ಕೋಲಾರದಲ್ಲಿ ಕಳೆದ 11 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನ ಪೋಲೀಸರು ಭೇದಿಸಿದ್ದಾರೆ. ಕೋಲಾರದ ಅಮ್ಮೇರಹಳ್ಳಿ ಕೆರೆಯ ಬಳಿ ಮಹಿಳೆ ಶವ ಪತ್ತೆಯಾಗಿತ್ತು. ಕೊಲೆಯಾದ ಮಹಿಳೆ ಬೆಂಗಳೂರು ಮೂಲದ ಸುಲ್ತಾಮ್ ತಾಜ್ eಂದು ಗುರ್ತಿಸಲಾಗಿತ್ತು. ಇದೀಗ ಆರೋಪಿ ಬಂಧನ ಮಾಡಿದ್ದು, ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಕೊಂದು ಕೆರೆಗೆ ಎಸೆದಿದ್ದ ಎನ್ನುವುದು ಗೊತ್ತಾಗಿದೆ. ಆರೋಪಿ ಅಬ್ರಾರ್ ಅಹ್ಮದ್ನನ್ನ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದರೆ ಮಹಿಳೆಯ ಕೊಲೆ ಮಾಡಲು ಬ್ಲಾಕ್ ಮೇಲ್ ಮಾಡಿದ್ದು ಕಾರಣ ಎಂದು ತಿಳಿದುಬಂದಿದೆ. ಇಬ್ಬರ ಖಾಸಗಿ ಕ್ಷಣಗಳ ವಿಡಿಯೋ ದಾಖಲೆ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಹಣವನ್ನು ವಸೂಲಿ ಮಾಡುತ್ತಿದ್ದಳು ಎನ್ನಲಾಗಿದೆ
![](https://pratidhvani.com/wp-content/uploads/2024/03/IMG-20240329-WA0005-768x1024.jpg)
ಅಕ್ರಮ ಸಂಬಂಧ, ವಿಡಿಯೋ ಬ್ಲಾಕ್ಮೇಲ್ ಬಗ್ಗೆ ಬೆಂಗಳೂರಿನ ಹೆಚ್ಎಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ರಾಜಿ ಸಂಧಾನ ಕೂಡ ಮಾಡಿಸಿದ್ದರು ಎನ್ನಲಾಗಿದ್ದು, ಆದರೂ ಮಹಿಳೆ ಕಿರುಕುಳ ನಿಲ್ಲಲಿಲ್ಲ. ಹೀಗಾಗಿ ಕಿರುಕುಳ ತಾಳಲಾರದೆ ರೋಸಿ ಹೋಗಿದ್ದ ಆರೋಪಿ ಅಬ್ರಾರ್ ಅಹಮದ್, ಕೋಲಾರದ ರಹಮತ್ ನಗರ ನಿವಾಸಿ ಬಾಮೈದ ಸಾಧಿಕ್ ಪಾಷ ಜೊತೆಗೆ ಸೇರಿ ರಂಜಾನ್ ಹಬ್ಬದ ಸಮಯದಲ್ಲಿ ಆಕೆಯನ್ನು ಪುಸಲಾಯಿಸಿ ಬೆಂಗಳೂರಿನಿಂದ ಅಮ್ಮೇರಹಳ್ಳಿ ಕೆರೆಯ ಬಳಿಗೆ ಕರೆ ತಂದಿದ್ದರು. ಅಲ್ಲಿಯೂ ಜಗಳವಾಗಿ ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ಆರೋಪಿಗಳಿಬ್ಬರೂ ಸೇರಿ ವೇಲ್ನಲ್ಲಿ ಕುತ್ತಿಗೆ ಸುತ್ತಿ ಕೊಂದಿದ್ದರು ಎನ್ನುವುದು ಗೊತ್ತಾಗಿದೆ.
![](https://pratidhvani.com/wp-content/uploads/2024/03/IMG-20240329-WA0003-768x1024.jpg)
ಒಂದು ಕಡೆಗೆ ಉಸಿರು ಗಟ್ಟಿಸಿದ್ದ ಆರೋಪಿಗಳು, ಮತ್ತೊಂದು ಕಡೆಯಿಂದ ಸ್ಕ್ರೂ ಡ್ರೈವರ್ನಲ್ಲಿ ಚುಚ್ಚಿ ಚುಚ್ಚಿ, ಕರುಳು ಹೊರಬರುವಂತೆ ಮಾಡಿದ್ದರು, ಕರುಳನ್ನು ಕೆರೆಗೆ ಬಿಸಾಡಿದ್ದ ಆರೋಪಿಗಳು ಬರೊಬ್ಬರಿ 45 ಸಿಮ್ಗಳನ್ನು ಬಳಸಿ, ಅನೇಕ ಫೋನ್ ಬಳಕೆ ಮಾಡಿ ತಾಂತ್ರಿಕವಾಗಿ ಯಾವುದೇ ದಾಖಲೆ ಸಿಗದಂತೆ ತಂತ್ರಗಾರಿಕೆ ಮಾಡಿದ್ದರು. ಹೀಗಾಗಿ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸ ಆಗಿತ್ತು. ಅಂತಿಮವಾಗಿ ಬರೋಬ್ಬರಿ 6 ಲಕ್ಷ ಫೋನ್ ಕಾಲ್ಗಳ ಪರಿಶೀಲನೆ ನಡೆಸಿದ ಬಳಿಕ ಆರೋಪಿಗಳ ಮೇಲೆ ಅನುಮಾನ ಬಂದಿದ್ದು, ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಸತ್ಯಾಂಶ ಹೊರ ಬಂದಿದೆ.
![](https://pratidhvani.com/wp-content/uploads/2024/03/IMG-20240329-WA0002-768x1024.jpg)