• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ದಯವಿಟ್ಟು ಕುರ್ಚಿ ಬಿಡಿ, ನಮಗೆ ಸರ್ಕಾರ ಬೇಕಿದೆ: ಅರುಂಧತಿ ರಾಯ್

Any Mind by Any Mind
May 5, 2021
in ಅಭಿಮತ
0
ದಯವಿಟ್ಟು ಕುರ್ಚಿ ಬಿಡಿ, ನಮಗೆ ಸರ್ಕಾರ ಬೇಕಿದೆ: ಅರುಂಧತಿ ರಾಯ್
Share on WhatsAppShare on FacebookShare on Telegram

ನಮಗೆ ಒಂದು ಸರ್ಕಾರ ಬೇಕಾಗಿದೆ. ತೀರಾ ಹತಾಷರಾಗಿ ಕೇಳುತ್ತಿದ್ದೇವೆ, ನಮಗೆ ಒಂದು ಸರ್ಕಾರ ಬೇಕಾಗಿದೆ. ಸದ್ಯಕ್ಕೆ ಅಂತಹ ಸರ್ಕಾರವೇ ಇಲ್ಲ. ನಾವು ಉಸಿರುಗಟ್ಟಿ ಸಾಯುತ್ತಿದ್ದೇವೆ. ಜೀವ ಉಳಿಸುವ ನೆರವು ಅಂಗೈಯಲ್ಲಿದ್ದರೂ, ಅದನ್ನು ಹೇಗೆ ಬಳಸಬೇಕು ಎಂಬ ಒಂದು ವ್ಯವಸ್ಥೆಯೇ ನಮ್ಮಲ್ಲಿ ಕುಸಿದು ಬಿದ್ದಿದೆ.

ADVERTISEMENT

ಹಾಗಾಗಿ ಸದ್ಯಕ್ಕೆ, ಈ ಕ್ಷಣಕ್ಕೆ ಏನು ಮಾಡಬಹುದು?

ನಾವು 2024ರವರೆಗೆ ಕಾಯಲು ಆಗದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನನ್ನಂಥವರು ಹೀಗೆ ಯಾವುದಕ್ಕಾದರೂ ಗೋಗರೆಯಬೇಕಾದ ದುರ್ದಿನ ಬರಬಹುದು ಎಂದು ನಾವೆಂದೂ ನಿರೀಕ್ಷಿಸಿರಲಿಲ್ಲ.  ವೈಯಕ್ತಿಕವಾಗಿ, ನಾನು ಹೀಗೆ ಗೋಗರೆಯುವುದಕ್ಕಿಂತ ಜೈಲಿಗೆ ಹೋಗುವುದೇ ವಾಸಿ ಎಂದುಕೊಳ್ಳಬಲ್ಲೆ. ಆದರೆ, ಇವತ್ತು ನಾವು ನಮ್ಮ ಮನೆಗಳಲ್ಲಿ, ಬೀದಿಬೀದಿಗಳಲ್ಲಿ, ಆಸ್ಪತ್ರೆ, ಕಾರು, ಪಾರ್ಕು, ಮಹಾನಗರ, ಚಿಕ್ಕಪುಟ್ಟ ಪಟ್ಟಣ, ಹಳ್ಳಿ ಮೂಲೆ, ಹೊಲ, ಕಾಡುಮೇಡುಗಳಲ್ಲಿ ಹುಳುಗಳಂತೆ ಸಾಯುತ್ತಿದ್ದೇವೆ. ಇದನ್ನೆಲ್ಲಾ ಕಂಡು, ನಾನು, ಒಬ್ಬ ಸಾಮಾನ್ಯ ಮನುಷ್ಯಳಾಗಿ ನನ್ನ ಅಂತಹ ಅಹಂ ನುಂಗಿಕೊಂಡು ನನ್ನ ಕೋಟ್ಯಂತರ ಸಹ ಮಾನವರೊಂದಿಗೆ ದನಿ ಗೂಡಿಸುತ್ತಿದ್ದೇನೆ; ಪ್ಲೀಸ್ ಸರ್, ಪ್ಲೀಸ್.. ಕೆಳಗಿಳಿಯಿರಿ. ಕನಿಷ್ಟ ಈಗಲಾದರೂ ನೀವು ಕುರ್ಚಿ ಬಿಟ್ಟು ಇಳಿಯುವ ಮನಸ್ಸು ಮಾಡಿ. ಅಧಿಕಾರ ಬಿಡಿ ಎಂದು ನಾನು ನಿಮಗೆ ಗೋಗರೆಯುತ್ತಿದ್ದೇನೆ.

ಈ ಮಹಾ ಸಂಕಷ್ಟದ ಕಾರಣಕರ್ತರು ನೀವೇ. ನೀವೇ ಸೃಷ್ಟಿಸಿದ ಈ ಸಂಕಷ್ಟವನ್ನು ಈಗ ನಿಮ್ಮಿಂದ ಬಗೆಹರಿಸಲಾಗದು. ನೀವು ಈ ಪರಿಸ್ಥಿತಿಯನ್ನು ಇನ್ನಷ್ಟು ಭೀಕರಗೊಳಿಸಬಲ್ಲಿರಿ ಅಷ್ಟೇ. ಭಯ, ದ್ವೇಷ ಮತ್ತು ಮೌಢ್ಯದ ನಡುವೆ ಈ ಪೈಶಾಚಿಕ ವೈರಸ್ ಇನ್ನಷ್ಟು ಹುಲುಸಾಗಿ ಹಬ್ಬಲಿದೆ. ಇಂತಹ ವಾಸ್ತವದ ಬಗ್ಗೆ ಮಾತನಾಡುವವರ ದನಿ ಅಡಗಿಸಲು ನೀವು ಯತ್ನಿಸಿದಷ್ಟೂ ಈ ವೈರಸ್ ವ್ಯಾಪಕವಾಗಿ ಹರಡಲಿದೆ. ದೇಶದ ಕಟು ವಾಸ್ತವ ಸಂಗತಿಗಳು ಕೇವಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬೆಳಕು ಕಾಣಬಹುದಾದಷ್ಟು ಸ್ಥಳೀಯ ಮಾಧ್ಯಮಗಳನ್ನು ಯಶಸ್ವಿಯಾಗಿ ನೀವು ಪಳಗಿಸಿರುವುದರಿಂದ ಆ ವೈರಾಣು ಇನ್ನಷ್ಟು ಸೊಕ್ಕಲಿದೆ. ಒಬ್ಬ ಪ್ರಧಾನಮಂತ್ರಿ ತನ್ನ ಅವಧಿಯುದ್ದಕ್ಕೂ ಎಂದೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದೇ ಇರುವಾಗ, ಒಂದು ಪ್ರಶ್ನೆಯನ್ನೂ ಎದುರಿಸುವಷ್ಟು ಸಮರ್ಥನಿರದೇ ಇರುವಾಗ, ಕನಿಷ್ಟು ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲೂ ಪತ್ರಿಕಾಗೋಷ್ಠಿ ನಡೆಸದೇ ಇರುವಾಗ, ಈ ವೈರಸ್ ಇನ್ನಷ್ಟು ವ್ಯಾಪಿಸಲಿದೆ. ಹಾಗಾಗಿ ನಿಮ್ಮಿಂದ ಈ ಅನಾಹುತದಿಂದ ದೇಶವನ್ನು ಪಾರು ಮಾಡಲಾಗದು.

ನೀವು ಪ್ರಧಾನಿ ಹುದ್ದೆ ಬಿಟ್ಟು ಹೋಗದೇ ಇದ್ದರೆ, ದೇಶದ ಸಾವಿರಾರು ಮಂದಿ ಅನಗತ್ಯವಾಗಿ ಹಾದಿಬೀದಿ ಹೆಣಗಳಾಗಲಿದ್ದಾರೆ. ಹಾಗಾಗಿ ದಯವಿಟ್ಟು ಹೊರ ನಡೆಯಿರಿ. ಜೋಳಿಗೆ ಎತ್ತಿಕೊಂಡು ಹೊರಡಿ. ನಿಮ್ಮ ಮರ್ಯಾದೆ , ಘನತೆಯನ್ನು ಉಳಿಸಿಕೊಂಡು ಈಗಲೇ ಹೊರಡಿ. ನಿಮಗೇ ಹೊರಗೆ ಬಹಳ ಉತ್ತಮ ಬದುಕು ಕಾದಿದೆ. ಧ್ಯಾನ, ಏಕಾಂತದ ಅದ್ಭುತ ಬದುಕು ಅದು. ಅಂತಹ ಬದುಕನ್ನೇ ಬಯಸುವುದಾಗಿ ಹಲವು ಬಾರಿ ನೀವೇ ಹೇಳಿದ್ದೀರಿ. ಹೀಗೆ ಸಾಮೂಹಿಕ ಸಾವುಗಳನ್ನು ನೋಡಿಕೊಂಡು ಕೈಚೆಲ್ಲಿ ಕೂತರೆ ಅಂತಹ ಒಂದು ನಿಮ್ಮ ಬಯಕೆಯ ಬದುಕೂ ಸಾಧ್ಯವಾಗುವುದಿಲ್ಲ.

ತಕ್ಷಣಕ್ಕೆ ನಿಮ್ಮ ಜಾಗ ತುಂಬಲು ನಿಮ್ಮದೇ ಪಕ್ಷದಲ್ಲಿ ಹಲವರು ಇದ್ದಾರೆ. ಇಂತಹ ಬಿಕ್ಕಟ್ಟಿನ ಹೊತ್ತಲ್ಲಿ ರಾಜಕೀಯ ವಿರೋಧಿಗಳಿದ್ದರೂ ಅವರನ್ನೂ ವಿಶ್ವಾಸಕ್ಕೆ ಪಡೆದು, ಅವರನ್ನು ಸೇರಿಸಿಕೊಂಡೇ ಮುನ್ನಡೆಯಬೇಕು. ಅದು ಯಾರೇ ಇರಲಿ,- ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನುಮೋದನೆಯೊಂದಿಗೆ ನಿಮ್ಮ ಪಕ್ಷದವರೇ ಆದರೂ- ಅವರು ಸರ್ಕಾರದ ನೇತೃತ್ವ ವಹಿಸಬಹುದು ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ ಒಂದು ಪ್ರಬಲ ಸಮಿತಿಯನ್ನು ತಮ್ಮೊಂದಿಗೆ ಇಟ್ಟುಕೊಂಡು ಬಿಕ್ಕಟ್ಟು ಪರಿಹಾರಕ್ಕೆ ಯತ್ನಿಸಬಹುದು.

ಹಾಗೇ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಕೆಲವು ಆಯ್ದ ಜನಪ್ರತಿನಿಧಿಗಳನ್ನು ಆಯ್ಕೆಮಾಡಿ- ಎಲ್ಲಾ ಪಕ್ಷಗಳಿಗೂ ಪ್ರಾತಿನಿಧ್ಯ ಸಿಗುವಂತೆ- ಕಳಿಸಬಹುದು. ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಕೂಡ ಆ ಸಮಿತಿಯಲ್ಲಿ ಪ್ರಾತಿನಿಧ್ಯ ಹೊಂದಬಹುದು. ಜೊತೆಗೆ ವಿಜ್ಞಾನಿಗಳು, ಸಾರ್ವಜನಿಕ ಆರೋಗ್ಯ ವಲಯದ ತಜ್ಞರು, ವೈದ್ಯರು, ಅನುಭವೀ ಅಧಿಕಾರಿಗಳೂ ಆ ಸಮಿತಿಯ ಭಾಗವಾಗಬಹುದು. ಇಂತಹ ವ್ಯವಸ್ಥೆ ನಿಮಗೆ ಅರ್ಥವಾಗದೇ ಇರಬಹುದು. ಆದರೆ, ನಿಜವಾದ ಪ್ರಜಾಪ್ರಭುತ್ವ ಎಂದರೆ ಇದೇ. ಪ್ರತಿಪಕ್ಷ ಮುಕ್ತ ಪ್ರಜಾಪ್ರಭುತ್ವ ಎಂಬುದು ಇಲ್ಲ. ಅಂತಹ ವ್ಯವಸ್ಥೆಯನ್ನು ದುರಾಡಳಿತ ಎನುತ್ತಾರೆ. ಈ ವೈರಸ್ ಕೂಡ ದುರಾಡಳಿತವನ್ನು ಬಹಳ ಇಷ್ಟಪಡುತ್ತದೆ.

ನೀವು ಈಗಲೇ ಕುರ್ಚಿ ಬಿಟ್ಟು ಹೊರನಡೆಯದೇ ಇದ್ದರೆ; ಈಗಾಗಲೇ ಈ ಸಾಂಕ್ರಾಮಿಕವನ್ನು ಅಂತಾರಾಷ್ಟ್ರೀಯ ಬಿಕ್ಕಟ್ಟು ಎಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಅದು ಇಡೀ ಜಗತ್ತಿಗೇ ಅಪಾಯಕಾರಿ ಎಂದು ಭಾವಿಸುತ್ತಿರುವ(ಅದು ನಿಜ ಕೂಡ) ಹಿನ್ನೆಲೆಯಲ್ಲಿ, ನಿಮ್ಮ ಅಸಮರ್ಥತೆ ಮತ್ತು ಹೊಣೆಗೇಡಿತನ, ಬೇರೆ ದೇಶಗಳು ನಮ್ಮ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ಮತ್ತು ಅಂತಹ ಪ್ರಯತ್ನ ಮಾಡಲು ಒಂದು ಸಕಾರಣವಾಗುತ್ತದೆ. ಅದು ಅಂತಿಮವಾಗಿ ಸಾರ್ವಭೌಮತೆಗಾಗಿ ನಾವು ನಡೆಸಿದ ಕಠಿಣ ಹೋರಾಟವನ್ನು ಮಣ್ಣುಗೂಡಿಸುತ್ತದೆ. ನಾವು ಮತ್ತೊಮ್ಮೆ ಮತ್ತೊಬ್ಬರ ವಸಾಹುತವಾಗುತ್ತೇವೆ. ಇದು ನಿಜಕ್ಕೂ ಭಯಾನಕ ಸಾಧ್ಯತೆ. ಇದನ್ನು ತಳ್ಳಿಹಾಕಲೇಬೇಡಿ.

ಹಾಗಾಗಿ, ದಯವಿಟ್ಟು ಅಧಿಕಾರ ಬಿಟ್ಟು ಇಳಿಯಿರಿ. ಈ ಹೊತ್ತಿನಲ್ಲಿ ನೀವು ಮಾಡಬಹುದಾದ ಬಹಳ ಜವಾಬ್ದಾರಿಯುತ ಕಾರ್ಯ ಅದೊಂದೇ. ನಮ್ಮ ಪ್ರಧಾನ ಮಂತ್ರಿಯಾಗಿ ಮುಂದುವರಿಯುವ ನೈತಿಕ ಹಕ್ಕನ್ನು ನೀವು ಈಗಾಗಲೇ ಅಡವಿಟ್ಟಿದ್ದೀರಿ. ಹಾಗಾಗಿ, ಕುರ್ಚಿ ಬಿಟ್ಟು ಹೊರಡದೇ ಇನ್ನೇನು ಉಳಿದಿಲ್ಲ.

(‘ಸ್ಕ್ರಾಲ್ ಇನ್’ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗಿರುವ ಬರಹದ ಯಥಾ ರೂಪ)

Previous Post

ಸಾವು ನೋವಿಗೆ ಮಿಡಿಯದ ಹಂತಕ ವ್ಯವಸ್ಥೆ

Next Post

ಆಕ್ಸಿಜನ್ ಸಿಗದೇ ಸೋಂಕಿತರು ಸಾಯುತ್ತಿರುವುದಕ್ಕೆ ಗದಗ್ ಶಾಸಕ ಹೆಚ್. ಕೆ. ಪಾಟೀಲ್ ಸರ್ಕಾರ ವಿರುದ್ಧ ಗರಂ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಆಕ್ಸಿಜನ್ ಸಿಗದೇ ಸೋಂಕಿತರು ಸಾಯುತ್ತಿರುವುದಕ್ಕೆ ಗದಗ್ ಶಾಸಕ ಹೆಚ್. ಕೆ. ಪಾಟೀಲ್ ಸರ್ಕಾರ ವಿರುದ್ಧ ಗರಂ

ಆಕ್ಸಿಜನ್ ಸಿಗದೇ ಸೋಂಕಿತರು ಸಾಯುತ್ತಿರುವುದಕ್ಕೆ ಗದಗ್ ಶಾಸಕ ಹೆಚ್. ಕೆ. ಪಾಟೀಲ್ ಸರ್ಕಾರ ವಿರುದ್ಧ ಗರಂ

Please login to join discussion

Recent News

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
Top Story

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ
Top Story

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

by ಪ್ರತಿಧ್ವನಿ
January 12, 2026
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್
Top Story

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
January 12, 2026
ಪ್ರಧಾನಿ ಮೋದಿ ಕನಸಿನ ರೇರ್‌ ಅರ್ಥ್‌ ಮ್ಯಾಗ್ನೆಟ್ಸ್‌ ಯೋಜನೆಗೆ ಶರವೇಗ: ಹೆಚ್.ಡಿ. ಕುಮಾರಸ್ವಾಮಿ
Top Story

ಪ್ರಧಾನಿ ಮೋದಿ ಕನಸಿನ ರೇರ್‌ ಅರ್ಥ್‌ ಮ್ಯಾಗ್ನೆಟ್ಸ್‌ ಯೋಜನೆಗೆ ಶರವೇಗ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
January 12, 2026
ಕುಬ್ಜವಾಗುತ್ತಿರುವ ಸಮಾಜದಲ್ಲಿ ಯುವ ಸಮುದಾಯ
Top Story

ಕುಬ್ಜವಾಗುತ್ತಿರುವ ಸಮಾಜದಲ್ಲಿ ಯುವ ಸಮುದಾಯ

by ನಾ ದಿವಾಕರ
January 12, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

January 12, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada