• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ಬದಲಾದ ಬಿಜೆಪಿ, ಹಿಮಾಂತ ಬಿಸ್ವಾ ಶರ್ಮಾಗೆ ಸಿಎಂ ಸ್ಥಾನ, ಜ್ಯೋತಿರಾಧಿತ್ಯ ಸಿಂಧ್ಯಗೆ ಹುರುಪು

ಯದುನಂದನ by ಯದುನಂದನ
May 13, 2021
in ರಾಜಕೀಯ
0
ಬದಲಾದ ಬಿಜೆಪಿ, ಹಿಮಾಂತ ಬಿಸ್ವಾ ಶರ್ಮಾಗೆ ಸಿಎಂ ಸ್ಥಾನ, ಜ್ಯೋತಿರಾಧಿತ್ಯ ಸಿಂಧ್ಯಗೆ ಹುರುಪು
Share on WhatsAppShare on FacebookShare on Telegram

ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಸ್ಥಾನಗಳು ಯಾವಾಗಲೂ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರಿಗೆ‌ ಮೀಸಲಾಗಿರುತ್ತಿತ್ತು. ಇದು ಮೊದಲ ಬಾರಿಗೆ ಸುಳ್ಳಾಗಿದ್ದು ಅಸ್ಸಾಂನಲ್ಲಿ. 2011ರಲ್ಲಿ ಅಸ್ಸಾಂ ಗಣ ಪರಿಷತ್ (ಎಜಿಪಿ) ಬಿಟ್ಟು ಬಿಜೆಪಿ ಸೇರಿದ್ದ ಸರಬಾನಂದ ಸೋನೊವಾಲ್ ಅವರನ್ನು 2016ರಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ವಿಶೇಷ ಎಂದರೆ ಬಿಜೆಪಿ ಎರಡನೇ ಬಾರಿಗೆ ‘ಹೊರಗಿನವರನ್ನು’ ಮುಖ್ಯಮಂತ್ರಿ ಮಾಡಿದ್ದು‌ ಕೂಡ ಇದೇ ಅಸ್ಸಾಂನಲ್ಲಿ. ಅದು ಈಗ. 2015ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಹಿಮಾಂತ ಬಿಸ್ವಾ ಶರ್ಮಾ ಅವರಿಗೆ ಈಗ ಅಸ್ಸಾಂನಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಬಿಜೆಪಿ ಬದಲಾಗುತ್ತಿದೆಯೇ?

ADVERTISEMENT

ಗೊತ್ತಿಲ್ಲ. ಆದರೆ ಇದರಿಂದ ಇತ್ತೀಚೆಗೆ ಬೇರೆ ಪಕ್ಷಗಳಿಂದ ಬಿಜೆಪಿ ಸೇರಿರುವವರಲ್ಲಿ ಉತ್ಸಾಹ ಮೂಡಿಸಿದೆ. ಉದಾಹರಣೆಗೆ ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಪಶ್ಚಿಮ ಬಂಗಾಳದಲ್ಲಿ ಸುವೆಂದು ಅಧಿಕಾರಿ.‌ ಅಸ್ಸಾಂನಲ್ಲಿ ಬಿಜೆಪಿ ‘ಹೊರಗಿನವರಿಗೆ’ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರಲ್ಲಿ ಇನ್ನೂ ಒಂದು ವಿಶೇಷವಿದೆ. ಸರಬಾನಂದ ಸೋನೊವಾಲ್ ಪಕ್ಷ ಸೇರಿದ ಐದು ವರ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಪಡೆದರು.‌ ಹಿಮಾಂತ ಬಿಸ್ವಾ ಶರ್ಮಾ ಆರು ವರ್ಷ ತೆಗೆದುಕೊಂಡರು.‌ ಇದೊಂಥರಾ ‘ಸಮತೋಲಿತ’ವಾಗಿದೆ. ಅಂದರೆ ಅವರಿಗೆ ಬಂದ ತಕ್ಷಣ ಪದವಿ‌ ಕೊಡಲಾಗಿಲ್ಲ, ಅಂದಮಾತ್ರಕ್ಕೆ ಅವರು ದಶಕಗಳ ಕಾಲ ಕಾದು ಕೊಳೆಯುವ ಪರಿಸ್ಥಿತಿಯೂ ಬರಲಿಲ್ಲ. ಈ ಸಂಗತಿ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಸುವೆಂದು ಅಧಿಕಾರಿಗೆ ‘ನಮಗೂ ಬಿಜೆಪಿಯಲ್ಲಿ ಪದವಿ ಸಿಗುತ್ತದೆ’ ಎಂಬ‌ ಸ್ಫೂರ್ತಿ ನೀಡುತ್ತದೆ. ಜೊತೆಗೆ ‘ನಾವು ಕೂಡ ಕಾಲಕ್ಕಾಗಿ ಕಾಯಬೇಕು’ ಎಂಬ ಪಾಠವನ್ನು ‌ಹೇಳಿದೆ.

ಇದಕ್ಕೂ ಮಿಗಿಲಾಗಿ ‘ತಮ್ಮ ಸಾಮರ್ಥ್ಯ ತೋರಬೇಕು, ಆಗ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯ’ ಎಂಬ ಎಚ್ಚರಿಕೆಯನ್ನೂ ರವಾನಿಸಿದೆ. ಹೇಗೆಂದರೆ ಅಸ್ಸಾಂ ಗಣ ಪರಿಷತ್ ಪಕ್ಷದಿಂದ ಶಾಸಕ, ಸಂಸದರೂ ಆಗಿದ್ದ ಸರಬಾನಂದ ಸೋನೊವಾಲ್ 2011ರಲ್ಲಿ‌ ಬಿಜೆಪಿ ಸೇರಿದರು. 2014ರ ಲೋಕಸಭಾ ಚುನಾವಣೆವರೆಗೂ ಅಸ್ಸಾಂನಲ್ಲಿ ಪಕ್ಷ ಸಂಘಟಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಭಾವುಟ ಅಸ್ಸಾಂನಲ್ಲಿ ಹಾರಾಡುವಂತೆ ಮಾಡಿದರು. ಬಳಿಕ ಹಿಮಾಂತ ಬಿಸ್ವಾ ಶರ್ಮಾ ಜೊತೆ ಸೇರಿಕೊಂಡು‌ 2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಅದರಿಂದ ಮುಖ್ಯಮಂತ್ರಿಯಾದರು.

ಹಿಮಾಂತ ಬಿಸ್ವಾ ಶರ್ಮಾ ವಿಷಯಕ್ಕೆ ಬರುವುದಾದರೆ ಸಂಘಟನೆಗೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ಹೆಸರಾದವರು ಅವರು. 2016ರ ವಿಧಾನಸಭಾ ಚುನಾವಣೆಗೆ ತಮ್ಮನ್ನೇ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆ ಹೈಕಮಾಂಡ್ ನಾಯಕರಲ್ಲಿ ಕೇಳಿಕೊಂಡರು. ಕಾಂಗ್ರೆಸ್ ಹಿಮಾಂತ ಬಿಸ್ವಾ ಶರ್ಮಾ‌ ಅವರ ಮನವಿ ಮತ್ತು ಒತ್ತಡಕ್ಕೆ ಮಣಿಯದಿದ್ದಾಗ ಬಿಜೆಪಿ ಸೇರಿದರು. ಬಿಜೆಪಿಯನ್ನು ಗೆಲ್ಲಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಬಳಿಕ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದರು.‌ ಸಿಎಎ ಮತ್ತು ಎನ್ ಆರ್ ಸಿ ವಿಷಯದಲ್ಲಿ ಮೊದಲು ಮತ್ತು ತೀವ್ರ ರೀತಿಯಲ್ಲಿ ಪ್ರತಿರೋಧ ತೋರಿದ ರಾಜ್ಯ ಅಸ್ಸಾಂ. ಆ ಪ್ರತಿರೋಧಕ್ಕೆ ಬಿಜೆಪಿ ಹೆದರಿದ್ದು ಸುಳ್ಳಲ್ಲ, ಬಿಜೆಪಿ‌ ಹೆದರಿತ್ತು ಎಂಬುದಕ್ಕೆ ಈ ಬಾರಿಯ ಚುನಾವಣೆ ವೇಳೆ ಅಸ್ಸಾಂನಲ್ಲಿ ಸಿಎಎ ಮತ್ತು ಎನ್ ಆರ್ ಸಿ ವಿಷಯದ ಬಗ್ಗೆ ಬಿಜೆಪಿ ವಹಿಸಿದ‌ ಮೌನವೇ ಸಾಕ್ಷಿ. ಆದರೆ ಆ ಎಲ್ಲಾ ಸಂದರ್ಭಗಳಲ್ಲೂ ಪರಿಸ್ಥಿತಿಯನ್ನು ನಿರ್ವಹಿಸಿದ್ದು ಇದೇ ಹಿಮಾಂತ ಬಿಸ್ವಾ ಶರ್ಮಾ. ಹಾಗಾಗಿ ಯಾವುದೇ ವಿರೋಧ ಇಲ್ಲದಿದ್ದರೂ ಸರಬಾನಂದ ಸೋನೊವಾಲ್ ಅವರನ್ನು ಪಕ್ಕಕ್ಕೆ ಸರಿಸಿ ಹಿಮಾಂತ ಬಿಸ್ವಾ ಶರ್ಮಾ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.

ಅಸ್ಸಾಂ ಚುನಾವಣೆ: CAA, NRCಯನ್ನು ಚುನಾವಣಾ ದಾಳವಾಗಿಸಿದ ಬಿಜೆಪಿ ಮತ್ತು ಕಾಂಗ್ರೆಸ್‌

ಇದೇ ರೀತಿ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಸುವೆಂದು ಅಧಿಕಾರಿ ಕಾಯುವುದರೊಂದಿಗೆ ಕೆಲಸವನ್ನೂ ಮಾಡಬೇಕಾಗಿದೆ. ಜ್ಯೋತಿರಾಧಿತ್ಯ ಸಿಂಧ್ಯ ಈಗಾಗಲೇ ಬಿಜೆಪಿ ನಾಯಕರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ. ಮೊದಲಿಗೆ ಕಾಂಗ್ರೆಸ್ ಶಾಸಕರಿಂದ‌ ರಾಜೀನಾಮೆ ಕೊಡಿಸುತ್ತೇನೆ ಎಂದಿದ್ದರು.‌ ಕೊಡಿಸಿ ಕಮಲನಾಥ್ ಸರ್ಕಾರವನ್ನು ಕಡೆವಿದರು. ನಂತರ ಶಿವರಾಜ್ ಸಿಂಗ್ ಚೌಹಾಣ್ ದಾರಿಗೆ ಮುಳ್ಳಾಗುವುದಿಲ್ಲ ಎಂದಿದ್ದರು. ಅದೇ ರೀತಿ ಯಾವುದೇ ಅಡೆತಡೆಯಾಗದೆ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ರಚನೆಯಾಯಿತು. ಇದರಿಂದ ಜ್ಯೋತಿರಾಧಿತ್ಯ ಸಿಂಧ್ಯ ಎರಡನೇ ಭರವಸೆಯನ್ನೂ ಈಡೇರಿಸಿದಂತಾಯಿತು. ಬಳಿಕ ಉಪ ಚುನಾವಣೆಗಳಲ್ಲಿ 28 ಸ್ಥಾನಗಳ ಪೈಕಿ 19 ಸ್ಥಾನ ಬಿಜೆಪಿಗೆ ಬರುವಂತೆ ಮಾಡಿ ಮೂರನೇ ಭರವಸೆಯನ್ನೂ ಈಡೇರಿಸಿದರು. ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನ‌ ದಡ‌ ಸೇರಿಸಲು ಶಿವರಾಜ್ ಸಿಂಗ್ ಚೌಹಾಣ್ ಜೊತೆ ದುಡಿಯಬೇಕು. ಆಗ ಅಸ್ಸಾಂನಲ್ಲಿ ತಮ್ಮ ದಾರಿಗೆ ಅಡ್ಡ ಬಂದಿಲ್ಲದ ಹಿಮಾಂತ ಬಿಸ್ವಾ ಶರ್ಮಾ ಅವರನ್ನು ಸ್ವತಃ ಸರಬಾನಂದ ಸೋನೊವಾಲ್ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಸೂಚಿಸಿದಂತೆ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಜ್ಯೋತಿರಾಧಿತ್ಯ ಸಿಂಧ್ಯ ಹೆಸರು ಸೂಚಿಸಬಹುದು.

ಹಿಮಂತ ಬಿಸ್ವಾ ಶರ್ಮಾಗೆ ಸಂಘ ಪರಿವಾರದ ನಂಟಿರಲಿಲ್ಲ. ಆದರೆ ಜ್ಯೋತಿರಾಧಿತ್ಯ ಸಿಂಧ್ಯಗೆ ಆ ಸಮಸ್ಯೆ ಇಲ್ಲ. ಜ್ಯೋತಿರಾಧಿತ್ಯ ಅವರ ಅಜ್ಜ ಜೀವಂಜಿರಾವ್ ಸಿಂಧ್ಯ ಹಿಂದೂ ಮಹಾಸಭಾದ ಬಗ್ಗೆ ಮೃದುಧೋರಣೆ ಹೊಂದಿದ್ದರು. ಅಜ್ಜಿ ವಿಜಯ್ ರಾಜೆ ಸಿಂಧ್ಯ ತಮ್ಮ ಮೊದಲ ಚುನಾವಣೆ ಎದುರಿಸಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ. ಬಳಿಕ ಅವರು ಬಿಜೆಪಿಯ ಪೂರ್ವಾಶ್ರಮ ಭಾರತೀಯ ಜನ ಸಂಘ (ಬಿಜೆಎಸ್) ಸೇರಿದರು. ಅವರ ಮಗ ಮಾಧವರಾವ್ ಸಿಂಧಿಯಾ (ಜ್ಯೋತಿರಾಧಿತ್ಯ ಸಿಂಧ್ಯ ತಂದೆ) ಮೊದಲ ಲೋಕಸಭಾ ಚುನಾವಣೆಯನ್ನು ಗೆದ್ದದ್ದು ಬಿಜೆಎಸ್ ಬೆಂಬಲದೊಂದಿಗೆ. ಜ್ಯೋತಿರಾಧಿತ್ಯ ಸಿಂಧ್ಯ ಚಿಕ್ಕಮ್ಮಂದಿರಾದ ರಾಜಸ್ಥಾನದ ವಸುಂಧರಾ ರಾಜೆ ಮತ್ತು ಮಧ್ಯಪ್ರದೇಶದ ಯಶೋಧರ ರಾಜೆ ದಶಕಗಳಿಂದ ಬಿಜೆಪಿಯಲ್ಲೇ ಇದ್ದಾರೆ. ವಸುಂಧರಾ ರಾಜೆಯವರ ಮಗ ದುಶ್ಯಂತ್ ಸಿಂಗ್ ರಾಜಸ್ಥಾನದ ಝಾಲಾವರ್-ಬಾರ್ಮರ್ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ. ಹೀಗೆ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಬಿಜೆಪಿ ನಂಟಿಗೆ ನಂಜಿಲ್ಲ. ಆದುದರಿಂದ ಅವರಿಗೆ ಬಿಜೆಪಿಯಲ್ಲಿ ಭಯವಿಲ್ಲ ಎನ್ನುವಂತಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ವೈಯಕ್ತಿಕವಾಗಿ ಎದುರು ಹಾಕಿಕೊಂಡು ನಂದಿಗ್ರಾಮದಲ್ಲಿ ಗೆದ್ದಿರುವ ಮತ್ತು‌ ಚುನಾವಣೆಗೂ ಮುನ್ನ ಹಲವಾರು ಟಿಎಂಸಿಯ ಸಚಿವರು, ಶಾಸಕರು ಮತ್ತು ಸಂಸದರನ್ನು ಬಿಜೆಪಿಗೆ ಸೆಳೆದಿರುವ ಸುವೇಂದು ಅಧಿಕಾರಿ ಈಗ ಬಿಜೆಪಿ ವಲಯದಲ್ಲಿ ‘ಪಶ್ಚಿಮ ಬಂಗಾಳದ ಹಿಮಾಂತ ಬಿಸ್ವಾ ಶರ್ಮಾ’ ಆಗಿದ್ದಾರೆ. ಕಾಲಕ್ಕೆ ತಕ್ಕ ಹಾಗೆ ಬದಲಾದ ಪರಿಣಾಮ ಬಿಜೆಪಿ ಬೇರುಗಳು ಗಟ್ಟಿಯಾಗತೊಡಗಿವೆ. ಪ್ರಾದೇಶಿಕ ನಾಯಕರನ್ನು ಬೆಳೆಸಿದರೆ ಮಾತ್ರ ಉಳಿಗಾಲ ಎಂಬ ಸತ್ಯ ಬಿಜೆಪಿಗೆ ಈಗ ಚೆನ್ನಾಗಿ ಅರ್ಥ ಆದಂತಾಗಿದೆ‌. ಅದೇ ಕಾರಣಕ್ಕೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಿಸಲು ಹತ್ತು ಸಲ ಯೋಚನೆ ಮಾಡಲಾಗುತ್ತಿದೆ.

Previous Post

ಕೋವಿಡ್ ಲಸಿಕೆ ಪಡೆಯಲು 80-90 ಕಿಮೀ ಪ್ರಯಾಣಿಸುತ್ತಿರುವ ಬೆಂಗಳೂರಿಗರು

Next Post

ಕರೋನಾಕ್ಕೆ ಇಷ್ಟೆಲ್ಲಾ ಗಣ್ಯರು ಬಲಿಯಾಗಿದ್ದಾರಾ..? ಪಟ್ಟಿ ನೋಡಿದರೆ ಗಾಬರಿಯಾಗೋದು ಖಚಿತ..!

Related Posts

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 
Top Story

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

by Chetan
July 2, 2025
0

ರಾಜ್ಯ ಕಾಂಗ್ರೆಸ್ ಶಾಸಕರಿಂದ ರಣದೀಪ್ ಸಿಂಗ್ ಸುರ್ಜೇವಾಲ (Randeep sing surjewala) ಅಭಿಪ್ರಾಯ ಸಂಗ್ರಹ ಮಾಡುತ್ತಿರುವ  ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ಪ್ರತಿಕ್ರಿಯಿಸಿದ್ದು,...

Read moreDetails
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
Next Post
ಕರೋನಾಕ್ಕೆ ಇಷ್ಟೆಲ್ಲಾ ಗಣ್ಯರು ಬಲಿಯಾಗಿದ್ದಾರಾ..? ಪಟ್ಟಿ ನೋಡಿದರೆ ಗಾಬರಿಯಾಗೋದು ಖಚಿತ..!

ಕರೋನಾಕ್ಕೆ ಇಷ್ಟೆಲ್ಲಾ ಗಣ್ಯರು ಬಲಿಯಾಗಿದ್ದಾರಾ..? ಪಟ್ಟಿ ನೋಡಿದರೆ ಗಾಬರಿಯಾಗೋದು ಖಚಿತ..!

Please login to join discussion

Recent News

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 
Top Story

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

by Chetan
July 2, 2025
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 
Top Story

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

by Chetan
July 2, 2025
ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 
Top Story

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

by Chetan
July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada