಿಕ ಅಸ್ಮಿತೆಗಳು ಮತ್ತು ಇದನ್ನು ಪೋಷಿಸುವ ರಾಜಕೀಯ ಚಿಂತನೆಗಳು ಎಂತಹ ಅಮಾನುಷ ಘಟನೆಗಳನ್ನಾದರೂ ಸಮರ್ಥಿಸಿಕೊಳ್ಳಲು ಭೂಮಿಕೆಯನ್ನು ಒದಗಿಸಿಬಿಡುತ್ತವೆ. ಒಂದು ಧರ್ಮದ ಅನುಯಾಯಿಗಳ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ನಡೆಸುವುದು ಮಹಾಪರಾಧವೇ ಸರಿ. ಆದರೆ ಧಾರ್ಮಿಕ ಉತ್ಸವಗಳಲ್ಲಿ ಮಾರಕಾಸ್ತ್ರಗಳನ್ನು ಬಳಸುವುದು ಅಪರಾಧವಲ್ಲವೇ ? ಈ ಪ್ರಶ್ನೆಗೆ ಮತಾಂಧತೆ-ಮತದ್ವೇಷವನ್ನು ಹರಡುತ್ತಿರುವ ಪ್ರತಿಯೊಬ್ಬರೂ ಧರ್ಮಾತೀತವಾಗಿ ಉತ್ತರಿಸಬೇಕಿದೆ.

ನ್ಯಾಯಾನ್ಯಾಯಗಳ ನಿಷ್ಕರ್ಷೆ

ಮತ್ತೊಂದೆಡೆ ತ್ವರಿತ ನ್ಯಾಯ ವಿತರಣೆಯ ಹೆಸರಿನಲ್ಲಿ ಕೆಲವು ರಾಜ್ಯ ಸರ್ಕಾರಗಳು ಅನುರಿಸುವ ಅರಣ್ಯ ನ್ಯಾಯವನ್ನೂ ಸಹ ನಾಗರಿಕತೆಯುಳ್ಳ ಸಮಾಜ ಪರಾಮರ್ಶಿಸಬೇಕಿದೆ. ಕೋಮು ಗಲಭೆಗಳನ್ನು ಪ್ರಚೋದಿಸುವ, ಗಲಭೆಗಳಲ್ಲಿ ಪಾಲ್ಗೊಳ್ಳುವ  ಹಾಗೂ ಪ್ರತೀಕಾರವಾಗಿ ದಾಳಿ ನಡೆಸುವವರನ್ನು ಶಿಕ್ಷಿಸುವುದು ಕಾನೂನು-ನ್ಯಾಯ ವ್ಯವಸ್ಥೆಯ ಕರ್ತವ್ಯ. ಆದರೆ ದಂಗೆಕೋರರು ಪ್ರತಿನಿಧಿಸುವ ಇಡೀ ಸಮುದಾಯವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ಅವರ ಮನೆಗಳನ್ನೂ ಧ್ವಂಸ ಮಾಡುವ ಸರ್ಕಾರಗಳ ಬುಲ್ಡೋಜರ್‌ ಕಾರ್ಯಾಚರಣೆಯನ್ನು ಹೇಗೆ ವ್ಯಾಖ್ಯಾನಿಸಬೇಕು. ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈ ಬುಲ್ಡೋಜರ್‌ಗಳಿಗೆ ಬ್ರೇಕ್‌ ಹಾಕಿದೆ. ಅಪರಾಧವು ನ್ಯಾಯಾಂಗ ಕ್ರಿಯೆಯ ಮೂಲಕ ಸಾಬೀತಾಗುವವರೆಗೂ ತಪ್ಪೆಸಗಿದ ವ್ಯಕ್ತಿ ಕೇವಲ ಆರೋಪಿಯಾಗಿರುತ್ತಾನೆ, ಅಪರಾಧಿಯಾಗುವುದಿಲ್ಲ. ಇದು ನ್ಯಾಯಶಾಸ್ತ್ರದ ಮೂಲ ತತ್ವ. ಆದರೆ ಬುಲ್ಡೋಜರ್‌ ನ್ಯಾಯದಲ್ಲಿ ಆರೊಪಿಯಷ್ಟೇ ಅಲ್ಲದೆ ಆತನ ಕುಟುಂಬವೇ ಶಿಕ್ಷೆಗೊಳಗಾಗುತ್ತದೆ. ವಾಸಿಸುವ ಮನೆಗಳನ್ನು ಧ್ವಂಸಗೊಳಿಸುವ ಬುಲ್ಡೋಜರ್‌ ಕಾರ್ಯಾಚರಣೆಗೆ ಕಾನೂನಿನ ಹೊದಿಕೆಯನ್ನೂ ನೀಡಲಾಗಿದ್ದು, ವಿಭಿನ್ನ ಕಾರಣಗಳಿಗಾಗಿ ಆರೋಪಿಗಳ ಇಡೀ ಕುಟುಂಬ ವರ್ಗ ನಿರ್ಗತಿಕರಾಗಬೇಕಾಗುತ್ತದೆ.

ನೂಹ್‌ನಂತಹ ಒಂದು ಜಿಲ್ಲೆಯಲ್ಲಿ ಶ್ರಮಜೀವಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವಾಗ ಅಲ್ಲಿ ಮತದ್ವೇಷ, ಮತಾಂಧತೆ ಮತ್ತು ಕೋಮುಭಾವನೆಗಳು ಬೇರೂರಲು ಕಾರಣವೇನು ? ಇದು ಪ್ರಜ್ಞಾವಂತ ಸಮಾಜವನ್ನು ಕಾಡಬೇಕಿರುವ ಪ್ರಶ್ನೆ. ಗುರುಗ್ರಾಮ ಒಂದು ಐಟಿ ಹಬ್‌ ಆಗಿದ್ದು ಅತಿರೇಕದ ಕೋಮುಗಲಭೆಗಳನ್ನು ಅಪೇಕ್ಷಿಸುವುದಿಲ್ಲ. ಏಕೆಂದರೆ ಅಲ್ಲಿ ಜಾಗತಿಕ ಹಣಕಾಸು ಬಂಡವಾಳಕ್ಕೆ ಪೆಟ್ಟು ಬೀಳುತ್ತದೆ. ಆದರೆ ಸಮೀಪದಲ್ಲೇ ಇರುವ ಮಾನವ ಬಂಡವಾಳದ ಒಂದು ಕೇಂದ್ರ ಕೋಮುದ್ವೇಷದ ದಳ್ಳುರಿಗೆ ಬಲಿಯಾಗುತ್ತದೆ. ಕಾರಣವೇನೆಂದರೆ ಮಾರುಕಟ್ಟೆಗೆ ಅಲ್ಲಿ ಶ್ರಮಿಕರ ಶ್ರಮಶಕ್ತಿಯ ಹೊರತು ಕಳೆದುಕೊಳ್ಳುವುದೇನೂ ಇರುವುದಿಲ್ಲ. ಶ್ರಮ, ಶ್ರಮಶಕ್ತಿ ಮತ್ತು ಶ್ರಮಿಕರನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯ ಮಾರುಕಟ್ಟೆಗೆ ಇರುತ್ತದೆ. ಹಾಗಾಗಿ ಈ ಶ್ರಮಲೋಕದೊಳಗಿನ ಮಾನವ ಕೇವಲ ಬಳಸಿ ಬಿಸಾಡುವ ಯಂತ್ರವಾಗಿ ಕಾಣುತ್ತಾನೆ. ಅವನ ಬದುಕು ಎಂದಾದರೂ ಹಿತ್ತಲಿಗೆ ಎಸೆಯಬೇಕಾದ ವಸ್ತುವಾಗಿ ಕಾಣುತ್ತದೆ. ಬಂಡವಾಳಶಾಹಿ ಮಾರುಕಟ್ಟೆ, ನವ ಉದಾರವಾದಿ ಬಂಡವಾಳ, ಔದ್ಯಮಿಕ ಹಿತಾಸಕ್ತಿ ಹಾಗೂ ಇವೆಲ್ಲವನ್ನೂ ಪೋಷಿಸುವ ರಾಜಕೀಯ ವ್ಯವಸ್ಥೆ ಶ್ರಮ ವಿಭಜನೆಯೊಂದಿಗೆ ಶ್ರಮಿಕರನ್ನೂ ವಿಭಜಿಸುತ್ತಲೇ ತನ್ನ ಶೋಷಣೆಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿರುತ್ತದೆ.

ನೂಹ್‌ ಗಲಭೆಗಳು ಗುರುಗ್ರಾಮಕ್ಕೆ ಹಬ್ಬಿದ ಕೂಡಲೇ ಗಲಭೆಗಳು ನಿಯಂತ್ರಣಕ್ಕೆ ಬರುತ್ತವೆ. ಏಕೆಂದರೆ ಅಲ್ಲಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಡಿಜಿಟಲ್‌ ತಂತ್ರಜ್ಞಾನದ ಮಾರುಕಟ್ಟೆಯನ್ನು ರಕ್ಷಿಸುವುದು ಅನಿವಾರ್ಯವಾಗಿರುತ್ತದೆ. ಮತ್ತೊಂದೆಡೆ ನೂಹ್‌ ಜಿಲ್ಲೆಯಲ್ಲಿ ಬೆಂಕಿಗೆ ಆಹುತಿಯಾಗುವ ಶ್ರಮಿಕರ ಗುಡಿಸಲುಗಳು, ಮನೆಗಳು ಮಾರುಕಟ್ಟೆಯನ್ನು, ಆಡಳಿತ ವ್ಯವಸ್ಥೆಯನ್ನು ಬಾಧಿಸುವುದಿಲ್ಲ. ಇಲ್ಲಿ ನಾವು ಡಾ, ಬಿ.ಆರ್.‌ ಅಂಬೇಡ್ಕರ್‌ ಅವರ “ ಇಲ್ಲಿ ಶ್ರಮವಿಭಜನೆಯಷ್ಟೇ ಅಲ್ಲ ಶ್ರಮಿಕರ ವಿಭಜನೆ ಇದೆ ” ಎನ್ನುವ ದಾರ್ಶನಿಕ ನುಡಿಗಳನ್ನು ಕಾರ್ಲ್‌ಮಾರ್ಕ್ಸ್‌ನ “ ವಿಶ್ವ ಶ್ರಮಿಕರೇ ಒಂದಾಗಿ, ನೀವು ದಾಸ್ಯದ ಸಂಕೋಲೆಗಳ ಹೊರತು ಮತ್ತೇನೂ ಕಳೆದುಕೊಳ್ಳುವುದಿಲ್ಲ ” ಎಂಬ ಚಾರಿತ್ರಿಕ ಘೋಷಣೆಯೊಂದಿಗೆ ಅನುಸಂಧಾನ ಮಾಡಿದರೆ, ಅಮೃತ ಕಾಲದತ್ತ ದಾಪುಗಾಲು ಹಾಕುತ್ತಿರುವ ಭಾರತ ತನ್ನೊಳಗಿನ ವೈರುಧ್ಯಗಳನ್ನು ಗುರುತಿಸಿಕೊಳ್ಳುವುದು ಸುಲಭವಾಗುತ್ತದೆ.

ʼಗುರುಗ್ರಾಮದ ಸಿರಿತನʼ ಪಕ್ಕದಲ್ಲೇ ಇರುವ ʼನೂಹ್‌ ಜಿಲ್ಲೆಯ ದಾರಿದ್ರ್ಯʼ ಇವೆರಡೂ ಪ್ರತಿಮೆಗಳು ನಮಗೆ ನವ ಉದಾರವಾದಿ ಮಾರುಕಟ್ಟೆ ಜಗತ್ತಿನ ಒಂದು ರೂಪಕವಾಗಿ ಕಂಡಾಗ ಮಾತ್ರ ಬಂಡವಾಳಶಾಹಿ-ಮಾರುಕಟ್ಟೆ-ಕಾರ್ಪೋರೇಟ್‌ ಉದ್ಯಮ ಮತ್ತು ಮತಾಂಧ ರಾಜಕಾರಣದ ನಡುವಿನ ಸೂಕ್ಷ್ಮ ಸಂಬಂಧಗಳ ಎಳೆಗಳೂ ಅರ್ಥವಾಗಲು ಸಾಧ್ಯ. ನಾಗರಿಕತೆಯಾಗಿ ನಮ್ಮ ವೈಫಲ್ಯವನ್ನೂ ಗುರುತಿಸಿಕೊಳ್ಳಲು ಸಾಧ್ಯ.

೦-೦-೦-೦-

Tags: Indiaindian indipendceLabourers
Previous Post

ಕ್ರಿಮಿನಲ್‌ ಕಾನೂನುಗಳ ಕೂಲಂಕಷ ತಿದ್ದಪಡಿಯ ಭಾರತೀಯ ಸುರಕ್ಷಾ ಸಂಹಿತೆ ಮಸೂದೆ 2023 ಮಂಡಿಸಿದ ಅಮಿತ್‌ ಶಾ

Next Post

ನಕಲಿ ಸಹಿ ಆರೋಪ | ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್‌ ಚಡ್ಡಾ ಅಮಾನತು

Related Posts

Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
0

ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (Karnataka High Court) ಇತ್ಯರ್ಥಗೊಳಿಸಿದೆ. ಮನೆ ಕೆಲಸದಾಕೆ...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025
Next Post
ರಾಘವ್‌ ಚಡ್ಡಾ

ನಕಲಿ ಸಹಿ ಆರೋಪ | ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್‌ ಚಡ್ಡಾ ಅಮಾನತು

Please login to join discussion

Recent News

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada