• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚಾಲನೆ ವೇಳೆ ಹೃದಯಾಘಾತವಾಗಿ ಬಸ್ ಚಾಲಕ ಸಾವು: ಜೀವದ ಹಂಗು ತೊರೆದು ಬಸ್ ನಿಲ್ಲಿಸಿದ ಕಂಡಕ್ಟರ್, ವಿಡಿಯೋ!

Any Mind by Any Mind
November 6, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಸಾರ್ವಜನಿಕರ ಪ್ರಯಾಣ ಸೇವೆ ನೀಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ನಲ್ಲಿ ಚಾಲನೆ ಮಾಡುತ್ತಿದ್ದ ಡ್ರೈವರ್‌ಗೆ ದಿಢೀರ್ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ.ಕಂಡಕ್ಟರ್‌ನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರ ಜೀವ ಉಳಿದರೂ, ಅಷ್ಟರಲ್ಲಾಗದೇ ದುರಂತವೊಂದು ಸಂಭವಿಸಿತ್ತು.

ADVERTISEMENT

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲನಿಗೆ ದಿಡೀರ್ ಹೃದಯಾಘಾತ ಸಂಭವಿಸಿದ್ದು, ಬಸ್ ಚಾಲನೆ ಮಾಡುವಾಗಲೇ ಸಾವನ್ನಪ್ಪಿದ್ದಾರೆ.ಡ್ರೈವರ್ ಪಕ್ಕದಲ್ಲಿ ಕಂಡಕ್ಟರ್ ನಿಂತುಕೊಂಡು ಮಾತನಾಡುತ್ತಿದ್ದು, ಮಾತಿನ ನಡುವೆಯೇ ಈ ಘಟನೆ ಸಂಭವಿಸಿದೆ.ಬಸ್ನ ಚಾಲಕ ಗೇರ್ ಬಾಕ್ಸ್ ಮೇಲೆ ಕುಸಿದು ಬೀಳುತ್ತಿದ್ದಂತೆ ಆತನನ್ನು ಕೂಗಿ ಎದ್ದೇಳಿಸಲು ಮುಂದಾದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕ್ಷಣಾರ್ಧದಲ್ಲಿ ಮುಂದೆ ನಿಂತಿದ್ದ ಇನ್ನೊಂದು ಬಿಎಂಟಿಸಿ ಬಸ್‌ಗೆ ಹೃದಯಾಘಾತವಾಗಿ ಬಿದ್ದ ಚಾಲಕನ ಬಸ್ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿದೆ.

ಇಲ್ಲಿ ಏನೋ ಅವಘಡ ಸಂಭವಿಸಿದೆ ಎಂಬುದನ್ನು ಅರಿತ ಕಂಡಕ್ಟರ್ ಕೂಡಲೇ ಡ್ರೈವರ್‌ನ ಸ್ಥಳಕ್ಕೆ ಬಂದು ಸ್ಟೇರಿಂಗ್ ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಡ್ರೈವರ್‌ನಲ್ಲಿ ಪಕ್ಕಕ್ಕೆ ಸರಿಸಿ ಬ್ರೇಕ್ ಒತ್ತಿ ಬಸ್ ಅನ್ನು ನಿಲ್ಲಿಸಿದ್ದಾರೆ. ಈ ಮೂಲಕ ಎಲ್ಲ ಪ್ರಯಾಣಿಕರ ಜೀವವನ್ನು ಕಾಪಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಒಂದು ದುರಂತ ನಡೆದು ಹೋಗಿತ್ತು. ಸೀಟಿನಲ್ಲಿಯೇ ಕುಸಿದುಬಿದ್ದ ಡ್ರೈವರ್ ಅನ್ನು ನೀರು ಹಾಕಿ ಎಬ್ಬಿಸಲು ಹಾಗೂ ಹೃದಯವನ್ನು ಪಂಪ್ ಮಾಡಿ ಎಬ್ಬಿಸಲು ಎಷ್ಟೇ ಪ್ರಯತ್ನ ಮಾಡಿದರೂ ಆತ ಮೇಲೇಳಲೇ ಇಲ್ಲ. ಡ್ರೈವರ್‌ನ ಪ್ರಾಣಪಕ್ಷಿ ಕಾರ್ಡಿಯಾಕ್ ಅರೆಸ್ಟ್ ಆಗುವ ಮೂಲಕ ಹಾರಿಹೋಗಿತ್ತು.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಬಸ್ಸಿನ ವಿವರ ಮತ್ತು ಚಾಲಕನ ಬಗ್ಗೆ ಮಾಹಿತಿ ನೀಡಿದ ಬಿಎಂಟಿಸಿ ಸಂಸ್ಥೆಯು, ದಿನಾಂಕ 06.11.2024ರಂದು ಎಂದಿನಂತೆ ವಾಹನ ಸಂಖ್ಯೆ ಕೆಎ-57 ಎಫ್-4007 ಮಾರ್ಗ ಸಂಖ್ಯೆ 256 ಎಂ/1 ಕೊನೆಯ ಸುತ್ತುವಳಿಯಲ್ಲಿ ನೆಲಮಂಗಲದಿಂದ ದಾಸನಪುರ ಘಟಕಕ್ಕೆ ತೆರಳುವಾಗ ಕಿರಣ್ ಕುಮಾರ್ (ಬಿಲ್ಲೆ ಸಂಖ್ಯೆ 24921) ಅವರು ಹೃದಯಾಘಾತವಾಗಿ ತಕ್ಷಣ ಚಾಲಕರ ಸಿಟಿನಿಂದ ಕೆಳಗೆ ಉರುಳಿದ್ದಾರೆ.ತಕ್ಷಣವೇ ಬಸ್ಸಿನಲ್ಲೇ ಇದ್ದ ನಿರ್ವಾಹಕ ಓಬಳೇಶ್, ಬಿಲ್ಲೆ ಸಂಖ್ಯೆ 21448 ರವರು ಬಸ್ಸನ್ನು ಯಾವುದೇ ಅಪಘಾತ ಮತ್ತು ಪ್ರಾಣಹಾನಿಗೆ ಅವಕಾಶ ಮಾಡಿಕೊಡದೆ ತ್ವರಿತವಾಗಿ ನಿಲ್ಲಿಸಿದ್ದಾರೆ. ಚಾಲಕರನ್ನು ಹತ್ತಿರವೇ ಇದ್ದ ವಿ.ಪಿ.ಮ್ಯಾಗ್ನಸ್ ಆಸ್ಪತ್ರೆಗೆ ದಾಖಲಿಸಿದಾಗಮ ವೈದ್ಯರು ಚಾಲಕರನ್ನು ಪರೀಕ್ಷಿಸಿ, ಸದರಿಯವರು ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ತಿಳಿಸಿರುತ್ತಾರೆ.

https://www.instagram.com/reel/DCCAHY5Mhmu/?igsh=MTBhZzk2aTRjYmd4Yg==

ಸಂಸ್ಥೆಯು ಘಟಕ 40ರ ಕಿರಣ್ ಕುಮಾರ್, ಚಾಲಕನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಸದರಿಯವರ ಆತ್ಮಕ್ಕೆ ಶಾಂತಿ ಕೋರುತ್ತದೆ. ಸಂಸ್ಥೆಯ ಅಧಿಕಾರಿಗಳು ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ , ಎಕ್ಸ್ ಗ್ರೇಷಿಯಾ ಮೊತ್ತವನ್ನು ಚಾಲಕರ ಅಂತ್ಯ ಸಂಸ್ಕಾರಕ್ಕಾಗಿ ನೀಡಲಾಗುದೆ ಎಂದು ತಿಳಿಸಿದೆ.

Tags: bengalurubmtc bus conductorBMTC Bus driverDrivergot fatal cardiac arrestIncidentKiran KumarMinister Ramlinga ReddyNelamangala to the Dasanapura depot.route 256 M/1
Previous Post

ನೀರನ್ನು ಉಳಿಸಲು ರಕ್ತ ಹರಿಸುತ್ತಾರ ಕಂಟೆಸ್ಟೆಂಟ್ಸ್ – ಅನುಷ & ಗೋಲ್ಡ್ ಸುರೇಶ್ ನಡುವೆ ಜಗಳ ಜೋರು.!

Next Post

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೆ ಇದೆ ಅರ್ಹತೆ..?

Related Posts

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!
Top Story

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

by ಪ್ರತಿಧ್ವನಿ
May 22, 2026
0

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸದ ನಡುವೆಯೇ, ಇರಾನ್ ತನ್ನ ಸೇನಾ ಶಕ್ತಿಯನ್ನು ನಿರೀಕ್ಷೆಗಿಂತಲೂ ವೇಗವಾಗಿ ಮರುನಿರ್ಮಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ....

Read moreDetails
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
Next Post
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೆ ಇದೆ ಅರ್ಹತೆ..?

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೆ ಇದೆ ಅರ್ಹತೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada