ದೇಶಾದ್ಯಂತ ದೊಡ್ಡ ವಿರೋಧ ವ್ಯಕ್ತವಾಗಿದಂತಾ ಪೌರತ್ವ ತಿದ್ದುಪಡಿ ಕಾಯ್ದೆ(CAA) ಜಾರಿಯಾಗಲಿದೆ ಅದರ ನಿಯಮಾವಳಿಯ ಅಂತಿಮ ಕರಡು 2024ರ ಮಾರ್ಚ್ 30ರೊಳಗೆ ಸಿದ್ಧವಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ತಿಳಿಸಿದ್ದಾರೆ.
ಕೊಲ್ಕತ್ತಾದ ಠಾಕೂರ್ನಗರದಲ್ಲಿ ಮತುವಾ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಸಿಎಎ ಜಾರಿಗೊಳಿಸುವ ಪ್ರಕ್ರಿಯೆಗೆ ಇದೀಗ ವೇಗ ಪಡೆದುಕೊಂಡಿದೆ. ಇದರಲ್ಲಿನ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಮುಂದಿನ ವರ್ಷದ ಮಾರ್ಚ್ 30ರೊಳಗೆ ಸಿಎಎ ಅಂತಿಮ ಕರಡುಪ್ರತಿ ಸಿದ್ಧವಾಗುವ ನಿರೀಕ್ಷೆ ಇದೆ. ಮತುವಾಸ್ ನಿಂದ ಯಾರೊಬ್ಬರಿಗೂ ಪೌರತ್ವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
![](https://pratidhvani.com/wp-content/uploads/2023/11/ajaymishra.jpg)
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಎಂಸಿ ರಾಜ್ಯಸಭಾ ಸಂಸದ ಸಂತಾನು ಸೇನ್, “ಬಿಜೆಪಿಯು ಚುನಾವಣೆಯ ಸಮಯದಲ್ಲಿ ಮಾತ್ರ ಮತವಾಸ್ ಮತ್ತು ಸಿಎಎಯನ್ನು ನೆನಪಿಸಿಕೊಳ್ಳುತ್ತದೆ. ಕೇಸರಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಸಿಎಎ ಅನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಬಿಜೆಪಿಯ ಸುಳ್ಳುಗಖ ಬಗ್ಗೆ ಮತುವರಿಗೆ ಮತ್ತು ಇತರರಿಗೆ ಸ್ಪಷ್ಟವಾಗಿ ಗೊತ್ತಿದೆ. ಮುಂದಿನ ವರ್ಷದ ಚುನಾವಣೆಯಲ್ಲಿ ಕೇಸರಿ ಪಕ್ಷವನ್ನು ಎಲ್ಲರೂ ತಿರಸ್ಕರಿಸುತ್ತಾರೆ,” ಎಂದು ಹೇಳಿದರು.