
ತುಮಕೂರು:ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾವಿನ ಕಟ್ಟೆ ಕೆರೆಯ ಅಂಗಳದಲ್ಲಿ 42 ಕುಟುಂಬಗಳನ್ನು ಸಾತೇನಹಳ್ಳಿಗೆ ಸ್ಥಳಾಂತರ ಗೊಳಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ಕೈಗೆತ್ತಿಕೊಂಡು ಕೆರೆ ಅಂಗಳದಲ್ಲಿ ನರಕ ಯಾತನೆ ಅನುಭವಿಸುತ್ತಿದ್ದ ಕುಟುಂಬಗಳಿಗೆ ನವಚೇತನ ನೀಡಿದ ತಾಸಿಲ್ದಾರ್ ಶ್ರೀಮತಿ ಆರತಿ ಮತ್ತು ಪಟ್ಟಣ ಪಂಚಾಯಿತಿ ಚೀಪ್ ಆಫೀಸರ್ ಶ್ರೀಮತಿ ಮಂಜುಳಾ ದೇವಿ ಕಾರ್ಯವೈಕರಿಗೆ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇಂದು ಬಾಬು ಜಗಜೀವನ್ ರಾಮ್ ಭವನದಲ್ಲಿರುವ ನಿರಾಶ್ರಿತರನ್ನು ಮತ್ತು ಪುನರ್ವಸತಿ ಸೌಕರ್ಯ ಕಲ್ಪಿಸಿದ ಸಾತೇನಹಳ್ಳಿಗೆ ಭೇಟಿ ನೀಡಿದ ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ಸದಸ್ಯರು 42 ಕುಟುಂಬಗಳ ಸದಸ್ಯರೊಂದಿಗೆ ಚರ್ಚಿಸಿ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಮತ್ತು ತಾಲೂಕ್ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಪರಿಣಾಮ ಸುಮಾರು ಏಳೆಂಟು ವರ್ಷಗಳಿಂದ ನೆನೆಗುದಿಗೆ ಬಿದ್ದ ಈ ಪ್ರಕರಣ ಸುಖಾಂತ್ಯ ವಾಗುತ್ತಿರುವುದು ಸಂತೋಷದ ವಿಷಯವಾಗಿದೆ.
ತಾಲೂಕ ಆಡಳಿತದ ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸವೆಂದು ಮಾಡುತ್ತಿರುವುದರ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಳಜಿ ಫೌಂಡೇಶನ್ ನ ಅಧ್ಯಕ್ಷರಾದ ನಟರಾಜ್, ಶಿವಕುಮಾರ್ ಮೇಷ್ಟ್ರುಮನೆ, ಮಾರನಹಳ್ಳಿ ಗಣೇಶ್, ಪದ್ಮನಾಭನ್, ಮೋಹನ್ ಕುಮಾರ್, ಅಂಜನ್, ಮತ್ತು.ನೈಜ ಹೋರಾಟಗಾರರ ವೇದಿಕೆ ಹೆಚ್ ಎಂ ವೆಂಕಟೇಶ್ ನರಸಿಂಮೂರ್ತಿ ಜಿ.ಎನ್, ಮಲ್ಲಿಕಾರ್ಜುನ ರಾಜು, ಡೆಲ್ಲಿ ಬಾಬು ಮತ್ತಿತರರು ತಂಡದಲ್ಲಿದ್ದರು.





